Chitradurga News | Nammajana.com |12-5-2024
ನಮ್ಮಜನ.ಕಾಂ ,ಚಳ್ಳಕೆರೆ: ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿಗಿರುವ ನಿಯತ್ತು ಮನುಷ್ಯನಿಗೆ ಇರೋಲ್ಲ ನಾಯಿಯನ್ನು ಸಾಕಿ ಒಂದು ಸ್ವಲ್ಪ ಪ್ರೀತಿ ತೋರಿಸಿ ಹಸಿವಿಗೆ ಅನ್ನ ನೀಡಿದರಂತೂ ಅದು ಯಾವತ್ತಿಗೂ ಅವರ ಮೇಲಿನ ನಿಯತ್ತನ್ನ ಮರೆಯುವುದಿಲ್ಲ.
ನಾಯಿಗಿರುವ ಸ್ವಾಮಿನಿಷ್ಠೆಯನ್ನ ಬೇರೆ ಯಾವ ಜೀವಿಗಳಲ್ಲಿಯೂ ನಾವು ಕಾಣಲು ಸಾಧ್ಯವಿಲ್ಲ. ಸಾಕಿದ ಯಜಮಾನನ ರಕ್ಷಣೆಗೆ ತನ್ನ ಪ್ರಾಣ ಕೊಡಲು ಸಿದ್ಧವಿರುತ್ತದೆ. ಇಂತಹ ತಾಜಾ ಉದಾಹರಣೆಯೊಂದು ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ನಡೆದಿದೆ.

ದೇವರಮರಿಕುಂಟೆ ಹೊರವಲಯದ ಪ್ರಗತಿಪರ ರೈತ ಡಾ,ಆರ್ ಎ.ದಯಾನಂದಮೂರ್ತಿ ತೋಟದ ಜಮೀನಿನಲ್ಲಿ ಈ ಘಟನೆ ನಡೆದಿದೆ.
ತೋಟದ ಮಾಲೀಕ ಡಾ.ಆರ್ ಎ. ದಯಾನಂದಮೂರ್ತಿ ಜಮೀನಿನಲ್ಲಿ ಕೆಲಸ ಮಾಡಿ ಬಿಸಿಲಿನ ತಾಪಕ್ಕೆ ಮಾವಿನ ಮರದ ಕೆಳಗ ಸ್ವಲ್ಪ ಸಮಯ ಮಲಗಿದ್ದಾರೆ.
ಈ ವೇಳೆ ರೈತ ಮಲಗಿದ್ದ ಕಡೆಗೆ ನಾಗರ ಹಾವು ಬರುತ್ತಿರುವುದನ್ನು ಕಂಡು ಅಲ್ಲೆ ಮಲಗಿದ್ದ ನಾಯಿ ಬೊಗಳಲಾರಂಭಿಸಿದೆ.
ಇದನ್ನು ಓದಿ: ಡಿ.ಟಿ.ಶ್ರೀನಿವಾಸ್ ಗೆ ಕಾಂಗ್ರೆಸ್ ಬಿ.ಫಾರಂ ನೀಡಿದ ಡಿಕೆಶಿ
ನಾಯಿ ಬೊಗಳುವ ಶಬ್ದವನ್ನು ಕೇಳಿ ಎಚ್ಚರಗೊಂಡು ನೋಡಿದಾಗ ದೊಡ್ಡ ನಾಗರ ಹಾವು ನಾಯಿ ಮುಂದೆ ಹೆಡೆ ಎತ್ತಿ ಬುಸು ಗುಟ್ಟಿದೆ. ರೈತ ಹಾವನ್ನ ಕಂಡು ರೈತ ಭಯ ಗೊಂಡಿದ್ದಾನೆ ತನ್ನತ್ತ ಬರುತ್ತಿದ್ದ ಹಾವನ್ನು ತಡೆದ ನಾಯಿ ನಿಯತ್ತನ್ನು ಕಂಡು ಮಾಲೀಕ ಪ್ರಸಂಶೆ ವ್ಯಕ್ತಪಡಿಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252