
Chitradurga news | nammajana.com|14-9-2024
ನಮ್ಮಜನ.ಕಾಂ, ಚಿತ್ರದುರ್ಗ: ನೈಸರ್ಗಿಕ ಆಪತ್ತು ಎದುರಿಸಬೇಕಾದರೆ ನಾವು ಆ ಸಂಪತ್ತನ್ನು ಸಂರಕ್ಷಿಸುವ (Cycle procession) ಕಾರ್ಯದಲ್ಲಿ ಮುಂದಾಗಬೇಕಿದೆ.
ಪ್ರಕೃತಿಗೆ ವಿರುದ್ದವಾಗಿ ನಡೆದುಕೊಂಡರೆ ದುರಂತಗಳು ನಮ್ಮ ಬದುಕನ್ನೇ ಅಸ್ಥಿರಗೊಳಿಸುತ್ತವೆ. ಈ ನಿಟ್ಟಿನಲ್ಲಿ ಪರಿಸರ ಜಾಗೃತಿ ಹಾಗೂ ನೈಸರ್ಗಿಕ ಸಂಪತ್ತು ಉಳಿಸುವ ನಿಟ್ಟಿನಲ್ಲಿ (Cycle procession) ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಬಳ್ಳೇರಪಲ್ಲಿ ಯುವಕ ಶಿವಶಂಕರ ಸೈಕಲ್ ಜಾಗೃತಿ ಜಾಥದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾನೆ.

ಆಂದ್ರ ಪ್ರದೇಶ ಕಡಪದಿಂದ ಗೋವಾ ರಾಜ್ಯ ಸೈಕಲ್ ಯಾತ್ರೆ ಕೈಗೊಂಡಿದ್ದು ಪರಶುರಾಮಪುರ ಮೂಲಕ ಚಳ್ಳಕೆರೆಗೆ ಆಗಮಿಸಿದ ಇವರನ್ನು ನೇತಾಜಿ ಸ್ನೇಹ ಬಳಗ ಮತ್ತು ಯುವಕರ ಪಡೆ ಸ್ವಾಗತಿಸಿ, ಅಭಿನಂದಿಸಿತು.
ನೇತಾಜಿಬಳಗದ ಅಧ್ಯಕ್ಷ, ನಗರಸಭೆ ನಾಮನಿರ್ದೇಶನ ಸದಸ್ಯ ನೇತಾಜಿ ಪ್ರಸನ್ನಮಾತನಾಡಿ, ಶಿವಶಂಕರ್ ಉತ್ತಮ ಕಾರ್ಯವನ್ನು ಮಾಡುವ ಮೂಲಕ ಯುವಕರಿಗೆ ಮಾದರಿಯಾಗಿದ್ಧಾರೆ.
ಇದನ್ನೂ ಓದಿ: Dina Bhavishya: ಇಂದಿನ ದಿನ ಭವಿಷ್ಯ 14-9-2024
ಸುಮಾರು ೬೫೦ ಕಿ.ಮೀ ದೂರವನ್ನು ಬಿಸಲು, ಮಳೆ ಲೆಕ್ಕಿಸದೆ ಸೈಕಲ್ ಮೂಲಕ ಜಾಥ ನಡೆಸುವ ಅವರ ಕಾರ್ಯಕ್ಕೆ ಮೆಚ್ಚುಗೆ (Cycle procession) ವ್ಯಕ್ತಪಡಿಸಬೇಕು. ಯುವ ಜನಾಂಗ ಪರಿಸರದ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ವಿಶ್ವಕರ್ಮ ಪರಿಷತ್ನ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್, ಬಿ.ಫರೀದ್ಖಾನ್, ದುಗ್ಗಾವರತಿಮ್ಮಣ್ಣ, ನಾಗೇಂದ್ರ, ರವಿ, ನಗರಂಗೆರೆಬಾಬು, ರಂಗಸ್ವಾಮಿ, ಚೇತನ್ಕುಮಾರ್ ಮುಂತಾದವರು ಉಪಸ್ಥಿತರಿದ್ದರು.