Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಆಗಸ್ಟ್ 10ರಂದು ಟಿಬೇಟಿಯನ್ ಧರ್ಮ ಗುರು ದಲೈಲಾಮರವರ ಹುಟ್ಟುಹಬ್ಬ ಆಚರಣೆ | Madara Channaiah Swamiji
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಆಗಸ್ಟ್ 10ರಂದು ಟಿಬೇಟಿಯನ್ ಧರ್ಮ ಗುರು ದಲೈಲಾಮರವರ ಹುಟ್ಟುಹಬ್ಬ ಆಚರಣೆ | Madara Channaiah Swamiji
ಇಂದಿನ ಸುದ್ದಿ

ಆಗಸ್ಟ್ 10ರಂದು ಟಿಬೇಟಿಯನ್ ಧರ್ಮ ಗುರು ದಲೈಲಾಮರವರ ಹುಟ್ಟುಹಬ್ಬ ಆಚರಣೆ | Madara Channaiah Swamiji

Nammajana Sub Editor
Last updated: 5 August 2025 9:33 PM
By Nammajana Sub Editor 2 Min Read
Share
SHARE
Telegram Group Join Now
WhatsApp Group Join Now

Chitradurga News | Nammajana.com |05-08-2025

ನಮ್ಮಜನ.ಕಾಂ,ಚಿತ್ರದುರ್ಗ: ಇದೇ ತಿಂಗಳ(Madara Channaiah Swamiji) 10 ರಂದು ಟಿಬೇಟಿಯನ್ ಧರ್ಮ ಗುರು ದಲೈಲಾಮರವರ 90 ನೇ ಹುಟ್ಟುಹಬ್ಬವನ್ನು ಆಚರಿಸಲಾಗುವುದೆಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ವಯೋನಿವೃತ್ತಿ ಹೊಂದಿದ ಮುಖ್ಯ ಲೆಕ್ಕಾಧಿಕಾರಿ ಸಿ.ಜಿ.ಶ್ರೀನಿವಾಸ್‍ಗೆ ಸನ್ಮಾನ

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಥ್ಯಾಂಕ್ಯು ಇಂಡಿಯಾ, ಥ್ಯಾಂಕ್ಯು ಕರ್ನಾಟಕ ಕೃತಜ್ಞತೆ ಸಲ್ಲಿಸುವುದಕ್ಕಾಗಿ ದಲೈಲಾಮರವರ ಹುಟ್ಟುಹಬ್ಬವನ್ನು ನಮ್ಮ ಮಠದಲ್ಲಿ ಆಚರಿಸಲು ಬೌದ್ದ ಭಿಕ್ಕುಗಳು ಇಷ್ಟಪಟ್ಟಿದ್ದಾರೆ.

ಅಂದು ಬೆಳಿಗ್ಗೆ 9 ಗಂಟೆಗೆ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಪಥಸಂಚಲನ ಹೊರಡಲಿರುವ ಬೌಧ್ದ ಭಿಕ್ಕುಗಳು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ರಾಜಾವೀರ ಮದಕರಿನಾಯಕ ಹಾಗೂ ಕನಕದಾಸರ ಪ್ರತಿಮೆಗಳಿಗೆ ಮಾಲಾರ್ಪಣೆ ಸಲ್ಲಿಸಲಿದ್ದಾರೆಂದು ತಿಳಿಸಿದರು.

ಸಚಿವರುಗಳಾದ(Madara Channaiah Swamiji) ಸಂತೋಷ್‍ಲಾಡ್, ಕೆ.ಹೆಚ್.ಮುನಿಯಪ್ಪ, ಸಂಸದ ಗೋವಿಂದ ಕಾರಜೋಳ, ಮುಂಡಗೋಡಿನಿಂದ ರಿಂಚಿಮ್ ವಾಗ್ನೆ ಇವರುಗಳು ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲಿದ್ದು, ಅಂದು ಮಧ್ಯಾಹ್ನ ಮೂರು ಗಂಟೆಗೆ ಸೀಬಾರ ಸಮೀಪವಿರುವ ಎಸ್.ನಿಜಲಿಂಗಪ್ಪನವರ ಸಮಾಧಿ ಬಳಿ ಧ್ಯಾನ ಪೂಜೆ ನೆರವೇರಲಿದೆ ಎಂದರು.

ಇದನ್ನೂ ಓದಿ: ಕುವೆಂಪು ವಿಶ್ವವಿದ್ಯಾಲಯ ಪಠ್ಯಕ್ಕೆ ಸಾಹಿತಿ ಬಿ.ಎಲ್.ವೇಣು ಕಥೆ ಸೇರ್ಪಡೆ

ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಮಾತನಾಡಿ ಚಿತ್ರದುರ್ಗಕ್ಕೂ ದಲೈಲಾಮರವರಿಗೂ ಅವಿನಾಭಾವ ಸಂಬಂಧವಿರುವುದರಿಂದ ಅವರ ಹುಟ್ಟುಹಬವನ್ನು ಇಲ್ಲಿ ಆಚರಿಸಲು ಅವರೆ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಜವಾಹರಲಾಲ್ ನೆಹರುರವರು ದೇಶದ ಪ್ರಧಾನಿಯಾಗಿದ್ದಾಗ ಕರ್ನಾಟಕದ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪನವರಿಗೆ ರಾಜ್ಯದಲ್ಲಿ ದಲೈಲಾಮರವರಿಗೆ ರಕ್ಷಣೆ ನೀಡುವಂತೆ ಸೂಚಿಸಿದ್ದರು. ಒಂದು ಲಕ್ಷ ನಲವತ್ತು ಸಾವಿರ ಸಂಸಾರಗಳು ದೇಶದಲ್ಲಿವೆ. ದಲೈಲಾಮರವರ ಜೊತೆ ಅಂದು ಎಂಬತ್ತು ಸಾವಿರ ಭಿಕ್ಕುಗಳು ನಮ್ಮ ದೇಶಕ್ಕೆ ಬಂದಿದ್ದರೆಂದರು.

ಆ.10 ರಂದು ಐದುನೂರು ಬೌದ್ದ ಭಿಕ್ಕುಗಳು(Madara Channaiah Swamiji) ದುರ್ಗಕ್ಕೆ ಬರುತ್ತಾರೆ. ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಡಲಿದೆ. ಸಚಿವ ಎಂ.ಬಿ.ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದವರು ಎಂದು ಹೇಳಿದರು.

ಇದನ್ನೂ ಓದಿ: ವಾಣಿ ವಿಲಾಸ ಸಾಗರ ನೀರಿನ ಮಟ್ಟ ಹೆಚ್ಚಳ | ಎಷ್ಟು ಕ್ಯೂಸೆಕ್ಸ್ ನೀರು ಬಂದಿದೆ? 

ಬಸವಕುಮಾರ ಸ್ವಾಮೀಜಿ ಮಾತನಾಡುತ್ತ ಇಂತಹ ಕಾರ್ಯಕ್ರಮಗಳಿಗೆ ಮುರುಘಾಮಠದ ಸಂಪೂರ್ಣ ಸಹಕಾರವಿದೆ. ಬಸವ ಸಮಾನತೆ, ಬುದ್ದ ಶಾಂತಿಯ ಸಂಕೇತ ಹಾಗಾಗಿ ಬಸವ ನಾಡಿನಲ್ಲಿ ಬುದ್ದನ ಸ್ಮರಣೆ ಆಚರಿಸಲಾಗುವುದು. ದಲೈಲಾಮ ಕರ್ನಾಟಕದ ಮೇಲೆ ಅಪಾರವಾದ ಗೌರವವಿಟ್ಟುಕೊಂಡಿದ್ದಾರೆ. ಭಾರತಕ್ಕೆ ಟಿಬೆಟಿಯನ್ನರು ಕೃತಜ್ಞತೆ ಸಲ್ಲಿಸುವ ಆಸೆಯಿಂದ ಅವರ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಲು ತೀರ್ಮಾನಿಸಿದ್ದಾರೆಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಹೊಳಲ್ಕೆರೆಯ ಪಾಂಡುರಂಗಸ್ವಾಮಿ, ಕೆ.ಇ.ಬಿ.ಷಣ್ಮುಖಪ್ಪ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಹೆಚ್.ಮಂಜಪ್ಪ, ಹೆಚ್.ಜೆ.ಕೃಷ್ಣಮೂರ್ತಿ , ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

Rain | ಸೋಮವಾರ ರಾತ್ರಿ ಸುರಿದ ಮಳೆಗೆ ಎಲ್ಲೆಲ್ಲಿ ಏನೆಲ್ಲ ಹಾನಿಯಾಗಿದೆ | ಇಲ್ಲಿನ ರಿಪೋರ್ಟ್

Today Adike Rate | ಆಗಸ್ಟ್ 05| ಇಂದಿನ ಅಡಿಕೆ ರೇಟ್ ಎಷ್ಟಿದೆ?

Retirement: ವಯೋನಿವೃತ್ತಿ ಹೊಂದಿದ ಮುಖ್ಯ ಲೆಕ್ಕಾಧಿಕಾರಿ ಸಿ.ಜಿ.ಶ್ರೀನಿವಾಸ್‍ಗೆ ಸನ್ಮಾನ

BL Venu: ಕುವೆಂಪು ವಿಶ್ವವಿದ್ಯಾಲಯ ಪಠ್ಯಕ್ಕೆ ಸಾಹಿತಿ ಬಿ.ಎಲ್.ವೇಣು ಕಥೆ ಸೇರ್ಪಡೆ

ವಾಣಿ ವಿಲಾಸ ಸಾಗರ ನೀರಿನ ಮಟ್ಟ ಹೆಚ್ಚಳ | ಎಷ್ಟು ಕ್ಯೂಸೆಕ್ಸ್ ನೀರು ಬಂದಿದೆ? | Vani Vilasa Sagara

TAGGED:Basavamurthy Madara ChannaiahChitradurgaChitradurga NewsDalai LamaKannada Newskannada suddiNammajana.comTibetan religionಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಟಿಬೇಟಿಯನ್ ಧರ್ಮದಲೈಲಾಮರನಮ್ಮಜನ.ಕಾಂಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀNammajana.com
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Today Adike Rate | ಆಗಸ್ಟ್ 05| ಇಂದಿನ ಅಡಿಕೆ ರೇಟ್ ಎಷ್ಟಿದೆ?
Next Article Rain | ಸೋಮವಾರ ರಾತ್ರಿ ಸುರಿದ ಮಳೆಗೆ ಎಲ್ಲೆಲ್ಲಿ ಏನೆಲ್ಲ ಹಾನಿಯಾಗಿದೆ | ಇಲ್ಲಿನ ರಿಪೋರ್ಟ್
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಇಂದಿನ ಸುದ್ದಿ
ಹಿಮ್ಮುಖ ಚಲಿಸಿದ ಬಸ್: ಚಾಲಕ ಸಾವು : Bus
ಕ್ರೈಂ ಸುದ್ದಿ
Donkey wedding | ಮಳೆಗಾಗಿ ಗ್ರಾಮಸ್ಥರಿಂದ ಕತ್ತೆಗಳ ಮದುವೆ
ಇಂದಿನ ಸುದ್ದಿ
Accident: ಬೈಕ್‌ಗಳ ನಡುವೆ ಡಿಕ್ಕಿ: ಓರ್ವ ಸಾವು
ಕ್ರೈಂ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?