Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Darshan Case: ರೇಣುಕಾಸ್ವಾಮಿ ಕೇಸ್ | ಡಿ.ಗ್ಯಾಂಗ್ ಎಡೆಮುರಿಕಟ್ಟಿದ ಖಡಕ್ ಪೊಲೀಸ್ ಅಧಿಕಾರಿಗಳು, ಕೇಸ್ ಭೇದಿಸಿದ್ದು ಹೇಗೆ?
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Darshan Case: ರೇಣುಕಾಸ್ವಾಮಿ ಕೇಸ್ | ಡಿ.ಗ್ಯಾಂಗ್ ಎಡೆಮುರಿಕಟ್ಟಿದ ಖಡಕ್ ಪೊಲೀಸ್ ಅಧಿಕಾರಿಗಳು, ಕೇಸ್ ಭೇದಿಸಿದ್ದು ಹೇಗೆ?
ವಿಶೇಷ ಸುದ್ದಿ

Darshan Case: ರೇಣುಕಾಸ್ವಾಮಿ ಕೇಸ್ | ಡಿ.ಗ್ಯಾಂಗ್ ಎಡೆಮುರಿಕಟ್ಟಿದ ಖಡಕ್ ಪೊಲೀಸ್ ಅಧಿಕಾರಿಗಳು, ಕೇಸ್ ಭೇದಿಸಿದ್ದು ಹೇಗೆ?

Editor Nammajana
Last updated: 22 June 2024 04:15
By Editor Nammajana 4 Min Read
Share
SHARE

ಖಡಕ್ ಪೊಲೀಸ್ ಅಧಿಕಾರಿಗಳು

CHITRADURGA NEWS | NAMMAJANA.COM |22-6-2024

ನಮ್ಮಜನ.ಕಾಂ, ವಿಶೇಷ ವರದಿ: ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರ ಮಾರ್ಗದರ್ಶನದಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಆರೋಪಿ ಚಿತ್ರನಟ ದರ್ಶನ್ ಮತ್ತು ತಂಡವನ್ನು ಯಾವುದೇ ಒತ್ತಡ ಅಮಿಷಕ್ಕೆ ಬಲಿಯಾಗದೆ ವ್ಯತ್ತಿಪರತೆ ಪ್ರದರ್ಶಿಸಿ ದರ್ಶನ (Darshan Case)  ಮತ್ತು ಗ್ಯಾಂಗ್ ಬಂಧಿಸಿ ಲೇಣುಕಾಸ್ವಾಮಿ ಕೊಲೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಮೂವರು ಪೊಲೀಸ್ ಅಧಿಕಾರಿಗಳು ಇಂದು ಸೂಪರ್ ಹೀರೋಗಳಾಗಿದ್ದಾರೆ.

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್, ಎಸಿಪಿ ಚಂದನ್, ಇನ್ಸಸೆಕ್ಟರ್ ಗಿರೀಶ್ ನಾಯ್ಕ್  ಅವರು ದರ್ಶನ ಪ್ರಕರಣದಲ್ಲಿ ಪೊಲೀಸ್ ಹುದ್ದೆಯ ಗೌರವ ಘನತೆಯನ್ನು ಹೆಚ್ಚಿಸಿದ್ದಾರೆ. ದೊಡ್ಡ ದೊಡ್ಡ ಆಮಿಷಗಳು, ಪ್ರಭಾವಿಗಳ ನೆರಳು ಸೋಕಿದರೂ ಸಹ ದರ್ಶನ್ ಅವರನ್ನು ಈ ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಬೇಟೆಯಾಡಿದ್ದು, ಉಪ ಪೊಲೀಸ್ ಆಯುಕ್ತ ಎಸ್.ಗಿರೀಶ್, ಗಿರೀಶ್ ಅವರು ಇಲ್ಲದೇ ಇದ್ದಿದ್ದರೆ ಈ ಪ್ರಕರಣದಲ್ಲಿ ಗಾಳಿಯಲ್ಲಿ ತೇಲಿ ಹೋಗುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಮುಚ್ಚಿಹೋಗಬೇಕಿದ್ದ ಕೇಸ್ ಅನ್ನು ಬಯಲಿಗೆಳೆದು ಸತ್ಯಾಸತ್ಯತೆ ಹೊರತರುವಲ್ಲಿ ಗಿರೀಶ್ ಅವರು ಯಶಸ್ವಿಯಾಗಿದ್ದಾರೆ. ಈ ಡೈನಾಮಿಕ್ ಅಧಿಕಾರಿ ಇಲ್ಲದಿದ್ದರೆ, ಪ್ರಕರಣದ ಸತ್ಯವು ಹೂತುಹೋಗುತ್ತಿತ್ತು ಎಂಬುದರಲ್ಲಿ (Darshan Case) ಯಾವುದೇ ಸಂದೇಹವಿಲ್ಲ. ಡಿಸಿಪಿ ಗಿರೀಶ್ ಹಾಗೂ ಸಹಾಯಕ ಪೋಲಿಸ್ ಕಮಿಷನರ್ ಚಂದನ್ ಕುಮಾರ್ ಹಾಗೂ ಇನ್ಸಸ್ಪೆಕ್ಟರ್ ಗಿರೀಶ್ ನಾಯ್ ಅವರು ರಿಯಲ್ ಹೀರೋಗಳಾಗಿ ನಟಭಯಂಕರನ ಬೇಟೆಯಾಡಿದ್ದಾರೆ.

ನಾಲ್ಕು ಜನರ ಹೇಳಿಕೆ ಎಸ್.ಗಿರೀಶ್ ಅವರಿಗೆ ಅನುಮಾನ ಹುಟ್ಟಿಸಿತ್ತು

ಎಸ್ ಗಿರೀಶ್ ಅವರು ಕೊಲೆಯಾದ ದಿನದಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇಲ್ಲದಿದ್ದರೇ ಈ ಕೇಸ್ ಧಮ್ ಕಳೆದುಕೊಳ್ಳಿತ್ತು. ರೇಣುಕಾಸ್ವಾಮಿ ಶವ ಸಿಗುತ್ತಲೇ  ನಾಲ್ಕು ಮಂದಿ ನಾವು ಕೊಲೆ ಮಾಡಿದ್ದು  ಅಂತಾ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಶರಣಾದ ನಾಲ್ವರು ಹೇಳಿದ ಕಥೆ ಗಿರೀಶ್ ಅವರಿಗೆ ಅನುಮಾನ ಬರುವಂತೆ ಮಾಡಿತ್ತು. ನಾಲ್ವರ ಹೇಳಿಕೆಗಳು ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಆಗ ಡಿಸಿಪಿ ಎಸ್ ಗಿರೀಶ್ ಮತ್ತು  ಎಸಿಪಿ ಚಂದನ್ ಕುಮಾರ್ ಇಬ್ಬರು ಸೇರಿಕೊಂಡು ಶರಣಾದ ನಾಲ್ವರಿಗೆ ತಮ್ಮದೇ ರೀತಿಯಲ್ಲಿ ವರ್ಕ್ ಮಾಡಿದ್ದಾರೆ. ಆಗ ಇವರಿಗೂ ರೇಣುಕಾಸ್ವಾಮಿಗೂ ಸಂಬಂಧ ಇಲ್ಲ. ಕೇವಲ ಜೈಲಿಗೆ ಹೋಗಲು ಇವರಿಗೆ ಹಣದ ಆಮಿಷ ಒಡ್ಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಜೂನ್ 9 ರಂದು ರಾತ್ರಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸಕಲ ಪುರಾವೆಗಳನ್ನೂ ಸಿದ್ಧಪಡಿಸಿ ಕೊಂಡಿದ್ದರು. ಜೂನ್ 10 ರಂದು ನಸುಕಿನಲ್ಲಿ ಮೈಸೂರು ಹೋಟೆಲ್‌ಗೆ ಹೋಗಿದ್ದ ಎಸಿಪಿ ಚಂದನ್ ನಟ ದರ್ಶನ (Darshan Case) ಎದುರು ನಿಂತಿದ್ದರು. ನಾನು ಕೊಲೆ ಮಾಡಿಲ್ಲ. ನಿಮ್ಮ ಜೊತೆ ಬರುವುದಿಲ್ಲ ಎಂದಿದ್ದ ದರ್ಶನಗೆ ತಮ್ಮದೆ ಪೊಲೀಸ್ ಶೈಲಿಯಲ್ಲಿ ಕಡಕ್ಕಾಗಿ ಉತ್ತರ ನೀಡಿದರು. ಆಗ ದರ್ಶನ ಪೊಲೀಸ್ ಜೀಪು ಹತ್ತಿದರು. ಮಾಧ್ಯಮಗಳಿಗೆ ಗೊತ್ತಾಗುವ ಮೊದಲೆ ದರ್ಶನ ಬೆಂಗಳೂರಿನಲ್ಲಿದ್ದರು.

ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾಗಿದ್ದ ದಿ. ಶಿವಪ್ಪ ಬರಮಪ್ಪ ಸಣ್ಣೀರ್ ಅವರ ನಾಲ್ಕನೇ ಪುತ್ರರಾದ ಎಸ್. ಗಿರೀಶ್ ಕೆಮಿಕಲ್ ಇಂಜಿನಿಯರ್ ಆಗಿದ್ದರು, ತಂದೆಯಂತೆಯೇ ಆದರ್ಶ ಚಿಂತನೆಗಳು ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ಕೆಎಸ್‌ಪಿಎಸ್ ಪರೀಕ್ಷೆಪಾಸ್ ಮಾಡಿ ಡಿವೈಎಸ್ಪಿ ಹುದ್ದೆಗೆ ಆಯ್ಕೆಯಾದರು. ರಾಜ್ಯದ ಅನೇಕ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹಣದ ಆಮಿಷ, ಪ್ರಭಾವಿಗಳಿಗೆ ಮಣಿಯದೆ ಖಡಕ್  ಅಧಿಕಾರಿಯೆಂದು  ಹೆಸರುವಾಸಿಯಾಗಿದ್ದಾರೆ‌. ಅನೇಕ ಈಗ ಪ್ರಸ್ತುತ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿರುವ ಇವರು ಸಹಕಾರ ಸಚಿವ ಕೆ.ಎನ್.ರಾಜಣ್ಣನವರ ಪುತ್ರಿ ಎಲ್‌.ಎಲ್‌.ಬಿ ಪದವೀಧರರಾದ ರಡ್ಡಿ ಅವರೊಂದಿಗೆ ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಇವರು ಕೆಲಸ ಮಾಡಿದ ಅನೇಕ ಕಡೆಗಳಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಕ್ರಿಮಿನಲ್ ಪ್ರಕರಣಗಳನ್ನು ಬೇದಿಸಿದ್ದಾರೆ.

ಎಸ್. ಗಿರೀಶ್ ಅವರ ಹೆಸರು ಕೇಳಿದ್ರೆ ಕರ್ನಾಟಕದ ಜನರಿಗೆ ನೆನಪಿಗೆ ಬರುವುದೇ ಬಿ.ಎಸ್.ಯಡಿಯೂರಪ್ಪ ಪ್ರಕರಣ. 2011ರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸಿದ್ದು ಇದೇ ಎಸ್.ಗಿರೀಶ್ ಅವರು. ಇಂಜಿನಿಯರ್ ಆಗಿದ್ದ ಗಿರೀಶ್ ಈ ಹಿಂದೆ ಲೋಕಾಯುಕ್ತದಲ್ಲಿದ್ದಾಗ ಧೈರ್ಯದ ನಡವಳಿಕೆಗೆ ಹೆಸರಾಗಿದ್ದರು. ಇನ್ನು, ಎಸಿಪಿ  ಚಂದನ್ ಕುಮಾರ್ ಮೊದಲು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಪೊಲೀಸ್ ಇಲಾಖೆಗೆ ಸೇರಿದ ನಂತರ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಎಲ್ಲಾ ಕಡೆಗಳಲ್ಲಿಯೂ ನಿಷ್ಟಾವಂತ, ಖಡಕ್

ಸೂಪರ್ ಸ್ಟಾರ್ ದರ್ಶನ್ ಅವರನ್ನ ಮೈಸೂರಿನಲ್ಲಿ ನಾಣ್ಯ – ತಾಳ್ಮೆ ಮತ್ತು ಧೈರ್ಯದಿಂದ ಬಂಧಿಸಿದ ಹೆಗ್ಗಳಿಕೆ ಚಂದನ್ & ಟೀಮ್ಗೆ ಸಲ್ಲುತ್ತದೆ. ಇಂತಹ ದಕ್ಷ ಅಧಿಕಾರಿಗಳಿಗೆ ನಾಡಿನ ಜನತೆ ಬೆಂಬಲಿಸುವುದು.

ಇದನ್ನೂ ಓದಿ: Hosadurga yoga day: ನಿತ್ಯ ಯೋಗಭ್ಯಾಸ ಆರೋಗ್ಯ ಕಾಪಡುತ್ತದೆ: ಧನಂಜಯ

ಟಫ್ ಕಾಪ್ ದಯಾನಂದ್

ಕರ್ನಾಟಕದಲ್ಲಿ 1970ನೇ ದಶಕದಿಂದ ಬೆಂಗಳೂರಿನ ಭೂಗತ ಲೋಕದ ದುರುಳರಿಗೆ ಬುನಾದಿ ಬಿದ್ದು ಅಂದಿನಿಂದ

ಇಂದಿನವರೆಗೆ ಬೆಂಗಳೂರು ನಗರ ಕ್ರಿಮಿನಲ್‌ಗಳ ತಾಣ. ಇದರಿಂದ ನೂರಾರು ಮುಗ್ಧ ಜನರು ಪ್ರಾಣ ಕಳೆದುಕೊಂಡಿದ್ದಾರೆ , ಸಾವಿರಾರು ಕೋಟಿ ಆಸ್ತಿ ನಷ್ಟವಾಗಿದೆ. ಬೆಂಗಳೂರು ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲಿ ಪ್ರಖ್ಯಾತಿ ಮತ್ತು ಕುಖ್ಯಾತಿ ಪಡೆದ ನಗರ, ರಾಜಕೀಯ ಮತ್ತು ಹಣದ ಬಲದಿಂದ ಹಲವಾರು ನಟೋರಿಯಸ್‌ ಕ್ರಿಮಿನಲ್‌ಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಆದರೆ ಒಂದು ವರ್ಷದ ಹಿಂದೆ ಬಿ ದಯಾನಂದ್ ಐಪಿಎಸ್ ರವರು ಬೆಂಗಳೂರು ಕಮಿಷನ್ ಆದ ಮೇಲೆ ಪೋಲೀಸ್ ಇಲಾಖೆಗೆ ಬಲ ಬಂದಿದೆ. ಅಪರಾಧಗಳಲ್ಲಿ  ಭಾಗಿಯಟದವರು ಎಷ್ಟೇ ಪ್ರಭಾವಿಗಳಾದರೂ ಅವರನ್ನು ಎಡೆಮುರಿಕಟ್ಟಿ ಆಗ್ರಹಾರ ಜೈಲಿಗೆ  ಕಳಿಸಲಾಗುತ್ತದೆ.. ಯಾವುದೇ ಕಾಣದ ಕೈಗಳ ಯೋಜನೆಗಳು ನಡೆಯುತ್ತಿಲ್ಲ. ಇದಕ್ಕೆಲ್ಲ ಕಾರಣ ಸಹೃದಯಿ ಮತ್ತು ಮಿತಭಾಷಿ (Darshan Case) ಬಿ.ದಯಾನಂದ್ ರವರು ಪ್ರಾಮಾಣಿಕತೆ ಮತ್ತು ದಕ್ಷತೆ. ಅವರು ಎಲ್ಲೇ ಕೆಲಸ ಮಾಡಲಿ ಅವರು ತಮ್ಮ ಕೆಲಸದ ಛಾಪನ್ನು ಉಳಿಸಿಕೊಂಡು ಬಂದಿದ್ದಾರೆ.ಅವರು ನಮ್ಮ ವಿಜಯನಗರ ಜಿಲ್ಲೆ ಹಗರಿ ಬೊಮ್ಮನಹಳ್ಳಿ ತಾ ಬನ್ನಿಕಲ್ಲು ಗ್ರಾಮದವರು ಎನ್ನುವುದು ನಮ್ಮ ಹೆಮ್ಮೆ,ಕರ್ನಾಟಕ ಪೋಲೀಸ್ ಇತಿಹಾಸದಲ್ಲಿ ಅವರ ಸಾಧನೆಗಳು ಶಾಶ್ವತ. ಇಂತಹ ವ್ಯಕ್ತಿಗಳ ಬಗ್ಗೆ ಮಕ್ಕಳಿಗೆ ಕಲಿಸುವುದು ಅವಶ್ಯಕ.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:ACP ChandanActor DarshanApollo crewChitradurgaChitradurga NewsDarshan CaseDCP S.GirishInspector Girish NaikKannada Newskannada suddiKhadak PoliceNammajana.comOfficersRenukaswamy murderಅಧಿಕಾರಿಗಳುಅಪೊಲೋ ಸಿಬ್ಬಂದಿಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ಎಸಿಪಿ ಚಂದನ್ಕನ್ನಡ ನ್ಯೂಸ್ಕನ್ನಡ ಸುದ್ದಿಖಡಕ್ ಪೊಲೀಸ್ಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಚಿತ್ರನಟ ದರ್ಶನ್ಡಿಸಿಪಿ ಎಸ್.ಗಿರೀಶ್ದರ್ಶನ್ ಪ್ರಕರಣನಮ್ಮಜನ.ಕಾಂರೇಣುಕಾಸ್ವಾಮಿ ಕೊಲೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Gold medal: ಅಂತರಾಷ್ಟೀಯ ಸೈನ್ಸ್ ಒಲಂಪಿಯಾಡ್‌ನಲ್ಲಿ SRS ವಿದ್ಯಾರ್ಥಿ ಧವನ್ ಎಸ್.ರೆಡ್ಡಿಗೆ ಚಿನ್ನದ ಪದಕ
Next Article Valmiki Corporation: ವಾಲ್ಮೀಕಿ ಅಭಿವೃದ್ದಿ ನಿಗಮ ಅವ್ಯವಹಾರ | ಜೂನ್ 28 ರಂದು ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಡಿಸಿ ಕಚೇರಿ ಮುತ್ತಿಗೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?