Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಶಾಸಕ ರಘುಮೂರ್ತಿ ಮಗಳ ಮದುವೆಗೆ ಸಿಂಗಾರಗೊಂಡ ಚಳ್ಳಕೆರೆ, ಜನರ ಕಣ್ಮನ ಸೆಳೆಯುತ್ತಿರುವ ಮದುವೆ ಮಂಟಪ | Daughter marriage
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > ಶಾಸಕ ರಘುಮೂರ್ತಿ ಮಗಳ ಮದುವೆಗೆ ಸಿಂಗಾರಗೊಂಡ ಚಳ್ಳಕೆರೆ, ಜನರ ಕಣ್ಮನ ಸೆಳೆಯುತ್ತಿರುವ ಮದುವೆ ಮಂಟಪ | Daughter marriage
ವಿಶೇಷ ಸುದ್ದಿ

ಶಾಸಕ ರಘುಮೂರ್ತಿ ಮಗಳ ಮದುವೆಗೆ ಸಿಂಗಾರಗೊಂಡ ಚಳ್ಳಕೆರೆ, ಜನರ ಕಣ್ಮನ ಸೆಳೆಯುತ್ತಿರುವ ಮದುವೆ ಮಂಟಪ | Daughter marriage

Editor Nammajana
Last updated: 20 October 2024 07:38
By Editor Nammajana 3 Min Read
Share
SHARE

Chitradurga news|nammajana.com| 19-10-2024

ನಮ್ಮಜನ. ಚಳ್ಳಕೆರೆ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಏಕೈಕ ಪುತ್ರಿ ಡಾ.ಟಿ.ಆರ್.ಸುಚಿತ್ರಾ, ಡಾ.ಜಿ.ವರುಣ ಮದುವೆಗೆ ಬುಡಕಟ್ಟು ಸಂಸ್ಕೃತಿಯ ತವರೂರು ಎಂಬ ಖ್ಯಾತಿಯ ಚಳ್ಳಕೆರೆ ನಗರದ ಹೆಚ್ ಪಿಸಿಸಿ ಕ್ರೀಡಾಂಗಣದಲ್ಲಿ ಅತ್ಯಂತ (Daughter marriage) ಅದ್ದೂರಿಯಾಗಿ ಮದುವೆ ಸೆಟ್ ಹಾಕಿದ್ದು ವಿವಾಹ ನಡೆಸಲು ಶಾಸಕ ರಘುಮೂರ್ತಿ ಕುಟುಂಬ ಸಜ್ಜಾಗಿದೆ.

ಚಳ್ಳಕೆರೆ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಮೂರು ಬಾರಿ ಶಾಸಕರಾಗಿರುವ ರಘುಮೂರ್ತಿ ಅವರು ತಮ್ಮ ಪುತ್ರಿ ವಿವಾಹಕ್ಕೆ ಜಿಲ್ಲೆಯ ಜನರನ್ನು ಆಹ್ವಾನಿಸಿ ತನ್ನ ಸ್ವ ಕ್ಷೇತದಲ್ಲಿ ಹಮ್ಮಿಕೊಂಡಿದ್ದು ಇಡೀ ಚಳ್ಳಕೆರೆ ಅಲಂಕಾರದಿಂದ ಕೂಡಿದ್ದು ಹಬ್ಬದ ವಾತವರಣ ಮನೆ ಮಾಡಿದೆ.

ಮದುವೆ ಮಂಟಪ್ಪ‌ ಸುಂದರ ದೃಶ್ಯ

ಚಳ್ಳಕೆರೆ ನಗರದಲ್ಲಿ ಹಬ್ಬದ ವಾತವರಣ

ಶಾಸಕ ಪುತ್ರಿ ವಿವಾಹ ಹಿನ್ನೆಲೆಯಲ್ಲಿ ಚಳ್ಳಕೆರೆ ನಗರದಲ್ಲಿ ಹಬ್ಬದ ವಾತವರಣ ಸೃಷ್ಟಿಯಾಗಿದೆ. ಚಿತ್ರದುರ್ಗ ರಸ್ತೆ ಅಲಂಕಾರಿಕ ದೀಪಗಳಿಂದ ಕಂಗೊಳಿಸುತ್ತಿದೆ. ವೃತ್ತಗಳಿಗೆ ಅಲಂಕಾರ ಸಹ ಮಾಡಲಾಗಿದೆ. ಮದುವೆ ಸೆಟ್ ಅಂತೂ ಕಣ್ಮನ ಸೆಳೆಯುತ್ತಿದೆ.

ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಿರ್ಮಾಣವಾಗಿರುವ ಸೆಟ್ ಜನರನ್ನು ಕೈ ಬಿಸಿ ಕರೆಯುತ್ತಿದೆ. ಅದು ಮೈದಾನ (Daughter marriage) ಎಂಬುದಕ್ಕಿಂದ ಬೃಹತ್ ದೇವಸ್ಥಾನದಲ್ಲಿ ಮದುವೆ ನಡೆಯುತ್ತದೆ ಎನ್ನುವ ರೀತಿಯಲ್ಲಿ ಅದ್ಬುತವಾಗಿ ಮದುವೆ ಮಂಟಪ್ಪ ಸಿದ್ದಗೊಂಡಿದೆ.

ಮದುವಗೆ ಸಿಎಂ ಆಗಮನದ ಹಿನ್ನಲೆ ಎಲ್ಲಾ ವೃತ್ತಗಳಲ್ಲಿ  ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಫೋಟೋ ಮತ್ತು ಶಾಸಕ ರಘುಮೂರ್ತಿ ಅಭಿಮಾನಿಗಳು ರಘುಮೂರ್ತಿ ಕುಟುಂಬದ ಜೊತೆ ತಮ್ಮ ಫೋಟೋ ಹಾಕಿಸಿಕೊಂಡಿರುವ ಬ್ಯಾನರ್  ಸೇರಿದಂತೆ ಆಗಮಿಸುವ ಎಲ್ಲರಿಗೂ ಸ್ವಾಗತಕೋರುವ ಬ್ಯಾನರ್‌ಗಳು ನಗರದಾದ್ಯಂತ ರಾರಾಜಿಸುತ್ತವೆ.

ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ತಮ್ಮದೇಯಾದ ರೀತಿಯಲ್ಲಿ ವ್ಯವಸ್ಥೆ (Daughter marriage) ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರೂ ಸಹ ಶಾಸಕ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಇದ್ದಾರೆ.

ಲಕ್ಷಾಂತರ ಜನ ಮದುವೆಗೆ ಆಗಮನ

ವಿವಾಹ ಕಾರ್ಯಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಬೋಜನವೂ ಸೇರಿದಂತೆ ಯಾವುದೇ ಅವ್ಯವಸ್ಥೆಯಾಗದಂತೆ ಎಲ್ಲಾ ಸಿದ್ದತೆಗಳನ್ನು ಶಾಸಕ ಟಿ.ರಘುಮೂರ್ತಿ ವಿಕ್ಷಣೆ ಮಾಡಿದ್ದು ಸಕಲ ಸಿದ್ದತೆ ಭರದಿಂದ ಸಾಗುತ್ತಿದ್ದು ಪಕ್ಷದ ಕಾರ್ಯಕರ್ತರು, (Daughter marriage) ಮುಖಂಡರು ಈಗಾಗಲೇ ಹಲವಾರು ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ.

ಶಾಸಕ ಟಿ.ರಘುಮೂರ್ತಿ ಪುತ್ರಿ ಮದುವೆಯಲ್ಲಿ 5000 ಜನರಿಗೆಊಟದ ವ್ಯವಸ್ಥೆ ಮಾಡಿರುವ ದೃಶ್ಯದ ಚಿತ್ರ

 

ಕ್ಷೇತ್ರದ ಪ್ರತಿಗ್ರಾಮಕ್ಕೆ ಸಹ  ವಿವಾಹದ ಆಹ್ವಾನದ ಪತ್ರಿಕೆಗಳನ್ನು ಕಳಿಸಿ ಎಲ್ಲರನ್ನೂ ಆಹ್ವಾನಿಸಿದೆ.

ವಿಶೇಷವಾದ ಬೃಹತ್ ಜರ್ಮನ್ ಟೆಂಟ್ ನಿರ್ಮಾಣ :

ಮಳೆ ಬಂದರು ನೆನೆಯದ ರೀತಿಯಲ್ಲಿ ಜರ್ಮನ್ ಟೆಂಟ್ ಹಾಕಲಾಗಿದೆ. ಮದುವೆಗೆ ಆಗಮಿಸುವ ವಿಐಪಿ, ವಿವಿಐಪಿಗಳು ನೇರವಾಗಿ ವಧುವರರನ್ನು ಆಶೀರ್ವದಿಸಿ ಮದುವೆ ಮಂಟಪದ ಹಿಂಭಾಗದಲ್ಲಿ ನಿರ್ಮಿಸಿರುವ ಊಟದ ಹಾಲ್‌ಗೆ ತೆರಳಬಹುದಾಗಿದೆ.

ಸುಮಾರು 3 ಸಾವಿರಕ್ಕೂ ಹೆಚ್ಚು ವಿಐಪಿಗಳು ಒಂದೇ ಸಾರಿ ಬೋಜನ ಮಾಡುವ ವ್ಯವಸ್ಥೆ ಮಾಡಲಾಗಿದೆ.

5 ಸಾವಿರ ಜನಕ್ಕೆ ಕುಳಿತು ಊಟ ಮಾಟಲು ಮತ್ತು 6 ಸಾವಿರ ಜನಕ್ಕೆ 27 ಬಫೇ ಕೌಂಟರ್ 

ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಎರಡು ಜರ್ಮನ್ ಟೆಂಟ್ ನಿರ್ಮಿಸಿದ್ದು, ಒಂದರಲ್ಲಿ ಸುಮಾರು 5 ಸಾವಿರದಂತೆ ಒಟ್ಟು 10 ಸಾವಿರ ಜನರು ಊಟದಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕೆ ಹೊಂದಿಕೊಂಡಂತೆ ಹೆಚ್ಚುವರಿಯಾಗಿ ಎರಡು ಸೆಟ್ (Daughter marriage) ನಿರ್ಮಿಸಿದ್ದು ಅಲ್ಲೂ ಸಹ ಒಂದೇ ಹಂತದಲ್ಲಿ 6 ಸಾವಿರ ಜನರು ಭಫೇ ಸ್ವೀಕರಿಸಬಹುದು.

ಊಟಕ್ಕೆ ಸಿದ್ದಗೊಳ್ಳತ್ತಿರುವ ತಿನಿಸು

ಇದನ್ನೂ ಓದಿ: ಸೊಸೆಯರು ಭರ್ಜರಿ ಡ್ಯಾನ್ಸ್ ಮಾಡುವ ವಿಶಿಷ್ಟ ಹಬ್ಬ | ‌Dasara

ಚಳ್ಳಕೆರೆತಾಲ್ಲೂಕಿನದಲ್ಲಿ ಈ ಹಿಂದೆ ಈ ಕ್ಷೇತ್ರದ ಮಾಜಿ ಸಚಿವ ತಿಪ್ಪೇಸ್ವಾಮಿ, ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ತಮ್ಮ ಪುತ್ರಿಯರ ವಿವಾಹವನ್ನು ಇದೇ ಸ್ಥಳದಲ್ಲಿ ಮಾಡಿದ್ದರು. ಈಗ ಹ್ಯಾಟ್ರಿಕ್ ಶಾಸಕರೂ ಸಹ ತಮ್ಮ ಪುತ್ರಿ ವಿವಾಹ ಇಲ್ಲೆ  (Daughter marriage) ಮಾಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

T. Raghumurthy | ಮದಕರಿ ನಾಡಲ್ಲಿ ಶಾಸಕ ಟಿ.ರಘುಮೂರ್ತಿ ಜನ್ಮದಿನ ಸಂಭ್ರಮಾಚರಣೆ , ಮುಂದಿನ ಸಚಿವ ರಘುಮೂರ್ತಿ ಅವರಿಗೆ ಜೈ ಎಂದ ಜನ

TAGGED:ChallakereChitradurga NewsCM's arrivalDaughter's weddingKannada Newskannada suddilavish weddingMLANammajana.comT Raghumurthyweddingwedding mantappaಅದ್ದೂರಿ ಮದುವೆಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಟಿ ರಘುಮೂರ್ತಿನಮ್ಮಜನ.ಕಾಂಮಗಳ ಮದುವೆಮದುವೆಮದುವೆ ಮಂಟಪ್ಪಶಾಸಕಸಿಎಂ ಆಗಮನ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry1
Dead0
Wink0
Previous Article ಯುವಕನ ಪ್ರೀತಿ ಕಿರುಕುಳಕ್ಕೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ | Student suicide
Next Article ಚಳ್ಳಕೆರೆ | ಚಿತ್ತಮಳೆಯ ಅವಾಂತರ | ಕೊಚ್ಚಿ ಹೋದ ಈರುಳ್ಳಿ, ಮೆಕ್ಕೆಜೋಳ | Rain Damage
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?