Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Doctor Jairam | ಹಣವಿಲ್ಲದೇ ಬಂದ ಬಡವರ ಸಂಜೀವಿನಿ ಡಾಕ್ಟರ್ ಜೈರಾಮ್ ಇನ್ನಿಲ್ಲ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Doctor Jairam | ಹಣವಿಲ್ಲದೇ ಬಂದ ಬಡವರ ಸಂಜೀವಿನಿ ಡಾಕ್ಟರ್ ಜೈರಾಮ್ ಇನ್ನಿಲ್ಲ
ಇಂದಿನ ಸುದ್ದಿ

Doctor Jairam | ಹಣವಿಲ್ಲದೇ ಬಂದ ಬಡವರ ಸಂಜೀವಿನಿ ಡಾಕ್ಟರ್ ಜೈರಾಮ್ ಇನ್ನಿಲ್ಲ

Editor Nammajana
Last updated: 8 March 2025 02:11
By Editor Nammajana 2 Min Read
Share
SHARE

Chitradurga news|nammajana.com|08-03-2025

ನಮ್ಮಜನ.ಕಾಂ, ಹೊಸದುರ್ಗ: ವೈದ್ಯರು ಎಂದರೆ ಕೇವಲ ಹಣ ಗಳಿಕೆಗಷ್ಟೇ ಸೀಮಿತ ಎಂದು ಜನರು ಮಾತನಾಡುವ ಇಂತಹ ಕಾಲಘಟ್ಟದಲ್ಲಿ ಜನರೇ ನನ್ನ ಜೀವನದ ಉಸಿರು, (Doctor Jairam) ಬಡವರಿಗಾಗಿಯೇ ನನ್ನ ಬದುಕು ಮೀಸಲು, ಬಡತನದಲ್ಲಿ ಹುಟ್ಟಿದ ನನಗೆ ವೈದ್ಯ ವೃತ್ತಿಯನ್ನು ದೇವರು ಕರುಣಿಸಿರುವ ವರ ಎಂದು ನಂಬಿ ಬಡವರಿಗಾಗಿಯೇ, ತನ್ನ ಜೀವನವನ್ನು ಬಡ ರೋಗಿಗಳಿಗಾಗಿಯೇ ಮುಡುಪಾಗಿಟ್ಟಿದ್ದ ಹೊಸದುರ್ಗ ತಾಲೂಕಿನ ಬೀಸನಹಳ್ಳಿ ಲಂಬಾಣಿಹಟ್ಟಿಯ ಬಡ ರೈತ ಕುಟುಂಬದ ಹನುಮಂತ ನಾಯಕ ಶಾಂತಿಬಾಯಿ ದಂಪತಿಯ ಮಗ ವೈದ್ಯ ಡಾ, ಜೈರಾಮ್ ನಾಯ್ಕ್ ಆಕಸ್ಮಿಕವಾಗಿ ಕೃಷಿ ಕಾಯಕದಲ್ಲಿ ತೊಡಗಿದ್ದಾಗ ಗೊರವಿನಕಲ್ಲು ಬಳಿಯ ಅವರ ತೋಟದ ಜಮೀನಿನಲ್ಲಿ ಶುಕ್ರವಾರ ಬೆಳಿಗ್ಗೆ ಕೃಷಿ ಕೆಲಸ ಮಾಡುತ್ತಿದ್ದಾಗ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಹೊಸದುರ್ಗದಲ್ಲಿ ಅದೊಂದು ಕಾಲವಿತ್ತು. ಕಳೆದ 25 ವರ್ಷಗಳ ಹಿಂದೆ ಸಾಮಾನ್ಯ ರೈತ ಕುಟುಂಬದ ಯುವಕನೊಬ್ಬ ವೈದ್ಯಕೀಯ ವಿದ್ಯಾಭ್ಯಾಸ ಮುಗಿಸಿ, ನಂತರ ನಗರದ ಬಸ್ ನಿಲ್ದಾಣದ ಎದುರು ಡಾ. ಜೈರಾಮ್ ಕ್ಲಿನಿಕ್ ಎಂದು ನಾಮಫಲಕ ಹಾಕಿದ್ದರು. ಅಂದಿನಿಂದಲೇ ಅವರನ್ನ ನಂಬಿದ ನೂರಾರು ಜನರು ಪ್ರತಿನಿತ್ಯ ಅವರ ಸೇವೆಯನ್ನು ಪಡೆಯಲು (Doctor Jairam) ಪ್ರಾರಂಭಿಸಿದರು. ಹೊಸದುರ್ಗ ತಾಲೂಕಿಗೆ ಹೊಂದಿಕೊಂಡಂತೆ ನೂರಾರು ಹಳ್ಳಿಗಳ ಜನರು ನಮ್ಮ ಪಾಲಿಗೆ ದೇವರೇ ಇವರನ್ನು ಕಳಿಸಿದ್ದಾನೆ ಎಂದು ನಂಬಿದ್ದರು. ಎಲ್ಲಾ ರೀತಿಯ ಕಾಯಿಲೆಗಳಿಗೂ ಇವರ ಚಿಕಿತ್ಸೆ ರೋಗಿಗಳಿಗೆ ವರದಾನವಾಗಿತ್ತು.

ಹಣವಿಲ್ಲವೆಂದು ಬಂದವರಿಗೆ ಚಿಕಿತ್ಸೆ ನೀಡಿ ಮಾತ್ರೆಯನ್ನ ಕೊಟ್ಟು ಕಳುಹಿಸುತ್ತಿದ್ದ ಸಹೃದಯಿ

ಹೊಸದುರ್ಗದ ಕೆನರಾ ಬ್ಯಾಂಕ್ರಾಮ್ ಆಸ್ಪತ್ರೆಗೆ ಹೋದರೆ ಸಾಕು, ಅಲ್ಲಿ ಪ್ರತಿನಿತ್ಯ ನೂರಾರು ಬಡ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದು, ಅವರಿಂದಲೇ ಮಾತ್ರೆ ಮತ್ತು ಔಷಧಿಗಳನ್ನು ಪಡೆದು ಹೋಗುತ್ತಿರುವ ರೋಗಿಗಳ ಸಂಖ್ಯೆಗೆ ಲೆಕ್ಕವಿರಲಿಲ್ಲ. ಬಹಳಷ್ಟು ವೈದ್ಯರು ಇವರನ್ನ ನೋಡಿ ವೈದ್ಯಕೀಯ ಸೇವೆ ಎಂದರೆ ಹೀಗೆ ಇರುತ್ತದೆಯಾ? ಎಂದು ಪ್ರಶ್ನೆ ಮಾಡಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿ ಮಾಡಿಕೊಂಡಿದ್ದರು ವೈದ್ಯ ಜೈರಾಮ್.

*ಸಹೋದರತ್ವಕ್ಕೆ ಮಾದರಿ,ಅಜಾತಶತ್ರು ಡಾ.ಜೈರಾಮ್:*

ಹೊಸದುರ್ಗ ತಾಲೂಕಿನ ಬೀಸನಹಳ್ಳಿ ಲಂಬಾಣಿಹಟ್ಟಿಯ ಆದರ್ಶ ಕೃಷಿ ಕುಟುಂಬದ ಹನುಮಂತ ನಾಯ್ಕ್ ಮತ್ತು ಶಾಂತಿಬಾಯಿ ದಂಪತಿಗಳಿಗೆ ಒಬ್ಬಳ ಮಗಳು, 4 ಜನ ಗಂಡು ಮಕ್ಕಳು. ಅದರಲ್ಲಿ ಜೈರಾಮ್ ಹಿರಿಯ ಮಗನಾಗಿದ್ದರು. ಜಯರಾಮ್ ನಾಯಕ್ ರವರಿಗೆ ಅಣ್ಣ-ತಮ್ಮಂದಿರೆಂದರೆ ಪಂಚಪ್ರಾಣ, ಹೊಸದುರ್ಗದ ಹೆಸರಾಂತ ವಕೀಲರಾದ (Doctor Jairam) ಜಗದೀಶ್, ಓಂಕಾರ್ ಹಾಗೂ ಸುರೇಂದ್ರ ಈ ಸಹೋದರರು ಅಣ್ಣನ ಹಣತೆಯಂತೆ ಕೃಷಿ ಕಾಯಕ ನಡೆಸುತ್ತಿದ್ದರು. ಮಾರಿಕಣಿವೆ ಬಳಿ ಹಾಗೂ ಕುರುಬರಹಳ್ಳಿಯ ಬಳಿ ಇಬ್ಬರು ಸಹೋದರರಿಗೂ ಜಮೀನು ಕೊಡಿಸಿ, ಅಲ್ಲಿ ಅವರು ಬದುಕಲು ಆಸರೆಯಾಗಿದ್ದರು.

*ಡಾ.ಜೈರಾಮ್ ಇಲ್ಲದೇ ಹೊಸದುರ್ಗದ ವೈದ್ಯಲೋಕ ಅನಾಥ:*

ಯುವ ವೈದ್ಯರಿಗೆ ಮಾರ್ಗದರ್ಶಕರಾಗಿ ಮತ್ತು ಆದರ್ಶ ಪ್ರಾಯರಾಗಿದ್ದ ಜಯರಾಮ್ ನಾಯಕ್ ಅಕಾಲಿಕ ಮರಣ ಹೊಸದುರ್ಗದ ವೈದ್ಯಲೋಕವನ್ನೇ ಅನಾಥವಾಗಿಸಿದೆ. ಸಾಮಾನ್ಯ ಕುಟುಂಬದಲ್ಲಿ ಬದುಕಿ, ಜನಸಾಮಾನ್ಯರಿಗಾಗಿಯೇ ಬದುಕ ಸವಿಸಿ, ನಮ್ಮಿಂದ ದೂರವಾಗಿರುವುದು ಅತೀವ ನೋವು ತಂದಿದೆ ಎಂದು ಹೊಸದುರ್ಗದ ವೈದ್ಯ ಡಾ. ರಘುಪ್ರಸಾದ್ ತಮ್ಮ ನೋವಿನ ಸಂತಾಪ ವ್ಯಕ್ತಪಡಿಸಿದರು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Chitradurgadied after falling into a farm pitDoctor JairamGovernment DoctorHosadurgaKannada Newskannada suddiNammajana.compassed awaySanjeevini of the poorಕನ್ನಡ ನ್ಯೂಸ್ಕನ್ನಡ ಸುದ್ದಿಕೃಷಿ ಹೊಂಡಕ್ಕೆ ಬಿದ್ದು ಸಾವುಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನಿಧನಬಡವರ ಸಂಜೀವಿನಿವೈದ್ಯ ಜೈರಾಮ್ಸರ್ಕಾರಿ ವೈದ್ಯಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article POWER CUT | ಮಾರ್ಚ್ 9 ರಿಂದ 16 ರವರೆಗೆ ವಿದ್ಯುತ್ ವ್ಯತ್ಯಯ
Next Article ಗ್ರಾಮೀಣ ಪ್ರದೇಶಗಳಿಂದ ಸಾಂಸ್ಕೃತಿಕ ನೆಲಗಟ್ಟಿಗೆ ಹೊಸ ಸ್ಪರ್ಶ ಎನ್.ರಘುಮೂರ್ತಿ | Challakere
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?