
Chitradurga news | nammajana.com | 22-8-2024
ನಮ್ಮಜನ.ಕಾಂ, ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ನಾಯಿಗಳ ಹಿಂಡು ಕುರಿ ಮತ್ತು ದನಗಳ ಮೇಲೆ (Dog attack) ದಾಳಿ ನಡೆಸುವುದು ಸ್ವಾಭಾವಿಕವಾಗಿದೆ. ನಾಯಿಗಳ ಹಿಂಡು ರಸ್ತೆಯುದ್ದಕ್ಕೂ ಕಿರುಚುತ್ತಾ ಸಿಕ್ಕ, ಸಿಕ್ಕ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ.
ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಜೆ.ಪಿ.ರಂಗಪ್ಪ ಬಡಾವಣೆಯ ಮಾರಣ್ಣ ಎಂಬುವವರಿಗೆ ಸೇರಿದ (Dog attack) ಕುರಿಹಟ್ಟಿಯಲ್ಲಿ ಗುರುವಾರ ಬೆಳಗ್ಗೆ ನಾಯಿಗಳ ಹಿಂಡು ದಾಳಿ ನಡೆಸಿ ಕೇವಲ ೧೫ ದಿನಗಳ ಹಿಂದೆ ಜನಿಸಿದ ಸುಮಾರು ೭ ಕುರಿಮರಿಗಳನ್ನು ಎಲ್ಲಂದರಲ್ಲೆ ಕಚ್ಚಿಗಾಯಗೊಳಿಸಿ ಪರಾರಿಯಾಗಿವೆ.

ನಾಯಿಗಳ ದಾಳಿಗೆ ತುತ್ತಾದ ಕುರಿಮರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ನಾಯಿದಾಳಿಯಿಂದ ಕಂಗೆಟ್ಟ ಮಾರಣ್ಣ (Dog attack) ಇತ್ತೀಚಿಷ್ಟೇ ಜನಿಸಿದ ಏಳು ಕುರಿಮರಿಗಳು ನಾಯಿದಾಳಿಗೆ ತುತ್ತಾಗಿವೆ ಎಂದು ನೋವು ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: ಚಿತ್ರದುರ್ಗ | ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ | Loan
ಘಟನೆ ನಡೆದ ಸ್ಥಳಕ್ಕೆ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೇವಣ್ಣ, ಶಿವಣ್ಣ ಮುಂತಾದವರು ಭೇಟಿ ನೀಡಿ (Dog attack) ಮೃತಪಟ್ಟ ಕುರಿಮರಿಗಳ ಶವಪರೀಕ್ಷೆ ನಡೆಸಿದರಲ್ಲದೆ, ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಕಳಿಸುವ ಭರವಸೆ ನೀಡಿದರು.