
Chitradurga news|nammajana.com|1-8-2024
ನಮ್ಮಜನ.ಕಾಂ, ಭೀಮಸಮುದ್ರ: ಚಿತ್ರದುರ್ಗ ತಾಲೂಕಿನ (Drive for road work) ಕಾಟೀಹಳ್ಳಿ 25 ಲಕ್ಷ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ ಕಾಟೀಹಳ್ಳಿ ಗ್ರಾಮದಲ್ಲಿ 25 ಲಕ್ಷ, ದೊಡ್ಡ ಸಿದ್ದವನಹಳ್ಳಿ (Drive for road work) ಗ್ರಾಮದಲ್ಲಿ 25 ಲಕ್ಷ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದು ಗುಣಮಟ್ಟದಿಂದ ಕಾಮಗಾರಿ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

ಕರಿಯಟ್ಟಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ (Drive for road work) ಯೋಜನೆಯಡಿಯಲ್ಲಿ ಕುಡಿಯುವ ನೀರಿಗಾಗಿ 38 ಲಕ್ಷ ವೆಚ್ಚಕ್ಕೆ ಕಾಮಗಾರಿಗೆ ಪೂಜೆ ಸಲ್ಲಿಸಿದ್ದು ಅದು ಸಹ ಶೀಘ್ರವಾಗಿ ಕೆಲಸ ಮುಗಿಸಲು ಸೂಚಿಸಿದ್ಧೇನೆ.
ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಜನರು ತಮ್ಮ ಗ್ರಾಮದಲ್ಲಿ ಕಾಮಗಾರಿಯ ಗುಣಮಟ್ಟ ಪರೀಕ್ಷಿಸಿ ಉತ್ತಮವಾಗಿ ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಇನ್ನೂ ಗ್ರಾಮೀಣ ಭಾಗದ ಮೂಲಭೂತ (Drive for road work) ಸೌಕರ್ಯಗಳನ್ನು ಹಂತ ಹಂತವಾಗಿ ವ್ಯವಸ್ಥೆ ಮಾಡಲಾಗುವುದು.
ಇದನ್ನೂ ಓದಿ: Rain Damage: ಪರಿಹಾರದ ಚಕ್ ವಿತರಿಸಿದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ರೈತರ ಆತ್ಮಹತ್ಯೆ ಪರಿಹಾರ ನಿಧಿ
2024-25ನೇ ಸಾಲಿನ ರೈತರ ಆತ್ಮಹತ್ಯೆ ಪರಿಹಾರ ನಿಧಿಯಲ್ಲಿ ತಲಾ 5.00 ಲಕ್ಷ ಗಳನನ್ನು ವಿತರಿಸಲಾಗಿದೆ.
- ಆನಂದಪ್ಪ ಬಿನ್ ಮಲ್ಲಪ್ಪ ವಡ್ಡರಸಿದ್ದವ್ವನಹಳ್ಳಿ
- ಹನುಮಂತಪ್ಪ ಬಿನ್ ಮಾರಪ್ಪ, ಕರುರುಬರಹಳ್ಳಿ,
- ಬಸವರಾಜಪ್ಪ ಬಿನ್ ಲೇಟ್ ಈರಪ್ಪ,ಹುಲ್ಲೂರು
ಇವರ ವಾರಸುದಾರರಿಗೆ ಶಾಸಕರು ತಲಾ 5.00 ಲಕ್ಷ ಪರಿಹಾರ ನಿಧಿಯ ಬಿಡುಗಡೆ ಪತ್ರವನ್ನು ವಿತರಣೆ ಮಾಡಿದರು. (Drive for road work)
ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ, ಮತ್ತು ಸಹಾಯಕ ಕೃಷಿ ನಿರ್ದೇಶಕರು ಚಂದ್ರಕುಮಾರ್ , ಕೆಡಿಪಿ ಸದಸ್ಯರಾದ ನಾಗರಾಜು, ಮುಖಂಡರಾದ ಸಿದ್ದೇಶ್, ಕಾಟೀಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕರಿಯಪ್ಪ, ದೊಡ್ಡ ಸಿದ್ದವನಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ದೇವೇಂದ್ರಪ್ಪ ಮತ್ತು ಸದಸ್ಯರು ಮತ್ತು ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.