Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Farmers | ಲಕ್ಷ ಲಕ್ಷ ಸಾಲ ಮಾಡಿ ಬಿತ್ತಿದ ಬೆಳೆ ನಷ್ಟ | ತಲೆ ಮೇಲೆ ಕೈಹೊತ್ತು ರೈತ, ಪರಿಹಾರಕ್ಕೆ ಮೊರೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Farmers | ಲಕ್ಷ ಲಕ್ಷ ಸಾಲ ಮಾಡಿ ಬಿತ್ತಿದ ಬೆಳೆ ನಷ್ಟ | ತಲೆ ಮೇಲೆ ಕೈಹೊತ್ತು ರೈತ, ಪರಿಹಾರಕ್ಕೆ ಮೊರೆ
ಇಂದಿನ ಸುದ್ದಿ

Farmers | ಲಕ್ಷ ಲಕ್ಷ ಸಾಲ ಮಾಡಿ ಬಿತ್ತಿದ ಬೆಳೆ ನಷ್ಟ | ತಲೆ ಮೇಲೆ ಕೈಹೊತ್ತು ರೈತ, ಪರಿಹಾರಕ್ಕೆ ಮೊರೆ

Editor Nammajana
Last updated: 6 October 2025 4:45 PM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|Nammajana.com|06-10-2025

ನಮ್ಮಜನ.ಕಾಂ, ಚಳ್ಳಕೆರೆ:  ತಾಲ್ಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿರುವ ಶೇಂಗಾ ಸೇರಿದಂತೆ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಲಕ್ಷಾಂತರ ರೂಪಾಯಿ ಸಾಲಮಾಡಿ ಜಮೀನು ಬಿತ್ತನೆ ಮಾಡಿದ ರೈತರು ತಲೆಮೇಲೆ ಕೈಹೊತ್ತು ಸಂಕಷ್ಟಕ್ಕೆ ಸಿಲುಕಿದ್ದಾರಲ್ಲದೆ, ಸರ್ಕಾರದ (Farmers) ಪರಿಹಾರಕ್ಕಾಗಿ ಎದುರುನೋಡುತ್ತಿದ್ಧಾರೆ.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಉತ್ತಮ ಬೆಳೆ ಬೆಳೆಯುವ ನಿಟ್ಟಿನಲ್ಲಿ ರೈತರು ಭೂಮಿಯನ್ನು ಹದಮಾಡಿ ಗೊಬ್ಬರ, ಬೀಜ ಭೂಮಿ ಒಡಲಿಗೆ ಹಾಕಿದ್ದಾರೆ. ಆದರೆ, ಪ್ರತಿನಿತ್ಯವೂ ಮಳೆಯ ಅಭಾವದಿಂದ ಒಣಗಿದ (Farmers) ಬೆಳೆಯನ್ನು ನೋಡಿ ಕಣ್ಣಿರುಹಾಕುತ್ತಿದ್ಧಾರೆ.

ತಾಲ್ಲೂಕಿನ ಬೂದಿಹಳ್ಳಿ ಗ್ರಾಮದ ರೈತ ರಂಗಪ್ಪ ತನ್ನ ಬಾಬ್ತು ೧೩ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು ಪ್ರಾರಂಭದಲ್ಲಿ ಬಂದ ಮಳೆ ಉತ್ತಮ ಬೆಳೆಯಾಗುವ ಸುಳಿವು ನೀಡಿದರೂ ತದನಂತರ ಪ್ರಕೃತಿ ವಿಕೋಪದಿಂದ ಯಾವುದೇ ಮಳೆಯಾಗದೆ ಶೇಂಗಾ ಬೆಳೆ ಕಾಯಿಕಟ್ಟಲೇ ಇಲ್ಲ. ಶೇಂಗಾ ಬಳ್ಳಿ ಒಣಗುತ್ತಾ ಬಂದಿದ್ದು ಶೇಂಗಾ ಬಳ್ಳಿಯಂತೆ ರೈತನು (Farmers) ಒಣಗಲುಆರಂಭಿಸಿದ್ಧಾನೆ.

ಕೊನೆ ಹಂತದಲ್ಲಾದರೂ ಸ್ವಲ್ಪ ಮಳೆಯಾದರೂ ಬೆಳೆ ಕೈಗೆ ಬರುವುದೆಂಬ ಆಶಾಭಾವನೆ ಇದ್ದು ಕಾಲಕ್ರಮೇಣ ಅದು ಕಡಿಮೆಯಾಗುತ್ತಿದೆ. ರೈತ ರಂಗಪ್ಪ ೧೩ ಎಕರೆ ಬಿತ್ತನೆ ಮಾಡಲು ಎರಡು ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿದ್ಧಾನೆ. ಬೆಳೆ ಬೆಳೆದು ಸಾಲತೀರಿಸಬಹುದು ಎಂಬ ವಿಶ್ವಾಸದಿಂದ ಸಾಲಮಾಡಿ ಬಿತ್ತನೆ ಮಾಡಿದ್ದು, ಈಗ ಬೆಳೆ ಕೈಕೊಟ್ಟ ಪರಿಣಾಮ ಸಾಲದಿಂದ ಸಂಕಷ್ಟಕ್ಕೊಳಗಾಗಿದ್ಧಾನೆ. ಸರ್ಕಾರ ಕೂಡಲೇ (Farmers) ರೈತರಿಗೆ ಪರಿಹಾರ ನೀಡುವಲ್ಲಿ ಮುಂದಾಗಲಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರ ಬದುಕು ಬೀದಿಪಾಲಾಗಲಿದೆ.

ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ತಾಲ್ಲೂಕಿನಾದ್ಯಂತ ವಿವಿಧ ಪ್ರದೇಶಗಳಲ್ಲಿ ಬಿತ್ತನೆಯಾದ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ನೀಡಿದ ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್, ೪೯ ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ, ೨೩ ಸಾವಿರ ಹೆಕ್ಟೇರ್‌ನಲ್ಲಿ ತೊಗರಿ ಬೆಳೆ ಬಿತ್ತನೆಯಾಗಿದೆ. ಬಹುತೇಕ ಬೆಳೆಗಳು ವಿಫಲವಾಗಿದ್ದು ಪರಿಹಾರ ನೀಡಲು ಸರ್ಕಾರಕ್ಕೆ ವರದಿ ಕಳಿಸಲಾಗಿದೆ. ಈಗಾಗಲೇ ಕೃಷಿ ಇಲಾಖೆವತಿಯಿಂದ ಬೆಳೆ ವಿಮೆ ಬಗ್ಗೆ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಯಾಫ್ ಮೂಲಕ ಬೆಳೆನಷ್ಟ ಪರಿಹಾರಕ್ಕೆ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಲು ಮನವಿ ಮಾಡಲಾಗಿದೆ.

ಇದನ್ನೂ ಓದಿ: Sports | ಬಾಲವಿಜ್ಞಾನಿಯಾಗಿ ಎನ್.ಪಲ್ಲವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ತಾಲ್ಲೂಕಿನಾದ್ಯಂತ ಒಟ್ಟಾರೆ ಬಿತ್ತನೆ ಮಾಡಿದ ಎಲ್ಲಾ ಬೆಳೆಗಳು ವಿಫಲತೆ ಅಂಚಿನಲ್ಲಿದ್ದು, ರೈತರು ಸಹ ಬೆಳೆಗಳ ವಿಫಲತೆಯಿಂದ ಕಂಗಾಲಾಗಿದ್ಧಾರೆ. ಕೂಡಲೇ ಪರಿಹಾರವನ್ನು ನೀಡುವಂತೆ ವರದಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

Telegram Group Join Now
WhatsApp Group Join Now

You Might Also Like

Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ

V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ

ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ | Valmiki Jayanti

Valmiki Award | 3 ನೇ ಬಾರಿಗೆ ಚಳ್ಳಕೆರೆಗೆ ವಾಲ್ಮೀಕಿ ಪ್ರಶಸ್ತಿ | ಹಿರಿಯ ರಂಗತಜ್ಞ ಪಿ.ತಿಪ್ಪೇಸ್ವಾಮಿಯವರಿಗೆ ಪ್ರಶಸ್ತಿ ಘೋಷಣೆ

Valmiki Jayanti | ಚಳ್ಳಕೆರೆ ಪಿ.ತಿಪ್ಪೇಸ್ವಾಮಿ ಸೇರಿ ರಾಜ್ಯದ ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ

TAGGED:ChallakereCompensationCrop lossfarmerspeanutsಕಡಲೆಕಾಯಿಚಳ್ಳಕೆರೆಪರಿಹಾರಬೆಳೆ ನಷ್ಟರೈತರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Sports | ಬಾಲವಿಜ್ಞಾನಿಯಾಗಿ ಎನ್.ಪಲ್ಲವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
Next Article ಮಹರ್ಷಿ ವಾಲ್ಮೀಕಿ ಪ್ರಶಸ್ತಿ 2025 Valmiki Jayanti | ಚಳ್ಳಕೆರೆ ಪಿ.ತಿಪ್ಪೇಸ್ವಾಮಿ ಸೇರಿ ರಾಜ್ಯದ ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ದಿನ ಭವಿಷ್ಯ | 09-10-2025 | Dina Bhavishya
ದಿನ ಭವಿಷ್ಯ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ | 07-10-2025
ದಿನ ಭವಿಷ್ಯ
Sports | ಬಾಲವಿಜ್ಞಾನಿಯಾಗಿ ಎನ್.ಪಲ್ಲವಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?