
Chitradurga news | nammajana.com | 16-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರವನ್ನೆ ಬೆಚ್ಚಿ ಬೀಳಿಸುವ ಮೂಲಕ ಸದ್ದು ಮಾಡಿದ್ದ ಒಂದೇ ಮನೆಯಲ್ಲಿ ಐವರ ಅಸ್ಥಿಪಂಜರ ಕೇಸ್ (five skeletons) ನ FSL ವರದಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೈ ಸೇರಿದೆ, ನಿವೃತ್ತ ಇಇ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಲೀಲ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ, ನರೇಂದ್ರ ಅವರು ನಿದ್ರೆ ಮಾತ್ರೆ ಸೇವನೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ವೈದ್ಯರ ವರದಿಯಲ್ಲಿ ಉಲ್ಲೇಖವಾಗಿದೆ.
ಅಸ್ಥಿಪಂಜರಗಳ ಮರಣೋತ್ತರ ಪರೀಕ್ಷೆ ವರ್ಗಾವಣೆ
ನಗರದ ಚಳ್ಳಕೆರೆ ವೃತ್ತದ ಹಳೆಯ ಬೆಂಗಳೂರು ರಸ್ತೆ ನಿವ ಜಗನ್ನಾಥರೆಡ್ಡಿ ಮನೆಯಲ್ಲಿ ಕುಟುಂಬದ ಐವರ ಮೃತದೇಹಗಳ ಅಸ್ತಿಪಂಜರ ಪತ್ತೆಯಾಗಿತ್ತು. ಮೃತಪಟ್ಟ ದೇಹಗಳು 4-5 ವರ್ಷಗಳ ಬಳಿಕ ಸಿಕ್ಕಿದ್ದವು, ಪೋಲಿಸರು ಈ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿ ವರದಿ ನೀಡಲು FSL ವರ್ಗಾಯಿಸಲಾಗಿತ್ತು.

FSL ವರದಿಯಲ್ಲಿ ಇರುವುದು ಏನು?
ಈಗ FSL ವರದಿ ಹೊರ ಬಂದಿದ್ದು ಬಹುತೇಕ ಐವರ ಮೃತದೇಹಗಳಲ್ಲಿ ನಿದ್ದೆ ಮಾತ್ರೆಯ ಅಂಶ ಪತ್ತೆಯಾಗಿದ್ದು, FSL ವರದಿಯಲ್ಲಿ ನಿದ್ದೆಮಾತ್ರೆ ಸೇವಿಸಿ ಸಾವು ಎಂದು ಉಲ್ಲೇಖ ಮಾಡಲಾಗಿದ್ದು ನಿದ್ರೆ ಮಾತ್ರೆ ಸೇವಿಸಿ ಮೃತಪಟ್ಟದ್ದನ್ನ ಅಲ್ಲಗಳೆಯುವಂತಿಲ್ಲ ಎಂದು ವೈದ್ಯರ ವರದಿಯಲ್ಲಿದೆ, ಜಗನ್ನಾಥರೆಡ್ಡಿ ಕುಟುಂಬ ಬಹುತೇಕ ಸಾಮೂಹಿಕ ಆತ್ಮಹತ್ಯೆ ಎಂಬ ಶಂಕೆ ವ್ಯಕ್ತವಾಗಿದ್ದು ಈ ರಿಪೋರ್ಟ್ ಪ್ರಕರಣದ ತನಿಖಾಧಿಕಾರಿ ಕೈ ಸೇರಿದೆ ಎಂದು ತಿಳಿದಿದೆ.
ಇನ್ನೂ ಪ್ರಕರಣದ ಸಮಗ್ರ ತನಿಖೆಗಾಗಿ ಮನೆಯ ವಿವಿಧ ವಸ್ತುಗಳನ್ನು ಜಾಲಾಡಿದ್ದ ತಜ್ಞರ ತಂಡಕ್ಕೆ ಮನೆಯ ಎರಡು ಪಾತ್ರೆಗಳಲ್ಲಿ ಸೈನೆಡ್ ಐರನ್ ಅಂಶ ಇರುವುದು ಖಚಿತವಾಗಿದೆ.
ಆದರೆ, ಈ ಐದು ಜನ ಸೈನೆಡ್ ಸೇವಿಸಿದ್ದರೆ ಎನ್ನುವುದಕ್ಕೆ ಸೂಕ್ತ ದಾಖಲೆ ಅಥವಾ ಪರೀಕ್ಷೆ ವೇಳೆ ರಾಸಾಯನಿಕಗಳು ಪತ್ತೆಯಾಗಿಲ್ಲ.
ಇದನ್ನೂ ಓದಿ: IPL ಕ್ರಿಕೆಟ್ ಬೆಟ್ಟಿಂಗ್ ದಂಧೆ, ನಾಲ್ವರ ಬಂಧನ
ಐದು ಜನರು 2019 ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು, ಅದರಂತೆ ಎಫ್ಎಸ್ಎಲ್ ವರದಿಯಲ್ಲೂ ಸಿಕ್ಕಿರುವ ಅಸ್ತಿಪಂಜರಗಳ ಆಧಾರದಲ್ಲಿ ಐದು ಜನ ಮೃತಪಟ್ಟು ನಾಲ್ಕೂವರೆಯಿಂದ ಐದು ವರ್ಷಗಳ ಹಿಂದೆ ಮೃತಪಟ್ಟಿರಬಹುದು ಎಂದು ದಾಖಲಿಸಲಾಗಿದೆ.
ಚಿತ್ರದುರ್ಗ ಎಸ್ಪಿ ಹೇಳಿದ್ದಿಷ್ಟು
ಇನ್ನು ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಚಿತ್ರದುರ್ಗ ಮನೆಯೊಂದರಲ್ಲಿ ಐದು ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ FSL ರಿಪೋರ್ಟ್ ಬಂದಿದೆ. ಅದರಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇನ್ನು 2023ರ ಡಿಸೆಂಬರ್ 28ರಂದು ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣಾರೆಡ್ಡಿ ಹಾಗೂ ನರೇಂದ್ರರೆಡ್ಡಿ ಸೇರಿದಂತೆ ಐವರ ಅಸ್ಥಿಪಂಜರ ಪತ್ತೆ ಆಗಿದ್ದವು. ಇದೀಗ ಎಫ್ಎಫ್ಎಸ್ ವರದಿ ಬಂದಿದೆ ಎಂದರು.