Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Flower | ಸೇವಂತಿಗೆ ಹೂ ಬೆಳೆದು ಪ್ರತಿ ದಿನ 10 ಸಾವಿರ ಸಂಪಾದಿಸಿದ ಸಿದ್ದಮ್ಮ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Flower | ಸೇವಂತಿಗೆ ಹೂ ಬೆಳೆದು ಪ್ರತಿ ದಿನ 10 ಸಾವಿರ ಸಂಪಾದಿಸಿದ ಸಿದ್ದಮ್ಮ
ಇಂದಿನ ಸುದ್ದಿ

Flower | ಸೇವಂತಿಗೆ ಹೂ ಬೆಳೆದು ಪ್ರತಿ ದಿನ 10 ಸಾವಿರ ಸಂಪಾದಿಸಿದ ಸಿದ್ದಮ್ಮ

Editor Nammajana
Last updated: 23 February 2025 17:23
By Editor Nammajana 2 Min Read
Share
SHARE

Chitradurga news|nammajana.com|23-02-2025

ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಬೆಳೆಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಸಿದ್ದಮ್ಮ ಸೇರಿದ ಐದು ಎಕರೆ ಜಮೀನಿನಲ್ಲಿ ನಿರೀಕ್ಷೆಗೂ ಮೀರಿದ (Flower) ಸೇವಂತಿ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಅವರ ಜಮೀನಿನಲ್ಲಿ ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಸೇವಂತಿಹೂ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.

ಬಬ್ಬೂರು ಕೃಷಿ ವಿಜ್ಞಾನ ಓಂಕಾರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲ್ಲೂಕಿನಾದ್ಯಂತ ಸುಮಾರು 350 ಎಕರೆಯಲ್ಲಿ ಹೂ ಬೆಳೆಯನ್ನು ಬೆಳೆಯಲಾಗಿದೆ. ಆದರೆ, ನಾರಾಯಣಪುರ ಗ್ರಾಮದ ಸಿದ್ದಮ್ಮನವರ ಜಮೀನಿನಲ್ಲಿ ಅವರ ಪುತ್ರ ಮೌನೇಶ್ ಸಹಕಾರದೊಂದಿಗೆ ಹೆಚ್ಚು ಬೆಳೆಯನ್ನು ಬೆಳೆಯುವ ಮೂಲಕ ಹೂಬೆಳೆಗಾರರಿಗೆ (Flower) ಮಾರ್ಗದರ್ಶಕರಾಗಿದ್ಧಾರೆ.

ಪ್ರತಿನಿತ್ಯ 10 ಕ್ವಿಂಟಾಲ್ ಸೇವಂತಿ ಹೂವನ್ನು ಮಾರಾಟ ಮಾಡಲಾಗುತ್ತಿದೆ. ಸರಾಸರಿ ಪ್ರತಿದಿನ 10 ಸಾವಿರ ಮೌಲ್ಯದ ಹೂಗಳ ಮಾರಾಟ ನಡೆಸುತ್ತಿದೆ. 20 ಕ್ಕೂ ಹೆಚ್ಚು ಕಾರ್ಮಿಕರು ತೋಟದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಈ ಬಾರಿ ತಾಲ್ಲೂಕಿನಾದ್ಯಂತ ಹೂವಿನ ಬೆಳೆ ಉತ್ತಮವಾಗಿದೆ. ಹೂವಿನಲ್ಲೂ ಉತ್ತಮ ಬೆಳೆ ಬೆಳೆಯಲು ಸಾವಯವ ಗೊಬ್ಬರ ಮತ್ತು ಜೀವಾಮೃತವನ್ನು ರೈತರು ಹೆಚ್ಚು ಬಳಸಬೇಕು. ಇದರಿಂದ (Flower) ರೈತರಿಗೆ ಅಧಿಕ ಲಾಭವಾಗಲಿದೆ ಎಂದರು.

ಹಿರಿಯ ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮಾತನಾಡಿ, ಬಯಲುಸೀಮೆಯ ಈ ಬೆಂಗಾಡಿನಲ್ಲಿ ಬಿಸಿಲಿನಲ್ಲಿ ರೈತರು ಕೆಲಸ ನಿರ್ವಹಿಸುವುದೇ ಕಷ್ಟವಾದ ಸಂದರ್ಭದಲ್ಲಿ ಸಿದ್ದಮ್ಮ ಮತ್ತು ಅವರ ಪುತ್ರ ಬೆಳಗ್ಗೆಯಿಂದ ಸಂಜೆವರೆಗೂ ಕೂಲಿಯವರ ಜೊತೆಗೆ ಜಮೀನಿನಲ್ಲಿ ಸೇವಂತಿ ಬೆಳೆಯನ್ನು ಆರೈಕೆ ಮಾಡುತ್ತಿದ್ದು, ಉತ್ತಮ ಲಾಭದತ್ತ ಹೆಜ್ಜೆ ಇಟ್ಟಿದ್ಧಾರೆ. ಸೇವಂತಿಯನ್ನು ಹೊರತು ಪಡಿಸಿದರೆ ತಾಲ್ಲೂಕಿನಾದ್ಯಂತ ಸುಮಾರು ೩೫೦ ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ಇದೆ. ರೈತ ಹೂ ಬೆಳೆಯನ್ನು ಬೆಳೆದು ಲಾಭಪಡೆಯಬದು. ಪ್ರತಿಯೊಬ್ಬ ರೈತರು ತಮ್ಮ ಬೆಳೆಯ ಬಗ್ಗೆ ಕೃಷಿ ವಿಜ್ಞಾನಿಗಳಿಂದ ಸೂಕ್ತ (Flower) ಮಾರ್ಗದರ್ಶನ ಪಡೆಯಿರಿ ಎಂದರು.

ಇದೇ ಸಂದರ್ಭದಲ್ಲಿ ಸೇವಂತಿ ಬೆಳೆಗಾರರಾದ ಸಿದ್ದಮ್ಮ, ಮೌನೇಶ್‌ರವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಅಧಿಕಾರಿಗಳಾದ ಪ್ರವೀಣ್‌ಕುಮಾರ್, ವೀರೇಶ್, ರೈತರಾದ ಪ್ರಸನ್ನ, ಸಿದ್ದೇಶ್, ಪ್ರಹ್ಲಾದ್, ಮಂಜುನಾಥ, ಬಿ.ವಿ.ಸತ್ಯನಾರಾಯಣ, ಜಿ.ಗೋವಿಂದಪ್ಪ, ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: Cricket | ಅಪ್ಪು 11 ಕ್ರಿಕೆಟ್ ಕಪ್ ಗೆದ್ದ ರಾಹುಲ್ ಕ್ರಿಕೆಟರ್ಸ್

ಬಾಕ್ಸ್

ಸೇವಂತಿ ಹೂವಿನಲ್ಲಿ ಹೆಚ್ಚುಲಾಭವಿಲ್ಲವೆಂದು ಬಹಳಷ್ಟು ರೈತರು ಮಾತನಾಡುತ್ತಿದ್ದರು. ಆದರೆ, ನನಗೆ ಕೇವಲ ಮೂರು ಎಕರೆ ಜಮೀನಿದೆ, ಹೆಚ್ಚುವರಿಯಾಗಿ ಎರಡು ಎಕರೆ ಜಮೀನನ್ನು ಕೋರಿಗೆ ಪಡೆದು ಒಟ್ಟು ಐದು ಎಕರೆ ಪ್ರದೇಶದಲ್ಲಿ ಸೇವಂತಿ ಬೆಳೆ ಬೆಳೆದೆ. ಇಡೀ ಕುಟುಂಬ ನನ್ನಗೆ (Flower) ಆಸರೆಯಾಯಿತು. ಅಧಿಕಾರಿಗಳು ಮಾರ್ಗದರ್ಶನ ನೀಡಿದರು. ಪ್ರತಿನಿತ್ಯ ಈಗ ೧೦ ಕ್ವಿಂಟಾಲ್ ಹೂಗಳನ್ನು ೧೦೦ರೂ ಕೆಜಿಯಂತೆ ಮಾರುಕಟ್ಟೆಗೆ ಕಳಿಸಲಾಗುತ್ತದೆ. ದಿನಾಲು ೧೦ ಸಾವಿರ ವರಮಾನ ಬರುತ್ತಿದೆ. ಸೇವಂತಿ ಬೆಳೆ ಆರ್ಥಿಕವಾಗಿ ನನ್ನನ್ನು ಸದೃಢಗೊಳಿಸಿದೆ.

ಸಿದ್ದಮ್ಮ ರೈತ ಮಹಿಳೆ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

TAGGED:Challakere TalukChitradurga DistrictDaily 10 thousandEarningsFarm WomanFlowerFlower CropJeevamritaNarayanpurSiddammaಕೃಷಿ ಮಹಿಳೆಚಳ್ಳಕೆರೆ ತಾಲೂಕುಚಿತ್ರದುರ್ಗ ಜಿಲ್ಲೆಜೀವಾಮೃತನಾರಾಯಣಪುರನಿತ್ಯ 10 ಸಾವಿರಸಂಪಾದನೆಸಿದ್ದಮ್ಮಹೂ ಬೆಳೆಹೂವು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article Cricket | ಅಪ್ಪು 11 ಕ್ರಿಕೆಟ್ ಕಪ್ ಗೆದ್ದ ರಾಹುಲ್ ಕ್ರಿಕೆಟರ್ಸ್
Next Article Dina Bhavishya | ದಿನ ಭವಿಷ್ಯ , ಇವತ್ತು ಯಾವ ರಾಶಿಗೆ ಶುಭ ಯೋಗ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?