
Chitradurga news|nammajana.com|7-8-2024
ನಮ್ಮಜನ.ಕಾಂ, ಚಳ್ಳಕೆರೆ: ಕಳೆದ ಹಲವಾರು ತಿಂಗಳುಗಳಿಂದ ನಗರ ವೃತ್ತ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟ ನಡೆಯದಂತೆ (Gambling) ಮುಂಜಾಗ್ರತಾ ಕ್ರಮ ವಹಿಸಿರುವ ಪೊಲೀಸ್ ಇಲಾಖೆ ಕಣ್ಣುತಪ್ಪಿಸಿ ಜೂಜಾಟವಾಡುತ್ತಿದ್ದ ತಂಡವನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ಧಾರೆ.
ಜಿಲ್ಲಾ ರಕ್ಷಣಾಧಿಕಾರಿ, ಉಪವಿಭಾಗದ ಡಿವೈಎಸ್ಪಿಯವರ ಮಾರ್ಗದರ್ಶನದಲ್ಲಿ ಪಿಎಸ್ಐ ಧರೆಪ್ಪಬಾಳಪ್ಪದೊಡ್ಡಮನಿ (Gambling) ಮತ್ತು ತಂಡ ವೀರದಿಮ್ಮನಹಳ್ಳಿ, ನಾಯಕನಹಟ್ಟಿ ರಸ್ತೆಯ ಮಧ್ಯದಲ್ಲಿ ಜೂಜಾಟವಾಡುತ್ತಿದ್ದ ಜೂಜುಕೋರರು, ಮೋಟಾರ್ ಬೈಕ್ ಹಾಗೂ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ಧಾರೆ.

ಇದನ್ನೂ ಓದಿ: Facility: ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ, ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಪೊಲೀಸ್ ಪೇದೆ ಶಂಕರಣ್ಣ ತನಗೆ ದೊರೆತ ಖಚಿತ (Gambling) ವರ್ತಮಾನದ ಮೇರೆಗೆ ಮೇಲ್ಕಂಡ ಸ್ಥಳಕ್ಕೆ ಮಂಗಳವಾರ ಸಂಜೆ ದಾಳಿ ನಡೆಸಿದ ಸಂದರ್ಭದಲ್ಲಿ ಅದೇ ಗ್ರಾಮದ ನಾಗರಾಜ(೩೩) ಇತರೆಯವರು ಜೂಜಾಟವಾಡುತ್ತಿದ್ದು, ಅವರಿಂದ ಜೂಜಾಟಕ್ಕೆ ಪಣವಾಗಿಟ್ಟಿದ್ದ ಸುಮಾರು ೪೮೭೦೦ರೂ ನಗದು ಹಾಗೂ ೧೪ ಬೈಕ್ಗಳನ್ನು ವಶಕ್ಕೆ ಪಡೆದಿರುತ್ತಾರೆ. ಠಾಣಾಧಿಕಾರಿ ಕಮಲಕರ್ ಪ್ರಕರಣ ದಾಖಲಿಸಿದ್ಧಾರೆ.