Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಚಿತ್ರದುರ್ಗ ಜಿಲ್ಲೆ ಎಷ್ಟು ಸಾವಿರ ಗಣಪತಿ ಪ್ರತಿಷ್ಠಾಪಿಸಿದ್ದಾರೆ? ದಿನಕ್ಕೆ ಎಷ್ಟು ಗಣಪತಿ ವಿಸರ್ಜನೆ, ಇಲ್ಲಿದೆ ಮಾಹಿತಿ | Ganapati festival
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > ಚಿತ್ರದುರ್ಗ ಜಿಲ್ಲೆ ಎಷ್ಟು ಸಾವಿರ ಗಣಪತಿ ಪ್ರತಿಷ್ಠಾಪಿಸಿದ್ದಾರೆ? ದಿನಕ್ಕೆ ಎಷ್ಟು ಗಣಪತಿ ವಿಸರ್ಜನೆ, ಇಲ್ಲಿದೆ ಮಾಹಿತಿ | Ganapati festival
ವಿಶೇಷ ಸುದ್ದಿ

ಚಿತ್ರದುರ್ಗ ಜಿಲ್ಲೆ ಎಷ್ಟು ಸಾವಿರ ಗಣಪತಿ ಪ್ರತಿಷ್ಠಾಪಿಸಿದ್ದಾರೆ? ದಿನಕ್ಕೆ ಎಷ್ಟು ಗಣಪತಿ ವಿಸರ್ಜನೆ, ಇಲ್ಲಿದೆ ಮಾಹಿತಿ | Ganapati festival

Editor Nammajana
Last updated: 7 September 2024 5:08 PM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news |nammajana.com| 7-9-2024

ನಮ್ಮಜನ.ಕಾಂ, ಚಿತ್ರದುರ್ಗ: ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶ ಹಬ್ಬ  ಸಂಭ್ರಮಹೋತ್ಸವ (Ganapati festival) ನಡೆದಿದ್ದು ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಗಣೇಶ ಮಹೋತ್ಸವ ಆಚರಿಸುವ ಸುಮಾರು 1644 ಕ್ಕೂ ಹೆಚ್ಚು ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ.

ಭಾದ್ರಪದ ಶುಕ್ಲ ಚತುರ್ಥಿಯಂದು ಗಣೇಶಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಹಲವು ದಿನಗಳ ಕಾಲ ಪೂಜಿಸಿ (Ganapati festival) ವಿಸರ್ಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಲೋಕಮಾನ್ಯ ಬಾಲಗಂಗಾಧರ್ ತಿಲಕರು ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆಗೆ ಕರೆ ಕೊಟ್ಟಾಗ ಅಂದಿನಿಂದ ಪೆಂಡಾಲ್ ಗಣಪತಿ ಯುಗ ಆರಂಭವಾಯಿತು.

ಅಷ್ಟೇ ಅಲ್ಲ ಸಂಘ, ಸಂಸ್ಥೆಗಳು, ಕಚೇರಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜಿಸುವ ಪರಿಪಾಠ ನಿರಂತರವಾಗಿ (Ganapati festival) ನಡೆದುಕೊಂಡು ಬರುತ್ತಿದೆ.

ಗಲ್ಲಿ, ಬೀದಿಗಳಲ್ಲೂ ಯುವಕರ ಬಳಗಗಳು, ನಾನಾ ಸಂಘ ಸಂಸ್ಥೆಯವರು ಗಣೇಶ ಮೂರ್ತಿಯನ್ನು ತಂದು ಕೂರಿಸಿ ಗಣೇಶೋತ್ಸವ ಆಚರಿಸುವ ಟ್ರೆಂಡ್ ಜೋರಾಗಿದೆ. ವರ್ಷದಿಂದ ವರ್ಷಕ್ಕೆ ಇದು ಹೆಚ್ಚು ಮೆರುಗು ಪಡೆದುಕೊಳ್ಳುತ್ತಿದೆ. ಗಣನಾಥ, ಗಣರಾಜ, ಏಕದಂತ, ಲಂಬೋದರ, ಹೇರಂಬ,ವಿಶ್ವೇಶ್ವರ, (Ganapati festival) ವಕ್ರತುಂಡ, ಗಜಾನನ, ಮೋದಕಹಸ್ತ ಹೀಗೆ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಗಣಪತಿಯು ಈಗಾಗಲೇ ವಿನ್ಯಾಸಗಳಲ್ಲಿ ಒಡಮೂಡಿದ್ದಾನೆ.

ಮೂರ್ತಿಯನ್ನು ಶಿವ-ಪಾರ್ವತಿ, ಶ್ರೀಕೃಷ್ಣರ ಜತೆಗಿರುವುದು, ಹುಲಿ, ಸಿಂಹ, ಹಂಸ, ನವಿಲು, ಸರ್ಪ, ಇಲಿ ಹಾಗೂ ಕಮಲದ ಮೇಲೆ ಕುಳಿತಿರುವುದು, ವೀಣೆ, ಮೃದಂಗ, ತಬಲ ನುಡಿಸುತ್ತಿರುವುದು ಸೇರಿದಂತೆ ನಾನಾ ವಿನ್ಯಾಸಗಳ ಗಣೇಶ ಮೂರ್ತಿಗಳಿಗೆ  ಭಕ್ತರ ಪೂಜೆ ಸಲ್ಲಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಯುವಕರು ಬಳಗ ಸೇರಿದಂತೆ 1644 ಸಂಘ ಸಂಸ್ಥೆಯವರು ಸಾರ್ವಜನಿಕವಾಗಿ ಗಣೇಶ ಮಹೋತ್ಸವ ಆಚರಿಸುತ್ತಿದ್ದಾರೆ. ಇವುಗಳಲ್ಲಿ 9 ಅತೀಸೂಕ್ಷ್ಮ, 197 ಸೂಕ್ಷ್ಮ, 1438 ಸಾಮಾನ್ಯ ಎಂದು ಗುರುತಿಸಲಾಗಿದೆ.

ಖರೀದಿ ಜೋರು

ನಗರದ ನಾನಾ ಕಡೆಗಳಲ್ಲಿ ಈಗಾಗಲೇ ಗೌರಿ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿದ್ದು, ಸಾರ್ವಜನಿಕ ಹಾಗೂ ಮನೆಗಳಲ್ಲಿ ಗಣೇಶೋತ್ಸವ ಆಚರಿಸುವ ಕೆಲವರು ಗುರುವಾರ ಮಾರುಕಟ್ಟೆಗಳಲ್ಲಿ ಗೌರಿ ಗಣೇಶ ಮೂರ್ತಿಗಳ ಖರೀದಿಯಲ್ಲಿ ತೊಡಗಿದ್ದರು. ನಗರದ ಚಿಕ್ಕಪೇಟೆ, ಆನೆಬಾಗಿಲ ಬಳಿ, ಗಾಂಧಿ ವೃತ್ತದ ಸುತ್ತಮುತ್ತ ಸೇರಿದಂತೆ ಮತ್ತಿತರೆ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಸಾಲಾಗಿ ಇರಿಸಿದ್ದ ದೃಶ್ಯಗಳು ಕಂಡುಬಂದವು.

ದಿನಕ್ಕೆ ಎಷ್ಟು ಗಣೇಶ ವಿಸರ್ಜನೆ, ಇಲ್ಲಿದೆ ವಿವರ  (Ganapati festival)

ಮೊದಲ ದಿನವೇ 42 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಯಾಗುತ್ತಿದ್ದು, ಎರಡನೇ ದಿನ 11, ಮೂರನೇ ದಿನ 888, ನಾಲ್ಕನೆ ದಿನ 38, ಐದನೇ ದಿನ 399 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. 22ನೇ ದಿನ ಹಿಂದೂ ಮಹಾಗಣಪತಿ ಸೇರಿದಂತೆ ಮೂರು ಗಣೇಶ ಮೂರ್ತಿಗಳು ಹಾಗೂ 30ನೇ ದಿನ ಒಂದು ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಆಯಾ ಸಂಘ ಸಂಸ್ಥೆಯವರು ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಶ್ರೀ ಅಹೋಬಲ ಟಿವಿಎಸ್ | ಕಾರ್ಡ್ ಸ್ಕ್ರಾಚ್ ಮಾಡಿ ಬೈಕ್,ಫ್ರಿಜ್, ವಾಷಿಂಗ್ ಮಿಷನ್ ಗೆಲ್ಲಿ | ಆಫರ್ ಗಳ ಹಬ್ಬ | Sri Ahobal TVS

ಆಚರಣೆಗೆ ಸಕಲ ಸಿದ್ಧತೆ

ನಗರದ ಐತಿಹಾಸಿಕ ಆನೆಬಾಗಿಲ ಬಳಿಯ ಸುವೃಷ್ಟಿ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀಪ್ರಸನ್ನ ಗಣಪತಿ ಸೇವಾ ಸಮಿತಿಯಿಂದ 67ನೇ ವರ್ಷದ ಗಣಪತಿ ಮಹೋತ್ಸವ ಆಚರಿಸಲು ಸಕಲ ಸಿದ್ಧತೆ ನಡೆದಿದೆ. ಆತ್ಯಾಕರ್ಷಕ ಪೆಂಡಾಲ್‌ನಲ್ಲಿ ಸುಂದರವಾದ ಶ್ರೀಪ್ರಸನ್ನ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸೆ.7ರಿಂದ 15ರವರೆಗೆ (Ganapati festival) ಪೂಜಿಸಲಾಗುತ್ತದೆ.

ಪ್ರತಿ ದಿನ ಬೆಳಗ್ಗೆ 11.30ಕ್ಕೆ ಹಾಗೂ ಸಂಜೆ 7 ಕ್ಕೆ ಸುಪ್ರಸಿದ್ದ ವಿದ್ವಾಂಸರಿಂದ ಸಂಗೀತ, ಹರಿಕಥೆ, ವಾದ್ಯಗೋಷ್ಠಿ, ಭರತನಾಟ್ಯ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ವಾಣಿ ವಿಲಾಸ ಸಾಗರ ನೀರಿನ ಮಟ್ಟ ಹೆಚ್ಚಳ | ಎಷ್ಟು ಕ್ಯೂಸೆಕ್ಸ್ ನೀರು ಬಂದಿದೆ? | Vani Vilasa Sagara

Gold Rate | ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ

ಹಿಮ್ಮುಖ ಚಲಿಸಿದ ಬಸ್: ಚಾಲಕ ಸಾವು : Bus

Donkey wedding | ಮಳೆಗಾಗಿ ಗ್ರಾಮಸ್ಥರಿಂದ ಕತ್ತೆಗಳ ಮದುವೆ

Accident: ಬೈಕ್‌ಗಳ ನಡುವೆ ಡಿಕ್ಕಿ: ಓರ್ವ ಸಾವು

TAGGED:ChitradurgaChitradurga DistrictChitradurga NewsGanapati dissolutionGanapati festivalGanapati installationKannada Newskannada suddiNammajana.comಕನ್ನಡ ನ್ಯೂಸ್ಕನ್ನಡ ಸುದ್ದಿಗಣಪತಿ ಪ್ರತಿಷ್ಠಾಪನೆಗಣಪತಿ ವಿಸರ್ಜನೆಗಣಪತಿ ಹಬ್ಬಚಿತ್ರದುರ್ಗಚಿತ್ರದುರ್ಗ ಜಿಲ್ಲೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಶ್ರೀ ಅಹೋಬಲ ಟಿವಿಎಸ್ | ಕಾರ್ಡ್ ಸ್ಕ್ರಾಚ್ ಮಾಡಿ ಬೈಕ್,ಫ್ರಿಜ್, ವಾಷಿಂಗ್ ಮಿಷನ್ ಗೆಲ್ಲಿ | ಆಫರ್ ಗಳ ಹಬ್ಬ | Sri Ahobal TVS
Next Article Dina Bhavishya kannada: ಇಂದಿನ ರಾಶಿ ಭವಿಷ್ಯದಲ್ಲಿ ಯಾರಿಗೆ ಶುಭ ಭಾನುವಾರ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

BL Venu: ಕುವೆಂಪು ವಿಶ್ವವಿದ್ಯಾಲಯ ಪಠ್ಯಕ್ಕೆ ಸಾಹಿತಿ ಬಿ.ಎಲ್.ವೇಣು ಕಥೆ ಸೇರ್ಪಡೆ
ಇಂದಿನ ಸುದ್ದಿ
KSRTC ಮುಷ್ಕರ | ಚಿತ್ರದುರ್ಗದಲ್ಲಿ ಬೆಳಗ್ಗೆ 7 ಗಂಟೆವರೆಗೆ ಹೇಗಿದೆ ಸ್ಥಿತಿ? ಇಲ್ಲಿದೆ ರಿಪೋರ್ಟ್
ಇಂದಿನ ಸುದ್ದಿ
ಚಿತ್ರದುರ್ಗ Ksrtc ನೌಕರ ಮುಷ್ಕರ, ರಸ್ತೆ ಬಂದಿಲ್ಲ ಬಸ್, ಜನರಿಗೆ ಪರದಾಟ ಗ್ಯಾರೆಂಟಿ | KSRTC bus shutdown
ಇಂದಿನ ಸುದ್ದಿ
ದಿನ ಭವಿಷ್ಯ | 5-8-2025 | Bhavishya
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?