Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Gold medal | ಬಡ ರೈತನ ಮಗಳಿಗೆ 15 ಚಿನ್ನದ ಪದಕ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Gold medal | ಬಡ ರೈತನ ಮಗಳಿಗೆ 15 ಚಿನ್ನದ ಪದಕ
ವಿಶೇಷ ಸುದ್ದಿ

Gold medal | ಬಡ ರೈತನ ಮಗಳಿಗೆ 15 ಚಿನ್ನದ ಪದಕ

Editor Nammajana
Last updated: 24 March 2025 03:42
By Editor Nammajana 2 Min Read
Share
SHARE

Chitradurga news |nammajana.com|24-03-2025

ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ಬಡ ರೈತನ ಮಗಳ ಶೈಕ್ಷಣಿಕ ಸಾಧನೆಗೆ 15 ಚಿನ್ನದ ಪದಕಗಳು ಲಭಿಸಿದ್ದು, medal (Gold medal) ಸಾಧನೆಗೆ ಸಾರ್ವಜನಿಕರಿಂದ ಅಭಿನಂಧನೆಯ ಮಹಾಪೂರವೇ ಹರಿದು ಬರುತ್ತಿದೆ.

ತಾಲೂಕಿನ ಕಸಬಾ ಹೋಬಳಿಯ ನಾಗೇನಹಳ್ಳಿ ಗ್ರಾಮದ ವಾಸಿಗಳಾದ ಸಾಕಮ್ಮ ಮತ್ತು ಕುಮಾರಪ್ಪ ದಂಪತಿಯ ಮಗಳಾದ ರವೀನಾ ಬ್ಯಾಚುಲರ್‌ ಆಫ್ ವೆಟರ್ನರಿ ಸೈನ್ಸ್‌ ಅಂಡ್ ಅನಿಮಲ್ ಹಸ್ಟೆಂಡ್ರಿ ಸ್ನಾತಕ ಪದವಿಯಲ್ಲಿ 15 ಚಿನ್ನದ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡು ಹೊಸದುರ್ಗ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಬೀದರ್‌ಜಿಲ್ಲೆಯಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಬೆಂಗಳೂರಿನ ಪಶು ವಿವಿ ಕಾಲೇಜಿನ (Gold medal) ವಿದ್ಯಾರ್ಥಿನಿ ರವೀನಾ 2022-23ನೇ ಸಾಲಿನಲ್ಲಿ ಈ ಸಾಧನೆ ಮಾಡಿದ್ದಾಳೆ.

ವಿದ್ಯಾರ್ಥಿನಿ ರವೀನಾ ಪ್ರಾಥಮಿಕ ಶಿಕ್ಷಣವನ್ನು ಹೊಸದುರ್ಗ ಪಟ್ಟಣದ ವಿಜಯ ಗಂಗೋತ್ರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯಲ್ಲಿ, ಪಿಯು ಶಿಕ್ಷಣವನ್ನು ಮೂಡುಬಿದರೆಯ ಆಳ್ವಾಸ್‌ ಕಾಲೇಜಿನಲ್ಲಿ, ಅದರಂತೆಯೇ, 5 ವರ್ಷಗಳ ಬಿವಿಎಸ್ ಸಿ ಅಂಡ್ ಎಚ್ ಸ್ನಾತಕ ಪದವಿ ಪೂರ್ಣಗೊಳಿಸಿದ್ದಾರೆ.

ಇವರ ತಂದೆ ಕುಮಾರಪ್ಪ ಇವರಿಗೆ ಊರಿನಲ್ಲಿ 2 ಎಕರೆ ಜಮೀನಿದ್ದು, ಕೂಲಿ ಕೆಲಸ ಮಾಡಿದರಷ್ಟೇ ಜೀವನ. ಅದರಲ್ಲಿ ಬಂದ ಆದಾಯದಿಂದ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ತಂದೆಯ ನಿರೀಕ್ಷಿಗೆ ತಕ್ಕಂತೆ ಓದುವುದರ ಮೂಲಕ ಮಗಳು ಚಿನ್ನದ ಪದಕ ಮುಡಿಗೇರಿಸಿಕೊಂಡು, ಇನ್ನಿತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ರವೀನಾ ಅವರು ಪಿಯುಸಿ (Gold meda) ಓದುತ್ತಿರುವಾಗಲೇ ಅವರ ಸಾಕಮ್ಮ ಅನಾರೋಗ್ಯ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ.

ಮಗಳಿಗೆ ತಾಯಿಯ ಕೊರತೆ ಕಾಡದಂತೆ ತಂದೆಯೇ ನೋಡಿಕೊಂಡು, ಮಗಳ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಇದೇ ಮಾ.25ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹೋಟ್ ಚಿನ್ನದ ಪದಕ ಮತ್ತು ಪದವಿ ಪ್ರದಾನ ಮಾಡಲಿದ್ದಾರೆ ಎಂದು ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ (Gold medal) ವಿದ್ಯಾಲಯ ತಿಳಿಸಿದೆ ಎಂದು ರವೀನಾ ತಂದೆ ಕುಮಾರಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿವೆ ಹೇಗಿದೆ ದಿನ | Dina Bhavishya

ವಿದ್ಯಾರ್ಥಿ ಹೇಳಿದ್ದೇನು?

ಸಾಧಿಸುವ ಛಲವಿದ್ದರೆ, ಯಾವುದು ಕೂಡ ಅಡ್ಡಿ ಬರುವುದಿಲ್ಲ. ಕೋವಿಡ್‌ನಿಂದಾಗಿ ಎರಡು ಮತ್ತು ಮೂರನೇ ವರ್ಷ ಬಹಳ ಕಠಿಣ ದಿನಗಳಾಗಿತ್ತು.ಆದರೆ, ಅದಕ್ಕೆ ಧೃತಿಗೆಡದೆ ಓದಿದೆ. ನಂತರ ನಿತ್ಯ ತರಗತಿಗಳಿಗೆ ಹಾಜರಾಗಿ, ಅಂದಿನ ಪಾಠ ಆ ದಿನವೇ ಓದಿ ಮುಗಿಸುತ್ತಿದ್ದೆ.ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಾಯವಾಯಿತು. ನನಗೆ ””ವೆಟರ್ನರಿ ಸೈನ್ಸ್ ಕೋರ್ಸ್” ಬಗ್ಗೆ ಆಸಕ್ತಿ ಇದ್ದಿದ್ದರಿಂದ ಇಷ್ಟಪಟ್ಟು ಆಯ್ಕೆ ಮಾಡಿ ಕೊಂಡೆ. ನನ್ನ ವಿದ್ಯಾಭ್ಯಾಸಕ್ಕೆ ಹಾಗೂ ಈ ಸಾಧನೆಗೆ ತಂದೆಯೇ ಪ್ರೇರಣೆ ಮತ್ತು ಸ್ಫೂರ್ತಿ

ಕೆ.ಎಸ್.ರವೀನಾ ಚಿನ್ನದ ಪದಕ ಪಡೆಯಲಿರುವ ವಿದ್ಯಾರ್ಥಿನಿ

You Might Also Like

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Gold Rate | ಬಂಗಾರದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ

TAGGED:15 Gold Medals15 ಚಿನ್ನದ ಪದಕChitradurga DistrictFarmer's DaughterGold MedalHosadurga talukNagenahalliPoor Farmer's Daughterಚಿತ್ರದುರ್ಗ ಜಿಲ್ಲೆಚಿನ್ನದ ಪದಕನಾಗೇನಹಳ್ಳಿಬಡ ರೈತ‌ನ ಮಗಳು Raveenaರವೀನಾರೈತನ ಮಗಳುಹೊಸದುರ್ಗ ತಾಲೂಕು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿವೆ ಹೇಗಿದೆ ದಿನ | Dina Bhavishya
Next Article Valmiki Shri | ಮದಕರಿ ಥೀಮ್ ಪಾರ್ಕ್, ದುರ್ಗೋತ್ಸವ ಮಾಡಲು ಸರ್ಕಾರಕ್ಕೆ ವಾಲ್ಮೀಕಿ ಶ್ರೀ ಮನವಿ ಸಲ್ಲಿಕೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?