Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿಗೆ ಸಂಸದ ಗೋವಿಂದ ಕಾರಜೋಳ ವೇಗ ನೀಡಿದ್ದಾರೆ: ಎಸ್.ಕೆ.ಬಸವರಾಜನ್ | Govind Makthappa Karjol
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿಗೆ ಸಂಸದ ಗೋವಿಂದ ಕಾರಜೋಳ ವೇಗ ನೀಡಿದ್ದಾರೆ: ಎಸ್.ಕೆ.ಬಸವರಾಜನ್ | Govind Makthappa Karjol
ಇಂದಿನ ಸುದ್ದಿ

ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿಗೆ ಸಂಸದ ಗೋವಿಂದ ಕಾರಜೋಳ ವೇಗ ನೀಡಿದ್ದಾರೆ: ಎಸ್.ಕೆ.ಬಸವರಾಜನ್ | Govind Makthappa Karjol

Editor Nammajana
Last updated: 15 August 2024 16:15
By Editor Nammajana 3 Min Read
Share
SHARE

Chitradurga news|nammajana.com|15-8-2024

ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯ ಸರ್ಕಾರ ಜನರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಬೇಕೆಂದು ಕಾಂಗ್ರೆಸ್ ಕೆಲ ಶಾಸಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ (Govind Makthappa Karjol) ಅವರು ತಿಳಿಸಿದರು.

ನಗರದ ಹೊರವಲಯದ ವೈಭವ ಗಾರ್ಡನ್ನ ಸಭಾಂಗಣದಲ್ಲಿ ಆಯೋಜಿಸಿದ ಎಸ್ ಕೆ ಬಿ ಅಭಿಮಾನಿ ಬಳಗದ ವತಿಯಿಂದ ಸಂಸದ ಗೋವಿಂದ ಕಾರಜೋಳ ರವರಿಗೆ ಅಭಿನಂದನಾ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದ ನಮ್ಮ ಕ್ಷೇತ್ರಗಳನ್ನು ನಾವು ಅಭಿವೃದ್ದಿ ಪಡಿಸಲು ಸಾಧ್ಯವಾಗುತ್ತಿಲ್ಲ (Govind Makthappa Karjol) ಹಾಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕಾಗಿದೆ ಎಂದು ದೆಹಲಿಯುತ್ತ ತೆರಳಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ನರೇಂದ್ರ ಮೋದಿ ಅವರು ಸುಭದ್ರ ಸರ್ಕಾರ ನಡೆಸುತ್ತಿದ್ದಾರೆ ಜನರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದ್ದಾರೆ ರೈತರಿಗೆ ಅನುಕೂಲ ವಾಗುವಂತಹ ಕಿಸಾನ್ ಯೋಜನೆ, ಫಸಲ್ ಭೀಮಾ ಯೋಜನೆ, ಮುದ್ರಾ ಯೋಜನೆ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಮಹಿಳೆಯರಿಗೆ ಅನುಕೂಲವಾಗುವ (Govind Makthappa Karjol) ನಿಟ್ಟಿನಲ್ಲಿ ಉಚಿತ ಗ್ಯಾಸ್‌ಗಳನ್ನು ನೀಡಿ ಭಾರತ ರಾಷ್ಟ್ರವನ್ನು ಅಭಿವೃದ್ಧಿ ರಾಷ್ಟçವನ್ನಾಗಿ ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಆದಗೆಟ್ಟಿದೆ ಕಾಂಗ್ರೆಸ್ ಸರ್ಕಾರ ಜನಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುವಂತೆ ಪ್ರೇರೇಪಿಸುತ್ತಿದ್ದಾರೆ. ರಾಜ್ಯದ ಖಜಾನೆಯನ್ನು ಲೂಟಿ ಮಾಡಿ ಎಸ್ಸಿ-ಎಸ್ಟಿ ಸಮುದಾಯದ ಹಣಗಳನ್ನ ದುರ್ಬಳಿಕೆ ಮಾಡಿಕೊಂಡಿದ್ದಾರೆ ಆದರೆ ಸಿದ್ದರಾಮಯ್ಯನವರು ಇದು ಬಡವರ ಸರ್ಕಾರ ಎಂದು ಜನರನ್ನು ನಂಬಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.

ಕಾಶ್ಮೀರವನ್ನ ನಮ್ಮದೇ ಅಲ್ಲ ಎಂದು ಕಾಂಗ್ರೆಸ್ ನವರು ಇದರ ಬಗ್ಗೆ ಕಾಳಜಿಯನ್ನೇ ವಹಿಸಿರಲಿಲ್ಲ ಆದರೆ ನರೇಂದ್ರ ಮೋದಿ ಅವರು ಕಾಶ್ಮೀರ ಭಾರತ ದೇಶದ ಕಿರೀಟ ಅದನ್ನು ಬಿಟ್ಟುಕೊಡುವ ಮಾತೇ ಇಲ್ಲ ಎನ್ನುವುದರ ಮೂಲಕ ಭಾರತ ದೇಶವನ್ನು ಒಕ್ಕೂಡಿಸಿ ಎಲ್ಲರೂ ನಮ್ಮವರೇ ನಾವು ಎಲ್ಲರನ್ನೂ ಪ್ರೀತಿಸುತ್ತೇವೆ ಎನ್ನುವ ಕೋಶ ವಾಕ್ಯವನ್ನು ಮುಳುಗಿಸುವುದರ ಮೂಲಕ ದೇಶದ ಅಭಿವೃದ್ಧಿ ಕಡೆಗೆ ಸಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ದೇಶದ ಹಿರಿಮೆ, ಗರಿಮೆ ಎತ್ತಿಹಿಡಿಯುವ ಸಂಕಲ್ಪ ಮಾಡೋಣ: ಶಾಸಕ ಟಿ.ರಘುಮೂರ್ತಿ | Independence day 2

 ಹಣ ನೋಡಲಿಲ್ಲ, ವ್ಯಕ್ತಿ ನೋಡಿ ಮತ ಹಾಕಿದರು: ಎಸ್.ಕೆ.ಬಸವರಾಜನ್

ಮಾಜಿ ಶಾಸಕ ಎಸ್.ಕೆ ಬಸವರಾಜನ್ ಮಾತನಾಡಿ ಸುಮಾರು ೩೫೦ ಕಿಲೋಮೀಟರ್ ದೂರದಿಂದ ಬಂದಂತಹ ಗೋವಿಂದ ಕಾರಜೋಳರವರ ಗೆಲುವು ಅಭೂತಪೂರ್ವಾದುದ್ದು, ಜನರು ಹಣವನ್ನು ನೋಡಲಿಲ್ಲ ಆದರೆ ವ್ಯಕ್ತಿ ಮತ್ತು ವ್ಯಕ್ತಿಯ ಹಿಂದೆ (Govind Makthappa Karjol) ಇರುವ ಸರ್ಕಾರವನ್ನು ನೋಡಿ ಗೋವಿಂದ ಕಾರಜೋಳರವರನ್ನ ಸಂಸದರನ್ನಾಗಿ ಚಿತ್ರದುರ್ಗ ಲೋಕಾಸಭಾ ಕ್ಷೇತ್ರದ ಮತದಾರರು ಆಯ್ಕೆ ಮಾಡಿ ಸಂಸತ್‌ಗೆ ಕಳಿಸಿದ್ದಾರೆ ಎಂದರು.

ಚಿತ್ರದುರ್ಗದಲ್ಲಿ ನೆನೆಗುದಿಗೆ ಬಿದ್ದಿದ್ದಂತ ಭದ್ರಾ ಮೇಲ್ದಂಡೆ ಯೋಜನೆ, ರೈಲ್ವೆ ಯೋಜನೆ, ಕೈಗಾರಿಕೋದ್ಯಮ ಯೋಜನೆ, ಪ್ರವಾಸೋದ್ಯಮ ಹಾಗೂ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಮಂಜೂರಾತಿಗೆ ಸಂಸತ್ತಿನ ಅಧಿವೇಶನದಲ್ಲಿ ಧ್ವನಿ ಎತ್ತಿದ ಧೀಮಂತ ರಾಜಕಾರಣಿ ಗೋವಿಂದ ಕಾರಜೋಳರವರು ಸಾಧನೆ ಶ್ಲಾಘನೀಯವಾದದ್ದು ಎಂದರು.

ಸಂಸದರಿಗೆ ವಯಸ್ಸು ಆಗಿರಬಹುದು ಆದರೆ ಅವರ ಜ್ಞಾಪಕ ಶಕ್ತಿ ಮಿಂಚಿನಂತೆ ಕೆಲಸ ಮಾಡುತ್ತಿದೆ ಜಿಲ್ಲೆಯ ಸಾಕಷ್ಟು ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅವುಗಳ ಅಭಿವೃದ್ಧಿಗೆ (Govind Makthappa Karjol) ಈಗಾಗಲೇ ಪಣತೊಟ್ಟಿದ್ದಾರೆ ಇಂತಹ ನಾಯಕ ನಮ್ಮೊಡನೆ ಇರುವುದು ಅತ್ಯಂತ ಸಂತಸದ ವಿಚಾರ ಎಂದು ತಿಳಿಸಿದರು.

ಎಸ್ ಕೆ ಬಿ ಬಳಗದಿಂದ ಸನ್ಮಾನ

ಎಸ್ ಕೆ ಬಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ ಸಂಸದ ಗೋವಿಂದ ಕಾರಜೋಳರವರ ಅಭಿನಂದನಾ ಸಮಾರಂಭದಲ್ಲಿ ಸಂಸದರಿಗೆ ಬೃಹತ್ ಗಾತ್ರದ ಹೂವಿನ ಮಾಲೆಯನ್ನು ಹಾಕಿ, ಹೂವಿನ ಮಳೆಗೈದು ಸನ್ಮಾನಿಸಿದ್ದಾರೆ.

ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಯುವಕ ಸಾವು | ಕಣ್ಣು ದಾನ ಮಾಡಿದ ಕುಟುಂಬ | Hiriyur

ಈ ಒಂದು ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ , ಬಿಜೆಪಿ ಜಿಲ್ಲಾ ಅಧ್ಯಕ್ಷ ಮುರುಳಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಟಿ ಸುರೇಶ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗುರುಸ್ವಾಮಿ, ಓಬಳೇಶ, ಮೊಳಕಾಲ್ಮೂರು ಮಂಡಲ ಅಧ್ಯಕ್ಷ ರಾಮ ರೆಡ್ಡಿ, ಜಿಲ್ಲಾ ಮಹಿಳಾಮೂರ್ತಿ ಅಧ್ಯಕ್ಷೆ ಶ್ರೀಶೈಲಜಾ ರೆಡ್ಡಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ಯಾಮಲಾ ಶ್ಯಾಮಲಾ ಶಿವ ಪ್ರಕಾಶ್, ಬಿಜೆಪಿ ಮುಖಂಡರಾದ ಬದರಿನಾಥ್, ಭಾರ್ಗವಿ ದ್ರಾವಿಡ, ಮಂಜುಳ ಸ್ವಾಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್, ಜೆಡಿಎಸ್ ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಗೀತಮ್ಮ, ನಗರ ಸಭೆ ಸದ್ಯಸರು ಶಶಿಧರ್, ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ಎಸ್‌ಡಿ ಹನುಮಂತರಾಯ, ಜೆಡಿಎಸ್ ಮುಖಂಡರಾದ ಗುರುಸಿದ್ದಪ್ಪ,  ಹಾಗೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:AppreciationChitradurga MPChitradurga NewsFormer MLAGovinda KarajolaHonors to MPsHonoursInfrastructureKannada Newskannada suddiMPMP's workNammajana.comSaubhagya BasavarajanSK BasavarajanSKB teamVibhava Function HallVoice for issuesಎಸ್.ಕೆ.ಬಸವರಾಜನ್ಎಸ್ಕೆಬಿ ಬಳಗಕನ್ನಡ ನ್ಯೂಸ್ಕನ್ನಡ ಸುದ್ದಿಗೋವಿಂದ ಕಾರಜೋಳಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸಂಸದಚಿತ್ರದುರ್ಗ ಸುದ್ದಿನಮ್ಮಜನ.ಕಾಂಮಾಜಿ ಶಾಸಕಮೂಲಭೂತ ಸೌಕರ್ಯಮೆಚ್ಚುಗೆವೈಭವ ಫಂಕ್ಷನ್ ಹಾಲ್ಸನ್ಮಾನಸಮಸ್ಯೆಗಳಿಗೆ ಧ್ವನಿಸಂಸದಸಂಸದರ ಕಾರ್ಯಸಂಸದರಿಗೆ ಸನ್ಮಾನಸೌಭಾಗ್ಯ ಬಸವರಾಜನ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy0
Sleepy0
Angry0
Dead0
Wink0
Previous Article ದೇಶದ ಹಿರಿಮೆ, ಗರಿಮೆ ಎತ್ತಿಹಿಡಿಯುವ ಸಂಕಲ್ಪ ಮಾಡೋಣ: ಶಾಸಕ ಟಿ.ರಘುಮೂರ್ತಿ | Independence day 2024
Next Article ಗ್ಯಾರಂಟಿ ಯೋಜನೆಗಳು ನಿರಾಂತಕವಾಗಿ ಮುಂದುವರೆಯಲಿವೆ: ಸಚಿವ ಡಿ.ಸುಧಾಕರ್ ಭರವಸೆ | Guarantee schemes
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?