
Chitradurga news|nammajana.com|14-7-2024
ನಮ್ಮಜನ.ಕಾಂ, ಚಿತ್ರದುರ್ಗ: ಬೈಕ್ಗೆ ಕಾರು ಡಿಕ್ಕಿ ಹೊಡೆದ (hosadurga accident) ಅಪಘಾತ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೋಕಿಕೆರೆ ಗ್ರಾಮದ ಬಳಿ ಶನಿವಾರ ತಡರಾತ್ರಿ ನಡೆದಿದೆ.
ಹೊಸದುರ್ಗ ಬಳಿ ಬೈಕ್- ಕಾರ್ ನಡುವೆ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮರಣ ಹೊಂದಿದ್ದಾರೆ.(hosadurga accident) ಪ್ರವೀಣ್ (29), ಯೋಗೀಶ್ (27) ಮೃತ ದುರ್ದೈವಿಗಳಾಗಿದ್ದು ಮೃತರನ್ನ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದವರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: T. Raghumurthy: ದೇಶ ನಡೆಸುವ ನಾಲ್ಕು ಅಂಗಗಳು ಕಲುಷಿತವಾಗಿವೆ: ಶಾಸಕ ಟಿ.ರಘುಮೂರ್ತಿ ಬೇಸರ
ಹೊಸದುರ್ಗ ಕಡೆಯಿಂದ ಕಡೂರು ಕಡೆ ಬರುತ್ತಿದ್ದ ವೇಳೆ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಕುಂದಾಪುರ ಮೂಲದ ಚಿತ್ರೇಶ್ ಕುಮಾರ್ ಶೆಟ್ಟಿಗೆ ಸೇರಿದ ಕಾರು ಇದಾಗಿದ್ದು ಘಟನೆಯಲ್ಲಿ (hosadurga accident) ಅಜ್ಜಯ್ಯ ಎಂಬ ಬೈಕ್ ಸವಾರನಿಗೆ ಗಾಯವಾಗಿದ್ದು ಹೊಸದುರ್ಗ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ಹೊಸದುರ್ಗ ಸಿಪಿಐ ತಿಮ್ಮಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.