
Chitradurga news|nammajana.com|15-8-2024
ನಮ್ಮಜನ.ಕಾಂ, ಚಳ್ಳಕೆರೆ: ಭಾರತೀಯರ ಪಾಲಿಗೆ ೭೮ನೇ ಸ್ವಾತಂತ್ರ್ಯೋತ್ಸವ ಮರೆಯಲಾಗದ ದಿನವಾಗಿದೆ. ನಮ್ಮ ಪೂರ್ವಜನರು ಮಾಡಿದ ತ್ಯಾಗ, ಬಲಿದಾನವೇ ಕಾರಣ. (Independence day 2024) ಮಹಾತ್ಮಗಾಂಧಿಜಿಯವರ ಅಹಿಂಸಾತ್ಮಕ ಹೋರಾಟದ ಫಲವೇ ನಮ್ಮ ಈ ಸ್ವಾತಂತ್ರ್ಯೋತ್ಸವ. ನಾವೆಲ್ಲರೂ ಹಿರಿಯ ಸೇವೆ, ಆದರ್ಶಗಳನ್ನು ಮೈಗೂಡಿಸಿಕೊಂಡು ನವ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ಮಾಡೋಣವೆಂದು ಕ್ಷೇತ್ರದ ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಗುರುವಾರ ನಗರ ಬಿ.ಎಂ.ಸರ್ಕಾರಿ ಪ್ರೌಢಶಾಲಾ ರಂಗಮಂದಿರದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ (Independence day 2024) ಹಮ್ಮಿಕೊಂಡಿದ್ದ ೭೮ನೇ ಸ್ವಾತಂತ್ರ್ಯೋತ್ಸವ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ರಾಜ್ಯ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಾಡಿನ ಬಡ ಜನರ ಕಲ್ಯಾಣಕ್ಕಾಗಿ ಅನೇಕ ಯೋಜನೆ ರೂಪಿಸಿದೆ. ಶಕ್ತಿ ಯೋಜನೆ, ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ (Independence day 2024) ಮುಂತಾದ ಯೋಜನೆಗಳು ಬಡ ಜನರನ್ನು ಸಂಕಷ್ಟದಿಂದ ಮುಕ್ತಗೊಳಿಸಿವೆ. ಪ್ರಸ್ತುತ ರಾಜ್ಯ ಸರ್ಕಾರ ಜನಪರ ಸರ್ಕಾರವಾಗಿ ರೂಪುಗೊಂಡಿದೆ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ಧಾರ್ ರೇಹಾನ್ಪಾಷ, ೭೮ನೇ ಸ್ವಾತಂತ್ರ್ಯ ನಮ್ಮೆಲ್ಲರಿಗೂ ಹೆಮ್ಮೆ (Independence day 2024) ತಂದಿದೆ. ಇಂದಿನ ಎಲ್ಲಾ ಸಂಭ್ರಮದ ಹಿಂದೆ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಸಾವಿರಾರು ಜನರು ತ್ಯಾಗವಿದೆ.
ಸ್ವಾತಂತ್ರ್ಯ ಪಡೆಯಲು ಬೀದಿಗಿಳಿದು ಹೋರಾಟ ನಡೆಸಿದ ಮುಗ್ದ ಹೋರಾಟಗಾರರ ಸೇವೆಯನ್ನು ನಾವು ಮರೆಯಲು ಸಾಧ್ಯವಿಲ್ಲ. ದೇಶದ ಅಭಿವೃದ್ದಿಪರ ಚಿಂತನೆಗಳಿಗೆ ನಾವೆಲ್ಲರೂ ಕೈಜೋಡಿಸೋಣವೆಂದರು.
ಸಾಧಕರಿಗೆ ಸನ್ಮಾನ (Independence day 2024)
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ೧೧ ಜನರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕ್ಷೇತ್ರದಿಂದ ಸುಧಾಮೂರ್ತಿ, ಕ್ರೀಡೆಯಿಂದ ಖೋ-ಖೋ ಪ್ರಶಾಂತ್, ಕೃಷಿ ಕ್ಷೇತ್ರ ದೇವರಪಾಲಯ್ಯ, ಮಾಧ್ಯಮ ಕ್ಷೇತ್ರ ಕೆ.ಎಂ.ಶಿವಸ್ವಾಮಿ, ತಾಲ್ಲೂಕು ಪಂಚಾಯಿತಿ ಕಚೇರಿಯ ನರಸಿಂಹಪ್ಪ, ಆರೋಗ್ಯ ಇಲಾಖೆ ಡಾ.ಎನ್.ಕಾಶಿ, ಕಂದಾಯ ಇಲಾಖೆಯ ಗಿರೀಶ್, ಕುಡಿಯುವ ನೀರು ಇಲಾಖೆ ತಿಪ್ಪೇಸ್ವಾಮಿ, ಪೌರಕಾರ್ಮಿಕರಾದ ತಿಪ್ಪೇಸ್ವಾಮಿ, ನಾಗರಾಜು, ಉಮೇಶ್, ಪಾರ್ವತಮ್ಮ, (Independence day 2024) ತಿಪ್ಪೇಸ್ವಾಮಿ, ಸಮಾಜ ಸೇವೆ ಸಿ.ಶಶಿಧರವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಯುವಕ ಸಾವು | ಕಣ್ಣು ದಾನ ಮಾಡಿದ ಕುಟುಂಬ | Hiriyur
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು
ವೇದಿಕೆಯಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಧಿಕಾರಿ ಶಶಿಧರ, ಬಿಇಒ ಕೆ.ಎಸ್.ಸುರೇಶ್, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಪೌರಾಯುಕ್ತ ಎಚ್.ಜಿ.ಜಗರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಎಲ್.ಲಿಂಗೇಗೌಡ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಯ್ಯ, ನಗರಸಭಾ ಸದಸ್ಯರಾದ ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ್, ಎಸ್.ಜಯಣ್ಣ, ಶಿವಕುಮಾರ್, ಕವಿತಾ, ಸುಜಾತ, ಪ್ರಮೋದ್, ಶ್ರೀನಿವಾಸ್, ಎಂ.ನಾಗಮಣಿ, ಎಂ.ಜೆ.ರಾಘವೇಂದ್ರ, ಸಾವಿತ್ರಮ್ಮ, ಚಳ್ಳಕೆರೆಯಪ್ಪ, ಪಾಲಮ್ಮ, ನಾಮಿನಿ ಸದಸ್ಯರಾದ ಬಡಗಿಪಾಪಣ್ಣ, ಮಹಮ್ಮದ್ ಅನ್ವರ್, ನೇತಾಜಿಪ್ರಸನ್ನ, ಆರ್.ವೀರಭದ್ರಪ್ಪ, ನಟರಾಜು, ಕೃಷಿ ಅಧಿಕಾರಿ ಅಶೋಕ್, ಕಾರ್ಮಿಕ ಅಧಿಕಾರಿ ಕುಸುಮ, ಪಶುವೈದ್ಯಾಧಿಕಾರಿ ರೇವಣ್ಣ ಮುಂತಾದವರು ಉಪಸ್ಥಿತರಿದ್ದರು.