Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಒಳ ಮೀಸಲಾತಿ ಕುರಿತು ಸ್ಪಷ್ಟ ಸಂದೇಶ ನೀಡಿ | ಸರ್ಕಾರಕ್ಕೆ ಎಚ್ಚರಿಸಿದ ಮಾದಾರ ಚನ್ನಯ್ಯ ಶ್ರೀ | Inner reservation
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > ಒಳ ಮೀಸಲಾತಿ ಕುರಿತು ಸ್ಪಷ್ಟ ಸಂದೇಶ ನೀಡಿ | ಸರ್ಕಾರಕ್ಕೆ ಎಚ್ಚರಿಸಿದ ಮಾದಾರ ಚನ್ನಯ್ಯ ಶ್ರೀ | Inner reservation
Blog

ಒಳ ಮೀಸಲಾತಿ ಕುರಿತು ಸ್ಪಷ್ಟ ಸಂದೇಶ ನೀಡಿ | ಸರ್ಕಾರಕ್ಕೆ ಎಚ್ಚರಿಸಿದ ಮಾದಾರ ಚನ್ನಯ್ಯ ಶ್ರೀ | Inner reservation

Editor Nammajana
Last updated: 15 December 2024 5:31 PM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|15-12-2024

ನಮ್ಮಜನ.ಕಾಂ, ಚಿತ್ರದುರ್ಗ: ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ನಾವು ಬದ್ಧರಾಗಿದ್ದೇವೆ (Inner reservation) ಎಂಬುದನ್ನು ಮುಖ್ಯಮಂತ್ರಿ, ಸಚಿವರು ಹೇಳುವ ಮೂಲಕ ಸ್ಪಷ್ಟಪಡಿಸಬೇಕು. ಇಲ್ಲದಿದ್ದಲ್ಲಿ ಆಂದೋಲನ ನಡೆಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.

nammajana

ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯಿಂದ ಸುಪ್ರೀಂಕೋರ್ಟ್ ಆದೇಶದನ್ವಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಶನಿವಾರ ಆಯೋಜಿಸಿದ್ದ ಪ್ರಥಮ ರಾಜ್ಯಮಟ್ಟದ ಮಾದಿಗ ವಕೀಲರ ಬೃಹತ್ ಸಮಾವೇಶದ ಸಾನ್ನಿಧ್ಯವಹಿಸಿ (Inner reservation) ಮಾತನಾಡಿದರು.

ನಮ್ಮ ಸಮುದಾಯದ ಮುಖಂಡರು ಸುದ್ದಿಗೋಷ್ಠಿಗಳಲ್ಲಿ ಹೇಳಿಕೆ ನೀಡಿದರೆ ಸಮುದಾಯಕ್ಕೆ ನಂಬಿಕೆ ಬರಲಾರದು. ಆದರೆ ಸದನದಲ್ಲಿ ಸಚಿವರು, ಮುಖ್ಯಮಂತ್ರಿ ಒಂದು ಮಾತು ಹೇಳಿದರೆ ನಮಗೆ ವಿಶ್ವಾಸ ಮೂಡಲಿದೆ. ಈವರೆಗೆ ನಡೆದ ಒಳ ಮೀಸಲಾತಿ ಹೋರಾಟದಲ್ಲಿ ನಮ್ಮವರು ಏಳು ಮಂದಿ ಮೃತಪಟ್ಟಿದ್ದು, ಆ ಸಂಖ್ಯೆ ಮತ್ತೆ ಹೆಚ್ಚಬಾರದು. ಅದಕ್ಕಾಗಿ ಇಷ್ಟು ದಿನದೊಳಗೆ ಜಾರಿಗೊಳಿಸುವ ಕುರಿತು ದೃಢ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಸದನದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ ಮೀಸಲಾತಿ ಕುರಿತು ದನಿ ಎತ್ತಿದರೆ, ಅದಕ್ಕೆ ದನಿಗೂಡಿಸಬೇಕಿದ್ದ ಸಮಾಜದ ಚುನಾಯಿತ ಜನ ಪ್ರತಿನಿಧಿಗಳು ಸದನದಲ್ಲಿ ಮೌನ ವಹಿಸಿದ್ದರಿಂದ ನಮ್ಮ ಹೋರಾಟ ಮುಂದುವರೆಸಬೇಕಾಗುತ್ತದೆ. ಇದೇ ಡಿ.16 ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜೀವನಕ್ಕಾಗಿ ವೃತ್ತಿಯಲ್ಲ. ದೇಶಕ್ಕಾಗಿ ದುಡಿದರೆ ಸಮಾಜ ಬದಲಾಗಲಿದೆ. ಸಮಾಜದಲ್ಲಿ ಎಷ್ಟು ಸಂಖ್ಯೆಯಲ್ಲಿ ನೌಕರರಾಗಬೇಕು ಅಂದುಕೊಂಡಿ ದ್ದೀರೊ ಅಷ್ಟೇ (Inner reservation) ಪ್ರಮಾಣದಲ್ಲಿ ನ್ಯಾಯಾಂಗ ವ್ಯವಸ್ಥೆ ಯಲ್ಲೂ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಕೇಂದ್ರದ ಮಾಜಿ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ಒಳ ಮೀಸಲಾತಿ ಇನ್ನು ಎರಡು ತಿಂಗಳೊಳಗೆ ಜಾರಿಯಾಗದಿದ್ದರೆ ಮಹಾರಾಷ್ಟ್ರ, ಓರಿಸ್ಸಾ ಮಾದರಿಯಲ್ಲಿ ಹೋರಾಟ ಮಾಡಲಾಗು ವುದು. 9 ವರ್ಷ ಹರಿಯಾಣದಲ್ಲಿ ಒಳ ಮೀಸಲಾತಿ ಜಾರಿಯಲ್ಲಿತ್ತು. ದೇಶದ ರಾಷ್ಟ್ರೀಯ, ರಾಜ್ಯ ಪಕ್ಷಗಳಿಂದ ನ್ಯಾಯ ಕೊಡಲುಸಾಧ್ಯವಾಗಿಲ್ಲ. ಮೀಸಲಾತಿ ಸೌಲಭ್ಯ ಪಡೆದು ಅಧಿಕಾರಕ್ಕೆ ಬಂದವರು ಲಾಠಿ ಏಟು ತಿಂದವರ ದನಿಯಾಗಿ ನಿಲ್ಲಲಿಲ್ಲ ಎಂದರು.

ನ್ಯಾ.ಸಂತೋಷ್ ಹೆಗ್ಡೆ ಅವರು 500ಕ್ಕೂ ಹೆಚ್ಚು ಜಾತಿಗಳು ಓಮೋಜಿನಿಯಸ್ ಎಂದು ಉಲ್ಲೇಖಿಸಿದ್ದಾರೆ. ಇದನ್ನು ಪ್ರಶ್ನಿಸುವ ಕೆಲಸ ಆಗಲಿಲ್ಲ. ಮೆಹ್ರಾ ವರದಿ ತಿರಸ್ಕರಿಸಿದ್ದನ್ನು 2008ರಲ್ಲಿ ಯಾರೂ ಪ್ರಶ್ನಿಸಲಿಲ್ಲ. ಆರ್ಟಿಕಲ್ 341 ರದ್ದು ಮಾಡಿದ ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್ಸಿಗರಿಗೆ ಸನ್ಮಾನಿಸಲಾಯಿತು ಎಂದರು.

” ಇಂಪೀರಿಯಲ್ ಡೇಟಾ ಬಗ್ಗೆ ಮಾಹಿತಿ ಇಲ್ಲದೆ ನರೇಂದ್ರಸ್ವಾಮಿ ಮೂರ್ಖರಂತೆ ಮಾತನಾಡಿದ್ದಾರೆ. 220 ಮಂದಿ ಎಂಎಲ್‌ಎಗಳು ಬದುಕಿದ್ದಾರೋ, ಸತ್ತಿದ್ದಾರೋ, ಮಾದಿಗರ ವಿರುದ್ಧ ಏನು ಮಾತನಾಡಿದರೂ ನಡೆಯುತ್ತದೆ ಎಂಬ ಭಾವನೆ ಇದೆ. ವೇದಿಕೆಗೆ ಸೀಮಿತವಾಗಿ ಹುಲಿ, ಸಿಂಹವೆಂದು ಘರ್ಜಿಸುವವರು ಹೋರಾಟಗಾರರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುಜನ ಚಳವಳಿಗಾರ ಮಾರಸಂದ್ರ ಮುನಿಯಪ್ಪ ಮಾತನಾಡಿ, ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ದಾರಿ (Inner reservation) ತಪ್ಪಿಸುವ ಕೆಲಸ ಮಾಡುತ್ತಿದೆ. ಸುಪ್ರೀಂಕೋಟ್ ೯ಗೂ ಬೆಲೆ ಕೊಡದೆ ಉಪ ಚುನಾವಣೆ ಕಾರಣ ನೀಡಿ ತುರ್ತು ಸಂಪುಟದಲ್ಲಿ ಚರ್ಚೆ ನಡೆಸಿ ಮತ್ತೊಂದು ಆಯೋಗ ರಚಿಸುವ ಅಗತ್ಯವಿರಲಿಲ್ಲ ಎಂದ ಅವರು,ಒಳ ಮೀಸಲಾತಿ ಜಾರಿಗೆ ವಕೀಲರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದರು.

ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆ ಅಧ್ಯಕ್ಷ ಎಸ್.ಅರುಣಕುಮಾರ್‌ಮಾತನಾಡಿ, ಇಂಪೀರಿಯಲ್ ಡಾಟಾ ಸದಾಶಿವ ಆಯೋಗದ ವರದಿಯೇ ಸಾಕು. ಆಯೋಗ ರಚಿಸಿದೆಯೇ ಹೊರತು ಅಧಿಕಾರ ವಹಿಸಿಕೊಂಡಿಲ್ಲ. ಒಳಮೀಸಲಾತಿ ಸಂಬಂಧ ಒಪ್ಪಿಗೆ ಇದೆ ಎಂದು ಪ್ರಣಾಳಿಕೆ ಹೇಳಿದರೂ ಕಾಂಗ್ರೆಸ್ ಮತ್ತು ಬಿಜೆಪಿ ಒಳಮೀಸಲಾತಿ ಪರ ಇವೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ ಎಂದರು. ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ, ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಸಿ.ಶ್ಯಾಮ್‌ ಪ್ರಸಾದ್, ಹಿರಿಯ ವಕೀಲ ಎಸ್.ಮಾರಪ್ಪ, ವೇದಿಕೆ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟುರಾಜೇಂದ್ರ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ವಿಜಯ್‌ಕುಮಾ‌ರ್, ಹಿರಿಯ ವಕೀಲರಾದ ಬೀಸ್ನಹಳ್ಳಿ ಜಯಪ್ಪ, ಎಂ.ದಾಸಯ್ಯ, ಶಿವಕುಮಾರ್‌ಎಂ.ಬೆಳ್ಳೂರು, ಮಾಳಪ್ಪ ಕುರ್ಕಿ, ಎಂ.ಆರ್.ಸುರೇಂದ್ರ ಕುಮಾ‌ರ್, ಹನುಮಂತಪ್ಪ, (Inner reservation) ಜಿ.ಕೆ.ಮಲ್ಲಿಕಾರ್ಜುನ್, ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ: ತಾಲ್ಲೂಕು ಕೃಷಿ ಸಮಾಜಕ್ಕೆ ನಿರ್ದೇಶಕ ಆಯ್ಕೆಗೆ ಚುನಾವಣೆ | 15 ಅಭ್ಯರ್ಥಿಗಳು ಆಯ್ಕೆ | Director

ಕಾರ್ಯಕ್ರಮಕ್ಕೂ ಮೊದಲು ವಕೀಲರು ತಮಟೆ ಕಲಾ ತಂಡದೊಂದಿಗೆ ಒಳಮೀಸಲಾತಿ ಘೋಷಣೆ ಮೊಳಗಿಸುತ್ತಾ ರಂಗಮಂದಿರದಿಂದ ಅಂಬೇಡ್ಕರ್‌ವೃತ್ತ, ಪ್ರವಾಸಿ ಮಂದಿರ, ಡೀಸಿ ವೃತ್ತ, ಮದಕರಿ ಸರ್ಕಲ್ ಮಾರ್ಗವಾಗಿ ಕಾಲ್ನಡಿಗೆ ಜಾಥಾ ನಡೆಸಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

TAGGED:AlertChitradurgaChitradurga NewsInternal reservationKannada Newskannada suddiKarnataka GovernmentMadara Channaiah ShriMovementNammajana.comStruggleStruggle InevitableUrge for Clear Messageಆಂದೋಲನಎಚ್ಚರಿಕೆಒಳ ಮೀಸಲಾತಿಕನ್ನಡ ನ್ಯೂಸ್ಕನ್ನಡ ಸುದ್ದಿಕರ್ನಾಟಕ ಸರ್ಕಾರಚಳುವಳಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಮಾದಾರ ಚನ್ನಯ್ಯ ಶ್ರೀಸ್ಪಷ್ಟ ಸಂದೇಶಕ್ಕೆ ಒತ್ತಾಯಹೋರಾಟಹೋರಾಟ ಅನಿವಾರ್ಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ತಾಲ್ಲೂಕು ಕೃಷಿ ಸಮಾಜಕ್ಕೆ ನಿರ್ದೇಶಕ ಆಯ್ಕೆಗೆ ಚುನಾವಣೆ | 15 ಅಭ್ಯರ್ಥಿಗಳು ಆಯ್ಕೆ | Director
Next Article ಸರ್ಕಾರಿ ನೌಕರರು ತಮ್ಮ ಸ್ಥಾನಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ: ಸಚಿವ ಡಿ.ಸುಧಾಕರ್ ಕರೆ | Government employees
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ
ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?
ವಿಶೇಷ ಸುದ್ದಿ
FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?