Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಒಳ ಮೀಸಲಾತಿ ಸ್ವಾಗತಿಸುತ್ತೇವೆ | ಅಲೆಮಾರಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು: ಮಾದಾರ ಚನ್ನಯ್ಯ ಶ್ರೀ ಆಗ್ರಹ | Internal reservation
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > ಒಳ ಮೀಸಲಾತಿ ಸ್ವಾಗತಿಸುತ್ತೇವೆ | ಅಲೆಮಾರಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು: ಮಾದಾರ ಚನ್ನಯ್ಯ ಶ್ರೀ ಆಗ್ರಹ | Internal reservation
Blog

ಒಳ ಮೀಸಲಾತಿ ಸ್ವಾಗತಿಸುತ್ತೇವೆ | ಅಲೆಮಾರಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು: ಮಾದಾರ ಚನ್ನಯ್ಯ ಶ್ರೀ ಆಗ್ರಹ | Internal reservation

Editor Nammajana
Last updated: 22 August 2025 12:06 PM
By Editor Nammajana 3 Min Read
Share
SHARE

Chitradurga news|Nammajana.com|22-8-2025

ನಮ್ಮಜನ.ಕಾಂ, ಚಿತ್ರದುರ್ಗ: ಒಳ‌ ಮೀಸಲಾತಿಗೆ ಅನೇಕ ಜನರು ತ್ಯಾಗ, ಬಲಿದಾನ ಮತ್ತು ಒಳ ಮೀಸಲಾತಿಗೆ ತನ್ನ (Internal reservation) ಬದುಕನ್ನು ಮೀಸಲಿಟ್ಟಿದ್ದಾರೆ ಎಂದು ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಒಳ‌ಮೀಸಲಾತಿ ವಿಚಾರದಲ್ಲಿ ಎಸ್ ಎಂ ಕೃಷ್ಣ, ಧರ್ಮಸಿಂಗ್ ಮತ್ತು ಯಡಿಯೂರಪ್ಪ ಅವರು ಸಮಿತಿ ರಚಿಸಲು ಹಣವನ್ನು ಬಿಡುಗಡೆ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಮಾದಿಗರಿಗೆ ನ್ಯಾಯ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಬಸವರಾಜ್ (Internal reservation) ಬೊಮ್ಮಾಯಿ ಅವರು ಮಾದುಸ್ವಾಮಿ ವರದಿ ಪಡೆದುಕೊಂಡು ಎಲ್ಲಾ ಜಾತಿಗಳಿಗೆ ಮೀಸಲಾತಿ ಜಾರಿಗೊಳಿಸಿದರು‌. ಶ್ರೀ‌ಮಠಕ್ಕೆ ಬಂದಾಗ ಮೋಹನ್ ಭಗವತ್ ಅವರಿಗೆ ಒಳ‌ಮೀಸಲಾತಿಯ ಬಗ್ಗೆ ಎಳೆ ಎಳೆಯಾಗಿ ಮನವರಿಕೆ ಮಾಡಿಕೊಟ್ಟೆವು ಎಂದರು.

ಸದಾಶಿವ ಆಯೋಗದ ವರದಿ ದತ್ತಾಂಶಗಳಿಗೆ ತನ್ನ ದತ್ತಾಂಶಗಳನ್ನು ಸೇರಿಸಿದ್ದ ಮಾಧುಸ್ವಾಮಿ ಸಮಿತಿಯು, ಪರಿಶಿಷ್ಟ ಜಾತಿಗಳ ಮಿಸಲಾತಿಯನ್ನು ಶೇ17 ಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ 7ಕ್ಕೆ ಏರಿಸಬೇಕು ಎಂದು ಶಿಫಾರಸು ಮಾಡಿತ್ತು. ‘ಮಾದಿಗ ಮತ್ತು ಅದರ ಉಪಜಾತಿಗಳಿಗೆ ಶೇ 6ರಷ್ಟು ಮೀಸಲಾತಿ ಒದಗಿಸಬಹುದು ಎಂದು ಹೇಳಿತ್ತು ಅದರ ಜೊತೆ ಸಿಎಂ ಸಹ ಒಳ‌ಮೀಸಲಾತಿ ಲೆಕ್ಕಚಾರ ಮಾಡಿ ಜಾರಿಗೆ ಸಿದ್ದತೆ ನಡೆಸಿ ಮತ್ತೆ ಏಕೆ ಬದಲಾವಣೆ ಮಾಡಿದರು ಎಂದು ನಮಗೆ ತಿಳಿಯಲಿಲ್ಲ ಆದರೆ ಒಳ ಮೀಸಲಾತಿಯನ್ನು ಸ್ವಾಗತಿಸುತ್ತೇವೆ ಎಂದರು.

ಒಳಮೀಸಲಾತಿ ಹಂಚಿಕೆಯ ಹೊಸ ಸೂತ್ರದಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಜಾತಿಗಳಿದ್ದ ಎ ಪ್ರವರ್ಗವನ್ನು ಕಡಿಮೆ ಹಿಂದುಳಿದಿರುವ ಡಿ ಪ್ರವರ್ಗದ ಜೊತೆ ಏಕಪಕ್ಷೀಯವಾಗಿ (Internal reservation) ಸೇರಿಸಲಾಗಿದೆ. ಈ ಸೇರ್ಪಡೆಯಲ್ಲಿ ಸುಪ್ರೀಂ ಕೋರ್ಟ್ ಆಶಯ ಕಾಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು‌.

ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಡಿ‌ ನಲ್ಲಿರುವ ಅಲೆಮಾರಿಗಳಿಗೆ ನ್ಯಾಯ ಒದಗಿಸಬೇಕು. ಜಾರಿಗೊಂಡಿರುವ ಒಳ ಮೀಸಲಾತಿ ಪಡೆಯಲು ನಾವು ಸಂತೋಷ ಆಗಬೇಕಾದರೆ ನಮಗಿಂತಲೂ ನೊಂದಿರುವ ಅಲೆಮಾರಿ ಸಮುದಾಯಕ್ಕೆ‌ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಶೀಘ್ರ ಮಾಡಬೇಕು ಎಂದು ಒತ್ತಾಯಿಸಿದರು.

ಒಳಮೀಸಲಾತಿಯ ಸೂತ್ರಕ್ಕೆ ಸಂಪುಟದ ಸಮ್ಮತಿ ಸಿಗುವಂತೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ವಹಿಸಿದ ಮುತುವರ್ಜಿಯನ್ನು ಶ್ರೀ ಮಠ ಅಭಿನಂದಿಸುತ್ತದೆ. ಒಳ ಮೀಸಲಾತಿಯ ಸರ್ಕಾರದ ಸೂತ್ರದಲ್ಲಿನ ಗೊಂದಲಗಳ ಬಗ್ಗೆಯೂ ಶ್ರೀ ಮಠ (Internal reservation) ಮುಖ್ಯಮಂತ್ರಿಗಳ ಸ್ಪಷ್ಟನೆಯನ್ನು ಬಯಸುತ್ತದೆ ಎಂದು ಸ್ವಾಮೀಜಿ ತಿಳಿಸಿದರು.

35 ವರ್ಷಗಳ ಹೋರಾಟದ ಫಲ ಆದರು ಸಮಾಧಾನವಿಲ್ಲ: ಪ್ರಕಾಶ ಮೂರ್ತಿ

ಮಾಜಿ ಜಿ.ಪಂ ಸದಸ್ಯ ಪ್ರಕಾಶ ಮೂರ್ತಿ ಮಾತನಾಡಿ 1998 ರಲ್ಲಿ ಒಳ‌ಮೀಸಲಾತಿ ಅಗತ್ಯದೆ ಎಂದು ವಿಚಾರ ಸಂಕೀರ್ಣ ಮಾಡಲಾಗಿದೆ. ಅಂದು ಮಾದಿಗರಿಗೆ ಒಳ ಮೀಸಲಾತಿ ಅಗತ್ಯವಿದೆ ಎಂದು ನಮಗೆ ಬೆಂಬಲ ಕೊಟ್ಟವರು ಬಂಜಗೆರೆ ಜಯಪ್ರಕಾಶ್ ಮತ್ತು ಯಾದವರೆಡ್ಡಿ ಬೆಂಬಲ ಸೂಚಿಸಿದ್ದರು. ನಿರಂತರ 28 ವರ್ಷಗಳ ಶ್ರಮದಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟಕ್ಕೆ ಈ ವಿಚಾರ ಮುಟ್ಟುವ ಜೊತೆಗೆ ಇಂದು ನಮಗೆ ಒಳ ಮೀಸಲಾತಿ ಜಾರಿಯಾಗಿದೆ. ನಾವು ಈಗ ಒಳ‌ಮೀಸಲಾತಿ ಸರ್ವೋಚ್ಚ ನ್ಯಾಯಾಲಯದ  ಒಳ‌ ಮೀಸಲಾತಿಯನ್ನು ರಾಜ್ಯ ಸರ್ಕಾರ ಹಂತದಲ್ಲಿ ಘೋಷಣೆ ಮಾಡಿ ಎಂದು ತಿಳಿಸಿದ್ದರು.

ಕೇಂದ್ರ ಸರ್ಕಾರದ ನೆಚ್ಚಿನ ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮತ್ತು ಮೋಹನ್ ಭಗವತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಡಾ.ನಾಗಮೋಹನ್ ದಾಸ್ ಸಮಿತಿ ಮಾಡಿ ಒಳ ಮೀಸಲಾತಿ ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಇಡೀ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು‌.

ಒಳ ಮೀಸಲಾತಿ ಜಾರಿಯಾಗಿರುವುದು ಒಂದು ಹಂತದಲ್ಲಿ ನಮಗೆ ಸೋಲು ಎಂದು ಪ್ರತಿಪಾದಿಸುತ್ತೇನೆ. ನಮ್ಮ ಜನಸಂಖ್ಯೆ ಅನುಗುಣವಾಗಿ ನಮಗೆ ಮೀಸಲಾತಿ ದೊರಕಿಲ್ಲ ಹಾಗಾಗಿ (Internal reservation) ಪೂರ್ಣವಾಗಿ ಒಳ ಮೀಸಲಾತಿ ಒಪ್ಪಿಕೊಳ್ಳುವುದಿಲ್ಲ ಎಂದರು.

ಇದನ್ನೂ ಓದಿ: Government school: ಸೌಲಭ್ಯಗಳಿಂದ ವಂಚಿತವಾದ ಸರ್ಕಾರಿ ಶಾಲೆ | ಮಕ್ಕಳಿಗೆ ಬಯಲಿನಲ್ಲೇ ಪಾಠ

ಅಲೆಮಾರಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕು: ಮೋಹನ್

ಮಾದಿಗ ಸಮಾಜದ ಮುಖಂಡ ಮೋಹನ್ ಮಾತನಾಡಿ ಕಳೆದ 35 ವರ್ಷ ಹೋರಾಟದ ಮೂಲಕ ಒಳ ಮೀಸಲಾತಿ ಜಾರಿಗೆ ಬಂದಿರಲು ಹಲವರು ಶ್ರಮಿಸಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ ಮಾದಿಗ ಚನ್ನಯ್ಯ ಸ್ವಾಮೀಜಿ ಅವರು ಕ್ರೀಯಾಶೀಲವಾಗಿ ಕೆಲಸ ಮಾಡಿದ್ದಾರೆ‌.ಅಲೆಮಾರಿಗಳನ್ನು  ಪ್ರತ್ಯೇಕ ಗುಂಪು ಮಾಡಿ ನ್ಯಾಯ ಒದಗಿಸಿಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹುಲ್ಲೂರು ಕುಮಾರಸ್ವಾಮಿ ಇದ್ದರು.

You Might Also Like

Murder ವರ್ಷಿತಾ ಕೊಲೆ ಆರೋಪಿ ಚೇತನ್ ಬಂಧನ | ಇಬ್ಬರ ಪ್ರೀತಿ ಅರಳಿದ್ದು ಹೇಗೆ ನೋಡಿ!

Gold Rate | ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

Government school: ಸೌಲಭ್ಯಗಳಿಂದ ವಂಚಿತವಾದ ಸರ್ಕಾರಿ ಶಾಲೆ | ಮಕ್ಕಳಿಗೆ ಬಯಲಿನಲ್ಲೇ ಪಾಠ

ಚಿತ್ರದುರ್ಗ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ | ED raid |

Power cut: ಇಂದು ಬೆಳೆಗ್ಗೆ 10 ರಿಂದ 5 ರವರೆಗೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಪವರ್‌ ಕಟ್‌?

TAGGED:ChitradurgaCMCongratulationsGovernmentInternal reservationKarnatakaMadara Channaiah SwamijiPrime Ministerಅಭಿನಂದನೆಒಳ ಮೀಸಲಾತಿಕರ್ನಾಟಕಚಿತ್ರದುರ್ಗಪ್ರಧಾನ ಮಂತ್ರಿಮಾದಾರ ಚನ್ನಯ್ಯ ಸ್ವಾಮೀಜಿಸರ್ಕಾರಸಿಎಂ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Gold Rate | ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
Next Article Murder ವರ್ಷಿತಾ ಕೊಲೆ ಆರೋಪಿ ಚೇತನ್ ಬಂಧನ | ಇಬ್ಬರ ಪ್ರೀತಿ ಅರಳಿದ್ದು ಹೇಗೆ ನೋಡಿ!
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ವಿವಿ ಸಾಗರ ಡ್ಯಾಂ ತುಂಬಲು ನಾಲ್ಕು ಅಡಿ ಬಾಕಿ | ಎಷ್ಟಿದೆ ಇಂದು ನೀರಿನ ಮಟ್ಟ | Vani Vilasa Sagara Dam
ಇಂದಿನ ಸುದ್ದಿ
Today Dina Bhavishya | ದಿನ ಭವಿಷ್ಯ | 22 ಆಗಸ್ಟ್ 2025 | ಇಂದಿನ ರಾಶಿ ಭವಿಷ್ಯ, ಯಾರಿಗೆ ಶುಭ?
ದಿನ ಭವಿಷ್ಯ
Lokayukta trap | ಭೂಮಾಪಕ ನಾಗರಾಜ್‌ ಲೋಕಾಯುಕ್ತ ಬಲೆಗೆ
ಇಂದಿನ ಸುದ್ದಿ
Adike Rate : ಅಡಿಕೆ ಧಾರಣೆ | 21 ಆಗಸ್ಟ್ 2025 | ರಾಶಿ ಅಡಿಕೆ ಬೆಲೆ ಎಷ್ಟಿದೆ?
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?