
Chitradurga news|nammajana.com|5-10-2024
ನಮ್ಮಜನ.ಕಾಂ, ಚಿತ್ರದುರ್ಗ: ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ ೧೫೦ ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-೨೦೨೪ ರ ಅಂಗವಾಗಿ ದಿನಾಂಕ:೦೫.೧೦.೨೦೨೪ ರಂದು ಹಳೆಯ (Jayadeva Cup) ಮಾಧ್ಯಮಿಕ ಶಾಲಾ ಆವರಣದಲ್ಲಿ ಜಯದೇವ ಕಪ್ ಹೊನಲು ಬೆಳಕಿನ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಹೊನಲು ಬೆಳಕಿನ-ಲೇಸರ್ ಶೋ ಉದ್ಘಾಟನೆ ಮಾಡಿದ ರಾಜ್ಯ ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, ಶರಣಸಂಸ್ಕೃತಿ ಉತ್ಸವವು ಮಧ್ಯ ಕರ್ನಾಟಕದ ದಸರಾ ಎಂದು ಕರೆಯಲ್ಪಡುತ್ತಿದೆ.

ಕ್ರೀಡಾಕೂಟವು ಯುವಕರಲ್ಲಿ ಸ್ಫೂರ್ತಿ ತುಂಬುತ್ತಿದೆ. ಸಾಧಯಿಲ್ಲದೆ ಸತ್ತರೆ ಸಾವಿಗೆ ಅಪಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅಪಮಾನ. ಆದ್ದರಿಂದ ನಮ್ಮ (Jayadeva Cup) ಜೀವನದಲ್ಲಿ ಸಾಧನೆ ಮುಖಾಂತರ ಆದರ್ಶ ವ್ಯಕ್ತಿಗಳಾಗಬೇಕು. ಜನ್ಮ ನೀಡಿದ ತಂದೆತಾಯಿಗಳಿಗೆ ನಾವು ಉತ್ತಮ ವ್ಯಕ್ತಿಗಳಾಗಿ ಬಾಳಿ ತೋರಿಸಬೇಕು ಎಂದು ತಿಳಿಸಿದರು.
ಖ್ಯಾತ ಚಲನಚಿತ್ರ ಕಲಾವಿದ ಶ್ರೀ ಶ್ರೀನಗರ ಕಿಟ್ಟಿ ಮಾತನಾಡಿ ಈ ಕ್ರೀಡಾಕೂಟವು ಯಶಸ್ಸು ಕಾಣಲಿ. ಕ್ರೀಡಾಪಟುಗಳ ಸಾಧನೆಗೆ ಮೆಟ್ಟಿಲಾಗಲಿ. ಕ್ರೀಡೆಯ ಮೂಲಕ ಎಲ್ಲಾ ಮನಸ್ಸುಗಳು ಒಗ್ಗೂಡಲಿ ಎಂದು ತಿಳಿಸಿದರು.
ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಜಿ ಎಸ್ ಮಂಜುನಾಥ್ ಮಾತನಾಡಿ, ಶರಣಸಂಸ್ಕೃತಿ ಉತ್ಸವಗಳಲ್ಲಿ ಶ್ರೀ ಮಾದಾರ ಚೆನ್ನಯ್ಯ ಶ್ರೀಗಳು ನೂತನ ಪ್ರಯೋಗ ಮಾಡುತ್ತಿದ್ದಾರೆ. ಅದರಲ್ಲಿ ಈ ಹೊನಲು ಕ್ರೀಡಾಕೂಟ ಒಂದು.
ನಮ್ಮ ಚಿತ್ರದುರ್ಗದವರು ಹೊಸಹೊಸ ಪ್ರಯತ್ನ ಪ್ರಯೋಗ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ಮುರುಘಮಠ (Jayadeva Cup) ಜಾತಿಗೊಂದು ಮಠ ಕಟ್ಟಲು ನೆರವು ನೀಡಿ ಅವರದ್ದೇ ಆದ ಬಸವ ಪರಂಪರೆಯನ್ನು ನೆಲೆಗೂಡಿಸಿದ್ದಾರೆ. ಶರಣಸಂಸ್ಕೃತಿಯನ್ನು ಜನ ಸಾಮಾನ್ಯರಿಗೆ ಮುಟ್ಟಿಸಲು ಸಾಂಸ್ಕೃತಿಕ, ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಚಿತ್ರದುರ್ಗ ಎಲ್ಲಾ ಮಠಾದೀಶರುಗಳು ಈ ಕಾರ್ಯಕ್ರಮವನ್ನು ಕಾರ್ಯಕರ್ತರ ರೂಪದಲ್ಲಿ ನಡೆಸಿಕೊಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಬ್ಬಾಳು ಶ್ರೀ ವಿರಕ್ತಮಠದ ಶ್ರೀ ನಿ.ಪ್ರ.ಸ್ವ. ಮಹಾಂತರುದ್ರೇಶ್ವರ ಸ್ವಾಮಿಗಳು, ಚಿತ್ರದುರ್ಗ ಶ್ರೀ (Jayadeva Cup) ಸಿದ್ಧರಾಮೇಶ್ವರ ಸಂಸ್ಥಾನದ ಶ್ರೀ ಜಗದ್ಗುರು ಇಮ್ಮಡಿ ಸಿದ್ಧರಾಮ ಮಹಾಸ್ವಾಮಿಗಳು, ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಜಗದ್ಗುರು ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ದಾವಣಗೆರೆ ವಿರಕ್ತವiಠದ ಡಾ.ಬಸವಪ್ರಭು ಸ್ವಾಮಿಗಳು, ಸಂಸದರಾದ ಶ್ರೀ ಗೋವಿಂದ ಎಂ ಕಾರಜೋಳ, ವಿಧಾನಪರಿಷತ್ ಸದಸ್ಯ ಶ್ರೀ ನವೀನ್ ಕೆ ಎಸ್, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಅಧ್ಯಕ್ಷರಾದ ಶ್ರೀ. ಶಿವಯೋಗಿ ಸಿ.ಕಳಸದ್, ಆಡಳಿತಮಂಡಳಿ ಸದಸ್ಯರಾದ ಡಾ. ಶ್ರೀ. ಬಸವಕುಮಾರ ಸ್ವಾಮೀಜಿಗಳು, ಕರ್ನಾಟಕ ರಾಜ್ಯ ಲಿಡ್ಕರ್ ನಿಗಮದ ಅಧ್ಯಕ್ಷ ಶ್ರೀ ಮುಂಡರಗಿ ನಾಗರಾಜ್, ಕೆ.ಡಿ.ಪಿ.ಸದಸ್ಯರಾದ ಶ್ರೀ ಕೆ.ಸಿ.ನಾಗರಾಜ್, ಕೆ.ಪಿ.ಸಿ.ಸಿ. ಸದಸ್ಯ ಡಾ.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಂ ಕೆ ತಾಜ್ ಪೀರ್, ನಿವೃತ್ತ ಡಿಡಿಪಿಐ ಶ್ರೀ ರವಿಶಂಕರ್ ರೆಡ್ಡಿ, ಲಿಡ್ಕರ್ ಮಾಜಿ ಛರ್ಮನ್ ಶ್ರೀ ಓ ಶಂಕರ್, ಚಲನಚಿತ್ರ ನಿರ್ಮಾಪಕ ಶ್ರೀ ಛಲವಾದಿ ಕುಮಾರ, ಕಾಂಗ್ರೆಸ್ ಮುಖಂಡ ಶ್ರೀ ಸೈಯದ್ ಅನೀಸ್, ವೀರಶೈವ ಲಿಂಗಾಯತ ಯುವವೇದಿಕೆ ಅಧ್ಯಕ್ಷರಾದ ಶ್ರೀ ಮಂಜುನಾಥ್ ಹೆಚ್.ಎಂ(ದಾಳಿAಬೆ), ಶ್ರೀ ಸುರೇಶ್ ಬಾಬು, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಚಳ್ಳಕೆರೆ ವಾರಿಯರ್ಸ್ CPL ಚಾಂಪಿಯನ್
ಕಾರ್ಯಕ್ರಮದಲ್ಲಿ ಕರಾಟೆ ಗ್ರ್ಯಾಂಡ್ ಮಾಸ್ಟರ್ ಡಾ.ಪ್ರವೀಣ್ರಂಕ, ಖ್ಯಾತ ಕರಾಟೆ ಮತ್ತು ಕುಸ್ತಿಪಟು ಶ್ರೀಮತಿ ಅಂಜು ಎಸ್, ಬೆಂಗಳೂರು ಅರ್ಪಿತಾ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ ಲಗ್ಗೆರೆ ನಾರಾಯಣಸ್ವಾಮಿ, ಕೊರೊನಾ ವಾರಿಯರ್ ಶ್ರೀ (Jayadeva Cup) ಲಿಂಗರಾಜ್, ಶ್ರೀ ದಿನೇಶ್, ಕರಾಟೆಪಟು ಶ್ರೀ ಗಿರೀಶ್ ಎಂ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ಹಾಗೂ ಜ್ಞಾನಯೋಗಿ ಸಂಗೀತ ಕಲಾಕ್ಷೇತ್ರದ ಕಲಾವಿದರು ಪ್ರಾರ್ಥಿಸಿ, ಶ್ರೀ ಮಾದಾರ ಚೆನ್ನಯ್ಯ ಸ್ವಾಮಿಗಳು ಸ್ವಾಗತಿಸಿ, ಆಕಾಶವಾಣಿಯ ನವೀನ್ ಮಸ್ಕಲ್ ನಿರೂಪಿಸಿದರು.
ಇದನ್ನೂ ಓದಿ: ಒಂದೇ ರಾತ್ರಿ 426.18 ಎಂ.ಎಂ. ಮಳೆ : ಮನೆ, ಜಮೀನುಗೆ ಬೆಳೆಗೆ ಹಾನಿ | Challakere rain report
ಸಾಂಸ್ಕೃತಿಕ ಸಂಭ್ರಮದಲ್ಲಿ ಅಂಜನಾ ನೃತ್ಯ ಕಲಾಕೇಂದ್ರದ ಡಾ.ನಂದಿನಿ ಶಿವಪ್ರಕಾಶ್ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, ರೋಣದ ಅರುಣೋದಯ ಕಲಾಸಂಘದ ಶ್ರೀ ಶಂಕ್ರಣ್ಣ ಸಂಕಣ್ಣನವರ್ ಮತ್ತು ತಂಡದವರಿAದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.