
Chitradurga news|nammajana.com|25-11-2024
ನಮ್ಮಜನ.ಕಾಂ, ನಾಯಕನಹಟ್ಟಿ: 2000 ವರ್ಷ ಇತಿಹಾಸವಿರುವ ಕನ್ನಡ ಭಾಷೆ ಹಾಗೂ ಈ ಭಾಷೆಯ ಪರಂಪರೆ ಅಂಶಗಳ ಜೊತೆ ವೈಜ್ಞಾನಿಕ ತಳಹದಿ ಮೇಲೆ ನಿಂತಿದೆ ಎಂದು (Kannada Rajyotsava) ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು
ಅವರು ನಾಯಕನಟ್ಟಿ ಪಟ್ಟಣದಲ್ಲಿ ಕರ್ನಾಟಕ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಆಂಗ್ಲ ಭಾಷೆಯ ಮಮ್ಮಿ ಎನ್ನುವ ಎರಡು ಅಕ್ಷರ ತುಟಿಯಂಚಿನಲ್ಲಿ ಮರೆಯಾಗುತ್ತದೆ. ಆದರೆ ಅಮ್ಮ ಎನ್ನುವ ಕನ್ನಡ ಭಾಷೆಯ ಭಾವನಾತ್ಮಕ ಪದ ಸ್ವರ ಮತ್ತು ವ್ಯಂಜನ ಮಿಶ್ರಿತವಾಗಿ ನಾಭಿಯಲ್ಲಿ ಹುಟ್ಟಿ ತುಟಿಯಲ್ಲಿ ಅಂತ್ಯವಾಗುತ್ತದೆ, ಇಂತಹ ಉತ್ಕೃಷ್ಟವಾದ ಭಾಷೆ ಪ್ರಪಂಚದಲ್ಲಿ ಎಲ್ಲೂ ಇಲ್ಲ, (Kannada Rajyotsava) ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಆಯ ಕೆಲವು ಭಾಷೆಗಳು ಅಳಿದು ಹೋಗಿವೆ ಇನ್ನು ಶತಾ ಶತಮಾನಗಳಿಸಿದರು ಕೂಡ ನಮ್ಮ ಕನ್ನಡ ಭಾಷೆ ಅನನ್ಯವಾಗಿ ಬೆಳೆಯುತ್ತಲೇ ಇರುತ್ತದೆ.
ಕನ್ನಡದ ಕವಿಗಳಾದ ಹುಹಿಲುಗೋಳು ನಾರಾಯಣರಾಯದಿಂದ ಹಿಡಿದು ಅನಂತಮೂರ್ತಿವರೆಗಿನ ಕವಿಗಳ ಕೊಡುಗೆ ಈ ನಾಡಿಗೆ ಸಾಕಷ್ಟಿದೆ.
ಇದನ್ನೂ ಓದಿ: ವಿ ವಿ ಸಾಗರ ಭರ್ತಿಗೆ ಒಂದೂವರೆ ಅಡಿ ಮಾತ್ರ ಬಾಕಿ | 25 ನವೆಂಬರ್ 2024 | Vani Vilasa Sagara
ಡಿವಿಜಿ ಅವರ ಮಂಕುತಿಮ್ಮನ ಕಗ್ಗ ರಾಮಾಯಣ ಮತ್ತು ಮಹಾಭಾರತ ಮಹಾ ಕಾವ್ಯಗಳು ನೀಡುವಂತ ಜೀವನಕ್ಕೆ ಅಮೃತವಾದ ಸಂದೇಶ ನೀಡುತ್ತವೆ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಗದುಗಿನ ನಾರಣಪ್ಪನವರ ಕುಮಾರವ್ಯಾಸ ಭಾರತ ಪಂಪ ರನ್ನ ರವರ ತ್ರಿಪದಿ ಮತ್ತು ಷಟ್ಪದಿಗಳನ್ನು ಓದುವುದೇ ಒಂದು ಸಂಭ್ರಮ ಇಂತಹ ಕಾದಂಬರಿಗಳನ್ನು ಮತ್ತು ಚಿತ್ರದುರ್ಗದ ಸ್ವಾಭಿಮಾನ ಮತ್ತು ಪರಂಪರೆಗೆ ಹೆಸರಾದಂತಹ ಕದಂಬರಿಗಳನ್ನು ಬರೆದಂತ (Kannada Rajyotsava) ತಾರಾಸು ಮತ್ತು ಕುವೆಂಪುರವರ ಗುರುಗಳಾದ ವೆಂಕಣ್ಣಯ್ಯ ಬಿಳಿಗೆರೆ ಕೃಷ್ಣ ಶಾಸ್ತ್ರಿ ಇಂತಹ ಕವಿಗಳು ಈ ನೆಲದಲ್ಲಿ ಹುಟ್ಟಿದ್ದಾರೆ.
ಇಂಥ ಮಹನೀಯರ ಬರಹಗಳನ್ನು ಮತ್ತು ಕಾದಂಬರಿಗಳನ್ನು ನಾವು ಮನೆಯಲ್ಲಿ ಮಕ್ಕಳಿಗೆ ಓದಿಸಿದರೆ ಕನ್ನಡದ ಈ ನಮ್ಮ ಕವಿಗಳು ಮುಂದಿನ ಸಾವಿರಾರು ವರ್ಷ ಬದುಕುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಮಕ್ಕಳ ದೇವರು ಖ್ಯಾತಿ ಡಾ.ತಿಮ್ಮೇಗೌಡ ಸಾವು | ಕುಟುಂಬದ ಹಿನ್ನೆಲೆ ಕೇಳಿದರೇ ಕಣ್ಣಿರು ಬರುತ್ತೆ ! Dr. Thimmegowda
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯತಿ ಸದಸ್ಯ ಓಬಯ್ಯ ದಾಸ್, ಕರವೇ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ ನಾಯ್ಕ್, ಜಿಲ್ಲಾ ಮಹಿಳಾಧ್ಯಕ್ಷೆ ರೇಣುಕಾ, ಜಿಲ್ಲಾ ಕಾರ್ಯದರ್ಶಿ ಓಬಳೇಶ್, ಆಟೋ ಚಾಲಕ ಸಂಘದ ಅಧ್ಯಕ್ಷ ಓಬಳೇಶ್, ಪಟ್ಟಣ ಪಂಚಾಯತಿ ಸದಸ್ಯ ಸುನಿತಾ ಮುದಿಯಪ್ಪ, ಹೋಬಳಿ ಅಧ್ಯಕ್ಷ ಮುತ್ತಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಹೋಬಳಿ ಉಪಾಧ್ಯಕ್ಷ ರಾಘವೇಂದ್ರ, ಹೋಳಿ ಸಂಘಟನೆ ಕಾರ್ಯದರ್ಶಿ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜು, ಗೌರವಾಧ್ಯಕ್ಷ ವಿಶ್ವನಾಥ್, ಯುವ ಘಟಕ ಅಧ್ಯಕ್ಷ ಮಧು, ನಗರ ಘಟಕ ಉಪಾಧ್ಯಕ್ಷ ಮಂಜುನಾಥ್, ಯುವ ಕಾರ್ಯದರ್ಶಿ ಪ್ರೇಮ್ ಕುಮಾರ್, ಗೌರವಾಧ್ಯಕ್ಷ ನವೀನ್, ವಿದ್ಯಾರ್ಥಿಗಳ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಪ್ರಸನ್ನ ಕುಮಾರ್, ವಿದ್ಯಾರ್ಥಿ ಘಟಕ ಉಪಾಧ್ಯಕ್ಷ ಬೋರ್ ಸ್ವಾಮಿ, ಯುವ ಘಟಕ ಉಪಾಧ್ಯಕ್ಷ ಸಣ್ಣ ಮಲ್ಲಪ್ಪ, ಕಾರ್ಮಿಕ ಕಾರ್ಯದರ್ಶಿ ರಾಮಚಂದ್ರ, ಗ್ರಾಮ ಘಟಕ ಅಧ್ಯಕ್ಷ ಶಿವರಾಜ್, ನಗರ ಸಂಚಾಲಕ ಬೋರಯ್ಯ, ನಗರ ಘಟಕ ಕಾರ್ಯದರ್ಶಿ ಡಾ. ನಾಗರಾಜ್ ಮೀಸೆ , ಮಹಿಳಾ ಘಟಕ ಹೋಬಳಿ ಅಧ್ಯಕ್ಷೆ ಬಿ ತಿಪ್ಪಮ್ಮ ಚಿನ್ನಮಲ್ಲಯ್ಯ, ಮಹಿಳಾ ನಗರ ಘಟಕ ಅಧ್ಯಕ್ಷ ಚಂದ್ರಮ್ಮ, ಹೋಬಳಿ ಕಾರ್ಯದರ್ಶಿ ಮಾರಕ್ಕ, ನಗರ ಘಟಕ ಕಾರ್ಯದರ್ಶಿ ಅನಿತಮ್ಮ, ಹೋಬಳಿ ಉಪಾಧ್ಯಕ್ಷ ಅನುಸೂಯಮ್ಮ, ನಗರ ಘಟಕ ಉಪಾಧ್ಯಕ್ಷೆ ಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮಮತಾ, ಗೌರವಾಧ್ಯಕ್ಷ ಶಾಂತಮ್ಮ, ಯುವ ಅಧ್ಯಕ್ಷೆ ತಿಪ್ಪೀರಮ್ಮ, ಗ್ರಾಮ ಘಟಕ ಕಾರ್ಯದರ್ಶಿ ಮಾರಕ್ಕ, ಗ್ರಾಮ ಘಟಕ ಅಧ್ಯಕ್ಷೆ ಯಶೋದಮ್ಮ, ಕಾರ್ಮಿಕ ಘಟಕ ಅಧ್ಯಕ್ಷೆ ನಾಗರತ್ನಮ್ಮ, ಕಾರ್ಮಿಕ ಘಟಕ ಉಪಾಧ್ಯಕ್ಷೆ ಭಾಗ್ಯಮ್ಮ, ಕಾರ್ಮಿಕ ಕಾರ್ಯದರ್ಶಿ ಲಾಯರ್ ಭಾಗ್ಯ,ವಿದ್ಯಾರ್ಥಿ ಘಟಕ ಅಧ್ಯಕ್ಷೆ ಕವಿತಾ, ನಗರ ಸಂಚಾಲಕಿ ತಿಪ್ಪಮ್ಮ ಇನ್ನು ಮುಂತಾದವರು ಹಾಜರಿದ್ದರು.