Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Kargil Victory: ದೇಶದ ಒಳಗೆ ನಾವು ನೆಮ್ಮದಿಯಿಂದ ಇರಲು ಸೈನಿಕರು ಕಾರಣ: ಜಿ.ಹೆಚ್.ತಿಪ್ಪಾರೆಡ್ಡಿ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Kargil Victory: ದೇಶದ ಒಳಗೆ ನಾವು ನೆಮ್ಮದಿಯಿಂದ ಇರಲು ಸೈನಿಕರು ಕಾರಣ: ಜಿ.ಹೆಚ್.ತಿಪ್ಪಾರೆಡ್ಡಿ
ವಿಶೇಷ ಸುದ್ದಿ

Kargil Victory: ದೇಶದ ಒಳಗೆ ನಾವು ನೆಮ್ಮದಿಯಿಂದ ಇರಲು ಸೈನಿಕರು ಕಾರಣ: ಜಿ.ಹೆಚ್.ತಿಪ್ಪಾರೆಡ್ಡಿ

Editor Nammajana
Last updated: 26 July 2024 14:08
By Editor Nammajana 4 Min Read
Share
SHARE

Chitradurga news|nammajana.com|26-7-2024

ನಮ್ಮಜನ.ಕಾಂ, ಚಿತ್ರದುರ್ಗ: ದೇಶದ ಒಳಗಡೆ ನಾವುಗಳು (Kargil Victory) ನೆಮ್ಮದಿಯಿಂದ ಇರಲು ದೇಶದ ಗಡಿ ಪ್ರದೇಶದಲ್ಲಿ ಕಾವಲು ಕಾಯುತ್ತಿರುವ ಸೈನಿಕರು ಕಾರಣವಾಗಿದ್ದಾರೆ, ಇವರ ಕಾರ್ಯವನ್ನು ಎಷ್ಟು ಸ್ಮರಣೆ ಮಾಡಿದರು ಸಾಲದು ಎಂದು ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಸ್ಮರಣೆ ಮಾಡಿದರು.

ಚಿತ್ರದುರ್ಗ ನಗರದ ಮದಕರಿ ವೃತ್ತದಲ್ಲಿನ ವೈದ್ಯಕೀಯ ಸಭಾಂಗಣದಲ್ಲಿ ಶುಕ್ರವಾರ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ಹಾಗೂ ಚಿತ್ರದುರ್ಗ ಮಾಜಿ ಸೈನಿಕರ ಕ್ಷೇಮಾಭೀವೃದ್ದಿ ಸಂಘದ ಆಶ್ರಯದಲ್ಲಿ ನಡೆದ ೨೫ನೇ ಕಾರ್ಗಿಲ್ (Kargil Victory) ವಿಜಯೋತ್ಸವದ ರಜತ ಮಹೋತ್ಸವದ ಅಂಗವಾಗಿ ಹುತ್ಮಾತರ ಗೌರವಾರ್ಥವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಮ್ಮ ಸೈನಿಕರ ಸಾಹಸ ನಾವು ಮರೆಯಲು ಸಾಧ್ಯವಿಲ್ಲ

ಕಾರ್ಗಿಲ್ ಯುದ್ದದಲ್ಲಿ ನಮ್ಮ ಸೈನಿಕರು ಮಾಡಿದ ಸಾಹಸವನ್ನು ನಾವುಗಳು ಮೆಚ್ಚಲೇ ಬೇಕಿದೆ. ಅವರು ಪರಿಶ್ರಮದಿಂದ ಹೋರಾಟವನ್ನು ಮಾಡದಿದ್ದರೆ ನಾವು ಜಯಗಳಿಸಲು ಸಾಧ್ಯವಾಗುತ್ತಿಲ್ಲ, ಇಂದಿನ ದಿನವನ್ನು ನೆನೆದರೆ ಒಂದು (Kargil Victory) ಕಡೆಯಲ್ಲಿ ಸಂತೋಷವಾಗುತ್ತದೆ ಮತ್ತೊಂದು ಕಡೆಯಲ್ಲಿ ದುಃಖವಾಗುತ್ತದೆ.

ಗಡಿ ಪ್ರದೇಶದಲ್ಲಿ ನಮ್ಮ ಸೈನಿಕರು ಪಡುವ ಕಷ್ಠವನ್ನು ನಾನು ಕಣ್ಣಾರೆ ನೋಡಿದ್ದೇನೆ, ಒಂದು ಕಿ.ಮೀಗೆ ಒಬ್ಬರಂತೆ ಗಡಿ ಪ್ರದೇಶವನ್ನು ಕಾಯುತ್ತಾರೆ, ಕೂರೆಯುವ ಚಳಿಯಲ್ಲಿಯೂ ಸಹಾ ದೇಶಕ್ಕಾಗಿ ನಮ್ಮ ಪ್ರಾಣವನ್ನೇ ನೀಡುತ್ತಾರೆ. ಆದರೆ (Kargil Victory) ಯುದ್ದವಾದಾಗ ಮಾತ್ರ ನಿರಾಪರಾಧಿಗಳು ಸಾವನ್ನು ಅಪ್ಪುತ್ತಾರೆ. ಇದು ದುಃಖ ವಿಷಯವಾಗಿದೆ ಎಂದರು.

ಸೈನಿಕರು ತಮ್ಮ ಸುಖವನ್ನು ತ್ಯಾಗ ಮಾಡುವುದರ ಮೂಲಕ ದೇಶವನ್ನು ಶತೃಗಳಿಂದ ರಕ್ಷಣೆ ಮಾಡುತ್ತಿದ್ದಾರೆ. ಇದರಲ್ಲಿ ಮಡಿದ ಯೋಧನ ಮೃತ ದೇಹವನ್ನು ಪಡೆಯುವಾಗ ದುಃಖ (Kargil Victory) ಬರುತ್ತದೆ. ಮನೆಯಲ್ಲಿ ಕಷ್ಠ ಇದ್ದರೂ ಸಹಾ ಸೈನ್ಯಕ್ಕೆ ಸೇರುವುದರ ಮೂಲಕ ದೇಶವನ್ನು ಕಾಯುವ ಕಾರ್ಯವನ್ನು ಮಾಡುತ್ತಿದ್ದಾರೆ.

ಮನೆಯಲ್ಲಿ ತಂದೆ, ತಾಯಿಯವರ ರಕ್ಷಣೆ ಅಕ್ಕ-ತಂಗಿ, ತಮ್ಮರವರ ಸಲಹುವಿಕೆಯ ಭಾರವನ್ನು ಹೋತ್ತಿರುತ್ತಾರೆ. ಸೈನಿಕನಾಗಿ ಮನೆಯಲ್ಲಿನ ಕಷ್ಠವನ್ನು ಮರೆಯವುದರ ಮೂಲಕ ದೇಶದ ರಕ್ಷಣೆಯಲ್ಲಿ ತೊಡಗುತ್ತಾರೆ. ಕಳೆದ ೫೦-೬೦ (Kargil Victory) ವರ್ಷಗಳಿಂದ ಸೈನಿಕರಿಗೆ ಸರಿಯಾದ ಸೌಲಭ್ಯ ಇರಲಿಲ್ಲ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಇವರಿಗೆ ವಿವಿಧ ರೀತಿಯ ಸೌಲಭ್ಯಗಳು ದೂರಕುತ್ತಿವೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.

ನಮ್ಮ ದೇಶದ ಹಲವಾರು ಕಡೆಯಲ್ಲಿ ನೆರೆ ದೇಶ ಪಾಕಿಸ್ತಾನ ಜಾಗವನ್ನು ಆಕ್ರಮಿಸಿದೆ ಇದನ್ನು ಮೋದಿ ಸರ್ಕಾರ ತಮ್ಮ ಸೈನಿಕರ ಮೂಲಕ ವಾಪಸ್ಸು ಪಡೆಯಬೇಕಿದೆ. ಗಡಿ (Kargil Victory) ಪ್ರದೇಶವನ್ನು ಮತ್ತಷ್ಟು ಬಲಗೊಳಿಸಬೇಕಿದೆ. ಸೈನಿಕರಿಗೆ ಅಧುನಿಕ ಶಸ್ತ್ರಾಸ್ತಗಳನ್ನು ನೀಡುವುದರ ಮೂಲಕ ಅವರಿಗೆ ಶಕ್ತಿಯನ್ನು ತುಂಬುವ ಕಾರ್ಯವನ್ನು ಮಾಡಬೇಕಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ  ಯುವ ಮೋರ್ಚಾದಿಂದ ಸನ್ಮಾನ

ಜಿಲ್ಲೆಯಲ್ಲಿನ ಸುಮಾರು 50 ಕ್ಕೂ ಹೆಚ್ಚು ಮಾಜಿ ಸೈನಿಕರಿಗೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಸನ್ಮಾನ‌ ಮಾಡಿರುವುದು ಸಂತಸ ತಂದಿದ್ದು ಇದು ಒಂದು ಅಮೂಲ್ಯವಾದ ಕ್ಷಣ ಎಂದು ಮಾಜಿ ಸೈನಿಕರು ನಮ್ಮಜನ.ಕಾಂ ಜೊತೆ ಸಂತಸ ಹಂಚಿಕೊಂಡರು.

ದೇಶದ ಒಳಗೆ ನೆಮ್ಮದಿ ನೆಲೆಸಲು ಸೈನಿಕರು ಕಾರಣ: ಕುಮಾರಸ್ವಾಮಿ (Kargil Victory)

ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಕುಮಾರಸ್ವಾಮಿ ಮಾತನಾಡಿ, ಗಡಿ ಪ್ರದೇಶದಲ್ಲಿ ಸೈನಿಕರು ರಕ್ಷಣೆಯನ್ನು ಮಾಡುತ್ತಿರುವುದರಿಂದ ದೇಶದ ಒಳಗಡೆ ನಾವುಗಳು ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ. ದೇಶದ ಜನತೆಗಾಗಿ ಸೈನಿಕರು ತಮ್ಮ ಪ್ರಾಣವನ್ನು ಸಹಾ ನೀಡುತ್ತಿದ್ದಾರೆ. ಸೈನಿಕರಿಗೆ ಗೌರವ ಸ್ಥಾನವನ್ನು ನೀಡಬೇಕಿದೆ. ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅತಿ ಮುಖ್ಯವಾಗಿದೆ. ಸರ್ಕಾರವೂ ಸಹಾ ಇವರಿಗೆ ಸ್ಪಂದಿಸುತ್ತಿದೆ. ಇವರಿಗೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಬೇಕಿದೆ ಸೈನಿಕರು ಎಂತಹ ಕಷ್ಠದ ಸಮಯದಲ್ಲಿಯೂ ಸಹಾ ದೇಶಕ್ಕಾಗಿ ಕೆಲಸವನ್ನು ಮಾಡುತ್ತಿದ್ದಾರೆ, ನಾವುಗಳು ದೇಶದ ಒಳಗಡೆಯಲ್ಲಿ ರಕ್ಷಣೆಯ ಕಾರ್ಯವನ್ನು ಮಾಡಿದರೆ ಸೈನಿಕರು ದೇಶದ ಗಡಿ ಪ್ರದೇಶದಲ್ಲಿ ದೇಶವನ್ನು ಕಾಯುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಕಾರ್ಗಿಲ್ ವಿಜಯೋತ್ಸವ ಸಂತೋಷದ ಜೊತೆ ದುಃಖ ಸಹ ತರುತ್ತದೆ: ಸತ್ಯನಾರಾಯಣ ರೆಡ್ಡಿ (Kargil Victory)

ಚಿತ್ರದುರ್ಗ ಮಾಜಿ ಸೈನಿಕರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷರು, ಮಾಜಿ ಸೈನಿಕರಾದ ಸತ್ಯನಾರಾಯಣ ರೆಡ್ಡಿ ಮಾತನಾಡಿ, ಕಾರ್ಗಿಲ್ ವಿಜಯೋತ್ಸವವು ಒಂದು ಕಡೆಯಲ್ಲಿ ಸಂತೋಷವನ್ನು ತಂದರೆ ಮತ್ತೊಂದು ಕಡೆಯಲ್ಲಿ ದುಃಖವನ್ನು ತರುತ್ತದೆ. ಈ ಯುದ್ದದಲ್ಲಿ ನಾವುಗಳು ವಿಜಯಯಾಗಿದ್ದೇವೆ ಎಂದು ಸಂತೋಷವನ್ನು ಪಡಬೇಕೊ ಅಥವಾ ಇದರಲ್ಲಿ ನಮ್ಮ ಹಲವಾರು ಸೈನಿಕರನ್ನು ಕಳೆದುಕೊಂಡಿದ್ದೇವೆ ಎಂದು ದುಃಖ ಪಡಬೇಕೋ ತಿಳಿಯದಾಗಿದೆ. ಯುದ್ದದಲ್ಲಿಒ ಗೆಲುವುದರ (Kargil Victory) ಮೂಲಕ ಭಾರಾತಂಭೆಗೆ ಕೀರಿಟವನ್ನು ನೀಡಲಾಗಿದೆ. ಇಷ್ಠಲ್ಲಾ ಕೆಲಸವನ್ನು ಮಾಡಿದರು ಸಹಾ ಸೈನಿಕನಿಗೆ ಸರ್ಕಾರದಿಂದ ಸಿಗುವಂತ ಮಾರ್ಯದೆ ಇಲ್ಲವಾಗಿದೆ, ನಮಗೆ ವಿವಿಧ ರೀತಿಯ ರ್ಸಲಭ್ಯಗಳನ್ನು ನೀಡುವುದಾಗಿ ಬರೀನ ಪುಸ್ತಕ, ಬರವಣಿಗೆಯಲ್ಲಿ ಮಾತ್ರ ಇದೆ ಹೊರೆತು ಅದು ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ವಿಷಾಧಿಸಿದರು.

ಚಿತ್ರದುರ್ಗದಲ್ಲಿ ಮಾಜಿ ಸೈನಿಕರಿಗೆ ಸಭೆಯನ್ನು ಮಾಡಲು ನಿಖರವಾದ ಸ್ಥಳ ಇಲ್ಲವಾಗಿದೆ ಇದರ ಬಗ್ಗೆ ಸರ್ಕಾರ, ಮುಖ್ಯಮಂತ್ರಿಗಳು, ಜಿಲ್ಲಾಡಳಿತ, ಸಚಿವರು, ಶಾಸಕರನ್ನು ಕಂಡು ಬೇಟಿ ಮನವಿ ಮಾಡಿದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ, ದೇಶವನ್ನು ಬ್ರಿಟಿಷರಿಂದ (Kargil Victory) ಸ್ವಾತಂತ್ರ್ಯಗೊಳಿಸುವಲ್ಲಿ ಅಂದಿನ ಹೋರಾಟಗಾರರು ಎಷ್ಟು ಮುಖ್ಯವೂ ಅಷ್ಠೇ ಪ್ರಮಾಣದಲ್ಲಿ ಈಗ ದೇಶವನ್ನು ಕಾಯುತ್ತಿರುವ ಸೈನಿಕರು ಸಹಾ ಅಷ್ಟೇ ಪ್ರಮಾಣದಲ್ಲಿ ಪ್ರಮುಖರಾಗಿದ್ದಾರೆ. ಸರ್ಕಾರಕ್ಕೆ ನಮ್ಮ ಬಗ್ಗೆ ಕಾಳಜಿ ಇಲ್ಲವಾಗಿದೆ.

ಚಿತ್ರದುರ್ಗದಲ್ಲಿ ಮಾಜಿ ಸೈನಿಕರಿಗಾಗಿ ಒಂದು ಜಾಗವನ್ನು ನೀಡುವಂತೆ ಹಲವಾರು ಮನವಿ ಮಾಡಿದ್ದರೂ ಸಹಾ ಅದರ ಬಗ್ಗೆ ಗಮನ ನೀಡಿಲ್ಲ, ಈಗ ಇರುವ ವೀರಸೌಧವನ್ನು ನಮಗೆ ನೀಡಿದರೆ ಸರ್ಕಾರದಿಂದ ಯಾವುದೇ ಸಹಾಯವನ್ನು (Kargil Victory) ಆಪೇಕ್ಷಿಸದೇ ನಾವೇ ನಿರ್ವಹಣೇ ಮಾಡುತ್ತವೆ ಅಲ್ಲದೆ ಸೈನ್ಯಕ್ಕೆ ಸೇರುವ ಯು ಪಿಳೀಗೆಗೆ ತರಬೇತಿ ಮತ್ತು ಸಹಾಯವನ್ನು ಸಹಾ ಮಾಡಲಾಗುವುದು. ಅಲ್ಲದೆ ರೈತರಿಗೂ ಸಹಾ ವಿವಿಧ ರೀತಿಯಲ್ಲಿ ನೆರವಾಗುವುದಾಗಿ ತಿಳಿಸಿದರು.

ಇದನ್ನೂ ಓದಿ: Dengue Chitradurga: ಡೆಂಗ್ಯೂ ಪರೀಕ್ಷೆಗೆ ಎಷ್ಟು ದರ?

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ನಿವೃತ್ತ ಸೈನಿಕರಾದ ಮಹೇಶ್ವರಪ್ಪ ಮಾತನಾಡಿದರು. ಸಮಾರಂಭದಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪಾಲಯ್ಯ ಆರ್ ಕಾಲುವೆಹಳ್ಳಿ ಬಿಜೆಪಿಯ ಮಲ್ಲಿಕಾರ್ಜುನ, ನವೀನ್ ಚಾಲುಕ್ಯ, ಸಂಪತ್ ಕುಮಾರ್, ಚಂದುಶೇಖರ್ ವಿ ಎಸ್ ಹಳ್ಳಿ, ಸಂದೀಪ್ ಸಿರಿಗೆರೆ, ಆದರ್ಶ ಎಂ, ಮಾಜಿ ಸೈನಿಕರಾದ ಕೃಷ್ಣಾರೆಡ್ಡಿ, ನಾರಾಯಣ, ಸೈಯದ್ ಜಾಕಿರ್, ಉಪಸ್ಥಿತೆರಿದ್ದರು.
ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ದದಲ್ಲಿ ವೀರ ಮರಣವನ್ನಪ್ಪಿದ ೭೨೦ ಸೈನಿಕರಿಗೆ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಸೂರಯ್ಯ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿ ವಂದಿಸಿದರು.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:25th Kargil Victory Day25ನೇ ಕಾರ್ಗಿಲ್ ವಿಜಯೋತ್ಸವBJP Yuva MorchaChitradurgaChitradurga NewsDistrict UnitEx-Servicemen Welfare AssociationFormer MLAG. H. ThippareddyKannada Newskannada suddiKargil Victory DayNammajana.comRajata Mahotsavಕನ್ನಡ ನ್ಯೂಸ್ಕನ್ನಡ ಸುದ್ದಿಕಾರ್ಗಿಲ್ ವಿಜಯೋತ್ಸವಖಾಸಗಿ ಆಸ್ಪತ್ರೆಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಿ.ಹೆಚ್.ತಿಪ್ಪಾರೆಡ್ಡಿಜಿಲ್ಲಾ ಘಟಕನಮ್ಮಜನ.ಕಾಂಬಿಜೆಪಿ ಯುವ ಮೋರ್ಚಾಮಾಜಿ ಶಾಸಕಮಾಜಿ ಸೈನಿಕರ ಕ್ಷೇಮಾಭೀವೃದ್ದಿ ಸಂಘರಜತ ಮಹೋತ್ಸವ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dengue Chitradurga: ಡೆಂಗ್ಯೂ ಪರೀಕ್ಷೆಗೆ ಎಷ್ಟು ದರ?
Next Article PDO Suspended: ಹಣಕಾಸು ದುರುಪಯೋಗ ಪಿ.ಡಿ.ಓ ಎನ್.ಪಾಲಯ್ಯ ಅಮಾನತು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?