Chitradurga news | nammajana.com | 15-07-2025
ನಮ್ಮಜನ.ಕಾಂ, ಹಿರಿಯೂರು: ತಾಲೂಕಿನ ಹರಿಯಬ್ಬೆ ಕರ್ನಾಟಕ ಗ್ರಾಮೀಣ ಬ್ಯಾಂಕ್(Karnataka gramina Bank)ನಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಇದನ್ನೂ ಓದಿ: ಚುನಾವಣೆಯ ಭರವಸೆ ಈಡೇರಿಸಿದ ಸಚಿವ ಡಿ.ಸುಧಾಕರ್

ಕಳ್ಳರು, ಬ್ಯಾಂಕ್ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿಕೊಂಡು ಒಳಗೆ ನುಗ್ಗಿದ್ದಾರೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಅವರಿಗೆ ಸೆನ್ಸಾರ್ ಸಿಸ್ಟಮ್ನಿಂದ ಮೊಬೈಲ್ಗೆ ಮೆಸೇಜ್ ಬಂದಿದೆ.
ತಕ್ಷಣವೇ ಬ್ಯಾಂಕ್ ಮುಂದಿನ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದ ತಕ್ಷಣ ಸ್ಥಳಕ್ಕೆ ಹೋಗಿದ್ದಾರೆ. ಇದನ್ನು ಗಮನಿಸಿದ ಕಳ್ಳರು ಅದೇ ಕಿಟಕಿ ಮೂಲಕ ಪರಾರಿ ಯಾಗಿದ್ದಾರೆ. ಮ್ಯಾನೇಜರ್ ಹಾಗೂ ಸ್ಥಳೀಯ ನಿವಾಸಿ ರಾತ್ರಿಯೇ ಬ್ಯಾಂಕ್ ಬಾಗಿಲು ತೆಗೆದು ನೋಡಿದಾಗ
ಸೆನ್ಸಾರ್ ಸಿಸ್ಟಮ್ನಿಂದ(Karnataka gramina Bank) ಸುತ್ತಲೂ ನೋಡಿದಾಗಲೂ ಯಾರು ಮೆಸೇಜ್, ಯಾವುದೇ ಕಳ್ಳತನ ನಡೆದಿರುವುದು ಕಂಡುಬಂದಿಲ್ಲ. ಅಲ್ಲದೇ ಬ್ಯಾಂಕ್ ಕಾಣಿಸಿಕೊಂಡಿಲ್ಲ. ಈ ಘಟನೆ ಬ್ಯಾಂಕಿನ ಮೇಲಧಿಕಾರಿಗೆ ತಿಳಿಸಿ, ವಾಪಸ್ ಮನೆಗೆ ತೆರಳಿದ್ದಾರೆ.
ಇದನ್ನೂ ಓದಿ: ನಮ್ಮ ಸರ್ಕಾರ ಗ್ಯಾರೆಂಟಿ ಯೋಜನೆಗಳು ಇತರೆ ರಾಜ್ಯಗಳಿಗೆ ಮಾದರಿ | ಟಿ.ರಘುಮೂರ್ತಿ
ಭಾನುವಾರ ಬೆಳಗ್ಗೆ ಬ್ಯಾಂಕ್ ನೌಕರರು ಹಾಗೂ ಮ್ಯಾನೇಜರ್ ಬಂದು ಪರಿ ಶೀಲಿಸಿದಾಗ ಬ್ಯಾಂಕ್ ಕಿಟಕಿ ಒಡೆದು, ಕಳ್ಳತನಕ್ಕೆ ಪ್ರಯತ್ನಿಸಿರುವುದು ಗೊತ್ತಾಗಿದೆ. ಸಮೀಪದ ಅಬ್ಬಿನ ಹೊಳೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್, ಪಿಐ ಗುಡ್ಡಪ್ಪ ಹಾಗೂ ಪಿಎಸ್ಐ ದೇವರಾಜ್ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಮುಂದುವರೆಸಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252