Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಕುವೆಂಪು ಬಸವಾದಿ ಶರಣರ ಸಾಲಲ್ಲಿ ನಿಲ್ಲುವ ಮೌಲ್ಯತೆ ಇದೆ: ಎನ್.ರಘುಮೂರ್ತಿ ಬಣ್ಣನೆ | Kuvempu
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಕುವೆಂಪು ಬಸವಾದಿ ಶರಣರ ಸಾಲಲ್ಲಿ ನಿಲ್ಲುವ ಮೌಲ್ಯತೆ ಇದೆ: ಎನ್.ರಘುಮೂರ್ತಿ ಬಣ್ಣನೆ | Kuvempu
ಇಂದಿನ ಸುದ್ದಿ

ಕುವೆಂಪು ಬಸವಾದಿ ಶರಣರ ಸಾಲಲ್ಲಿ ನಿಲ್ಲುವ ಮೌಲ್ಯತೆ ಇದೆ: ಎನ್.ರಘುಮೂರ್ತಿ ಬಣ್ಣನೆ | Kuvempu

Editor Nammajana
Last updated: 29 December 2024 11:36 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|29-12-2024

ನಮ್ಮಜನ.ಕಾಂ, ಚಳ್ಳಕೆರೆ: ಮನುಷ್ಯ ಸಮಾಜದ ಸೂಕ್ಷ್ಮತೆಯಲ್ಲಿ ವಿಶ್ವ ಮಾನವರಾಗಬೇಕೆಂದು ಸಾಹಿತ್ಯದ ಮೂಲಕ ಜಾಗೃತಿ ಹೇಳಿರುವ ಕುವೆಂಪು ಬಸವಾದಿ ಶರಣ ಸಾಲಲ್ಲಿ ನಿಲ್ಲುವ (Kuvempu) ಮೌಲ್ಯತೆ ಇದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಚಳ್ಳಕೆರೆ ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಕೊರ್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ವತಿಯಿಂದ (Kuvempu) ಹಮ್ಮಿಕೊಂಡದ್ದ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುವೆಂಪು ಅವರಿಗೆ ವಿದ್ಯಾಗುರುಗಳಾಗಿದ್ದ ತಳುಕಿನ ವೆಂಕಣ್ಣಯ್ಯ ನೆಲೆಯಲ್ಲಿ ಶಿಷ್ಯ ಕುವೆಂಪು ಅವರ ಸಾಹಿತ್ಯ ಕುರಿತು ಮಾತನಾಡುವುದು ಒಂದು ಇತಿಹಾಸ ಅನಿಸುತ್ತದೆ. ಸಮಾಜದ ಮಹನೀಯರ ಜಯಂತಿ ಕಾರ್ಯಕ್ರಮಗಳು ಕೇವಲ ಸಾಂಕೇತಿಕ ಆಗಬಾರದು.

ಬಸವಣ್ಣರ ವಚನ,ಕುವೆಂಪು ಅವರ ಕವನ, ಕನಕದಾಸರ ಕೀರ್ತನೆ, ಡಿ.ವಿ.ಗುಂಡಪ್ಪರ ತತ್ವಗಳನ್ನು ಮನನ ಮಾಡಿಕೊಂಡು ಅಭಿವ್ಯಕ್ತ ಪಡಿಸಬೇಕು. ಸಾಹಿತ್ಯ ವಿಚಾರವನ್ನು ಮನ ಮತ್ತು ಮನೆಗಳಿಗೆ ಕೊಂಡೊಯ್ಯವ ಕೆಲಸ ಆಗಬೇಕು.

ಮನೆಯಲ್ಲಿ ಕವಿಗಳ ಬರಹ ಕುರಿತು ಮಾತನಾಡುವ ಸಂಸ್ಕೃತಿ ಬೆಳೆಯಬೇಕು. ಗಂಡು ಬೆಟ್ಟಿದ ಚಿತ್ರದುರ್ಗ ವೀರ ಶೌರ್ಯವನ್ನು ದುರ್ಗಾಸ್ತಮಾನ ಕೃತಿಯಲ್ಲಿ ತರಾಸು ದಾಖಲೆ (Kuvempu) ಮಾಡಿದ್ದಾರೆ.ಆದರೆ, ಎಷ್ಟು ಮನೆಗಳ ಆ ಕೃತಿ ಕಾಣಲು ಸಾಧ್ಯ. ಇಂತಹ ನಿರ್ಲಕ್ಷ್ಯ ಸಂಬಂಧದಿಂದ ಸ್ಥಳೀಯ ವಿಚಾರ ಸಂಪತ್ತುನಿಂದ ದೂರವಾಗುತ್ತೇವೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕೆಲ ಭೀಕರ ಕೃತ್ಯಗಳಿಂದ ಕಲುಷಿತವಾಗುತ್ತಿರುವ ಸಮಾಜಕ್ಕೆ ಸಾಹಿತ್ಯ ಚಿಂತನೆ ಅಗತ್ಯ ಇದೆ. ಸರ್ವಜನಾಂಗದ ಶಾಂತಿಯ (Kuvempu) ತೋಟದಂತೆ ಸಮಾಜವನ್ನು ನೋಡಬೇಕಿದೆ ಎಂದು ಬಯಸಿದ ಮಹನೀಯರ ಚಿಂತನೆಯನ್ನು ಅನಾವರಣ ಮಾಡುವ ಜಾಗೃತಿ ಬೆಳೆಯಬೇಕಿದೆ ಎಂದು ಹೇಳಿದರು.

ಬುದ್ದ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಪ್ರಾದೇಶಿಕವಾದ ಜನಜೀವನದ ಸಾಹಿತ್ಯ ರಚನೆಯಲ್ಲಿ ತಳಕು ಮತ್ತು ಬೆಳೆಗೆರೆ ಮನೆತನಗಳ ಸೇವೆ ಅನನ್ಯವಾಗಿದೆ. (Kuvempu) ವಿಶ್ವಮಾನವನಾಗಿ ಹುಟ್ಟುವ ಮಗು, ಅಲ್ಪನಾಗುವ ಪರಿಸ್ಥಿತಿಗೆ ಸಮಾಜದ ವ್ಯವಸ್ಥೆ ಕಾರಣವಾಗುತ್ತಿದೆ. ಕುವೆಂಪು ಬರಹ ಸಮಾನತೆಯ ರೂಪಕವಾಗಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿದರು.

ಇದನ್ನೂ ಓದಿ: ವಿ ವಿ ಸಾಗರ ತುಂಬಲು ಹತ್ತು ದಿನ ಬಾಕಿ | ಎಷ್ಟಿದೆ ಇಂದಿನ ನೀರಿನ‌ಮಟ್ಟ | Vani Vilasa Sagara Dam

ಈ‌ ಸಂದರ್ಭದಲ್ಲಿ ಕೆಪಿಸಿಸಿ ಕರುಶಲ ವಿಭಾಗ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕವಯತ್ರಿ ಶಬ್ರಿನ ಮಹಮ್ಮದ್ ಅಲಿ, ಬಿ. ಫರಿದ್ ಖಾನ್, ಬನಶ್ರೀ ಮಂಜುಳಮ್ಮ, ಕಲಾವಿದ ಪಗಡಲಬಂಡೆ ನಾಗೇಂದ್ರಪ್ಪ,ಗೋಪನಹಳ್ಳಿ ಶಿವಣ್ಣ, ಬೆಳೆಗೆರೆ ಸುರೇಶ್,ಎಚ್. ಲಂಕಪ್ಪ,ಜಾಲಿ ಮಂಜು, ಆರ್. ದ್ಯಾಮರಾಜ್, ಒನಕೆ ಒಬವ್ವ ವೇದಿಕೆ ಅಧ್ಯಕ್ಷ ಮಾರುತಿ, ಎನ್. ಕುಶ, ದುರ್ಗಾವರ ತಿಪ್ಪೇಸ್ವಾಮಿ, ರವಿವರ್ಮ, ಮುತ್ತುರಾಜ್ ಮತ್ತಿತರರಿದ್ದರು.

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ

ದಿನ ಭವಿಷ್ಯ | 09-10-2025 | Dina Bhavishya

TAGGED:BirthdayChallakereChitradurga NewsKannada Newskannada suddiKuvempuN. RaghumurthyNammajana.comRetired Tehsildarಎನ್.ರಘುಮೂರ್ತಿಕನ್ನಡ ನ್ಯೂಸ್ಕನ್ನಡ ಸುದ್ದಿಕುವೆಂಪುಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜನ್ಮದಿನನಮ್ಮಜನ.ಕಾಂನಿವೃತ್ತ ತಹಸೀಲ್ದಾರ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ವಿ ವಿ ಸಾಗರ ತುಂಬಲು 1 ಅಡಿ ಬಾಕಿ | ಎಷ್ಟಿದೆ ಇಂದಿನ ನೀರಿನ‌ಮಟ್ಟ | Vani Vilasa Sagara Dam
Next Article “ಮದಕರಿ ಕಪ್” ದುರ್ಗದ ಜನರಿಗೆ ಕ್ರೀಡಾ ಸ್ಪೂರ್ತಿ ಹೆಚ್ಚಿಸಿದೆ: ಟಿ‌‌‌.ರಘುಮೂರ್ತಿ | Madakari Cup
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Today Adike Rate | ಇಂದಿನ‌ ಅಡಕೆ ರೇಟ್
ಅಡಿಕೆ ಧಾರಣೆ
Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ
ಇಂದಿನ ಸುದ್ದಿ
V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ
ಇಂದಿನ ಸುದ್ದಿ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?