Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Ground Report: ಕಮಲ ಪಡೆಗೆ ಬಂಡಾಯದ ಬಿಸಿ ಹೆಚ್ಚಿಸಿದ್ದ ಹೊಳಲ್ಕೆರೆಯಲ್ಲಿ ಹೇಗಿದೆ ವಾತಾವರಣ, ಕೈ ಪಡೆಯ ಕತೆ ಏನು?
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ರಾಜಕೀಯ > Ground Report: ಕಮಲ ಪಡೆಗೆ ಬಂಡಾಯದ ಬಿಸಿ ಹೆಚ್ಚಿಸಿದ್ದ ಹೊಳಲ್ಕೆರೆಯಲ್ಲಿ ಹೇಗಿದೆ ವಾತಾವರಣ, ಕೈ ಪಡೆಯ ಕತೆ ಏನು?
ರಾಜಕೀಯ

Ground Report: ಕಮಲ ಪಡೆಗೆ ಬಂಡಾಯದ ಬಿಸಿ ಹೆಚ್ಚಿಸಿದ್ದ ಹೊಳಲ್ಕೆರೆಯಲ್ಲಿ ಹೇಗಿದೆ ವಾತಾವರಣ, ಕೈ ಪಡೆಯ ಕತೆ ಏನು?

nammajana.com
Last updated: 14 April 2024 9:40 AM
By nammajana.com 5 Min Read
Share
chandrappa holalkere, govind Karjol, BN chandrappa, H anjaneya
SHARE
Telegram Group Join Now
WhatsApp Group Join Now

Chitradurga Lok Saba Election News 2024 | NammaJana.com | 14-04-2024

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಬಿಜೆಪಿ ಟಿಕೆಟ್ ಫೈಟ್ ಜೋರಾಗಿ ನಡೆದಿತ್ತು. ಒಂದು ರೀತಿ ರಾಜ್ಯದ ಎಲ್ಲಾ ರಾಜಕೀಯ ನಾಯಕರ ಗಮನ ಸೆಳೆಯುವಂತೆ ಮಾಡಿತ್ತು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಧ್ವನಿಯು ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ನಡೆದ ರಾಜಕೀಯ ವಿದ್ಯಮಾನಗಗಳು ಜಿಲ್ಲೆಯ ಜನರ ಗಮಸೆಳೆದಿದ್ದವು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಕ್ಷೇತ್ರ ಎಂದರೆ ತಪ್ಪಗಲಾರದು. ಇಲ್ಲಿನ ರಾಜಕೀಯ ಮತದಾರರ ಒಲವು ವಿಭಿನ್ನ ವಿಶೇಷವಾಗಿದೆ. ಇಲ್ಲಿ ಜಾತಿ ಲೆಕ್ಕಚಾರವು ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರವಾಗಿ ಹೊರ ಹೊಮ್ಮುವ ಮೂಲಕ ಜಿಲ್ಲೆಯ ಜನರ ಗಮನ ಸೆಳೆಯುತ್ತಿದೆ. ಹಾಲಿ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಪುತ್ರ ಎಂ.ಸಿ. ರಘುಚಂದನ್ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರಿಂದ ಹೊಳಲ್ಕೆರೆ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿತ್ತು.

chandrappa holalkere, govind Karjol, BN chandrappa, H anjaneya

ಅಪ್ಪ, ಮನಗನ ಬಂಡಾಯ; ಬಿ.ಎಸ್.ಯಡಿಯೂರಪ್ಪ ಸಂಧಾನ (Chitradurga Lok Sabha Election 2024)

ಬಿಜೆಪಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿ ರಘುಚಂದನ್ ದೈವ ಮೂಲೆಯಿಂದ ಪ್ರಚಾರ ಸಹ ಆರಂಭಿಸುವ ಮೂಲಕ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರು. ಟಿಕೆಟ್ ದೊರೆಯದ ಕಾರಣದಿಂದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘು ಚಂದನ್ ಸಾರಿದ ಬಂಡಾಯದ ಪರಿಣಾಮ ಪಕ್ಷದಲ್ಲಿ ನಡೆದ ಬೆಳವಣಿಗೆಗಳು ಬಿಜೆಪಿಗೆ ಮುಜುಗರ ಉಂಟು ಮಾಡಿದ್ದಂತು ಸುಳ್ಳಲ್ಲ.

ಚಂದ್ರಪ್ಪ ಕುಟುಂಬ ಟಿಕೆಟ್ ಕೊಡಿಸಲಿಲ್ಲ ಎಂದು ನೇರವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲೆ ನುಡಿದ ಮಾತುಗಳು ಬಿಜೆಪಿಯಲ್ಲಿ ಒಡಕು ಮೂಡಿ ಎರಡು ಬಣಗಳಾಗಿ ಒಬ್ಬರಿಗೊಬ್ಬರು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಪಕ್ಷೇತರ ಅಭ್ಯರ್ಥಿ ಆಗಿ ಸ್ವರ್ಧೆ ಮಾಡಿಯೇ ತೀರುತ್ತೇವೆ ಎಂದು ಘೋಷಿಸಿ ಸ್ವಾಭಿಮಾನಿ ಸಮಾವೇಶ ಸಹ ಮಾಡಿದರು ಈ ಎಲ್ಲಾವನ್ನು ಸೂಕ್ಷ್ಮವಾಗಿ ಗಮನಿಸಿಸ ಬಿಜೆಪಿ ರಾಜ್ಯ ನಾಯಕರು ಎಂಟ್ರಿಯಾಗಿ ಭೇಟಿ ಮಾಡಿದರು ಅಸಮಾಧಾನ ತಣಿಸಲು ಆಗಲಿಲ್ಲ.

ಇದರಿಂದ ಎಚ್ಚೆತ್ತುಕೊಂಡ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ನಿವಾಸಕ್ಕೆ ಬರಲು ಬುಲಾವ್ ನೀಡಿ ಮಾತುಕತೆ ಮೂಲಕ ಬಿಜೆಪಿಯಲ್ಲಿನ ವಾತಾವರಣ ವನ್ನೂ ತಿಳಿಗೊಳಿಸಿದ ನಂತರ ಲೋಕಾ ಚುನಾವಣಾ ಪ್ರಚಾರ ಭರ್ಜರಿಯಾಗಿ ಆರಂಭಿಸಿದ್ದು ಮುನಿಸು ಮರೆತು ಎರಡೂ ಪಕ್ಷಗಳು ಅಖಾಡಕ್ಕೆ ಧುಮುಕ್ಕಿದ್ದಾರೆ.

Read Also: ದೇಶದ ಸುರಕ್ಷತೆಗಾಗಿ ಮತ್ತೊಮ್ಮೆ ಬಿಜೆಪಿ ಅಗತ್ಯ: ಎಸ್.ಕೆ.ಬಸವರಾಜನ್

ಹೊಳಲ್ಕೆರೆಯಲ್ಲಿ ತಣಿಯದ ಮುನಿಸು, ಕಮಲ ಪಡೆಗೆ ಮುಳುವಾಗುವುದೇ?(Chitradurga Lok Sabha Election 2024)

ಬಿಜೆಪಿ ಪಕ್ಷದ ರಾಜ್ಯ ಮುಖಂಡರು ಶಾಸಕ ಚಂದ್ರಪ್ಪ, ರಘುಚಂದನ್‍ರನ್ನು ಖುದ್ದು ಕರೆಸಿ ಮಾತುಕತೆ ನಡೆಸಿದ ನಂತರವೂ ಸಹ ಒಳ ಒಳಗೆ ಸ್ಥಳೀಯವಾಗಿ ಗುಂಪುಗಾರಿಕೆ ರಾಜಕರಾಣ ನಿಂತಿಲ್ಲ. ಈಗ ಹೊಳಲ್ಕೆರೆ ಯಲ್ಲಿ ಚಂದ್ರಪ್ಪ ನೇತೃತ್ವದಲ್ಲಿ ಒಂದು ಗುಂಪು, ಬಿಜೆಪಿ, ಬಿಎಸ್‍ವೈ ನಿಷ್ಟರ ಮತ್ತೊಂದು ಗುಂಪು ಇದ್ದು ಎರಡು ಪ್ರತ್ಯೇಕ ಸಭೆಗಳನ್ನು ಸಹ ಹೊಳಲ್ಕೆರೆಯಲ್ಲಿ ಮಾಡಿದ್ದಾರೆ. ಆದರೆ ಶುಕ್ರವಾರ ವಿಜಯೇಂದ್ರ ಹೊಳಲ್ಕೆರೆ ಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ.ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದರು ಸಹ ಈ ಒಗ್ಗಟ್ಟು ಮುಂದುವರೆಯುತ್ತದೆಯೇ ಎಂಬುದು ಕಾದು ನೋಡಬೇಕಿದೆ.

ಅಹಿಂದ ಮತಗಳ ಸಂಗ್ರಹಕ್ಕೆ ಕೈ ಪಡೆ ಹರಸಾಹಸ (Chitradurga Lok Sabha Election 2024)

ಬಿಜೆಪಿ ಪಕ್ಷದ ಇಂತಹ ಬೆಳವಣಿಗೆಗಳಿಗೆ ಭಿನ್ನವಾಗಿ ಹೊಳಲ್ಕೆರೆ ಕಾಂಗ್ರೆಸ್‍ನಲ್ಲಿ ಉತ್ಸಾಹದ ವಾತಾವರಣ ಕಾಣುತ್ತಿದ್ದು ಕಳೆದ ಐದು ದಿನಗಳಿಂದ ಮಾಜಿ ಸಚಿವ ಹೆಚ್.ಆಂಜನೇಯರ ನೇತೃತ್ವದಲ್ಲಿ ನಿರಂತರವಾಗಿ ಹಳ್ಳಿಗಳಿಗೆ ತೆರಳಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ಕೆ ವೇಗ ನೀಡಿದ್ದು ಭರ್ಜರಿ ಕ್ಯಾಂಪ್ಯನ್ ಆರಂಭಿಸಿದ್ದಾರೆ. ಈಗಾಗಲೇ ತಾಳ್ಯ, ಎಚ್.ಡಿ. ಪುರ, ಚಿಕ್ಕಜಾಜೂರು, ಭರಮಸಾಗರ ಹೋಬಳಿಗಳಲ್ಲಿ ಪ್ರಚಾರ ನಡೆಸಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಮಾದಿಗ ಸಮುದಾಯದ ಮತಗಳು ಸೇರಿದಂತೆ ಕಾಂಗ್ರೆಸ್‍ಗೆ ಶಕ್ತಿ ತುಂಬುವಂತಹ ಅಹಿಂದ ಮತಗಳನ್ನು ಹಿಡಿದಿಟ್ಟುಕೊಳ್ಳುವುದು ಆಂಜನೇಯ ಹರಸಾಹಸ ಪಡುತ್ತಿದ್ದು ದೊಡ್ಡ ಸವಾಲಾಗಿದೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದವರಿಗಿಂತ ಬಿಜೆಪಿಗೆ ಈ ತೊಂದರೆ ಇಲ್ಲ. ಬಿಜೆಪಿಯ ಭದ್ರ ಕೋಟೆ ಎಂಬ ಖ್ಯಾತಿ ಮೂಲಕ ಬಿಂಬಿತವಾಗಿರುವ ಹೊಳಲ್ಕೆರೆಯಲ್ಲಿ ಪ್ರಬಲ ಲಿಂಗಾಯಿತ ಸಮುದಾಯದ ಮತ ಬ್ಯಾಂಕ್ ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಕಳೆದ ಮೂರು ಲೋಕಸಭೆ ಚುನಾವಣೆಯಲ್ಲೂ ಒಂದು ಚುನಾವಣೆಗಿಂತ ಮತ್ತೊಂದು ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಲೀಡ್ ಪಡೆಯುತ್ತಲೇ ಬಂದಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಮುಂದೆ ಬಿಜೆಪಿ ಪ್ರಾಬಲ್ಯ ಕುಗ್ಗುತ್ತಾ? ಸಂಪ್ರಾದಾಯಕ ಮತ ಪಡೆದು ಓಟ ಮುಂದುವರೆಸುತ್ತಾ? ಎಂಬುದರ ಜೊತೆಗೆ ಈ ಬಾರಿಯಾದರೂ ಕಾಂಗ್ರೆಸ್ ತನ್ನ ಶಕ್ತಿ ವೃದ್ಧಿಸಿಕೊಂಡು ಪ್ರಾಬಲ್ಯ ಸಾಧಿಸಲಿದೆಯಾ? ಎಂಬುದು ಚುನಾವಣೆ ಮುಗಿದು ಫಲಿತಾಂಶದ ನಂತರ ಎಲ್ಲಾ ಲೆಕ್ಕಚಾರಗಳು ನಡೆಯುತ್ತಿರುತ್ತವೆ.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ 2013 ರಲ್ಲಿ ಕಾಂಗ್ರೆಸ್‍ನ ಹೆಚ್. ಆಂಜನೇಯ ತರುವಾಯ 2018 , 2023 ನಿರಂತರವಾಗಿ ಬಿಜೆಪಿಯ ಎಂ. ಚಂದ್ರಪ್ಪ ಗೆಲುವಿಗೆ ನಗೆ ಬೀರುತ್ತಾ ಬಂದಿದ್ದಾರೆ. 2018 ರಲ್ಲಿ ಶಾಸಕ ಚಂದ್ರಪ್ಪ 38,940 ಮತಗಳ ಲೀಡ್ ಪಡೆದಿದ್ದರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 5,706 ಮತಗಳ ಅಲ್ಪ ಲೀಡ್ ಗೆಲುವು ಸಾಧಿಸಿದ್ದರು.ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಆಗಿರುವ ಲೀಡ್ ವ್ಯತ್ಯಾಸ ಮುಂದುವರೆದು ಕಾಂಗ್ರೆಸ್ ಗೆ ವರವಾಗಲಿದೆಯಾ ಅಥವಾ ಹಳೆ ಲೀಡ್ ನೀಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮರಳಿ ಪ್ರಾಬಲ್ಯ ಸಾಧಿಸುತ್ತಾ ಎಂಬುದು ಕಾದು ನೋಡಬೇಕಿದೆ..

ಹೊಳಲ್ಕೆರೆ ಕ್ಷೇತ್ರದ ಅಂಕಿ, ಅಂಶ

ಎರಡು ಲೋಕಸಭಾ ಚುನಾವಣೆ ಲೀಡ್ ಬಿಜೆಪಿ ಲೀಡ್

  • 2014ರ ಲೋಕಸ‘ ಚುನಾವಣೆ ಯಲ್ಲಿ 13,659 ಮತಗಳ ಲೀಡ್
  • 2019 ರ ಚುನಾವಣೆಯಲ್ಲಿ 38,082 ಮತಗಳ ಲೀಡ್

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 2023 ರ ಫಲಿತಾಂಶ

  • ಎಂ.ಚಂದ್ರಪ್ಪ ಬಿಜೆಪಿ 87,987
  • ಎಚ್.ಆಂಜನೇಯ ಕಾಂಗ್ರೆಸ್ 82,281

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 2019 ರ ಫಲಿತಾಂಶ

  • ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ 59,398
  • ಎ.ನಾರಾಯಣಸ್ವಾಮಿ ಬಿಜೆಪಿ 97,480

ಮೈನಸ್ ಪ್ಲಸ್

  • ಮೋದಿ ಅಲೆ ಮತ್ತು ಲಿಂಗಾಯತ ಸಮುದಾಯ ಮತಗಳು ಬಿಜೆಪಿಗೆ ಪ್ಲಸ್
  • ಚಂದ್ರಪ್ಪ ಮತ್ತು ಪುತ್ರರ ಸಂಧಾನ ಪ್ಲಸ್
  • ದಲಿತ ಮತ್ತು ಅಹಿಂದ, ಹಿಂದುಳಿತ ಮತಗಳು ಕಾಂಗ್ರೆಸ್ ಗೆ ಪ್ಲಸ್
  • ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ಗೆ ಪ್ಲಸ್
  • ಮಾಜಿ ಸಚಿವ ಹೆಚ್.ಆಂಜನೇಯ ಹೊಳಲ್ಕೆರೆ ಕ್ಷೇತ್ರಕ್ಕೆ ಕಡಿಮೆ ಗಮನ ಹರಿಸುತ್ತಿರುವುದು ಮೈನಸ್
  • ಬಿಜೆಪಿಯ ಬಣ ರಾಜಕೀಯ ಬಿಜೆಪಿಗೆ ಮೈನಸ್

 English Summary: Chitradurga Lok Sabha Election 2024, Lok Sabha Election 2024, Lokfight 2024, Holalkere Constituency, BN Chandrappa, Govinda Karjola, BJP, Congress, Nammajana.com, Chitradurga News, Kannada News, Chitradurga Political News,

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

TAGGED:BJPBN ChandrappaChitradurga Lok Sabha Election 2024Chitradurga NewsChitradurga Political NewsCongressGovinda KarjolaHolalkere ConstituencyKannada NewsLok Sabha Election 2024Lokfight 2024Nammajana.comಕನ್ನಡ ಸುದ್ದಿಕಾಂಗ್ರೆಸ್ಗೋವಿಂದ ಕಾರಜೋಳಚಿತ್ರದುರ್ಗ ರಾಜಕೀಯ ಸುದ್ದಿಚಿತ್ರದುರ್ಗ ಲೋಕಸಭಾ ಚುನಾವಣೆ 2024ಚಿತ್ರದುರ್ಗ ಸುದ್ದಿನಮ್ಮಜನ.ಕಾಂಬಿ.ಎನ್.ಚಂದ್ರಪ್ಪಬಿಜೆಪಿಲೋಕಫೈಟ್ 2024ಲೋಕಸಭಾ ಚುನಾವಣೆ 2024ಹೊಳಲ್ಕೆರೆ ಕ್ಷೇತ್ರ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Ugadi Sanehalli Sri Panditharadhya Swamij ಮಾನವ ಪಾಠ ಕಲಿತರೆ ಮಾತ್ರ ಹಬ್ಬ ಹುಣ್ಣಿಮೆಗಳಿಗೆ ವಿಶೇಷ ಮೆರಗು: ಪಂಡಿತಾರಾಧ್ಯ ಶ್ರೀ
Next Article former-minister-tippeswamys-son-kt-kumaraswamy-joins-bjp ಮಾಜಿ ಸಚಿವ ತಿಪ್ಪೇಸ್ವಾಮಿ ಪುತ್ರ ಕೆ.ಟಿ.ಕುಮಾರಸ್ವಾಮಿ ಬಿಜೆಪಿ ಸೇರ್ಪಡೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ
ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?
ವಿಶೇಷ ಸುದ್ದಿ
FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?