
Chitradurga news|nammajana.com|11-7-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಹಾಗೂ ಕೋಲಾರ, ಹಾಸನ ಜಿಲ್ಲೆ ಸೇರಿ ರಾಜ್ಯದ 50 ಕ್ಕೂ ಹೆಚ್ಚು (Lokayukta attack Chitradurga) ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಕೋಟೆ ನಾಡು ಚಿತ್ರದುರ್ಗದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಆಗಿದೆ.(Lokayukta attack Chitradurga) ಬಿಬಿಎಂಪಿ ಸೂಪರಿಂಡೆಂಟ್ ಇಂಜಿನಿಯರ್ ಜಗದೀಶ್ ಮನೆ ಮೇಲೆ ರೇಡ್ ಆಗಿದೆ. ಜಗದೀಶ್ ಅವರು ಇತೀಚಿಗೆ ಬಿಬಿಎಂಪಿ ಯಿಂದ ಭದ್ರಾ ಮೇಲ್ದಂಡೆಗೆ ಜಗದೀಶ್ ಅನ್ನುವ ಅಧಿಕಾರಿ ವರ್ಗಾವಣೆಯಾಗಿದ್ದರು. ಜಗದೀಶ್ ಅವರ ಚಿತ್ರದುರ್ಗದ ಮನೆ ಸೇರಿ ದಾವಣಗೆರೆಯ 4 ಕಡೆ ಲೋಕಾಯುಕ್ತ ರೇಡ್ ಆಗಿದೆ.

ಇದನ್ನೂ ಓದಿ: ಅಡಿಕೆ ಗಿಡಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು | 300 ಅಡಿಕೆ ಗಿಡ ಸುಟ್ಟು ಲಕ್ಷಾಂತರ ನಷ್ಟ | 300 nut plantations on fire
ಪಿಡಬ್ಲೂಡಿ (PWD) ನಿವೃತ್ತ ಸುಪರಿಂಡೆಂಟ್ ಇಂಜಿನಿಯರ್ ರವೀಂದ್ರಪ್ಪ ಮನೆ ಮೇಲೆ ರೇಡ್ ಆಗಿದೆ. ಹಿರಿಯೂರು ತಾಲ್ಲೂಕಿನ ಸೂಗೂರು ಫಾರ್ಮ್ ಹೌಸ್, ಬೆಂಗಳೂರು (Lokayukta attack Chitradurga) ಅಪಾರ್ಟ್ ಮೆಂಟ್, ಚಿತ್ರದುರ್ಗದ ವಿನಾಯಕ ಬಡಾವಣೆಯ ಮನೆ, ಐಮಂಗಲ ಬಳಿಯ ಬಾಟಲಿಂಗ್ ಫ್ಯಾಕ್ಟರಿ ಮೇಲೆ ದಾಳಿಯಾಗಿದ್ದು, ಆದಾಯ ಮೀರಿದ ಆಸ್ತಿಗಳಿಕೆ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಂ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.