Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ ವೀರ ದೊರೆ ಮದಕರಿ ನಾಯಕ: ಎನ್.ರಘುಮೂರ್ತಿ | Madakari Nayak Jayanti
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ ವೀರ ದೊರೆ ಮದಕರಿ ನಾಯಕ: ಎನ್.ರಘುಮೂರ್ತಿ | Madakari Nayak Jayanti
ಇಂದಿನ ಸುದ್ದಿ

ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ ವೀರ ದೊರೆ ಮದಕರಿ ನಾಯಕ: ಎನ್.ರಘುಮೂರ್ತಿ | Madakari Nayak Jayanti

Editor Nammajana
Last updated: 13 October 2024 20:11
By Editor Nammajana 3 Min Read
Share
SHARE

Chitradurga news|nammajana.com|14-10-2024

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗದ ಮಣ್ಣಿಗೆ ಸಾಂಸ್ಕೃತಿಕ ಮತ್ತು ಸ್ವಾಭಿಮಾನದ ಸ್ಪರ್ಶವನ್ನು ಕೊಟ್ಟಂತವರು (Madakari Nayak Jayanti) ರಾಜ ವೀರ ಮದಕರಿ ನಾಯಕರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಏನ್. ರಘುಮೂರ್ತಿ ಹೇಳಿದರು

ಪಟ್ಟಣದ ಭಾನುವಾರ ನಡೆದ ಹಟ್ಟಿ ಮಲ್ಲಪ್ಪ ನಾಯಕ ಸಂಘ ದಲ್ಲಿ ಏರ್ಪಡಿಸಿದಂತಹ ರಾಜ ವೀರ ಮದಕರಿ ನಾಯಕರ ಜಯಂತೋತ್ಸವದ ಪ್ರಯುಕ್ತ ಮುಖ್ಯ ಅತಿಥಿಗಳಾಗಿ (Madakari Nayak Jayanti) ಮಾತನಾಡಿದ ಅವರು ಹೈದರ್ ಅಲಿಯ ಸೇನೆಯನ್ನು ಬಗ್ಗು ಬಡಿದು ಚಿತ್ರದುರ್ಗ ಕೋಟೆಯನ್ನುರಕ್ಷಿಸಿದ ವೀರ ದೊರೆ ಮದಕರಿ ನಾಯಕ ಎಂದರು.

ಜಗತ್ತು ಕಂಡಂತಹ ಅಪ್ರತಿಮ ಹೋರಾಟಗಾರ ಧೈರ್ಯ ಸಾಹಸ ಸ್ವಾಭಿಮಾನ ಮತ್ತು ಪರಧರ್ಮ ಸಹಿಷ್ಣುತೆಗೆ ಹೆಸರಾದಂತವರು ರಾಜ ವೀರ ಮದಕರಿ ನಾಯಕರು, ರಾಜಕೀಯ ಬಾಂಧವ್ಯ, ಹೋರಾಟ ದೂರ ದೃಷ್ಟಿ, ನಿರ್ಭಿತ ನಡೆ, ಮತ್ತು ಸ್ವಾಭಿಮಾನಕ್ಕೆ ಇನ್ನೊಂದು ಹೆಸರು ಮದಕರಿ (Madakari Nayak Jayanti) ನಾಯಕರು, ಮರಾಠದ ಪೇಶ್ವೆಗಳು ಮತ್ತು ಮೈಸೂರು ಸಂಸ್ಥಾನದ ಬಾಂಧವ್ಯವನ್ನು ಚಾಣಾಕ್ಷತನದಿಂದ ಪಡೆದು ಹರಪನಹಳ್ಳಿ ರಾಯದುರ್ಗ ಸವಣೂರು ಮತ್ತು ಬಿದನೂರು ಸಂಸ್ಥಾನ ದ ಅರಸರುಗಳಿಗೆ ಸಿಂಹ ಸ್ವಪ್ನ ವಾಗಿದ್ದರು,ಕೊನೆಗೆ ಮದಕರಿ ನಾಯಕರಿಂದ ಸಹಾಯ ಪಡೆದ ಹೈದರಾಲಿಗೆ ಚಿತ್ರದುರ್ಗದ ಮೇಲೆ ಕಣ್ಣು ಬಿದ್ದು ನಾಲ್ಕು ಸಾರಿ ದಂಡೆತ್ತಿ ಬಂದರೂ ಕೂಡ ಮದಕರಿ ನಾಯಕರ ಸೈನ್ಯ ಹೈದರಾಲಿ ಸೈನ್ಯವನ್ನು ಧೂಳಿಪಟ ಮಾಡಿತು.

ನೇರವಾಗಿ ಚಿತ್ರದುರ್ಗದ ಪಾಳ್ಳೇಗಾರರ ಸೈನ್ಯವನ್ನು ಎದುರಿಸಲು ಸಾಧ್ಯವಿಲ್ಲ ವೆಂಬ ಅಂಶವನ್ನು ಅರಿತ ಹೈದರಾಲಿ, ಮದಕರಿ ಸಂಸ್ಥಾನದಲ್ಲಿದ್ದಂತ ಕಳ್ಳಿ ನರಸಪ್ಪ ಮತ್ತು ಇತರೆಯವರ ಸ್ವಾರ್ಥ ಮತ್ತು ಕುಚೋದ್ಯದಿಂದ ಯುದ್ಧ ಸಾಮಗ್ರಿಗಳನ್ನು ಕುತಂತ್ರದಿಂದ ಮುಕ್ಕು ಮಾಡಿ ಇಡೀ ಸೈನ್ಯವನ್ನು ನಿತ್ರಾಣ ಗೊಳಿಸಿ ಕೊನೆಗೆ (Madakari Nayak Jayanti) ಯುದ್ಧದಲ್ಲಿ ಸೋಲಬೇಕಾಯಿತು.

ಇಂತಹ ಪರಾಕ್ರಮಿಯದ ದೇಶಭಕ್ತನಾದ ಮತ್ತು ಸ್ವಾಭಿಮಾನಿಯಾದ ಮದಕರಿ ನಾಯಕ ಆದರ್ಶ ಮತ್ತು ಸ್ವಾಭಿಮಾನವನ್ನು ಇವತ್ತಿನ ಪೀಳಿಗೆ ಮೈಗೂಡಿಸಿ ಕೊಳ್ಳಬೇಕಾಗಿದೆ. ಇವತ್ತಿನ ಪ್ರಸ್ತುತದಲ್ಲಿ ಕತ್ತಿಯಿಂದ ಜಗತ್ತನ್ನಾಳುವ ಕಾಲ ಅಂತ್ಯವಾಗಿದ್ದು ಪೆನ್ನಿನಿಂದ ಜಗತ್ತನ್ನು ಅರಿಯುವ ಮತ್ತು ಆಳುವ ಕಾಲ ಬಂದಿದ್ದು ಈ ಜನಾಂಗದ ಪ್ರತಿ ಕುಟುಂಬದಲ್ಲಿ ಸಂಸ್ಕಾರ ಯುತವಾದಂತ ಮತ್ತು ಗುಣಮಟ್ಟದ ಶಿಕ್ಷಣವನ್ನು ತಪ್ಪದೇ ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ನೀಡುವ ಅಗತ್ಯವಿದ್ದು ಈ ದಿಸೆಯಲ್ಲಿ ಜನಾಂಗದ ಎಲ್ಲರೂ ಕೂಡ ಇಂದು ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.

ಹಟ್ಟಿ ಮಲ್ಲಪ್ಪ ನಾಯಕ ಸಂಘದ ಅಧ್ಯಕ್ಷ ಪಟೇಲ್ ತಿಪ್ಪೇಸ್ವಾಮಿ ಮಾತನಾಡಿ ಇದು ಜಿಲ್ಲೆಯ ಈ ಜನಾಂಗದವರು ಅತ್ಯಂತ ಪರಾಕ್ರಮಿಗಳು ಮತ್ತು ಸ್ವಾಭಿಮಾನಕ್ಕೆ ಹೆಸರಾದವರು ಹೆಚ್ಚು ಶೈಕ್ಷಣಿಕ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆ ಮಾಡಬೇಕಿದೆ ನಾಯಕ ಜನಾಂಗವು ಹೇರಳವಾಗಿ ಜಾಸ್ತಿ ಇರುವಂತಹ ಈ ಜಿಲ್ಲೆಯಿಂದಲೇ ಸಾಮಾಜಿಕ ಬದಲಾವಣೆಯ ಚಿಂತನೆಯಾಗಬೇಕಿದೆ ಮದಕರಿ ನಾಯಕರು ಧೈರ್ಯ ಸಾಹಸಕಷ್ಟೇ ಅಲ್ಲ ಸಾಮರಸ್ಯಕ್ಕೂ  ಹೆಸರುವಾಸಿಯಾದವರು.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇವರಿಗೆದ್ದಂತಹ ಹೌದಾರಿಯ ನೈಪುಣ್ಯತೆ ಮತ್ತು ಸ್ವಾಭಿಮಾನವನ್ನು ರೂಡಿಸಿಕೊಳ್ಳಬೇಕಿದೆ ಎಂದರು.

ಸರ್ಕಲ್ ಇನ್ಸ್ಪೆಕ್ಟರ್ ಉಮೇಶ್ ನಾಯಕ್ ಮಾತನಾಡಿ ವಾಲ್ಮೀಕಿ ಸಮಾಜ ಉತ್ತಮ ಶಿಕ್ಷಣ ಪಡೆಯಬೇಕು. ದುಶ್ಚಟಗಳನ್ನು ಬಿಡಿ ಓದಿನ ಕಡೆಗೆ ಹೆಚ್ಚು ಗಮನ ಹರಿಸಿ, ಮದಕರಿ ನಾಯಕ ಕೊಡುಗೆ ಬಹಳ ದೊಡ್ಡದು ಸ್ವಾಭಿಮಾನಿ ಸಹ ಆಗಿದ್ದರು.

ಡಾ. ಬಿ.ಆರ್. ಅಂಬೇಡ್ಕರ್ ಬಾಲ್ಯದಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿ ಇಡೀ ವಿಶ್ವಕ್ಕೆ ಮೆಚ್ಚಿಸುವಂತಹ ಸಂವಿಧಾನವನ್ನು ಬರೆದಿದ್ದಾರೆ ಎಂದು ಅವರು ಮಾತನಾಡಿದರು.

ಇದನ್ನೂ ಓದಿ: ಶಾಲೆ, ದೇವಸ್ಥಾನದ ಬಳಿಯ ಬಾರ್ : ಗ್ರಾಮಸ್ಥರಿಂದ ಬಾರ್‌ಮುಚ್ಚುವಂತೆ ಪ್ರತಿಭಟನೆ | Protest

ಈ ಸಂದರ್ಭದಲ್ಲಿ ತಿಪ್ಪೇಸ್ವಾಮಿ, ಹನುಮಣ್ಣ, ಚನ್ನಬಸನಹಟ್ಟಿ ನಾಗರಾಜ್, ಟಿ ಬಸಣ್ಣ, ಮಲ್ಲೂರಹಳ್ಳಿ ತಿಪ್ಪೇಸ್ವಾಮಿ, ಕೇಟಿ ನಾಗರಾಜ್, ಮಲ್ಲೂರಹಳ್ಳಿ ಕಾಟಯ್ಯ, ಕಾಟಂ ಲಿಂಗಯ್ಯ, (Madakari Nayak Jayanti) ಬೋರಸ್ವಾಮಿ, ಬೋಸ ದೇವರ ಹಟ್ಟಿ ಪ್ರಕಾಶ್, ಗಜ್ಜುಗನಹಳ್ಳಿ ಬೋರಯ್ಯ, ಪಿ ಓಬಯ್ಯ, ಹಟ್ಟಿ ಮಲ್ಲಪ್ಪ ನಾಯಕ ಸಂಘದ ಸದಸ್ಯರು ವಾಲ್ಮೀಕಿ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:ChallakereChitradurgaChitradurga NewsHatti Mallappanayaka SanghaKannada Newskannada suddiMadakari NayakMadakari Nayak JayantiN. RaghumurthyNada DoreNammajana.comNayakanahattiRajaಎನ್.ರಘುಮೂರ್ತಿಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನಾಡ ದೊರೆನಾಯಕನಹಟ್ಟಿಮದಕರಿ ನಾಯಕಮದಕರಿ‌ನಾಯಕ ಜಯಂತಿ​​ರಾಜಹಟ್ಟಿ ಮಲ್ಲಪ್ಪನಾಯಕ ಸಂಘ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಶಾಲೆ, ದೇವಸ್ಥಾನದ ಬಳಿಯ ಬಾರ್ : ಗ್ರಾಮಸ್ಥರಿಂದ ಬಾರ್‌ಮುಚ್ಚುವಂತೆ ಪ್ರತಿಭಟನೆ | Protest
Next Article ದಿನ ಭವಿಷ್ಯ | ಯಾವ್ಯವ ರಾಶಿಗೆ ಪ್ರೇಮಿಗಳಿಗೆ ಅಡ್ಡಿ, ಆರ್ಥಿಕ ಸಂಕಷ್ಟ, ದಾಂಪತ್ಯದಲ್ಲಿ ವಿರಸ? | Kannada Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?