Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: CM Siddaramaiah ಗೆ ಖುದ್ದು ಕೃತಜ್ಞತೆ ಸಲ್ಲಿಸಿದ ಮಾದಿಗರು : ಅಲೆಮಾರಿಗಳನ್ನು ಕೈಬಿಡದಂತೆ ಆಂಜನೇಯ ಆಗ್ರಹ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > CM Siddaramaiah ಗೆ ಖುದ್ದು ಕೃತಜ್ಞತೆ ಸಲ್ಲಿಸಿದ ಮಾದಿಗರು : ಅಲೆಮಾರಿಗಳನ್ನು ಕೈಬಿಡದಂತೆ ಆಂಜನೇಯ ಆಗ್ರಹ
Blogಇಂದಿನ ಸುದ್ದಿ

CM Siddaramaiah ಗೆ ಖುದ್ದು ಕೃತಜ್ಞತೆ ಸಲ್ಲಿಸಿದ ಮಾದಿಗರು : ಅಲೆಮಾರಿಗಳನ್ನು ಕೈಬಿಡದಂತೆ ಆಂಜನೇಯ ಆಗ್ರಹ

Nammajana Sub Editor
Last updated: 20 August 2025 9:37 PM
By Nammajana Sub Editor 4 Min Read
Share
SHARE

Chitradurga News | Nammajana.com | 20-08-2025

ನಮ್ಮಜನ ನ್ಯೂಸ್ ಕಾಂ, ಬೆಂಗಳೂರು: ಒಳಮೀಸಲಾತಿ(CM Siddaramaiah) ಅಧಿಕೃತವಾಗಿ ಬುಧವಾರ ಜಾರಿಗೊಳ್ಳುತ್ತಿದ್ದಂತೆ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸ ಕಾವೇರಿ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾದಿಗ ಸಮುದಾಯದವರು, ಸಿದ್ದರಾಮಯ್ಯ ಬೃಹತ್ ಭಾವಚಿತ್ರಕ್ಕೆ ಹಾಲಿನಾಭಿಷೇಕದ ಜೊತೆಗೆ ಹೂವಿನ ಮಳೆ ಸುರಿಸಿದರು.

ಇದನ್ನೂ ಓದಿ: ಚಿತ್ರದುರ್ಗ Varshita murder | ವರ್ಷಿತಾಳ ಕೊಲೆ ಕೇಸ್, ಸಚಿವ ಡಿ.ಸುಧಾಕರ್ ಹೇಳಿದ್ದೇನು | 5 ಲಕ್ಷ ಪರಿಹಾರ ಘೋಷಣೆ

ಬಳಿಕ ಸಿಎಂ ನಿವಾಸ ಪ್ರವೇಶಿಸಿದ ಆಂಜನೇಯ ಇತರ ಪ್ರಮುಖ ಮುಖಂಡರು, ಬೃಹತ್ ಹೂವಿನ ಹಾರದೊಂದಿಗೆ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಎಚ್.ಆಂಜನೇಯ, ಒಳಮೀಸಲಾತಿ ಕಲ್ಪನೆ ಜನಕರಾದ ಮಾದಿಗ ಸಮುದಾಯದವರು 35 ವರ್ಷ ನಿರಂತರ ಹೋರಾಟ ನಡೆಸಿದ್ದು, ಸುಪ್ರೀಂ ಕೋರ್ಟ್ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಬಲಾಢ್ಯ ಸಮುದಾಯಗಳ ಮಧ್ಯೆ ಸರ್ಕಾರಿ ಸೌಲಭ್ಯ, ಉನ್ನತ ಉದ್ಯೋಗ-ಶಿಕ್ಷಣ ಪಡೆಯುವುದು ಮಾದಿಗರು ಹಾಗೂ ಸಂಬಂಧಿತ ಜಾತಿಗಳಿಗೆ ಗಗನಕುಸುಮವಾಗಿತ್ತು. ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳಾಗಿ ಮಾದಿಗ ಸಮುದಾಯ ನೌಕರಿ ಪಡೆಯುವದಕ್ಕಷ್ಟೇ ಮೀಸಲಾತಿ ಸೀಮಿತವಾಗಿತ್ತು. ಈ ಸತ್ಯವನ್ನು ಸರ್ಕಾರಗಳು ಹಾಗೂ ನ್ಯಾಯಾಂಗಕ್ಕೆ ಮನದಟ್ಟು ಮಾಡಿಕೊಡಲಾಗಿತ್ತು ಎಂದರು.

ಇದನ್ನೂ ಓದಿ: ಒಳ‌ ಮೀಸಲಾತಿಗೆ ಸರ್ಕಾರ ಅಧಿಕೃತ ಮುದ್ರೆ | ಸಿಎಂ ವಿಧಾನ ಸಭೆಯಲ್ಲಿ ಏನೆಲ್ಲ‌ ಹೇಳಿದರು?

ಪರಿಣಾಮ ಆಗಸ್ಟ್ 1, 2024ರಂದು(CM Siddaramaiah) ಒಳಮೀಸಲಾತಿ ಜಾರಿ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡುತ್ತಿದ್ದಂತೆ ತಾವು ಹೆಚ್ಚು ಕಾಳಜಿ ವಹಿಸಿ, ವೈಜ್ಞಾನಿಕವಾಗಿ ಮೀಸಲಾತಿ ಹಂಚಿಕೆಗೆ ಗಟ್ಟಿ ನಿರ್ಧಾರ ಕೈಗೊಂಡಿದ್ದರ ಫಲ ಇಂದು ಮಾದಿಗರು ಸಂಭ್ರಮಿಸುವಂತಾಗಿದೆ ಎಂದರು.

ಓದಿ ಉನ್ನತ ಸ್ಥಾನಕ್ಕೆ ಏರಿ

ಒಳಮೀಸಲಾತಿಯಲ್ಲಿ ಎ, ಬಿ, ಸಿ ಗುಂಪಿನಲ್ಲಿ ಅತ್ಯಂತ ಹಿಂದುಳಿದ ಗುಂಪಿನಲ್ಲಿಯೇ ಮಾದಿಗ ಸಮುದಾಯವನ್ನು ಸೇರಿಸಲಾಗಿದೆ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಒಳಮೀಸಲಾತಿ ಜಾರಿಯ ಆಶಯ ನೀವುಗಳು ಅರಿತುಕೊಳ್ಳಬೇಕು. ಮುಖ್ಯವಾಗಿ ನಿಮ್ಮ ಮಕ್ಕಳು, ಸಮುದಾಯದವರನ್ನು ಶೈಕ್ಷಣಿಕವಾಗಿ ಉನ್ನತಕ್ಕೆ ಕೊಂಡೊಯ್ಯಬೇಕು. ಮೇಲ್ವರ್ಗದ ರೀತಿ ಪರಿಶಿಷ್ಟ ಜಾತಿಯವರು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಮುಖ್ಯವಾಗಿ ನಿಮ್ಮ ಸಮುದಾಯದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಹೊಣೆಗಾರಿಕೆ ನಿಮ್ಮಗಳ ಮೇಲಿದೆ. ನೀವುಗಳು ಉನ್ನತ ಸ್ಥಾನಕ್ಕೇರಿದರೆ ಮಾತ್ರ ಒಳಮೀಸಲಾತಿ ಆಶಯ, ನನ್ನ ಕಾರ್ಯಕ್ಕೆ ಫಲ ಸಿಗಲಿದೆ ಎಂದು ತಿಳಿಸಿದರು.

ನ್ಯಾ.ನಾಗಮೋಹನ್ ದಾಸ್ ಆಯೋಗ ವರದಿ ಸಲ್ಲಿಸಿದ ಬಳಿಕ ಒಳಮೀಸಲಾತಿ ಜಾರಿ ಆಗದಂತೆ ಅನೇಕ ಶಕ್ತಿಗಳು ಅಡ್ಡಗಾಲು ಹಾಕಿದರು. ಆದರೆ, ತಾವು ಯಾವುದಕ್ಕೂ ಜಗ್ಗದೆ ನುಡಿದಂತೆ ನಡೆದಿದ್ದೀರಿ. ಅದರಲ್ಲೂ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ನೀಡಿಯೇ ಸಿದ್ದ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದ ಮಾತಿನಂತೆ ನಡೆದುಕೊಂಡಿದ್ದೀರಿ. ಈ ಕಾರಣಕ್ಕೆ ಮಾದಿಗ ಸಮುದಾಯ ತಮಗೆ ಸದಾ ಕೃತಜ್ಞರಾಗಿರುತ್ತದೆ ಎಂದು ಹೇಳಿದರು.

ಯಾವುದೇ ಒತ್ತಡಕ್ಕೆ ಮಣಿಯದೆ ಒಳಮೀಸಲಾತಿ ಜಾರಿಗೊಳಿಸಿ ನುಡಿದಂತೆ ನಡೆಯುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೀರಿ. ಆಯೋಗ ನೀಡಿದ್ದ ಐದು ಗುಂಪುಗಳ ಬದಲಾಗಿ ಮೂರು ವರ್ಗಗಳನ್ನಾಗಿಸಿದ್ದೀರಿ. ಅತ್ಯಂತ ಹಿಂದುಳಿದ ಮಾದಿಗ ಮತ್ತು ಸಂಬಂಧಿತ ಜಾತಿಗಳನ್ನು ಎ ಗುಂಪು ಎಂದೇ ಪರಿಗಣಿಸಬೇಕೆಂದು ಕೋರಿದರು.

ಮುಖ್ಯವಾಗಿ ಆಯೋಗ ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿಸಿ ಶೇ.1ರಷ್ಟು ಮೀಸಲಾತಿ ಕಲ್ಪಿಸಿತ್ತು. ಆಂಧ್ರ, ತೆಲಂಗಾಣದಲ್ಲಿ ಇದೇ ನೀತಿ ಅನುಸರಿಸಲಾಗಿತ್ತು. ಆದರೆ, ಇದನ್ನು ಕೈಬಿಟ್ಟು ಬೇರೆ ವರ್ಗದಲ್ಲಿ ಸೇರಿಸಿರುವುದು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ. ಈ ಸಂಬಂಧ ಅಲೆಮಾರಿ ಸಮುದಾಯದ ಮುಖಂಡರನ್ನು ಕರೆಯಿಸಿ ಅವರೊಂದಿಗೆ ಚರ್ಚಿಸಿ ಅವರಿಗೆ ಪ್ರತ್ಯೇಕ ಮೀಸಲಾತಿ ನೀಡಲು ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಅಲೆಮಾರಿಗಳನ್ನು ತಾವು ಕೈಬಿಡಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಪತ್ರಕರ್ತ ಸಮುದಾಯದ ನೆರಳಲ್ಲೇ ಅರಳಿದವನು ನಾನು: KV Prabhakar

ವಕೀಲ ರವೀಂದ್ರ ಮಾತನಾಡಿ, ಒಳಮೀಸಲಾತಿ(CM Siddaramaiah) ಜಾರಿಗೆ ದಶಕಗಳ ಕಾಲದಿಂದಲೂ ಅಡ್ಡಿಯಾಗಿದ್ದವರು ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೂ ತಡೆವೊಡ್ಡುವ ಪ್ರಯತ್ನ ನಡೆಸಿದ್ದರು. ತಾವು ಯಾವುದಕ್ಕೂ ಮನ್ನಣೆ ನೀಡದೆ ಜಾರಿಗೊಳಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಈ ಸಂಬಂಧ ಮಾದಿಗ ಮತ್ತು ಇತರ ಸಮುದಾಯಗಳು ತಮ್ಮನ್ನು ಸದಾ ಸ್ಮರಿಸುತ್ತವೆ ಎಂದು ಕೃತಜ್ಞತೆ ಸಲ್ಲಿಸಿದರು.

ದಲಿತ ಶಕ್ತಿ ಬಲಗೊಳ್ಳಲಿ

ಪರಿಶಿಷ್ಟ ಜಾತಿಯಲ್ಲಿ ಮೂರು ಗುಂಪುಗಳಾಗಿ ವಿಂಗಡಣೆ ಆಗಿರುವ ಎಲ್ಲ ಸಮುದಾಯಗಳು ಸಹೋದರರ ರೀತಿ ಜೀವನ ನಡೆಸಬೇಕು ಎಂದು ಹೆಚ್.ಆಂಜನೇಯ ಹೇಳಿದರು. ಒಳಮೀಸಲಾತಿ ಜಾರಿ, ಒಡಹುಟ್ಟಿದವರು ಆಸ್ತಿ ಹಂಚಿಕೆ ಮಾಡಿಕೊಂಡಂತೆ ಅಷ್ಟೇ. ಕಷ್ಟ-ಸುಖಗಳ ಸಂದರ್ಭ ನಾವೆಲ್ಲರೂ ಒಗ್ಗೂಡಬೇಕು. ಯಾವುದೇ ಕಾರಣಕ್ಕೂ ದಲಿತ ಶಕ್ತಿಗೆ ಪೆಟ್ಟಾಗದ ರೀತಿ ಎಚ್ಚರಿಕೆ ವಹಿಸಬೇಕು. ಒಳಮೀಸಲಾತಿ ಜಾರಿ ದಲಿತ ಶಕ್ತಿಯನ್ನು ಇನ್ನಷ್ಟು ಬಲಿಷ್ಠರನ್ನಾಗಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕೊಪ್ಪಳದ ಗುಳೇಪ್ಪ, ಗುಲ್ಬರ್ಗಾದ ಶ್ಯಾಮ್ ನಾಟಿಕೇರ್, ಬೀದರ್‌ನ ಚಂದ್ರಕಾಂತ್ ಇಪ್ಪಾಳ್ಗ, ಹೊಸಕೋಟೆ ಸುಬ್ಬಣ್ಣ, ಮಹದೇವಪುರದ ಚಿಮ್ಮಿ, ಹಾಸನದ ಶಂಕರ್‌ರಾಜ್, ಚಿತ್ರದುರ್ಗ ಶರಣಪ್ಪ, ನರಸಿಂಹರಾಜ್, ಮಾಗಡಿ ಮಂಜೇಶ್, ಬೆಂಗಳೂರಿನ ಮುತ್ತುರಾಜ್, ರಾಯಚೂರಿನ ಶರಣು ಇತರರಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

Chitradurga ವರ್ಷಿತಾ ಮರ್ಡರ್ | ಆರೋಪಿ ಚೇತನ್ ವರ್ಷಿತಾ ಕೊಲೆಗೆ ಕಾರಣ ಕೊಟ್ಟಿದ್ದೇನೆ? ಕೇಳಿದರೆ ನೀವು ಶಾಕ್

ಚಿತ್ರದುರ್ಗ | ವರ್ಷಿತಾ ಅಮ್ಮನ‌ ಬಳಿ ಮಾತಾಡಿದ್ದು ಕೊನೆಯಾದಾಗಿ ಯಾವಾಗ? ತಾಯಿ ಏನ್ ಹೇಳಿದರು | Varshita Murder Case

ಚಿತ್ರದುರ್ಗ Varshita murder | ವರ್ಷಿತಾಳ ಕೊಲೆ ಕೇಸ್, ಸಚಿವ ಡಿ.ಸುಧಾಕರ್ ಹೇಳಿದ್ದೇನು | 5 ಲಕ್ಷ ಪರಿಹಾರ ಘೋಷಣೆ

today Adike Rate : ಅಡಕೆ ಧಾರಣೆ | 20 ಆಗಸ್ಟ್‌ 2025 | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ 61 ಸಾವಿರ ದಾಟಿದ ಅಡಿಕೆ

ಒಳ‌ ಮೀಸಲಾತಿಗೆ ಸರ್ಕಾರ ಅಧಿಕೃತ ಮುದ್ರೆ | ಸಿಎಂ ವಿಧಾನ ಸಭೆಯಲ್ಲಿ ಏನೆಲ್ಲ‌ ಹೇಳಿದರು? Internal Reservation Karnataka |

TAGGED:ChitradurgaChitradurga NewsCM SiddaramaiahgratitudeH. Anjaneyaimplementation of scheduleInternal reservationKannada NewsMadigaNammajana.comnomadic communityಅಲೆಮಾರಿ ಜನಾಂಗಒಳ ಮೀಸಲಾತಿಕನ್ನಡ ನ್ಯೂಸ್ಕನ್ನಡ ಸುದ್ದಿಕೃತಜ್ಞತೆಚಿತ್ರದುರ್ಗಚಿತ್ರದುರ್ಗ ನ್ಯೂಸ್ನಮ್ಮಜನ.ಕಾಂಪರಿಶಿಷ್ಟ ಜಾರಿಮಾದಿಗಸಿಎಂ ಸಿದ್ದರಾಮಯ್ಯಹೆಚ್.ಆಂಜನೇಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಚಿತ್ರದುರ್ಗ | ವರ್ಷಿತಾ ಅಮ್ಮನ‌ ಬಳಿ ಮಾತಾಡಿದ್ದು ಕೊನೆಯಾದಾಗಿ ಯಾವಾಗ? ತಾಯಿ ಏನ್ ಹೇಳಿದರು | Varshita Murder Case
Next Article Chitradurga ವರ್ಷಿತಾ ಮರ್ಡರ್ | ಆರೋಪಿ ಚೇತನ್ ವರ್ಷಿತಾ ಕೊಲೆಗೆ ಕಾರಣ ಕೊಟ್ಟಿದ್ದೇನೆ? ಕೇಳಿದರೆ ನೀವು ಶಾಕ್
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ಪತ್ರಕರ್ತ ಸಮುದಾಯದ ನೆರಳಲ್ಲೇ ಅರಳಿದವನು ನಾನು: KV Prabhakar
ಇಂದಿನ ಸುದ್ದಿ
Student Murder | ವರ್ಷಿತಾ ಮರ್ಡರ್‌ ಕೇಸ್ | ಸ್ಫೋಟಕ ಮಾಹಿತಿ ಬಯಲು
ಕ್ರೈಂ ಸುದ್ದಿ
ಕಾಲೇಜು ವಿದ್ಯಾರ್ಥಿನಿ ಕೊಲೆ | ಪೆಟ್ರೋಲ್ ಹಾಕಿ ಸುಟ್ಟಿರುವ ಶಂಕೆ | Chitradurga Murder
ಕ್ರೈಂ ಸುದ್ದಿ
ವಾಣಿವಿಲಾಸ ಸಾಗರ ನೀರಿನ ಮಟ್ಟ ಏರಿಕೆ | Vani Vilasa Sagara Dam
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?