Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಪತ್ರಕರ್ತರ ಸಂಘಕ್ಕೆ ಹೊಸ ಸ್ಪರ್ಶ ನೀಡಿದ್ದ ದಿನೇಶ್ ಗೌಡಗೆರೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ |Media Academy Award
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > ಪತ್ರಕರ್ತರ ಸಂಘಕ್ಕೆ ಹೊಸ ಸ್ಪರ್ಶ ನೀಡಿದ್ದ ದಿನೇಶ್ ಗೌಡಗೆರೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ |Media Academy Award
Blog

ಪತ್ರಕರ್ತರ ಸಂಘಕ್ಕೆ ಹೊಸ ಸ್ಪರ್ಶ ನೀಡಿದ್ದ ದಿನೇಶ್ ಗೌಡಗೆರೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ |Media Academy Award

Editor Nammajana
Last updated: 4 January 2025 4:44 PM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|4-12-2025

ನಮ್ಮಜನ.ಕಾಂ, ಚಿತ್ರದುರ್ಗ: ಇಬ್ಬನಿಸೂರ್ಯ ಕನ್ನಡ ದಿನಪತ್ರಿಕೆ ಸಂಪಾದಕರು, ಡಿ.ಡಿ.ಚಂದನ ನ್ಯೂಸ್ ಜಿಲ್ಲಾ (Media Academy Award) ವರದಿಗಾರರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯದರ್ಶಿಯಾದ ದಿನೇಶ್ ಗೌಡಗೆರೆ ಅವರು 2024ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

nammajana

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿ ಗೌಡಗೆರೆ ಗ್ರಾಮದಲ್ಲಿ ಜನಿಸಿದ ದಿನೇಶ್ ಗೌಡಗೆರೆ ಅವರು ಹುಟ್ಟೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ನಾಯಕನಟ್ಟಿಯ ಎಸ್‍ಟಿಎಸ್‍ಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಪಡೆದರು. ನಂತರ ಚಿತ್ರದುರ್ಗ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಕಲಾ ಕಾಲೇಜು, ಜಗಳೂರಿನ ಹೋ.ಚಿ.ಬೋರಯ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ.

ದಿನೇಶ್ ಗೌಡಗೆರೆ ಅವರು ಕಳೆದ 30 ವರ್ಷಗಳಿಂದಲೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಆರಂಭದಲ್ಲಿ ಹವ್ಯಾಸಿ ಬರಹಗಾರ ಮತ್ತು ವೃತ್ತಿ ನಿರತ ಛಾಯಾಗ್ರಾಹಕನಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1997 ರಿಂದ 2005 ರವರೆಗೆ ವಾರ ಪತ್ರಿಕೆ (ಯುವ ಪಾಳೇಗಾರ) ಉಪ ಸಂಪಾದಕರಾಗಿ 8 ವರ್ಷ (Media Academy Award) ಕಾರ್ಯನಿರ್ವಹಣೆ. 2005ರಲ್ಲಿ ಉಷಾ ಕಿರಣ ಕನ್ನಡ ದಿನಪತ್ರಿಕೆ ವರದಿಗಾರರಾಗಿ 2 ವರ್ಷ ಕಾರ್ಯ ನಿರ್ವಹಣೆ. ಹೊಸದಿಗಂತ ಕನ್ನಡ ದಿನಪತ್ರಿಕೆಯಲ್ಲಿ ಹೊಸದುರ್ಗ ತಾಲ್ಲೂಕು ವರದಿಗಾರನಾಗಿ 4 ವರ್ಷ ಕೆಲಸ. ಸಮಗ್ರ ಜನರ ಸುದ್ದಿ ಜಿಲ್ಲಾ ವರದಿಗಾರನಾಗಿ 2 ವರ್ಷ ಕಾರ್ಯ ನಿರ್ವಹಣೆ. ಸಂಜೆವಾಣಿ ಪತ್ರಿಕೆಯಲ್ಲಿ ಜಿಲ್ಲಾ ವರದಿಗಾರನಾಗಿ 2 ವರ್ಷ ಕಾರ್ಯ ನಿರ್ವಹಣೆ. 2018 ರಲ್ಲಿ ವಿಐಪಿ ನ್ಯೂಸ್ ಚಾನಲ್ ಹಾಗೂ ಸರಳ ಜೀವನ ನ್ಯೂಸ್ ಚಾನೆಲ್, ಟಿವಿ 1 ಚಾನೆಲ್ ಕಾರ್ಯನಿರ್ವಹಣೆ. 2019ರಲ್ಲಿ ನ್ಯೂಸ್ ಎಕ್ಸ್ ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಹಣೆ. ಪ್ರಸ್ತುತ ಇಬ್ಬನಿ ಸೂರ್ಯ ಕನ್ನಡ ದಿನಪತ್ರಿಕೆ ಸಂಪಾದಕರಾಗಿ 4 ವರ್ಷದಿಂದ ಕಾರ್ಯರ್ನಿಹಣೆ ಹಾಗೂ ಸಾಕ್ಷಿ ತೆಲಗು ದಿನಪತ್ರಿಕೆಯಲ್ಲಿ ವರದಿಗಾರರು ಮತ್ತು ವಿಜಯ ಕರ್ನಾಟಕ ನಮ್ಮ ಚಿತ್ರದುರ್ಗ ಸ್ಥಳೀಯ ಆವೃತ್ತಿಯ ಓದುಗರ ಬರಹ ಅಂಕಣಕ್ಕೆ ಲೇಖನಗಳ ಕಳಿಸುವುದು ಸೇರಿದಂತೆ ಹವ್ಯಾಸಿ ಬರಹಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 2022ರಲ್ಲಿ ಆಯ್ಕೆ. ನೂತನ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಪತ್ರಕರ್ತರ ಸಂಘದ (Media Academy Award) ಇತಿಹಾಸದಲ್ಲಿ ಮೊದಲ ಬಾರಿಗೆ ಸಂಘದ ಅಡಿಯಲ್ಲಿ ಕ್ಷೇಮನಿಧಿ ಸ್ಥಾಪನೆ ಮಾಡಲಾಯಿತು.

ಪತ್ರಕರ್ತರು ಹಾಗೂ ಕುಟುಂಬದ ಸದಸ್ಯರಿಗೆ ಹೃದಯ ತಪಾಸಣೆ, ಆರೋಗ್ಯ ಶಿಬಿರ ಆಯೋಜನೆ. ಕಣ್ಣಿನ ತಪಾಸಣೆ ಶಿಬಿರ ಆಯೋಜನೆ. ಸ್ವತಃ ಕ್ರಿಕೆಟ್ ಆಟಗಾರರಾಗಿದ್ದ ಇಬ್ಬರು ಕ್ಯಾಮೆರಾಮನ್‍ಗಳ ನೆನಪಿಗಾಗಿ ವಿಭಾಗೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ.

ಕೋವಿಡ್‍ನಿಂದ ಮೃತಪಟ್ಟ ಇಬ್ಬರು ಕ್ಯಾಮೆರಾಮನ್‍ಗಳ ಕುಟುಂಬಗಳಿಗೆ ತಲಾ ರೂ.1 ಲಕ್ಷ ಆರ್ಥಿಕ ನೆರವು. ಎರಡನೇ ವರ್ಷದ ಪತ್ರಿಕಾ ದಿನಾಚರಣೆ ಯಲ್ಲಿ ನಿವೃತ್ತ ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ. ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ. ವಿಶೇಷ ಅಂದರೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾದ ಪಿ.ಸಾಯಿನಾಥ್ ಕರೆಸಿದ್ದು, ಇವರ ಅವದಿಯ ಹೆಮ್ಮೆಯ ಸಾಧನೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ದಿನದಂದು ಅಂಬೇಡ್ಕರ್ ಅವರು ಕೂಡ ಪತ್ರಕರ್ತರಾಗಿದ್ದರು ಎನ್ನುವ ವಿಚಾರ ಬಿಂಬಿಸುವ ವಿಚಾರ ಸಂಕಿರಣ ಆಯೋಜನೆ. ಮತ್ತೆ ಮತ್ತೆ ಲಂಕೇಶ್ ಮೇಷ್ಟ್ರು ವಿಚಾರ ಕಾರ್ಯಕ್ರಮ. ನ್ಯಾಯಾಂಗ ನಿಂದನೆ-ಮಾನನಷ್ಟ ಮೊಕದ್ದಮೆ ಕುರಿತು ಕಾನೂನು ಸೇವಾ ಪ್ರಾಧಿಕಾರದ ಸಹಕಾರದಿಂದ ನ್ಯಾಯಾಧೀಶರು ಮತ್ತು ಹೈಕೋರ್ಟ್ ವಕೀಲರಿಂದ ಉಪನ್ಯಾಸ ಕಾರ್ಯಕ್ರಮ.

ಮೊಳಕಾಲ್ಮುರು ತಾಲ್ಲೂಕು ಘಟಕದ ಕಟ್ಟಡ ನಿರ್ಮಾಣ ಕಾರ್ಯಪ್ರಗತಿ. ಹೊಳಲ್ಕೆರೆ ತಾಲ್ಲೂಕು ಘಟಕದ ಕಾಮಗಾರಿ ಪೂರ್ಣವಾಗಿದ್ದು, ಉದ್ಘಾಟನೆ ಬಾಕಿ ಇದೆ. ಜಿಲ್ಲಾ (Media Academy Award) ಕೇಂದ್ರದಲ್ಲಿರುವ ಪತ್ರಿಕಾ ಭವನ ಕಾಮಗಾರಿ- ಶಾಸಕರ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಪ್ರೆಸ್ ಮೀಟ್ ಹಾಲ್ ನವೀಕರಣ (ಬ್ಯಾಕ್ ಡ್ರಾಪ್ ಮತ್ತು ವಿಶೇಷ ಲೈಟಿಂಗ್, ಮುಖ್ಯ ಬಾಗಿಲು ನವೀಕರಣ ಮತ್ತು ಪೇಂಟಿಂಗ್).

ಇದನ್ನೂ ಓದಿ: Vani Vilasa Sagara | ವಿ ವಿ ಸಾಗರ ನೀರಿನ ಮಟ್ಟ | 4 ಜನವರಿ 2025

ವಿಧಾನ ಪರಿಷತ್ ಸದಸ್ಯರ ನಿಧಿ ರೂ.5 ಲಕ್ಷ ವೆಚ್ಚದಲ್ಲಿ ವಾರಂಡ ಶೀಟ್ ನವೀಕರಣ ಮಳೆಬಂದಾಗ ಸೋರುವುದಕ್ಕೆ ರಕ್ಷಣೆ ಕೆಳಗಡೆ ಮುಖ್ಯದ್ವಾರ ಮುಂಭಾಗದಲ್ಲಿ ಅಭಿವೃದ್ಧಿ ಕಾರ್ಯಪ್ರಗತಿ. ದಾನಿಗಳಿಂದ ಪ್ರೆಸ್‍ಮೀಟ್ ಹಾಲ್ ಮೇಲುಗಡೆ ವಿಶೇಷ (Media Academy Award) ಆಸನಗಳು, ಹಾಲ್‍ನಲ್ಲಿ ಕುರ್ಚಿಗಳ ವ್ಯವಸ್ಥೆ. ನಿರಂತರವಾಗಿ ಪತ್ರಕರ್ತರಿಗೆ ಸೆಮಿನಾರ್ ಆಯೋಜನೆ. ಪತ್ರಕರ್ತರ ವೃತ್ತಿ ಉಪಯೋಗಕ್ಕೆ ವೈಪೈ (ಅಂತರ್ಜಾಲ) ಸೌಲಭ್ಯ ಹಾಗೂ ಪತ್ರಿಕಾ ಭವನಕ್ಕಾಗಿ ಹೊಸ ಕೊಳವೆಭಾವಿ ಕೊರೆಸುವ ಮೂಲಕ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾರ್ಯ ಕೈಗೊಳ್ಳಲಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ

mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ

ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?

TAGGED:BangaloreChitradurgaChitradurga NewsDinesh GoudagereEditorIbbani Surya MagazineKannada Newskannada suddiMedia Academy AwardNammajana.comಇಬ್ಬನಿ ಸೂರ್ಯ ಪತ್ರಿಕೆಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿದಿನೇಶ್ ಗೌಡಗೆರೆನಮ್ಮಜನ.ಕಾಂಬೆಂಗಳೂರುಮಾಧ್ಯಮ ಅಕಾಡೆಮಿ ಪ್ರಶಸ್ತಿಸಂಪಾದಕ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Vani Vilasa Sagara | ವಿ ವಿ ಸಾಗರ ನೀರಿನ ಮಟ್ಟ | 4 ಜನವರಿ 2025
Next Article Dina Bhavishya | ದಿನ ಭವಿಷ್ಯ, ಯಾವ ರಾಶಿಗೆ ಉದ್ಯೋಗ ಲಾಭ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ
ಹೊಳಲ್ಕೆರೆ: ಇಂದಿನಿಂದ 3 ದಿನ ವಿದ್ಯುತ್ ವ್ಯತ್ಯಯ : Power cut
ಇಂದಿನ ಸುದ್ದಿ
ಹಿಂಬಾಕಿ ನೀಡದಿದ್ದರೆ ಆ.5 ರಿಂದ KSRTC ಬಸ್ ಓಡಾಟ ಬಂದ್
ಇಂದಿನ ಸುದ್ದಿ
ಜಡೆಕುಂಟೆ ಮಂಜುನಾಥ್ ಅವರ ‘ಕಾಡು ಕಾಯುವ ಮರ’ ಕೃತಿ ಲೋಕಾರ್ಪಣೆ ನಾಳೆ
ವಿಶೇಷ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?