Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ರಾತ್ರೋ ರಾತ್ರಿ ಮಳಿಗೆ ಹರಾಜು ಮುಂದೂಡಿದ ಪೌರಯುಕ್ತೆ ರೇಣುಕಾ, ಹಿಟ್ಲರ್ ಆಡಳಿತ ನಡೆಸಲು ನಾವು ಬಿಡಲ್ಲ: ನಗರಸಭೆ ಅಧ್ಯಕ್ಷೆ ಸುಮಿತ ಕಿಡಿ | Municipal Store Auction
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ರಾತ್ರೋ ರಾತ್ರಿ ಮಳಿಗೆ ಹರಾಜು ಮುಂದೂಡಿದ ಪೌರಯುಕ್ತೆ ರೇಣುಕಾ, ಹಿಟ್ಲರ್ ಆಡಳಿತ ನಡೆಸಲು ನಾವು ಬಿಡಲ್ಲ: ನಗರಸಭೆ ಅಧ್ಯಕ್ಷೆ ಸುಮಿತ ಕಿಡಿ | Municipal Store Auction
ಇಂದಿನ ಸುದ್ದಿ

ರಾತ್ರೋ ರಾತ್ರಿ ಮಳಿಗೆ ಹರಾಜು ಮುಂದೂಡಿದ ಪೌರಯುಕ್ತೆ ರೇಣುಕಾ, ಹಿಟ್ಲರ್ ಆಡಳಿತ ನಡೆಸಲು ನಾವು ಬಿಡಲ್ಲ: ನಗರಸಭೆ ಅಧ್ಯಕ್ಷೆ ಸುಮಿತ ಕಿಡಿ | Municipal Store Auction

Editor Nammajana
Last updated: 26 February 2025 7:53 AM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|25-02-2025

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿನ 37 ಮಳಿಗೆ ಹರಾಜು ಪ್ರಕ್ರಿಯೆ ವಿಚಾರದಲ್ಲಿ ಮ ಮಂಗಳವಾರ ಏಕಾಏಕಿ ಹರಾಜು ಪ್ರಕ್ರಿಯೆ ಮುಂದೂಡಲಾಗಿದೆ (Municipal Store Auction) ಎಂಬ ನಗರಸಭೆ ಪೌರಯುಕ್ತರ ನಡೆಗೆ ನಗರಸಭೆ ಅಧ್ಯಕ್ಷೆ ಸುಮಿತಾ ಮತ್ತು ಉಪಾಧ್ಯಕ್ಷ, ಸದಸ್ಯರು ಕಿಡಿಕಾರಿದ ಘಟನೆ ಚಿತ್ರದುರ್ಗ ನಗರಸಭೆಯಲ್ಲಿ ನಡೆಯಿತು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಮಳಿಗೆಗಳ ಹರಾಜು ಪ್ರಕ್ರಯೆಗೆ ಬಂದಿದ್ದ ಹರಾಜು ಕೂಗುವವರು ನಗರಸಭೆ ಪೌರಯುಕ್ತರ ವಿರುದ್ದ ತೀವ್ರ ಆಕ್ರೋಶ ಹೊರ ಹಾಕಿ, ನಮಗೆ ಮಾಹಿತಿ ಇಲ್ಲದೆ ಹರಾಜು ಮುಂದೆ ಹಾಕಿರುವುದು ಯಾವ ಉದ್ದೇಶಕ್ಕೆ ಎಂಬ ಸ್ಪಷ್ಟವಾಗಿ ತಿಳಿಸಿ ಎಂದು ನಗರಸಭೆ ಅಧ್ಯಕ್ಷೆ ಸುಮಿತ ಅವರನ್ನು ಪ್ರಶ್ನಿಸಿದಾಗ ಅವರು ನನಗೆ ವ್ಯಾಟ್ಸಪ್ ಸಂದೇಶ ರಾತ್ರಿ 12-10 ನಿಮಿಷಕ್ಕೆ ಕಳಿಸಿದ್ದಾರೆ ಮತ್ತು ಹರಾಜು ಮುಂದೂಡುವ ಅಧಿಕಾರ (Municipal Store Auction) ಪೌರಾಯುಕ್ತರಿಗೆ ಇಲ್ಲ ಎಂದು ಸಿಡಿಮಿಡಿಗೊಂಡರು.

ನಗರಸಭೆಯ 37 ಮಳಿಗೆ ಹರಾಜಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ಹರಾಜಿಗೆ ಫೆ.25ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಅದರಂತೆ ಬಿಡ್ ದಾರರು ಇಎಂಡಿ ಮೊತ್ತ ಡಿಡಿ ಸಂಗಡ ನಗರಸಭೆಗೆ ಆಗಮಿಸಿದ್ದರು. ಅಧ್ಯಕ್ಷೆ ಸುಮಿತಾ, ಉಪಾಧ್ಯಕ್ಷೆ ಶ್ರೀದೇವಿ, ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲ್ಲಾ ಬಿಡ್ ನಡೆಸಲುಸಭಾಂಗಣದಲ್ಲಿ  ಕಾದು ಕುಳಿತರು ಅಧಕ್ಷರ ಗನಮಕ್ಕೂ ಸೌಜನ್ಯಕ್ಕೂ ತಿಳಿಸದೇ .  ಪೌರಾಯುಕ್ತ ರೇಣುಕಾ ಸೇರಿದಂತೆ ಯಾವೊಬ್ಬ ನಗರಸಭೆ (Municipal Store Auction) ಸಿಬ್ಬಂದಿಯೂ ನಗರಸಭೆ ಕೆಲಸಕ್ಕೆ ಹಾಜರಾಗದೇ ಇರುವುದು ಅಧ್ಯಕ್ಷರನ್ನು ಮತ್ತಷ್ಟು ಕೆರಳಿಸಿತು.

ಅಧ್ಯಕ್ಷರ ಗಮನಕ್ಕೂ ಬಾರದೇ ಸಭೆ ಮುಂದೂಡಿದ ಪೌರಯುಕ್ತೆ ರೇಣುಕಾ 

ಅಧ್ಯಕ್ಷೆ ಸುಮಿತಾ, ನಮ್ಮ ಗಮನಕ್ಕೆ ಬಾರದಂತೆ ಪೌರಾಯುಕ್ತರು ಹರಾಜು ಮುಂದೂಡಿದ್ದಾರೆ. ರಾತ್ರಿ 12.20ಕ್ಕೆ ವಾಟ್ಸಾಪ್ ನಲ್ಲಿ ಮುಂದೂಡಿದ ಪತ್ರ ಹಾಕಿದ್ದಾರೆ. ಹರಾಜು ನಡೆಸಲು ಬರುವಂತೆ ಕಾಲ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲವೆಂದು ದೂರಿದರು. ಇವರಿಗೆ ದಿಶಾ ಸಭೆ ಇದೆ ಎಂದು ಮೊದಲೇ ಗೊತ್ತಿತ್ತಲ್ಲ ಆದರು ಅದರ ನೆಪ ಮಾಡಿಕೊಂಡು ಹರಾಜು ಪ್ರಕ್ರಿಯೆ ಮುಂದೂಡಲು ಅವರಿಗೆ ಅಧಿಕಾರ ಕೊಟ್ಟವರ್ಯಾರು, ಸಭೆಯಲ್ಲಿ ಕುಳಿತುಕೊಂಡು ಕಾಲ್ ಪಿಕ್ ಮಾಡದೇ ಅಧಿಕಾರಿ ದರ್ಪ ಮೆರೆಯುತ್ತಿದ್ದು ಬಿಡ್ ದಾರರಿಗೆ ಬಂದು (Municipal Store Auction) ಉತ್ತರಿಸಲಿ,ತಮ್ಮಿಷ್ಟದಂತೆ ತಾವು ನಡೆದುಕೊಂಡೇ ನಾವು ಸುಮ್ಮನಿರಲ್ಲ ಮುಂದೆ ತೋರಿಸ್ತಿವಿ ನಾವು ಏನು ಅಂತ ಏರು ಧ್ವನಿಯಲ್ಲಿ ಪೌರಯುಕ್ತೆ ರೇಣುಕಾ ವಿರುದ್ಧ ಅಕ್ರೋಶ ಹೊರಹಾಕಿದರು.

ನಗರಸಭೆ ಗೋಡೆ ಮೇಲೆ ಹರಾಜು ಮುಂದೂಡಿದ ಪ್ರತಿಗೆ ಕಮಿಷನರ್ ಸಹಿ ಇಲ್ಲ

ನಗರಸಭೆಗ ಗೋಡೆ ಮೇಲೆ ಹರಾಜು ಮುಂದೂಡಿದ ಪತ್ರ ಅಂಟಿಸಲಾಗಿದೆ. ಅದರಲ್ಲಿ ಪೌರಾಯುಕ್ತರ ಸಹಿ ಇಲ್ಲ. ಕಷ್ಟಪಟ್ಟು ಡಾಕ್ಯುಮೆಂಟ್‌ ರೆಡಿಮಾಡಿಕೊಂಡು ಬಂದಿದ್ದೇವೆ. ಈಗ ಹರಾಜು ರದ್ದು ಮಾಡಿದರೆ ಹೇಗೆ. ರಾತ್ರೋ ರಾತ್ರಿ  ಮುಂದೂಡುವ ನಿರ್ಧಾರ ಕೈಗೊಳ್ಳುವ ಅಗತ್ಯವಾದರೂ ಏನಿತ್ತೆಂದು ಬಿಡ್ ದಾರರು ಅಧ್ಯಕ್ಷರನ್ನು ಪ್ರಶ್ನಿಸಿದರು.

ಒಂದು ತಿಂಗಳ ಮುಂಚೆ ಹರಾಜು ಪ್ರಕ್ರಿಯೆ ಮಾಡಲಾಗಿತ್ತು. ಕಳೆದ ಐದು ತಿಂಗಳಿಂದ ಹರಾಜು ಪ್ರಕ್ರಿಯೆ ಆಗಿರಲಿಲ್ಲ, ಆದ್ದರಿಂದ. ಇಟ್ಲರ್ ಆಡಳಿತವನ್ನು ಪೌರಯುಕ್ತೆ  ರೇಣುಕಾ ನಡೆಸುತ್ತಿದ್ದು ಸರ್ವಾಧಿಕಾರಿ ವರ್ತನೆ ನಡೆಯಲ್ಲ, ಜನಪರ ಆಡಳಿತಕ್ಕೆ ನಾವು ಬಂದಿದ್ದೇವೆ ಎಂದು ಅಧ್ಯಕ್ಷೆ ಸುಮಿತಾ (Municipal Store Auction) ಅವರು ಪೌರಯುಕ್ತರಿಗೆ ಟಾಂಗ್ ನೀಡಿದ್ದು ಮುಂದೆ ಯಾವ ರೀತಿ ಇವೆ ಬೆಳವಣಿಗೆ ನಡೆಯಲಿದೆ ಎಂಬುದನ್ನಯ ಕಾದು ನೋಡಬೇಕಿದೆ.

ಇದನ್ನೂ ಓದಿ: Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಉದ್ಯೋಗ ಬಡ್ತಿ, ಬದಲಾವಣೆ, ಧನ ಲಾಭ ನೋಡಿ

ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರುಲಾ, ನಗರಸಭೆ ಸದಸ್ಯ ದೀಪು ಇದ್ದರು‌.

ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯ ನೂತನ AC ಆಗಿ ಮಹಿಬೂಬ್ ಜಿಲಾನ್ ನೇಮಕ | Assistant Commissioner

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ

V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ

TAGGED:adjournmentauctionChairperson SumitaChitradurgaGaram against PaurayukteNagarsabha shopಅಧ್ಯಕ್ಷೆ ಸುಮಿತಚಿತ್ರದುರ್ಗನಗರಸಭೆ ಮಳಿಗೆಪೌರಯುಕ್ತೆ ವಿರುದ್ದ ಗರಂಮುಂದೂಡಿಕೆಹರಾಜು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಉದ್ಯೋಗ ಬಡ್ತಿ, ಬದಲಾವಣೆ, ಧನ ಲಾಭ ನೋಡಿ
Next Article Chitradurga ಉದ್ಯೋಗ ಮೇಳ: ನೋಂದಣಿ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಸೂಚನೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Today Adike Rate | ಇಂದಿನ‌ ಅಡಕೆ ರೇಟ್
ಅಡಿಕೆ ಧಾರಣೆ
Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ
ದಿನ ಭವಿಷ್ಯ
ದಿನ ಭವಿಷ್ಯ | 09-10-2025 | Dina Bhavishya
ದಿನ ಭವಿಷ್ಯ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?