
Chitradurga news | nammajana.com |13-9-2024
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದಲ್ಲಿ ಬೀದಿನಲ್ಲಿ ನೀರು ಮತ್ತು ಓಡಾಡುವ ಜಾಗದ (Murder) ವಿಚಾರದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಮನೆ ದಾರಿ ವಿಚಾರದಲ್ಲಿ ತಿಪ್ಫೇಸ್ವಾಮಿ ಹಾಗೂ ಇತರೆ ಮೂವರಿಗೆ ಪರಸ್ವರ ಗಲಾಟೆ ನಡೆದು ಕೋಪಗೊಂಡ ನೇತ್ರಾವತಿ, ಜ್ಞಾನೇಶ, ಶ್ರೀನಿವಾಸ್ಚಾರಿ, ನಾಗರಾಜಚಾರಿ ಇವರುಗಳು (Murder) ತಿಪ್ಪೇಸ್ವಾಮಿಯವರ ಮೇಲೆ ಸ್ಟೀಲ್ ಬಕೇಟ್ ಮತ್ತು ಕೋಲ್ನಿಂದ ಹಲ್ಲೆ ನಡೆಸಿದ್ದು ಗಾಯಗೊಂಡಿದ್ದ ತಿಪ್ಪೇಸ್ವಾಮಿ ಚಳ್ಳಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.

ಮೃತ ತಿಪ್ಪೇಸ್ವಾಮಿಯವರ ಸಂಬಂಧಿ ಪಿ.ಶಿವರುದ್ರಪ್ಪ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ, ನಮ್ಮ ಚಿಕ್ಕಪ್ಪ ದಿವಂಗತ ತಿಪ್ಪೇಸ್ವಾಮಿಯವರಿಗೂ ಮತ್ತು ಮೇಲ್ಕಂಡ ಆರೋಪಿಗಳಿಗೆ ಮನೆಯ ದಾರಿ ಮತ್ತು ನಲ್ಲಿ ನೀರಿನ ವಿಚಾರಕ್ಕೆ ಹಾಗಾಗ (Murder) ಗಲಾಟೆಯಾಗುತ್ತಿತ್ತು.
ಇದನ್ನೂ ಓದಿ: HAL: ಹೆಚ್.ಎ.ಎಲ್ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಸೆ. ೧೦ರ ಮಂಗಳವಾರ ನಡೆದ ಗಲಾಟೆಯಲ್ಲಿ ತಿಪ್ಫೇಸ್ವಾಮಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಕೊಲೆ ಮಾಡಿದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಲು ದೂರು ನೀಡಿದ್ದು ಪಿಎಸ್ಐ ಜೆ.ಶಿವರಾಜ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.