
Chitradurga news|nammajana.com|03-04-2025
ಮತ್ತೋಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ಘಟನೆ; ನಾಲ್ವರು ಆರೋಪಿಗಳ ಬಂಧನ
ನಮ್ಮಜನ.ಕಾಂ, ಹೊಸದುರ್ಗ: ಗುಟ್ಕಾ ವಿಚಾರವಾಗಿ ಆರಂಭವಾದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮತ್ತೋಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಮೃತ ವ್ಯಕ್ತಿಯನ್ನು ಮತ್ತೋಡು ಗ್ರಾಮದ (Murder) ಸೋಮಶೇಖರ (25) ಎಂದು ಗುರುತಿಸಲಾಗಿದೆ.
ಘಟನೆ; ಮೃತ ಸೋಮಶೇಖರನ ತಮ್ಮ ನಾಗರಾಜ ಎಂಬುವವರು ಗ್ರಾಮದ ಮಂಜುನಾಥನ ಅಂಗಡಿಗೆ ಸೂಪರ್ ತರಲು ಹೋದಾಗ, ಅಂಗಡಿಯ ಮಾಲೀಕ ಮಂಜುನಾಥ ಫೋನ್ ಪೇ ಇಲ್ಲ ಕ್ಯಾಶ್ ಕೊಡು ಎಂದು ಕೇಳಿದ್ದಾನೆ. ಈ (Murder) ವಿಚಾರವಾಗಿ ರಘು ಎಂಬುವನು ನಾಗರಾಜನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.

ಇದನ್ನು ವಿಚಾರಿಸಲು ಹೋದ ಸೋಮಶೇಖರನ ಮೇಲೆ ರಘು, ಮಂಜುನಾಥ, ಶಶಿಕುಮಾರ ಹಾಗೂ ಗವಿರಂಗನಾಥ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಕುಸಿದು ಬಿದ್ದ ಸೋಮಶೇಖರನನ್ನು ಮತ್ತೋಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರಂತೆಯೇ, ಗಾಯಾಳವನ್ನು ಸಂಬಂಧಿಕರು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ (Murder) ಕರೆದೊಯ್ಯಿದಿದ್ದಾರೆ. ಗಾಯಾಳವನ್ನ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಪೊಲೀಸ್ ಎಂದು ತಿರುಗುತ್ತಿದ್ದ ಆರೋಪಿ:*
ಮೃತ ಸೋಮಶೇಖರನ ಕೊಲೆಗೆ ಸಂಬಂಧಪಟ್ಟಂತೆ ಬಂಧನವಾಗಿ, ಜೈಲು ಸೇರಿರುವ ಎ1 ಆರೋಪಿ ರಘು, ಕಳೆದ 3 ವರ್ಷಗಳಿಂದ ನಾನು ಪೊಲೀಸ್ ಹುದ್ದೆಯಲ್ಲಿದ್ದೇನೆಂದು ಗ್ರಾಮದಲ್ಲಿ ಹೇಳಿಕೊಂಡು ತಿರುಗಿದ್ದಾನೆ. ಅಲ್ಲದೇ ಇತನು ಬೈಕ್ ಮೇಲೆ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿಸಿಕೊಂಡಿದ್ದಾನೆ. ಈತನ ಮಾತು ಮತ್ತು ವರ್ತನೆ ಕಂಡ ಊರಿನ ಜನರು, ಪೊಲೀಸ್ ಇಲಾಖೆಯಲ್ಲಿ ಇರಬಹುದೇನೋ ಎಂದು ನಂಬಿದ್ದಾರೆ.
ಇದನ್ನೂ ಓದಿ: Today Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ಘಟನೆಯಲ್ಲಿ ಭಾಗಿಯಾಗಿ ಅರೆಸ್ಟ್ ಆದ ಬಳಿಕವೇ, ಈತನು ನಕಲಿ ಪೊಲೀಸ್ ಎಂಬ ಸತ್ಯ ಬಯಲಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಂಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಧು, ಆರೋಪಿ ರಘು ಬೈಕ್ ಮೇಲೆ ಪೊಲೀಸ್ ಎಂದು ಹಾಕಿಕೊಂಡು ತಿರುಗಾಡುತ್ತಿದ್ದ ವಿಷಯ ನಮ್ಮ ಗಮನಕ್ಕೆ (Murder) ಬಂದಿರಲಿಲ್ಲ. ಆತ ಪೊಲೀಸ್ ಇಲಾಖೆಯಲ್ಲಿ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.