Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Murder | ಗುಟ್ಕಾ ವಿಚಾರವಾಗಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Murder | ಗುಟ್ಕಾ ವಿಚಾರವಾಗಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ
ಕ್ರೈಂ ಸುದ್ದಿ

Murder | ಗುಟ್ಕಾ ವಿಚಾರವಾಗಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯ

Editor Nammajana
Last updated: 3 April 2025 08:10
By Editor Nammajana 2 Min Read
Share
SHARE

Chitradurga news|nammajana.com|03-04-2025

ಮತ್ತೋಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ಘಟನೆ; ನಾಲ್ವರು ಆರೋಪಿಗಳ ಬಂಧನ

ನಮ್ಮಜನ.ಕಾಂ, ಹೊಸದುರ್ಗ: ಗುಟ್ಕಾ ವಿಚಾರವಾಗಿ ಆರಂಭವಾದ ಜಗಳದಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಮತ್ತೋಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಮೃತ ವ್ಯಕ್ತಿಯನ್ನು ಮತ್ತೋಡು ಗ್ರಾಮದ (Murder) ಸೋಮಶೇಖರ (25) ಎಂದು ಗುರುತಿಸಲಾಗಿದೆ.

ಘಟನೆ; ಮೃತ ಸೋಮಶೇಖರನ ತಮ್ಮ ನಾಗರಾಜ ಎಂಬುವವರು ಗ್ರಾಮದ ಮಂಜುನಾಥನ ಅಂಗಡಿಗೆ ಸೂಪರ್ ತರಲು ಹೋದಾಗ, ಅಂಗಡಿಯ ಮಾಲೀಕ ಮಂಜುನಾಥ ಫೋನ್ ಪೇ ಇಲ್ಲ ಕ್ಯಾಶ್ ಕೊಡು ಎಂದು ಕೇಳಿದ್ದಾನೆ. ಈ (Murder) ವಿಚಾರವಾಗಿ ರಘು ಎಂಬುವನು ನಾಗರಾಜನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.

ಇದನ್ನು ವಿಚಾರಿಸಲು ಹೋದ ಸೋಮಶೇಖರನ ಮೇಲೆ ರಘು, ಮಂಜುನಾಥ, ಶಶಿಕುಮಾರ ಹಾಗೂ ಗವಿರಂಗನಾಥ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಕುಸಿದು ಬಿದ್ದ ಸೋಮಶೇಖರನನ್ನು ಮತ್ತೋಡು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರಂತೆಯೇ, ಗಾಯಾಳವನ್ನು ಸಂಬಂಧಿಕರು ಹೊಸದುರ್ಗ ಸರ್ಕಾರಿ ಆಸ್ಪತ್ರೆಗೆ (Murder) ಕರೆದೊಯ್ಯಿದಿದ್ದಾರೆ. ಗಾಯಾಳವನ್ನ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಪೊಲೀಸ್ ಎಂದು ತಿರುಗುತ್ತಿದ್ದ ಆರೋಪಿ:*

ಮೃತ ಸೋಮಶೇಖರನ ಕೊಲೆಗೆ ಸಂಬಂಧಪಟ್ಟಂತೆ ಬಂಧನವಾಗಿ, ಜೈಲು ಸೇರಿರುವ ಎ1 ಆರೋಪಿ ರಘು, ಕಳೆದ 3 ವರ್ಷಗಳಿಂದ ನಾನು ಪೊಲೀಸ್ ಹುದ್ದೆಯಲ್ಲಿದ್ದೇನೆಂದು ಗ್ರಾಮದಲ್ಲಿ ಹೇಳಿಕೊಂಡು ತಿರುಗಿದ್ದಾನೆ. ಅಲ್ಲದೇ ಇತನು ಬೈಕ್ ಮೇಲೆ ಪೊಲೀಸ್ ಎಂದು ಸ್ಟಿಕ್ಕರ್ ಹಾಕಿಸಿಕೊಂಡಿದ್ದಾನೆ. ಈತನ ಮಾತು ಮತ್ತು ವರ್ತನೆ ಕಂಡ ಊರಿನ ಜನರು, ಪೊಲೀಸ್ ಇಲಾಖೆಯಲ್ಲಿ ಇರಬಹುದೇನೋ ಎಂದು ನಂಬಿದ್ದಾರೆ.

ಇದನ್ನೂ ಓದಿ: Today Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

ಘಟನೆಯಲ್ಲಿ ಭಾಗಿಯಾಗಿ ಅರೆಸ್ಟ್ ಆದ ಬಳಿಕವೇ, ಈತನು ನಕಲಿ ಪೊಲೀಸ್ ಎಂಬ ಸತ್ಯ ಬಯಲಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಂಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಧು, ಆರೋಪಿ ರಘು ಬೈಕ್ ಮೇಲೆ ಪೊಲೀಸ್ ಎಂದು ಹಾಕಿಕೊಂಡು ತಿರುಗಾಡುತ್ತಿದ್ದ ವಿಷಯ ನಮ್ಮ ಗಮನಕ್ಕೆ (Murder) ಬಂದಿರಲಿಲ್ಲ. ಆತ ಪೊಲೀಸ್ ಇಲಾಖೆಯಲ್ಲಿ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

You Might Also Like

Murder | ಅನೈತಿಕ ಸಂಬಂಧಕ್ಕೆ ಕೊಲೆ, ಮಹಿಳೆ ಸೇರಿ ಮೂರು ಜನ ಬಂಧನ

Challakere crime | ನವವಿವಾಹಿತೆ ಆತ್ಮಹತ್ಯೆ, ಇಬ್ಬರ ಮೇಲೆ FIR ದಾಖಲು

Accident | ಕಾರು ಟ್ರಾಕ್ಟರ್ ನಡುವೆ ಅಪಘಾತ, ನಾಲ್ವರು ಸ್ಥಳದಲೇ ಸಾವು

Madakarinayaka | ದುರ್ಗದಲ್ಲಿ ಮದಕರಿನಾಯಕರ ಥೀಮ್ ಪಾರ್ಕ್ ಮಾಡಿ

Sports | ವಿ.ವಿ. ಮಟ್ಟದ ಕ್ರೀಡೆಯಲ್ಲಿ ಹೊಸದುರ್ಗದ ವಿದ್ಯಾರ್ಥಿಗಳು ಪ್ರಥಮ

TAGGED:ends in murderGutka riotHosadurgaMurder
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article Today Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
Next Article Award | ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ ಆಹ್ವಾನ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?