Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Muruga Math | ಚಿತ್ರದುರ್ಗ ಬಸವ ಪುತ್ಥಳಿ ನಿರ್ಮಾಣ ಹಣ ದುರ್ಬಳಕೆ ಆರೋಪ, ಸರ್ಕಾರಕ್ಕೆ DC ವೆಂಕಟೇಶ್ ಪತ್ರ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Muruga Math | ಚಿತ್ರದುರ್ಗ ಬಸವ ಪುತ್ಥಳಿ ನಿರ್ಮಾಣ ಹಣ ದುರ್ಬಳಕೆ ಆರೋಪ, ಸರ್ಕಾರಕ್ಕೆ DC ವೆಂಕಟೇಶ್ ಪತ್ರ
ಇಂದಿನ ಸುದ್ದಿ

Muruga Math | ಚಿತ್ರದುರ್ಗ ಬಸವ ಪುತ್ಥಳಿ ನಿರ್ಮಾಣ ಹಣ ದುರ್ಬಳಕೆ ಆರೋಪ, ಸರ್ಕಾರಕ್ಕೆ DC ವೆಂಕಟೇಶ್ ಪತ್ರ

Editor Nammajana
Last updated: 28 February 2025 9:05 AM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|28-02-2025

ನಮ್ಮಜನ.ಕಾಂ, ಚಿತ್ರದುರ್ಗ: ಮುರುಘಾ ಮಠದ ಬಸವ ಪುತ್ಥಳಿ ಅನುದಾನ ದುರ್ಬಳಕೆ ಆರೋಪದ ಹಿನ್ನಲೆ (Muruga Math) ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಹಣ ದುರ್ಬಳಕೆ ಸಂಕಷ್ಟ ಎದುರಾಗಿದ್ದು ಉನ್ನತ ತಜ್ಞರ ತಂಡದ ಮೂಲಕ ತನಿಖೆ ನಡೆಸಲು ಸರ್ಕಾರಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್ ಪತ್ರ ಬರೆದಿದ್ದಾರೆ.

ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ಸಚಿವ ಹೆಚ್ ಏಕಾಂತಯ್ಯ ಅವರು ಬಸವೇಶ್ವರ ಪುತ್ಥಳಿ ಅನುದಾನ ದುರ್ಬಳಕೆ ತನಿಖೆಗೆ ಮನವಿ ಮಾಡಿದ್ದರು.

ಹೆಚ್. ಏಕಾಂತಯ್ಯ ಮುರುಘಾ ಮಠದ ಭಕ್ತರು ಆಗಿದ್ದು ಫೋಕ್ಸೋ ಕೇಸಲ್ಲಿ ಮುರುಘಾಸ್ವಾಮಿ ಜೈಲು ಸೇರಿದ ಬಳಿಕ ತನಿಖೆಗೆ ದೂರು ನೀಡಿದ್ದರು.

ಹಣವನ್ನ ಷರತ್ತು ಉಲ್ಲಂಘಿಸಿ ಶ್ರೀ ಮಠದ ಪೀಠಾಧಿಪತಿ ದುರ್ಬಳಕೆ ಮಾಡಿದ್ದಾಗಿ CJ INFRA ENGG.PVT.LTD ಮತ್ತು JCPL ಸಂಸ್ಥೆಗೆ ಕಾನೂನು ಬಾಹಿರ ಗುತ್ತಿಗೆ ನೀಡಿದ್ದಾಗಿ ಸರ್ಕಾರದ ಹಣವನ್ನ ದುರ್ಬಳಕೆ ಮಾಡಿದ್ದಾಗಿ ಮನವಿ ಸಲ್ಲಿಕೆ ಮಾಡಿದ್ದರು.

ಒಟ್ಟು 280 ಕೋಟಿ ವೆಚ್ಚದಲ್ಲಿ ಪುತ್ಥಳಿ ನಿರ್ಮಿಸಲು ಪ್ಲಾನ್ ಮಾಡಿದ್ದರು. ಸರ್ಕಾರದ ಅನುದಾನ, ಮಠದ ಮೂಲದ ಹಣ ಬಳಕೆ‌ ಮಾಡಿ ಪುತ್ಥಳಿ ನಿರ್ಮಿಸಲು ರೆಡಿಯಾಗಿದ್ದರು.

ದೂರು ಆದರಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ತನಿಖೆ ವರದಿ ಸಲ್ಲಿಕೆಯಾಗಿದ್ದು 2011 ರಿಂದ 2021 ರ ವರೆಗೆ ಹಂತ ಹಂತವಾಗಿ ಹಣ  ಬಿಡುಗಡೆಯಾಗಿದೆ.

325 ಅಡಿ ಎತ್ತರದ ಬಸವೇಶ್ವರ ಕಂಚಿನ ಪುತ್ಥಳಿ ನಿರ್ಮಿಸಲು ಪ್ಲಾನ್ ಮಾಡಿದ್ದರು. ರಾಜ್ಯ ಸರ್ಕಾರಕ್ಕೆ ಡಿಸಿ ವೆಂಕಟೇಶ್ ರಿಂದ ಸಂಕ್ಷಿಪ್ತ ವರದಿ, ತನಿಖೆಗೆ ಪತ್ರ. ಕಂಚಿನ ಪ್ರತಿಮೆಗೆ ಸರ್ಕಾರದಿಂದ ಕೋಟಿ ಕೋಟಿ ಹಣ ಬಿಡುಗಡೆಯಾಗಿದ್ದು ಸರ್ಕಾರದಿಂದ ಬಿಡುಗಡೆಯಾದ ಅನುದಾನ ಖರ್ಚಿನ ಲೆಕ್ಕ ಮೋಸ ಆಗಿದೆ. ಕಂಚಿನ ಪ್ರತಿಮೆಗೆ ಸರ್ಕಾರದಿಂದ 40 ಕೋಟಿ ಅನುದಾನ ಮಂಜೂರುಗಿತ್ತು.

40 ಕೋಟಿಯಲ್ಲಿ ಮಠಕ್ಕೆ 35 ಕೋಟಿ ಹಣ ಬಿಡುಗಡೆ ಮಾಡಿದ್ದು ಉಲ್ಲೇಖಿಸಲಾಗಿದೆ. 35 ಕೋಟಿ ಕಾಮಗಾರಿ ಸ್ಥಳದಲ್ಲಿ ಕಂಡು ಬಂದಿರುವುದಿಲ್ಲ‌.5 ಕೋಟಿ ಹಣ ಪಂಚಾಯ್ತ್ ರಾಜ್ ಇಂಜಿನಿಯರ್ ಇಲಾಖೆ ಬಳಿ ಇದೆ.ಉಳಿದ 240 ಕೋಟಿಗೆ ಅನುದಾನ ಲಭ್ಯತೆ ಮಠದ ಬಳಿ ಇರುವುದಿಲ್ಲ.ಈ ವರೆಗೆ PWD ಯಿಂದ 29.49 ಕೋಟಿ ವೆಚ್ಚವಾಗಿದ್ದಾಗಿ ವರದಿ ನೀಡಲಾಗಿದೆ.ಬಾಕಿ ಹಣ ಕ್ರೂಡಿಕರಣಕ್ಕೆ ಮಠದ ಬಳಿ ಯಾವ ಯೋಜನೆಯೂ ಇಲ್ಲ. ಸರ್ಕಾರದ ಹಣವನ್ನ ಬ್ಯಾಕೆಂಡ್ ಬಳಕೆ ಮಾಡದೆ ಮೊದಲಿಗೆ ಬಳಕೆ ಮಾಡಿದ್ದು‌ಸಂಪನ್ಮೂಲ ಕ್ರೂಡಿಕರಿಸುವ ಪ್ರಯತ್ನಿಸದ ಕಾರಣದಿಂದ ಸರ್ಕಾರದ ಹಣ UNFRUITFUL ಎಂದು ಪರಿಗಣಿಸಬಹುದಾಗಿರುತ್ತೆ.

10 ವರ್ಷಗಳಿಂದ ಯೋಜನೆ ಮಂದಗತಿಯಲ್ಲಿದೆ. ಸಮರ್ಪಕವಾಗಿ ಸರ್ಕಾದ ಹಣ ವಿನಿಯೋಗಿಸದೆ.ಪುತ್ಥಳಿ ಕಾಮಗಾರಿ ಫಲಪ್ರದವಾಗದೆ ಇರುವುದು ಕಂಡು (Muruga Math) ಬಂದಿದೆ.ಸರ್ಕಾರದ ಹಣ ಮಂಜೂರಾತಿ ಅನುಷ್ಠಾನ ಏಜನ್ಸಿ ಕುರಿತು ಸ್ಪಷ್ಟನೆ ಇಲ್ಲವಾಗಿದೆ.ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಜಿಲ್ಲಾ ತನಿಖಾ ತಂಡ ವರದಿ ನೀಡಿತ್ತು.ಬಳಿಕ ತಾಂತ್ರಿಕ ವರದಿ ಸಲ್ಲಿಕೆಗೆ PWD ಗೆ ಸೂಚನೆ ನೀಡಿದ್ದ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಿಸಿ ದಿವ್ಯಪ್ರಭು ಅಧಿಕಾರ ದಲ್ಲಿದ್ದಾಗ ಸೂಚನೆ ನೀಡಿದ್ದರು.

ಡಿಸಿ ಸೂಚನೆ ಮೇರೆಗೆ ತಾಂತ್ರಿಕ ವರದಿ ನೀಡಿರುವ PWD ಅಧಿಕಾರಿಗಳು ಇವರೆಗೆ 26 ಕೋಟಿ 35 ಲಕ್ಷ, 33 ಸಾವಿರ, 506 ರೂ,ಖರ್ಚು ಮಾಡಿದ್ದಾಗಿ ವರದಿ ಸಲ್ಲಿಕೆ.ಉಳಿದ ಮೊತ್ತದ ಕುರಿತು ಬ್ಯಾಂಕ್ ಪಾಸ್ ಬುಕ್ ದೃಡಿಕರಣ ಕೇಳಿದ್ದ ಜಿಲ್ಲಾಧಿಕಾರಿಗಳಿಗೆ ಪ್ರತಿಕ್ರಿಗೆ ನೀಡದೆ ಆಡಳಿತಾಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿದ್ದಾರೆ.

ಜಿಲ್ಲಾ ಮಟ್ಟದ ತನಿಖಾ ತಂಡ, PWD ತಾಂತ್ರಿಕ ವರದಿ ಆಧರಿಸಿ ಸರ್ಕಾರಕ್ಕೆ ಪತ್ರ ಬರೆದಿರುವ ಡಿಸಿ ವೆಂಕಟೇಶ್ ಅವರು (Muruga Math) ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖಾ/ ತಜ್ಞರ ತಂಡ ರಚಿಸಿ ತನಿಖೆ ನಡೆಸುವುದು ಸೂಕ್ತ ಎಂದು ಪತ್ರ ಬರೆದಿದ್ದಾರೆ. ಒಟ್ಟು ಹಣದಲ್ಲಿ 4 ಕೋಟಿಗೂ ಹೆಚ್ಚು ಹಣ ಬಳಕೆಗೆ ದಾಖಲೆ ಇಲ್ಲ ಎಂಬುದು ಪರೋಕ್ಷ ಸಾಬೀತು? ಆದಂತೆ ಆಗಿದೆ.

ಇದನ್ನೂ ಓದಿ: chitradurga | ಹೊಳಲ್ಕೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಪರಮೇಶ್ವರಪ್ಪ ಆಯ್ಕೆ

ಫೋಕ್ಸೋ ಕೇಸಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗಿರುವ ಮುರುಘಾ ಶ್ರೀ ಗಳಿಗೆ ಮತ್ತೊಂದು ಸಂಕಷ್ಟ ಎದುರಾಗಬಹುದಾ ಎಂಬ ಪ್ರಶ್ನೆ ಎದುರಾಗಿದೆ.ಸದ್ಯ ಕೋರ್ಟ್ ಆದೇಶದಂತೆ ಮಠದಿಂದ ಹೊರಗಿರುವ ಮುರುಘಾ (Muruga Math) ಶ್ರೀ,,ಮಠದಲ್ಲಿದ್ದಾಗ ಹಣ ದುರ್ಬಳಕೆ ಮಾಡಿರುವುದಾಗಿ ಆರೋಪ ಕೇಳಿದ್ದು ದಾಖಲೆ ಸಹಿತ ಸರ್ಕಾರಕ್ಕೆ ಡಿಸಿ ವೆಂಕಟೇಶ್ ಪತ್ರ ಬರೆದಿದ್ದಾರೆ.ದಾಖಲೆ ಆಧರಿಸಿ ತನಿಖೆಯಾದ್ರೆ ಮುರುಘಾ ಶ್ರೀಗೆ ಮತ್ತೆ ಸಂಕಷ್ಟ ಜೊತೆಗೆ ಸರ್ಕಾರದ ಹಣ ದುರ್ಬಳಕೆ ಆರೋಪ ಸಾಬೀತಾದ್ರೆ ಶಿಕ್ಷೆ ಸಾಧ್ಯತೆ ಇದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

TAGGED:Basava PutthaliChitradurgaMisappropriation of GrantsMuruga MathMuruga Sriಅನುದಾನ ದುರ್ಬಳಕೆಚಿತ್ರದುರ್ಗಬಸವ ಪುತ್ಥಳಿಮುರುಘಾ ಮಠಮುರುಘಾ ಶ್ರೀ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article chitradurga | ಹೊಳಲ್ಕೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಪರಮೇಶ್ವರಪ್ಪ ಆಯ್ಕೆ
Next Article Assistant Commissioner | ಉಪವಿಭಾಗಾಧಿಕಾರಿಯಾಗಿ ಮೆಹಬೂಬ್ ಜಿಲಾನ್ ಅಧಿಕಾರ ಸ್ವೀಕಾರ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ
ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?
ವಿಶೇಷ ಸುದ್ದಿ
FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?