Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಇದು ರಸ್ತೆಯೋ ಹಳ್ಳವೋ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೇಳಬೇಕು | National Highway
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಇದು ರಸ್ತೆಯೋ ಹಳ್ಳವೋ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೇಳಬೇಕು | National Highway
ಇಂದಿನ ಸುದ್ದಿ

ಇದು ರಸ್ತೆಯೋ ಹಳ್ಳವೋ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಹೇಳಬೇಕು | National Highway

Editor Nammajana
Last updated: 22 October 2024 6:57 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|22-10-2024

ವರದಿ: ರಾಜ ಸಿರಿಗೆರೆ

ನಮ್ಮಜನ.ಕಾಂ, ಸಿರಿಗೆರೆ:  ತಡರಾತ್ರಿ ಮತ್ತೆ ಆರ್ಭಟಿಸಿದ ವರುಣನ ಮುನಿಸಿಗೆ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಹೊಂದಿಕೊಂಡಿರುವ ಕೊಳಹಾಳ್‌ ಗ್ರಾಮದ ಜನರು ಅಕ್ಷರಶಃ ನೊಂದು ಹೋಗಿದ್ದಾರೆ. ಆದರೆ ಅವರ ಮುನಿಸು ವರುಣ (National Highway) ದೇವನ ಮೇಲಿರದೆ, ತಮ್ಮ ಗ್ರಾಮವನ್ನು ಸೀಳಿಕೊಂಡು ಹಾಯ್ದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದ ಪುಣ್ಯಾತ್ಮರ ಮೇಲಿದೆ.

ಇಂದು ಬೆಳಗಾಗುತ್ತಿದ್ದಂತೆ ಗ್ರಾಮಸ್ಥರು ಮನೆಗಳ ಮುಂದೆಯೇ ಹಾಯ್ದು ಹೋಗಿದ್ದ ರಸ್ತೆಯೇ ಕಾಣದಂತೆ ಒಂದು ಕಿ.ಮೀ.ಗೂ ದೂರದಿಂದ ಮೊಣಕಾಲುಮಟ್ಟದ ನೀರು ನಿಂತಿರುವುದು ಅರಿವಿಗೆ ಬಂದಿದೆ.

ಗ್ರಾಮಕ್ಕೆ ಹೊಂದಿಕೊಂಡಿರುವಂತೆ ಪಿ.ಎನ್.ಸಿ. ಯವರು ಪ್ಲೈ ಓವರ್‌ ನಿರ್ಮಾಣ ಮಾಡಿ ಕೆಳಗಿನ ಸರ್ವಿಸ್‌ ರಸ್ತೆಯನ್ನು ಕಳಪೆ ಮಾಡಿದ್ದಾರೆ. ಪರಿಣಾಮವಾಗಿ ನೀರು ಹರಿಯಲು ಜಾಗವೂ ಇಲ್ಲದ್ದರಿಂದ ರಸ್ತೆಯುದ್ದಕ್ಕೂ ನೀರು ನಿಂತು ಜನರಿಗೆ ಸಂಕಷ್ಟ ಉಂಟು ಮಾಡಿದೆ.

ಗ್ರಾಮದ ಬದಿಯಲ್ಲಿಯೇ ಇರುವ ವ್ಯವಸಾಯ ಸೇವಾ ಸಹಕಾರ ಸಂಘದ ಕಚೇರಿ, ಹಲವು ಮನೆಗಳಿಗೂ ನೀರು ನುಗ್ಗಿದೆ. ರಸ್ತೆಯ ಬದಿಯಲ್ಲಿ ರಾಶಿ ಮಾಡಿದ್ದ ಕಟಾವಿನ ಬೆಳೆಗಳು ಸಹ ನೀರಲ್ಲಿ ಮುಳುಗಿ ಹೋಗಿವೆ.

ಅಷ್ಟಲ್ಲದೆ ಸೋಮವಾರ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ವಿತರಣೆ ಮಾಡುತ್ತಿದ್ದ ಪಡಿತರವನ್ನು ಮನೆಗಳಿಗೆ ಸಾಗಿಸಲು ಗ್ರಾಹಕರು ಪಡಿಪಾಟಲು ಪಡುತ್ತಿದ್ದುದು (National Highway) ಸಾಮಾನ್ಯವಾಗಿತ್ತು. ಮಕ್ಕಳು, ಮಹಿಳೆಯರು ನೀರಿಗೆ ಇಳಿದು ಪಡಿತರ ಪಡೆದು ನೀರಿನಲ್ಲಿ ಸಾಗುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಸಿರಿಗೆರೆ ಸರ್ಕಲ್‌ನಿಂದ ಕೊಳಹಾಳ್‌ ವರೆಗೂ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಹೊಣೆ ಹೊತ್ತಿದ್ದ ಪಿ.ಎನ್.ಸಿ. ಸಂಸ್ಥೆಯವರು ಸರ್ವಿಸ್‌ ರಸ್ತೆಯನ್ನೂ ನಿರ್ಮಿಸಿದ್ದಾರೆ. ಆದರೆ ಆ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದ್ದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ರಸ್ತೆಯ ಬದಿಗೆ ನಿರ್ಮಿಸಬೇಕಾಗಿದ್ದ ಚರಂಡಿಯನ್ನು ಗುಣಾತ್ಮಕವಾಗಿ ನಿರ್ಮಾಣ ಮಾಡದೇ ಇರುವುದು ಇದಕ್ಕೆಲ್ಲಾ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿದರು.

ಸರ್ವಿಸ್‌ ರಸ್ತೆಗಿಂತ ಎತ್ತರದಲ್ಲಿ ಚರಂಡಿ ನಿರ್ಮಾಣ ಮಾಡಿರುವುದರಿಂದ ನೀರು ಸಲೀಸಾಗಿ ಹರಿಯದೆ ರಸ್ತೆಯಲ್ಲಿ ನಿಲ್ಲುತ್ತಿದೆ. ಈ ವಿಷಯವನ್ನು ಹಲವು ಬಾರಿ ಪಿಎನ್‌ಸಿ ಕಂಪನಿಯ ಅಧಿಕಾರಿಗಳಿಗೆ ಹೇಳಿದ್ದರೂ ಅವರು ನಿರ್ಲಕ್ಷ್ಯ (National Highway) ತೋರಿದ್ದಾರೆ ಎಂದು ಗ್ರಾಮ ಪಂಚಾಯ್ತಿಯ ಸದಸ್ಯ ಕೊಳಹಾಳ್‌ ರಾಜಣ್ಣ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯ‌ ಇಂದಿನ ನೀರಿನ ಮಟ್ಟ | Vani Vilasa Sagara Dam

ಸಿರಿಗೆರೆ ಸರ್ಕಲ್‌ನಲ್ಲೂ ಇದೇ ಗತಿ!

ಮತ್ತೊಂದು ಪ್ಲೈಓವರ್‌ ನಿರ್ಮಾಣ ಮಾಡಿರುವ ಸಿರಿಗೆರೆಯ ಸರ್ಕಲ್ಲಿನಲ್ಲಿಯೂ ಪರಿಸ್ಥಿತಿ ಇದೇ ರೀತಿ ಇದೆ. ಸರ್ವಿಸ್‌ ರಸ್ತೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಅಲ್ಲಿ ಹೊಂಡವೇ ಸೃಷ್ಟಿಯಾದಂತಾಗಿದೆ. ಸಾಕಷ್ಟು ನೀರು (National Highway) ರಸ್ತೆಯಲ್ಲಿಯೇ ನಿಂತಿದ್ದರಿಂದ ಭರಮಸಾಗರ ಮತ್ತು ದಾವಣಗೆರೆ ಕಡೆಗೆ ಹೋಗುವ ಜನರ ಗೋಳು ಹೇಳ ತೀರದ್ದಾಗಿತ್ತು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

Adike Rate | ಅಡಿಕೆ ರೇಟ್ | ಯಾವ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ

Coconut sapling: ಹೊಸದಾಗಿ ತೆಂಗಿನ ಸಸಿ ನಾಟಿ ಮಾಡಿಕೊಳ್ಳುವ ರೈತರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ಹೋಟೆಲ್ ಉದ್ದಿಮೆಯಲ್ಲಿ ಮಹಿಳೆಯರು ಪಾಲ್ಗೊಳ್ಳಲು ಅಕ್ಕ ಕೆಫೆ ಉತ್ತೇಜನ : ಸಚಿವ ಡಿ.ಸುಧಾಕರ್ | Akka Cafe

ಬಂಗಾರದ ಬೆಲೆಯಲ್ಲಿ ಏರಿಕೆ | Today Gold Rate

kadu kayuva mara: ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ನೀಡಬಲ್ಲರು: ಡಾ.ಬಿ.ಆರ್.ರವಿಕಾಂತೇಗೌಡ

TAGGED:ChitradurgaChitradurga NewsHighway AuthorityKannada Newskannada suddiKolalNammajana.comNational HighwayrainService RoadSirigere Crossಕನ್ನಡ ನ್ಯೂಸ್ಕನ್ನಡ ಸುದ್ದಿಕೊಳಾಲ್ಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಮಳೆರಾಷ್ಟ್ರೀಯ ಹೆದ್ದಾರಿಸರ್ವಿಸ್ ರಸ್ತೆಸಿರಿಗೆರೆ ಕ್ರಾಸ್ಹೆದ್ದಾರಿ ಪ್ರಾಧಿಕಾರ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ವಾಣಿ ವಿಲಾಸ ಸಾಗರ ಜಲಾಶಯ‌ ಇಂದಿನ ನೀರಿನ ಮಟ್ಟ | Vani Vilasa Sagara Dam
Next Article Bike accident: ಭೀಕರ ಲಾರಿ-ಬೈಕ್ ಅಪಘಾತ, SRS ಕಾಲೇಜು ವಿದ್ಯಾರ್ಥಿ ಸಾವು, ತಲೆ ಬುರುಡೆಯಿಂದ ಹರಿದ ರಕ್ತ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Today Dina Bhavishya | ದಿನ ಭವಿಷ್ಯ | ಆಗಸ್ಟ್ 04
ದಿನ ಭವಿಷ್ಯ
Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ
ಇಂದಿನ ಸುದ್ದಿ
Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ರಾಜಕೀಯ
ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?