Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: 25 ವರ್ಷದ ನಂತರ ಐತಿಹಾಸಿಕ ನಾಯಕನಹಟ್ಟಿ ಚಿಕ್ಕಕೆರೆ ಕೋಡಿ | Nayakanahatti Chikkakere
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > 25 ವರ್ಷದ ನಂತರ ಐತಿಹಾಸಿಕ ನಾಯಕನಹಟ್ಟಿ ಚಿಕ್ಕಕೆರೆ ಕೋಡಿ | Nayakanahatti Chikkakere
ಇಂದಿನ ಸುದ್ದಿ

25 ವರ್ಷದ ನಂತರ ಐತಿಹಾಸಿಕ ನಾಯಕನಹಟ್ಟಿ ಚಿಕ್ಕಕೆರೆ ಕೋಡಿ | Nayakanahatti Chikkakere

Editor Nammajana
Last updated: 20 October 2024 07:11
By Editor Nammajana 2 Min Read
Share
SHARE

Chitradurga news |nammajana.com|20-10-2024

ನಮ್ಮಜನ.ಕಾಂ, ನಾಯಕನಹಟ್ಟಿ: ನಿರಂತರ ಮಳೆಯಿಂದಾಗಿ 25 ವರ್ಷದ ನಂತರ ಐತಿಹಾಸಿಕ ಚಿಕ್ಕ ಕೆರೆ ಸೇರಿ ಸುತ್ತಲ (Nayakanahatti Chikkakere) ಮೂರು ಕೆರೆಗಳು ಕೋಡಿ ಹರಿಯುತ್ತಿದ್ದು, ಜಲರಾಶಿ ವೀಕ್ಷಿಸಲು ಜನಜಾತ್ರೆ ನೆರೆಯುತ್ತಿದೆ. ರಾಜ್ಯದಲ್ಲೇ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆಪಟ್ಟಿಯನ್ನು ಹಸ್ತ ಮತ್ತು ಚಿತ್ತ ಮಳೆಗಳು ಕಿತ್ತೆಸೆದಿವೆ. ಒಂದು ವಾರದಿಂದ ಅಬ್ಬರಿಸುತ್ತಿರುವ ಹಸ್ತ-ಚಿತ್ರ, ಕೆರೆಗಳ ಬರ ನೀಗಿಸಿವೆ.

ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ, ನೀರಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಐತಿಹಾಸಿಕ ಚಿಕ್ಕಕೆರೆ ಬಹುಭಾಗ ಒತ್ತುವರಿಯಾಗಿತ್ತು. ಕೋಡಿ ನೀರು ಹರಿಯಲು ಸಾಧ್ಯವಿಲ್ಲದಷ್ಟು ಮಣ್ಣು ತುಂಬಿತ್ತು. ಕೆರೆ ತುಂಬಿದ ನಂತರ ಎಚ್ಚೆತ್ತ ಸಣ್ಣ ನೀರಾವರಿ ಇಲಾಖೆ ಮತ್ತು ಪಪಂನವರು ಕೋಡಿ ನೀರು (Nayakanahatti Chikkakere) ಹರಿಯುವ ಮಾರ್ಗದಲ್ಲಿದ್ದ ಮಣ್ಣು ತೆರವುಗೊಳಿಸಿ, ಗೂಡಂಗಡಿ ತೆರವು ಮಾಡಿದರು.

ಕೋಡಿ ನೀರಿಗೆ ಅಡ್ಡಿಯಾಗಿದ್ದರಿಂದ ಕೆರೆಯ ತೂಬು ಪೂರ್ಣ ಮುಳುಗಡೆಯಾಗಿತ್ತು. ಕೋಡಿ ನೀರು ಸರಾಗವಾಗಿ ಹೊರಗೆ ಹೋಗದಿದ್ದರೆ ಕೆರೆ ನೀರು ಪಟ್ಟಣಕ್ಕೆ ನುಗ್ಗುತ್ತಿತ್ತು. ಹೀಗಾಗಿ ಬೆಳಗ್ಗೆ ಎಲ್ಲೆಡೆ ಆತಂಕ ಉಂಟಾಗಿತ್ತು. ಅಡ್ಡವಾಗಿದ್ದ ಮಣ್ಣು ಮತ್ತು ಒತ್ತುವರಿ ನಿವಾರಿಸಿದ ನಂತರ ನೀರು ಸರಾಗವಾಗಿ ಹರಿಯುತ್ತಿದೆ. ಎರಡೂ ಕೋಡಿಗಳ ಮೂಲಕ ನೀರು (Nayakanahatti Chikkakere) ಆಂಧ್ರಪ್ರದೇಶ ಸೇರುತ್ತಿದೆ. ಅಪರೂಪಕ್ಕೆ ತುಂಬಿದ ಕೆರೆಗೆ ಮಹಿಳೆಯರು, ಮಕ್ಕಳು ಪೂಜೆ ಸಲ್ಲಿಸಿ ಖುಷಿಪಟ್ಟರು.

ಇದನ್ನೂ ಓದಿ: ಚಳ್ಳಕೆರೆ ಕ್ಷೇತ್ರದ ಮತದಾರರ ಸಮ್ಮುಖದಲ್ಲಿ ನನ್ನ ಮಗಳ ಮದುವೆ ಮಾಡಲು ಸಂಕಲ್ಪ ಮಾಡಿದ್ದೆ, ಬನ್ನಿ ಹರಸಿ ಆಶೀರ್ವದಿಸಿ: ಟಿ.ರಘುಮೂರ್ತಿ | T. Raghumurthy

ಎನ್.ದೇವರಹಳ್ಳಿಯ ಹಳ್ಳದ ಮೇಲಿರುವ ಅಂಗನವಾಡಿ ಕೇಂದ್ರದ ಅರ್ಧ ಭಾಗ ಮಳೆ ನೀರಿನಲ್ಲಿ ಮುಳುಗಡೆಯಾಗಿದೆ. ಗ್ರಾಮದ ಮೇಲ್ಬಾಗದಲ್ಲಿದ್ದ ಚೆಕ್ ಡ್ಯಾಮ್ ಒಡೆದ ಪರಿಣಾಮ ನೀರು ಅಂಗನವಾಡಿ ಕೇಂದ್ರ ಆವರಿಸಿದೆ. ನೇರಲಗುಂಟೆ-ಎನ್.ದೇವರಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಕೊಚ್ಚಿಹೋಗಿದ್ದು, 30 ಅಡಿ ಉದ್ದದ ರಸ್ತೆ ಕೊಚ್ಚಿಹೋಗಿ, ಬಸ್ ಸಂಚಾರ ಸ್ಥಗಿತಗೊಂಡಿದೆ. ಎನ್.ದೇವರಹಳ್ಳಿ ಗ್ರಾಮದಲ್ಲಿ ಮಾಳಿಗೆ ಮನೆಗಳು ಸಂಪೂರ್ಣ ಕುಸಿದಿವೆ.ಎನ್.ದೇವರಹಳ್ಳಿ ಗ್ರಾಮದಲ್ಲಿ ಕೊಚ್ಚಿ ಹೋಗಿದ್ದ ಶೇಂಗಾ ಗಿಡಗಳನ್ನು ಸಂಗ್ರಹಿಸುತ್ತಿರುವ ರೈತ.

ಭೀಮನ ಕೆರೆ ಭರ್ತಿ:

ನೇರಲಗುಂಟೆ ಸಮೀಪವಿರುವ ಭೀಮನಕೆರೆ ಭರ್ತಿಯಾಗಿ ಕೋಡಿ ಹರಿದಿದೆ. 60 ವರ್ಷಗಳ ಹಿಂದೆ ತುಂಬಿದ್ದ ಈ ಕೆರೆಗೆ ನೀರು ಹರಿದಿರುವುದು ಸ್ಥಳೀಯರ ಹೆಚ್ಚಿಸಿದೆ.

ಎರಡೂ ಕೋಡಿಗಳಲ್ಲಿ ಭಾರೀ ಪ್ರಮಾಣದ ನೀರು (Nayakanahatti Chikkakere)

ಎರಡು ಕೋಡಿಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಕೆರೆ ಕೋಡಿ ಪಕ್ಕದಲ್ಲಿರುವ ದೇವಿಗೆ ಪೂಜೆ ಸಲ್ಲಿಸಿದರು. 2007 ರಲ್ಲಿ ತುಂಬಿದ್ದ ತಿಪ್ಪಯ್ಯನಕೋಟೆ ಕೆರೆ ಕೂಡ ಕೋಡಿ, ಹರಿದಿದೆ. ತಳಕು ಕೆರೆ ಕೂಡ ಭರ್ತಿಯಾಗಿದೆ.

ಇದನ್ನೂ ಓದಿ: ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರಲ್ಲ | ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ | POWER CUT

ಕೊಚ್ಚಿಹೋದ ಬೆಳೆಗಳು: (Nayakanahatti Chikkakere)

ಎನ್.ದೇವರಹಳ್ಳಿ, ವರವು, ಭೀಮನ ಕೆರೆ ಪ್ರದೇಶದಲ್ಲಿ 5ಕ್ಕೂ ಹೆಚ್ಚು ಚಿಕ್ ಡ್ಯಾಂಗಳು ಕೊಚ್ಚಿ ಹೋಗಿವೆ. ಹೀಗಾಗಿ ಭಾರೀ ಪ್ರಮಾಣದ ನೀರು ಒಮ್ಮೆಲೆ ನುಗ್ಗಿದೆ. ಎನ್. ಗೌರೀಪುರ (Nayakanahatti Chikkakere) ಗ್ರಾಮದ ಸಮೀಪದ 3 ಎಕರೆ ಪ್ರದೇಶದಲ್ಲಿದ್ದ ಶೇಂಗಾ, ಕಿತ್ತು ಹೊಲದಲ್ಲಿ ಹಾಕಲಾಯಿತ್ತು. ಮಳೆಯಿಂದಾಗಿ ಶೇಂಗಾ ಗಿಡಗಳು ಕೊಚ್ಚಿಹೋಗಿವೆ. ತಗ್ಗುಪ್ರದೇಶದಲ್ಲಿ ಬಿದ್ದಿದ್ದ ಶೇಂಗಾ ಗಿಡಗಳನ್ನು ರೈತರು ಸಂಗ್ರಹಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:ChallakereChikkareChitradurgaChitradurga DistrictChitradurga NewsKannada Newskannada suddiKodiNammajana.comNayakanahattiNayakanahatti Chikkakereಕನ್ನಡ ನ್ಯೂಸ್ಕನ್ನಡ ಸುದ್ದಿಕೋಡಿಚಳ್ಳಕೆರೆಚಿಕ್ಕಕೆರೆಚಿತ್ರದುರ್ಗಚಿತ್ರದುರ್ಗ ಜಿಲ್ಲೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನಾಯಕನಹಟ್ಟಿನಾಯಕನಹಟ್ಟಿ ಚಿಕ್ಕಕೆರೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಚಿತ್ರದುರ್ಗ | ಜಿಲ್ಲೆಯಲ್ಲಿ 55 ಮನೆಗಳು ಹಾನಿ, 7.8 ಮಿ.ಮೀ ಮಳೆ, ಎಲ್ಲೆಲ್ಲಿ ಏನೆಲ್ಲ ನಷ್ಟವಾಗಿದೆ ನೋಡಿ | Rain
Next Article Dina Bhavishya: ದಿನ ಭವಿಷ್ಯ 21-10-2024
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?