
Chitradurga news |nammajana.com|20-10-2024
ನಮ್ಮಜನ.ಕಾಂ, ನಾಯಕನಹಟ್ಟಿ: ನಿರಂತರ ಮಳೆಯಿಂದಾಗಿ 25 ವರ್ಷದ ನಂತರ ಐತಿಹಾಸಿಕ ಚಿಕ್ಕ ಕೆರೆ ಸೇರಿ ಸುತ್ತಲ (Nayakanahatti Chikkakere) ಮೂರು ಕೆರೆಗಳು ಕೋಡಿ ಹರಿಯುತ್ತಿದ್ದು, ಜಲರಾಶಿ ವೀಕ್ಷಿಸಲು ಜನಜಾತ್ರೆ ನೆರೆಯುತ್ತಿದೆ. ರಾಜ್ಯದಲ್ಲೇ ಕಡಿಮೆ ಮಳೆ ಬೀಳುವ ಪ್ರದೇಶ ಎಂಬ ಹಣೆಪಟ್ಟಿಯನ್ನು ಹಸ್ತ ಮತ್ತು ಚಿತ್ತ ಮಳೆಗಳು ಕಿತ್ತೆಸೆದಿವೆ. ಒಂದು ವಾರದಿಂದ ಅಬ್ಬರಿಸುತ್ತಿರುವ ಹಸ್ತ-ಚಿತ್ರ, ಕೆರೆಗಳ ಬರ ನೀಗಿಸಿವೆ.
ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ, ನೀರಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಐತಿಹಾಸಿಕ ಚಿಕ್ಕಕೆರೆ ಬಹುಭಾಗ ಒತ್ತುವರಿಯಾಗಿತ್ತು. ಕೋಡಿ ನೀರು ಹರಿಯಲು ಸಾಧ್ಯವಿಲ್ಲದಷ್ಟು ಮಣ್ಣು ತುಂಬಿತ್ತು. ಕೆರೆ ತುಂಬಿದ ನಂತರ ಎಚ್ಚೆತ್ತ ಸಣ್ಣ ನೀರಾವರಿ ಇಲಾಖೆ ಮತ್ತು ಪಪಂನವರು ಕೋಡಿ ನೀರು (Nayakanahatti Chikkakere) ಹರಿಯುವ ಮಾರ್ಗದಲ್ಲಿದ್ದ ಮಣ್ಣು ತೆರವುಗೊಳಿಸಿ, ಗೂಡಂಗಡಿ ತೆರವು ಮಾಡಿದರು.

ಕೋಡಿ ನೀರಿಗೆ ಅಡ್ಡಿಯಾಗಿದ್ದರಿಂದ ಕೆರೆಯ ತೂಬು ಪೂರ್ಣ ಮುಳುಗಡೆಯಾಗಿತ್ತು. ಕೋಡಿ ನೀರು ಸರಾಗವಾಗಿ ಹೊರಗೆ ಹೋಗದಿದ್ದರೆ ಕೆರೆ ನೀರು ಪಟ್ಟಣಕ್ಕೆ ನುಗ್ಗುತ್ತಿತ್ತು. ಹೀಗಾಗಿ ಬೆಳಗ್ಗೆ ಎಲ್ಲೆಡೆ ಆತಂಕ ಉಂಟಾಗಿತ್ತು. ಅಡ್ಡವಾಗಿದ್ದ ಮಣ್ಣು ಮತ್ತು ಒತ್ತುವರಿ ನಿವಾರಿಸಿದ ನಂತರ ನೀರು ಸರಾಗವಾಗಿ ಹರಿಯುತ್ತಿದೆ. ಎರಡೂ ಕೋಡಿಗಳ ಮೂಲಕ ನೀರು (Nayakanahatti Chikkakere) ಆಂಧ್ರಪ್ರದೇಶ ಸೇರುತ್ತಿದೆ. ಅಪರೂಪಕ್ಕೆ ತುಂಬಿದ ಕೆರೆಗೆ ಮಹಿಳೆಯರು, ಮಕ್ಕಳು ಪೂಜೆ ಸಲ್ಲಿಸಿ ಖುಷಿಪಟ್ಟರು.
ಎನ್.ದೇವರಹಳ್ಳಿಯ ಹಳ್ಳದ ಮೇಲಿರುವ ಅಂಗನವಾಡಿ ಕೇಂದ್ರದ ಅರ್ಧ ಭಾಗ ಮಳೆ ನೀರಿನಲ್ಲಿ ಮುಳುಗಡೆಯಾಗಿದೆ. ಗ್ರಾಮದ ಮೇಲ್ಬಾಗದಲ್ಲಿದ್ದ ಚೆಕ್ ಡ್ಯಾಮ್ ಒಡೆದ ಪರಿಣಾಮ ನೀರು ಅಂಗನವಾಡಿ ಕೇಂದ್ರ ಆವರಿಸಿದೆ. ನೇರಲಗುಂಟೆ-ಎನ್.ದೇವರಹಳ್ಳಿ ನಡುವೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಕೊಚ್ಚಿಹೋಗಿದ್ದು, 30 ಅಡಿ ಉದ್ದದ ರಸ್ತೆ ಕೊಚ್ಚಿಹೋಗಿ, ಬಸ್ ಸಂಚಾರ ಸ್ಥಗಿತಗೊಂಡಿದೆ. ಎನ್.ದೇವರಹಳ್ಳಿ ಗ್ರಾಮದಲ್ಲಿ ಮಾಳಿಗೆ ಮನೆಗಳು ಸಂಪೂರ್ಣ ಕುಸಿದಿವೆ.ಎನ್.ದೇವರಹಳ್ಳಿ ಗ್ರಾಮದಲ್ಲಿ ಕೊಚ್ಚಿ ಹೋಗಿದ್ದ ಶೇಂಗಾ ಗಿಡಗಳನ್ನು ಸಂಗ್ರಹಿಸುತ್ತಿರುವ ರೈತ.
ಭೀಮನ ಕೆರೆ ಭರ್ತಿ:
ನೇರಲಗುಂಟೆ ಸಮೀಪವಿರುವ ಭೀಮನಕೆರೆ ಭರ್ತಿಯಾಗಿ ಕೋಡಿ ಹರಿದಿದೆ. 60 ವರ್ಷಗಳ ಹಿಂದೆ ತುಂಬಿದ್ದ ಈ ಕೆರೆಗೆ ನೀರು ಹರಿದಿರುವುದು ಸ್ಥಳೀಯರ ಹೆಚ್ಚಿಸಿದೆ.
ಎರಡೂ ಕೋಡಿಗಳಲ್ಲಿ ಭಾರೀ ಪ್ರಮಾಣದ ನೀರು (Nayakanahatti Chikkakere)
ಎರಡು ಕೋಡಿಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಕೆರೆ ಕೋಡಿ ಪಕ್ಕದಲ್ಲಿರುವ ದೇವಿಗೆ ಪೂಜೆ ಸಲ್ಲಿಸಿದರು. 2007 ರಲ್ಲಿ ತುಂಬಿದ್ದ ತಿಪ್ಪಯ್ಯನಕೋಟೆ ಕೆರೆ ಕೂಡ ಕೋಡಿ, ಹರಿದಿದೆ. ತಳಕು ಕೆರೆ ಕೂಡ ಭರ್ತಿಯಾಗಿದೆ.
ಇದನ್ನೂ ಓದಿ: ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರಲ್ಲ | ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ | POWER CUT
ಕೊಚ್ಚಿಹೋದ ಬೆಳೆಗಳು: (Nayakanahatti Chikkakere)
ಎನ್.ದೇವರಹಳ್ಳಿ, ವರವು, ಭೀಮನ ಕೆರೆ ಪ್ರದೇಶದಲ್ಲಿ 5ಕ್ಕೂ ಹೆಚ್ಚು ಚಿಕ್ ಡ್ಯಾಂಗಳು ಕೊಚ್ಚಿ ಹೋಗಿವೆ. ಹೀಗಾಗಿ ಭಾರೀ ಪ್ರಮಾಣದ ನೀರು ಒಮ್ಮೆಲೆ ನುಗ್ಗಿದೆ. ಎನ್. ಗೌರೀಪುರ (Nayakanahatti Chikkakere) ಗ್ರಾಮದ ಸಮೀಪದ 3 ಎಕರೆ ಪ್ರದೇಶದಲ್ಲಿದ್ದ ಶೇಂಗಾ, ಕಿತ್ತು ಹೊಲದಲ್ಲಿ ಹಾಕಲಾಯಿತ್ತು. ಮಳೆಯಿಂದಾಗಿ ಶೇಂಗಾ ಗಿಡಗಳು ಕೊಚ್ಚಿಹೋಗಿವೆ. ತಗ್ಗುಪ್ರದೇಶದಲ್ಲಿ ಬಿದ್ದಿದ್ದ ಶೇಂಗಾ ಗಿಡಗಳನ್ನು ರೈತರು ಸಂಗ್ರಹಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.