Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಆನ್‌ಲೈನ್ ಮೋಸ | ಹಣದ ಆಸೆಗೆ 10 ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಜನ | Online fraud
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > ಆನ್‌ಲೈನ್ ಮೋಸ | ಹಣದ ಆಸೆಗೆ 10 ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಜನ | Online fraud
ಕ್ರೈಂ ಸುದ್ದಿ

ಆನ್‌ಲೈನ್ ಮೋಸ | ಹಣದ ಆಸೆಗೆ 10 ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಜನ | Online fraud

Editor Nammajana
Last updated: 1 November 2024 04:33
By Editor Nammajana 2 Min Read
Share
SHARE

Chitradurga news|nammajana.com|1-11-2024

 

ನಮ್ಮಜನ ಸಮಾಚಾರ, ಹೊಸದುರ್ಗ: ಅತೀ ಆಸೆಯಿಂದ ಎಎಸ್‌ಒ ಹೆಸರಿನ ಮೊಬೈಲ್ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದ ಸಾವಿರಕ್ಕೂ ಹೆಚ್ಚು ಜನರು ಸುಮಾರು 10 ಕೋಟಿ (Online fraud) ರು.ಗೂ ಹೆಚ್ಚಿನ ಹಣ ಕಳೆದುಕೊಂಡಿರುವ ಅನ್‌ಲೈನ್ ದೋಖಾ ಪ್ರಕರಣ ಹೊಸದುರ್ಗದಲ್ಲಿ ನಡೆದಿದ್ದು, ಹಣ ಕಳೆದುಕೊಂಡ ಜನರು ಕಂಗಾಲಗಿದ್ದಾರೆ.

ವಾಟ್ಸಪ್ ಗ್ರೂಪ್ ಮೂಲಕ ಜನರನ್ನು ಅಕರ್ಷಿಸಿದ ಅನಾಮಿಕ ವಂಚಕರು ಹಣಕ್ಕೆ ಹೆಚ್ಚಿನ ಮರುಪಾವತಿ ಮಾಡುವ ಆಸೆ ತೋರಿಸಿ ಜನರಿಂದ 2 ಸಾವಿರದಿಂದ 57 ಸಾವಿರದವರಗೆ (Online fraud) ಹೂಡಿಕೆ ಮಾಡಿಸಿದ್ದಾರೆ. ಅಧಿಕೃತ ಮಾಹಿತಿ ಯಿಲ್ಲದೆ ಒಬ್ಬರಿಂದ ಒಬ್ಬರಿಗೆ ಮೊಬೈಲ್ ಮೂಲಕ ಪರಿಚಯವಾದ ಆ್ಯಪ್‌ನಲ್ಲಿ ಕಳೆದ ಎರಡು ತಿಂಗಳಿಂದ ಹಣ ಹೂಡಿಕೆ ಜೋರಾಗಿ ನಡೆಯುತಿತ್ತು.

ಪ್ರತಿ ಶುಕ್ರವಾರ ಹಣವನ್ನು ವ್ಯಾಲೆಟ್‌ನಿಂದ ಹೂಡಿಕೆದಾರರ ಬ್ಯಾಂಕ್ ಖಾತೆ ವರ್ಗಾವಣೆ ಮಾಡಲಾಗುತಿತ್ತು. 2 ತಿಂಗಳು ನಿಗದಿತವಾಗಿ ಹಣ ಮರುಪಾವತಿ ಮಾಡಿದ ವಂಚಕರು ಅಕ್ಟೋಬರ್ 10 ರಿಂದ ಅಡಿಟ್ ನಡೆಯುತ್ತಿದೆ, ಕೇಂದ್ರ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಾಬೇಕಾಗಿದೆ ಎನ್ನುವ ನೆಪ ನೀಡಿ ಹಣ ವರ್ಗಾವಣೆ ನಿಲ್ಲಿಸಿದ್ದಾರೆ.

ಎರಡು ಶುಕ್ರವಾರ ಕೂಡ ವಿವಿಧ ಕಾರಣ ನೀಡಿ ಹಣ ನೀಡಿಲ್ಲ. ಅಕ್ಟೋಬರ್25 ರಂದು ಆ್ಯಪ್ ನ ಪುಟ ತೆರೆದುಕೊಳ್ಳದೆ ಪುನಃ 6 ಸಾವಿರದಿಂದ 20 ಸಾವಿರದವರೆಗೆ ಹೂಡಿಕೆ ಮಾಡಿದರೆ ಆ್ಯಪ್ ರಿಆ್ಯಕ್ಟಿವ್ ಆಗುವ ಮೂಲಕ ಬಾಕಿಯಿರುವ ಹಣ ನಿಮ್ಮ ಖಾತೆಗೆ ಜಮಾ ಆಗುವುದಾಗಿ ಸಂದೇಶ ಕಾಣಿಸಿಕೊಂಡಿದೆ.

ಲಕ್ಷಗಟ್ಟಲೆ ಹಣ ಬರಬೇಕಾಗಿದ್ದ ಹೂಡಿಕೆದಾರರು ಮತ್ತೆ ವಂಚಕರ ಮಾತು ನಂಬಿ ಹಣ ಹಾಕಿದ್ದಾರೆ. ಹಣ ಹಾಕಿದ ನಂತರ ಮತ್ತೆ ಅರಂಭವಾದ ಆ್ಯಪ್‌ನಲ್ಲಿ ಹಣ ಮರುಪಾವತಿ ಪ್ರಕ್ರಿಯೆ ಆರಂಭವಾಗಿದೆ ಅದರೆ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಅಂತಿಮವಾಗಿ ಅಕ್ಟೋಬರ್28 ರಂದು ಎಎಸ್‌ಒ ಆ್ಯಪ್ ಅನ್‌ಲೈನ್ ನಿಂದ ಮಾಯವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ನಿರೀಕ್ಷಿಸಿ ಹಣ ಹೂಡಿಕೆ ಮಾಡಿದ ಸಾವಿರಾರು ಜನರು ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ.

ಘಟನೆ ಹಿನ್ನಲೆ : ಯುನೈಟೆಡ್ ಕಿಂಗ್‌ಡಮ್ ನ ನಂಬರ್‌ ಹೊಂದಿರುವ ಮೀನಾ ಬ್ರೌನ್ಎನ್ನುವ ಮಹಿಳೆಯ ಹೆಸರಿನಲ್ಲಿ ರಚನೆಯಾಗಿರುವ ವಾಟ್ಸಪ್ ಗ್ರೂಪ್ ಮೂಲಕ ಕಾರ್ಯಾಚರಣೆ ನಡೆಸುತಿತ್ತು. ಕನ್ನಡದಲ್ಲಿಯೇ ಗ್ರೂಪ್ ಚಾಟ್ ಮಾಡುವ ಮೂಲಕ ಹೂಡಿಕೆದಾ ರರನ್ನು ನಿಯಂತ್ರಿಸಲಾ ಗುತಿತ್ತು.

ಆಪ್ 6 ಸಾವಿರ ಹೂಡಿಕೆಗೆ ದಿನನಿತ್ಯ 220 ರುಪಾಯಿ, 19700 ಹೂಡಿಕೆಗೆ ದಿನನಿತ್ಯ 760 ರುಪಾಯಿ, 57 ಸಾವಿರ ಹೂಡಿಕೆಗೆ ನಿತ್ಯ 2200 ರು ನೀಡಲಾಗುತಿತ್ತು. ಅಲ್ಲದೆ 10 ಸಾವಿರ ಹೂಡಿಕೆಗೆ 13 ದಿನಗಳ ನಂತರ 47 ಸಾವಿರ ನೀಡುವುದಾಗಿ ತಿಳಿಸಿ ಹೂಡಿಕೆ ಮಾಡಿಸಿ ಯಾರಿಗೂ ಹಣ ನೀಡದೆ ವಂಚನೆ ಮಾಡಲಾಗಿದೆ.

ವಿದೇಶದ ಮೂಲಕ ವಂಚನೆ ಜಾಲ ವ್ಯವಸ್ಥಿತವಾಗಿ ಜನರನ್ನು ವಂಚಿಸಿದೆ. ಲಕ್ಷಾಂತರ ಹಣ ಕಳೆದುಕೊಂಡಿರುವ ಜನರು ವಂಚಕರನ್ನು ಹಿಡಿಯಲಾಗದೆ, ಪೋಲಿಸ್ ಠಾಣೆಗೆ ದೂರು ಕೂಡ ಸಲ್ಲಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಾಕ್ಸ್

ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ನಾನು ಕೂಡಿಟ್ಟಿದ ಹಣವನ್ನು ಎಎಸ್‌ಒ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದೆ. ಮೊದಲ ಎರಡು ಮೂರು ವಾರ ಸರಿಯಾಗಿ ಹಣ ನೀಡಿದ ವಂಚಕರು (Online fraud) ನಂತರ ಹಣ ನೀಡದೆ ವಂಚಿಸಿದ್ದಾರೆ. ನನ್ನಂತಹ ಸುಮಾರು ಜನರು ಇದರಲ್ಲಿ ಹಣ ಹಾಕಿ ಕಳೆದುಕೊಂಡಿದ್ದಾರೆ. ಇದರ ಜಾಲ ತಾಲೂಕಿನ ತುಂಬಾ ಹರಡಿದೆ.

• ಹೆಸರು ಹೇಳಲು ಇಚ್ಚಿಸದ ಯುವಕ ಹೊಸದುರ್ಗ

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?

TAGGED:Chitradurga NewsCrore Crore MoneyFraudHosdurgaJan KangaluKannada Newskannada suddiMobile AppNammajana.comOnline Fraudಆನ್‌ಲೈನ್ ವಂಚನೆಕನ್ನಡ ನ್ಯೂಸ್ಕನ್ನಡ ಸುದ್ದಿಕೋಟಿ ಕೋಟಿ ಹಣಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜನ ಕಂಗಾಲುನಮ್ಮಜನ.ಕಾಂಮೊಬೈಲ್ ಆ್ಯಪ್ವಂಚನೆಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad1
Happy0
Sleepy0
Angry0
Dead0
Wink0
Previous Article ದಿನ ಭವಿಷ್ಯ 1-11-2024 | Dina Bhavishya | ದೀಪಾವಳಿ ಶುಭ ಘಳಿಗೆ ಸಮಯ
Next Article ದಿನ ಭವಿಷ್ಯ 2-11-2024 | Kannada Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?