Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Parashurampura | 63 ತಾಲೂಕು ಅಭಿವೃದ್ದಿಗೆ ಕಾಯೋಕೆ ಆಗಲ್ಲ, ಪರಶುರಾಂಪುರ ತಾಲೂಕು ಘೋಷಣೆ ಆಗಲೇಬೇಕು | ಸದನದಲ್ಲಿ ಸಿಡಿದ ಶಾಸಕ‌ ರಘುಮೂರ್ತಿ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Parashurampura | 63 ತಾಲೂಕು ಅಭಿವೃದ್ದಿಗೆ ಕಾಯೋಕೆ ಆಗಲ್ಲ, ಪರಶುರಾಂಪುರ ತಾಲೂಕು ಘೋಷಣೆ ಆಗಲೇಬೇಕು | ಸದನದಲ್ಲಿ ಸಿಡಿದ ಶಾಸಕ‌ ರಘುಮೂರ್ತಿ
ಇಂದಿನ ಸುದ್ದಿ

Parashurampura | 63 ತಾಲೂಕು ಅಭಿವೃದ್ದಿಗೆ ಕಾಯೋಕೆ ಆಗಲ್ಲ, ಪರಶುರಾಂಪುರ ತಾಲೂಕು ಘೋಷಣೆ ಆಗಲೇಬೇಕು | ಸದನದಲ್ಲಿ ಸಿಡಿದ ಶಾಸಕ‌ ರಘುಮೂರ್ತಿ

Editor Nammajana
Last updated: 18 August 2025 5:15 PM
By Editor Nammajana 3 Min Read
Share
SHARE

Chitradurga news|Nammajana.com|18-8-2025

ನಮ್ಮಜನ.ಕಾಂ, ವಿಧಾನ ಸಭೆ ಅಧಿವೇಶನ: ಚಳ್ಳಕೆರೆ (Parashurampura)  ತಾಲೂಕಿನ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರ ಮಾಡಬೇಕು ಎಂದು ಚಳ್ಳಕೆರೆ ಕ್ಷೇತ್ರದ ಶಾಸಕ ಹಾಗೂ ಸಣ್ಣ ಕೈಗಾರಿಕೆ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಸರ್ಕಾರ ಮತ್ತು ಕಂದಾಯ ಸಚಿವರಿಗೆ ಒತ್ತಾಯಿಸಿದ್ದಾರೆ.

ವಿಧಾನ ಸಭೆ ಅಧಿವೇಶನದಲ್ಲಿ ಪರಶುರಾಂಪುರ ಹೋಬಳಿ ತಾಲೂಕು ಕೇಂದ್ರ ಮಾಡಬೇಕು ಎಂಬುದು ನನ್ನ ಬೇಡಿಕೆಯಾಗಿದೆ. 2013 ರಿಂದ 2018 ರ ಸರ್ಕಾರದಲ್ಲಿ ನಾನು ಪರಶುರಾಂಪುರ ತಾಲೂಕು ಕೇಂದ್ರ ಮಾಡಿ ಎಂದು ಸಿಎಂ ಬಳಿ ಮನವಿ ಮಾಡಿದ್ದೆ ಆಗ ಘೋಷಣೆ ಸಂದರ್ಭದಲ್ಲಿ ಕೈ ತಪ್ಪಿದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಮುಂದೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು.

2016 ರಲ್ಲಿ ಎಂ.ಬಿ.ಪ್ರಕಾಶ್  ವರದಿಯಲ್ಲಿ ಪರಶುರಾಂಪುರ ತಾಲೂಕು ಕೇಂದ್ರಕ್ಕೆ ಶಿಫಾರಸ್ಸು 

2016 ರಲ್ಲಿ ಎಂ.ಬಿ.ಪ್ರಕಾಶ್ ವರದಿಯಲ್ಲಿ ಪರಶುರಾಂಪುರ ತಾಲೂಕು ಕೇಂದ್ರ ಮಾಡಬೇಕು ಎಂದು ವರದಿ ನೀಡಿದ್ದರು (Parashurampura)  ಮತ್ತು ಅಂದಿನ ಸಚಿವರಾದ ಶ್ರೀನಿವಾಸ್ ಪ್ರಸಾದ್ ಅವರು ಸಹ ಒಪ್ಪಿಗೆ ನೀಡಿದ್ದರು ಎಂದರು.
63 ತಾಲೂಕುಗಳ ಘೋಷಣೆ ಸಂದರ್ಭದಲ್ಲಿ ಪರಶುರಾಂಪುರ ತಾಲೂಕು ಕೇಂದ್ರ ಘೋಷಣೆ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಆದರೆ ಆಹ ಸಹ ಆಗಲಿಲ್ಲ 2023 ರಲ್ಲಿ ಸಹ ನಾನು ಸರ್ಕಾರಕ್ಕೆ ಅಧಿವೇಶನ ಸಂದರ್ಭದಲ್ಲಿ ತಾಲೂಕು ಕೇಂದ್ರ ಮಾಡಲು ಒತ್ತಾಯಿಸಿದ್ದು 2024 ರಲ್ಲಿ ತಾಲೂಕು ಕೇಂದ್ರ ಘೋಷಣೆ ಮಾಡುತ್ತಾರೆ ಎಂಬ ನಂಬಿಕೆಯಿಂದ ಕಳೆದ ಬಾರಿ ಇದರ ಬಗ್ಗೆ ಮಾತನಾಡಿಲ್ಲ. ಈಗ ಮತ್ತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದು ಪರಶುರಾಂಪುರ ತಾಲೂಕು ಕೇಂದ್ರ ಮಾಡಲೇಬೇಕು ಎಂದು (Parashurampura)  ಒತ್ತಾಯಿಸಿದರು.

ಹೊಸ ತಾಲೂಕು ಘೋಷಣೆ ಸಂದರ್ಭದಲ್ಲಿ ಪರಶುರಾಂಪುರ ಮೊದಲ ಆದ್ಯತೆ: ಸಚಿವ ಕೃಷ್ಣಬೈರೇಗೌಡ

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಪರಶುರಾಂಪುರ ತಾಲೂಕು ಕೇಂದ್ರ ಮಾಡುವುದು ನಮ್ಮ ಗಮನದಲ್ಲಿದೆ. ಈ ಬಾರಿಯ ಹೊಸ ತಾಲೂಕು ಘೋಷಣೆ ಸಂದರ್ಭದಲ್ಲಿ ಮೊದಲ ಆದ್ಯತೆ ಮೇಲೆ ಪರಶುರಾಂಪುರ ತಾಲೂಕು ಕೇಂದ್ರ ಮಾಡಿಕೊಡುತ್ತೇವೆ. ಈಗಾಗಲೇ  ಘೋಷಣೆ ಮಾಡಿರುವ 63 ತಾಲೂಕು ಕೇಂದ್ರದಲ್ಲಿ 23 ತಾಲೂಕು ಕೇಂದ್ರವಿದೆ. ಉಳಿದಂತೆ 40 ಕಡೆ ಜಾಗ ಮತ್ತು ತಾಲೂಕು ಕೇಂದ್ರ ಕಟ್ಟಡ ಸಹ ಕಟ್ಟಲು ಆಗಿಲ್ಲ ಆದ್ದರಿಂದ ಎಲ್ಲಾ (Parashurampura)  ತಾಲೂಕುಗಳ ಮೂಲಭೂತ ಸೌಕರ್ಯ ಒದಗಿಸಿದ ನಂತರ ಹೊಸ ತಾಲೂಕು ಕೇಂದ್ರಗಳ ಮಾಡಲು ಯೋಚಿಸಲಾಗುತ್ತದೆ. ಸದ್ಯಕ್ಕೆ ಸಿಎಂ ಅವರು ಮತ್ತು ಆರ್ಥಿಕ ಇಲಾಖೆ ಸದ್ಯಕ್ಕೆ ಹೊಸ ತಾಲೂಕು ಘೋಷಣೆ ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂದು ಉತ್ತರ ನೀಡಿದರು.

63 ತಾಲೂಕು ಅಭಿವೃದ್ಧಿ  ಆಗುವವರೆಗೂ ಕಾಯೋಕೆ ಆಗಲ್ಲ

ಸಚಿವ ಮಾತಿಗೆ ಕೆರಳಿದ ಶಾಸಕ ಟಿ.ರಘುಮೂರ್ತಿ ಸಚಿವರ ಮಾತು ಒಪ್ಪಲು ಸಾಧ್ಯವಿಲ್ಲ, ರಾಜ್ಯ ಎಲ್ಲಾ ತಾಲೂಕುಗಳು ಅಭಿವೃದ್ಧಿ ಆಗುವವರೆಗೂ ನಾನು ಕಾಯಲು ಆಗಲ್ಲ. ಒಬ್ಬ ಜನಪ್ರತಿನಿಧಿ ಆದವರು ನಮ್ಮ ಕ್ಷೇತ್ರದ ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಾಗುತ್ತದೆ. ಜನರ ವಿಶ್ವಾಸ ಗಳಿಸಬೇಕಾಗುತ್ತದೆ. 63 ತಾಲೂಕು ಏಕೆ ಅಭಿವೃದ್ಧಿ ಆಗಿಲ್ಲ ಎಂದು ಪ್ರಶ್ನಸುವುದಿಲ್ಲ? ಆದರೆ ಈಗ ಸಚಿವರ ಮಾತು ಕೇಳಿದರೆ ಅಪರಾಧಿಗೆ ಶಿಕ್ಷೆಯಿಂದ ತಪ್ಪಿಸಿಕೊಂಡು ನಿರಾಪರಾಧಿಗೆ ಶಿಕ್ಷೆ ಆದಂತೆ ಆಗುತ್ತದೆ ಎಂದು ಉದಾರಣೆ ನೀಡುವ ಮೂಲಕ ಸರ್ಕಾರ ಮತ್ತು ಸಚಿವರಿಗೆ ಬಿಸಿ ಮುಟ್ಟಿಸಿದರು.
ಸರ್ಕಾರದಲ್ಲಿ ಅನೇಕ ತಪ್ಪುಗಳು, ಕಾನೂನು ತೊಡಕು, ಅವ್ಯವಸ್ಥೆ ಆದಾಗ ಸರಿಪಡಿಸಲು ಬರುತ್ತೆ ಆದರೆ ವಿಶೇಷ ಪ್ರಕರಣದಲ್ಲಿ ನಮ್ಮ‌ತಾಲೂಕು ಘೋಷಣೆ ಮಾಡಲು ಸಚಿವರಿಗೆ ಬರುವುದಿಲ್ವ ಎಂದರು‌.
ನನ್ನ ಕ್ಷೇತ್ರದ ಜನರನ್ನು ಸಮಾಧಾನ ಮಾಡುತ್ತಾ ಬಂದಿದ್ದೇನೆ, ಜನರು ಹೋರಾಟಕ್ಕೆ ಸಿದ್ದರಾಗಿದ್ದು ಆಡಳಿತ ಪಕ್ಷದಲ್ಲಿರುವ ನನ್ನನ್ನು ಅಂತಹ ಪರಿಸ್ಥಿತಿ ಇಳಿಯಲು ಬಿಡಬೇಡಿ ಎಂದು ಸರ್ಕಾರ ಮತ್ತು ಸಚಿವರಿಗೆ ಎಚ್ಚರಿಕೆ ಗಂಟೆ ಬಾರಿಸಿದರು.
ವಿಶೇಷವಾಗಿ ಗಮನ ಹರಿಸಿ ಸಿಎಂ ಮತ್ತು ಡಿಸಿಎಂ , ಸಚಿವರು ನಮ್ಮ ಪರಶುರಾಂಪುರ ತಾಲೂಕು ಕೇಂದ್ರ ಮಾಡಬೇಕು ಎಂದು ಒತ್ತಾಯಿಸಿದರು‌.
ಶಾಸಕರ ಮಾತಿಗೆ ಉತ್ತರಿಸಿದ ಸಚಿವ ಕೃಷ್ಣಬೈರೇಗೌಡ ಶಾಸಕ ರಘುಮೂರ್ತಿ ಅವರ ಅಕ್ರೋಶಕ್ಕೆ ಕಾರಣವಿದೆ. ಕಳೆದ ಸರ್ಕಾರದಲ್ಲಿ ಸಮಿತಿಯಲ್ಲಿ ಶಿಫಾರಸ್ಸು ಆಗಿದೆ.ನಾನು ಮಾತ್ರ ತಾಲೂಕು ಘೋಷಣೆ ಸಂದರ್ಭದಲ್ಲಿ ಮೊದಲ ಆದ್ಯತೆಯ ಮೇಲೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಆದರೆ ಈಗಲೇ ಅಂದರೆ ಅದನ್ನು ಸಿಎಂ ಅವರ ಬಳಿ ಚರ್ಚೆ ನಡೆಸುತ್ತೇನೆ ಇದು ಪಾಲಿಸಿ ಡಿಸಿಷನ್ . ಸದ್ಯಕ್ಕೆ ಬೇಡ ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: Halagali movie : ಹಲಗಲಿ ಚಿತ್ರದ ಫಸ್ಟ್ ರೋರ್ ಬಿಡುಗಡೆ : ವಾರಿಯರ್ ಪಾತ್ರದಲ್ಲಿ ಡಾಲಿ ಧನಂಜಯ್
ರಾಜ್ಯಕ್ಕೆ ತಳುಕು ಹಾಕಬೇಡಿ ಎಂದು ರಘುಮೂರ್ತಿ ಅವರು ಹೇಳುತ್ತಿದ್ದು ಅವರ ಬೇಡಿಕೆ ವಿಶೇಷ ಪ್ರಕಣದಲ್ಲಿದೆ. ಇದನ್ನೂ ಮಾಡಿದರೆ ಉಳಿದ ಶಾಸಕ ಮಿತ್ರರು ಪಟ್ಟಿ ಹಿಡಿದು ಬರುತ್ತಾರೆ ಹಾಗಾಗಿ ನಾನು ಶಾಸಕರ ಗೌರವ ಕಾಪಾಡುವುದು ನಮ್ಮ (Parashurampura)  ಜವಬ್ದಾರಿ, ಸರ್ಕಾರ ನಿಮ್ಮ‌ಜೊತೆ ಇದೆ ಎಂದು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗೌರಿ – ಗಣೇಶ ಹಬ್ಬ, ಚಿತ್ರದುರ್ಗ ಜಿಲ್ಲಾಧಿಕಾರಿಯಿಂದ 13 ಪಾಯಿಂಟ್‌ನ ಪ್ರಮುಖ ಆದೇಶ, ಏನೇನದು? | Gauri Ganesha

Power cut : ಇಂದು ವಿದ್ಯುತ್‌ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?

Dina Bhavishya | ದಿನ ಭವಿಷ್ಯ | 21 ಆಗಸ್ಟ್ 2025 | ರಾಶಿಗಳ ಯೋಗ ಹೇಗಿದೆ

Chitradurga ವರ್ಷಿತಾ ಮರ್ಡರ್ | ಆರೋಪಿ ಚೇತನ್ ವರ್ಷಿತಾ ಕೊಲೆಗೆ ಕಾರಣ ಕೊಟ್ಟಿದ್ದೇನು? ಕೇಳಿದರೆ ನೀವು ಶಾಕ್

CM Siddaramaiah ಗೆ ಖುದ್ದು ಕೃತಜ್ಞತೆ ಸಲ್ಲಿಸಿದ ಮಾದಿಗರು : ಅಲೆಮಾರಿಗಳನ್ನು ಕೈಬಿಡದಂತೆ ಆಂಜನೇಯ ಆಗ್ರಹ

TAGGED:ChallakereChitradurgaChitradurga NewsGovernmentKannada Newskannada suddiMinisterMLA T. RaghumurthyNammajana.comParashurampurpetitionSessionTaluk Declarationಅಧಿವೇಶನಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿತಾಲೂಕು ಘೋಷಣೆನಮ್ಮಜನ.ಕಾಂಪರಶುರಾಂಪುರಮನವಿಶಾಸಕ ಟಿ.ರಘುಮೂರ್ತಿಸಚಿವಸರ್ಕಾರ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy1
Sleepy0
Angry0
Dead0
Wink0
Previous Article Halagali movie : ಹಲಗಲಿ ಚಿತ್ರದ ಫಸ್ಟ್ ರೋರ್ ಬಿಡುಗಡೆ : ವಾರಿಯರ್ ಪಾತ್ರದಲ್ಲಿ ಡಾಲಿ ಧನಂಜಯ್
Next Article Today Adike Rate : ಅಡಿಕೆ ಧಾರಣೆ | 18 ಆಗಸ್ಟ್‌ 2025 | ಭೀಮಸಮುದ್ರ ಅಡಿಕೆ ರೇಟ್ ಎಷ್ಟಿದೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ಚಿತ್ರದುರ್ಗ | ವರ್ಷಿತಾ ಅಮ್ಮನ‌ ಬಳಿ ಮಾತಾಡಿದ್ದು ಕೊನೆಯಾದಾಗಿ ಯಾವಾಗ? ತಾಯಿ ಏನ್ ಹೇಳಿದರು | Varshita Murder Case
ಕ್ರೈಂ ಸುದ್ದಿ
ಚಿತ್ರದುರ್ಗ Varshita murder | ವರ್ಷಿತಾಳ ಕೊಲೆ ಕೇಸ್, ಸಚಿವ ಡಿ.ಸುಧಾಕರ್ ಹೇಳಿದ್ದೇನು | 5 ಲಕ್ಷ ಪರಿಹಾರ ಘೋಷಣೆ
ಇಂದಿನ ಸುದ್ದಿ
today Adike Rate : ಅಡಕೆ ಧಾರಣೆ | 20 ಆಗಸ್ಟ್‌ 2025 | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ 61 ಸಾವಿರ ದಾಟಿದ ಅಡಿಕೆ
ಅಡಿಕೆ ಧಾರಣೆ
ಒಳ‌ ಮೀಸಲಾತಿಗೆ ಸರ್ಕಾರ ಅಧಿಕೃತ ಮುದ್ರೆ | ಸಿಎಂ ವಿಧಾನ ಸಭೆಯಲ್ಲಿ ಏನೆಲ್ಲ‌ ಹೇಳಿದರು? Internal Reservation Karnataka |
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?