Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: PM ವಿಶ್ವಕರ್ಮ ಯೋಜನೆಗೆ ಇಂದಿಗೆ 2 ವರ್ಷ | ತರಬೇತಿ ಸಂಪೂರ್ಣ ಸ್ಥಗಿತ | ಅನುದಾನ ಕಬಳಿಕೆ ಆರೋಪ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > PM ವಿಶ್ವಕರ್ಮ ಯೋಜನೆಗೆ ಇಂದಿಗೆ 2 ವರ್ಷ | ತರಬೇತಿ ಸಂಪೂರ್ಣ ಸ್ಥಗಿತ | ಅನುದಾನ ಕಬಳಿಕೆ ಆರೋಪ
ಇಂದಿನ ಸುದ್ದಿ

PM ವಿಶ್ವಕರ್ಮ ಯೋಜನೆಗೆ ಇಂದಿಗೆ 2 ವರ್ಷ | ತರಬೇತಿ ಸಂಪೂರ್ಣ ಸ್ಥಗಿತ | ಅನುದಾನ ಕಬಳಿಕೆ ಆರೋಪ

Nammajana Sub Editor
Last updated: 17 September 2025 5:11 PM
By Nammajana Sub Editor 3 Min Read
Share
SHARE
Telegram Group Join Now
WhatsApp Group Join Now

Chitradurga News | Nammajana.com |17-09-2025

ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ನಾನಾ(PM Vishwakarma) ವೃತ್ತಿ ಆಧಾರಿತ ಕುಶಲಕರ್ಮಿಗಳಿಗೆ ತರಬೇತಿಯೊಂದಿಗೆ ಆರ್ಥಿಕ ನೆರವು ನೀಡುವ ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೊಂಡು ಇಂದಿಗೆ (ಸೆ.17ಕ್ಕೆ) ಎರಡು ವರ್ಷ ತುಂಬಿದೆ. ಎರಡನೇ ವರ್ಷ ರೂಪಿಸಿದ ಕಠಿಣ ನಿಯಮಗಳಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಇದನ್ನೂ ಓದಿ: Chitradurga today Gold Rate | ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ

ಯೋಜನೆಯ ಫಲಾನುಭವಿಗಳಿಗೆ ಖಾಸಗಿ ತರಬೇತಿ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ತರಬೇತಿ ಸಂಪೂರ್ಣ ಸ್ಥಗಿತಗೊಂಡಿದೆ. ಈಗ ಸರಕಾರದಿಂದ ನೇರವಾಗಿ ರುಡ್ ಸೆಟ್, ಐಟಿಐ, ಜಿಟಿಟಿಸಿ ಸಂಸ್ಥೆಗಳ ಮೂಲಕ ಮಾತ್ರ ತರಬೇತಿ ನಡೆಯುತ್ತಿದ್ದು, ಕೌಶಲ್ಯ ತರಬೇತಿ ಎಷ್ಟರಮಟ್ಟಿಗೆ ಯಶಸ್ವೀ ಆಗಿದೆ ಎಂಬ ಬಗ್ಗೆ ಮೌಲ್ಯಮಾಪನ ಅಗತ್ಯವಾಗಿದೆ.

ಖಾಸಗಿ ಸಂಸ್ಥೆಗಳಿಗಿಲ್ಲ ಜವಾಬ್ದಾರಿ: 

2023 ರಿಂದ 2027ರವರೆಗೆ ಐದುವರ್ಷಗಳ ಯೋಜನೆಯಾಗಿದ್ದು, ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಸೇರಿದಂತೆ ಕೇಂದ್ರದ ಇತರೆ ಹಣಕಾಸು ಸಚಿವಾಲಯಗಳು ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿದ್ದು ತರಬೇತಿ ನೀಡುವ ಹೊಣೆಗಾರಿಕೆಯನ್ನು ಸರಕಾರಿ ಸಂಸ್ಥೆಗಳ ಜತೆಯಲ್ಲಿ ಖಾಸಗಿ ಸಂಸ್ಥೆಗಳಿಗೂ ವಹಿಸಲಾಗಿತ್ತು.

ಕೇಂದ್ರ ಸರಕಾರದಿಂದ ಅನುಮತಿ ಪಡೆದ ದೊಡ್ಡ ದೊಡ್ಡ ಸಂಸ್ಥೆಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದ ತರಬೇತಿ ಕೇಂದ್ರಗಳಿಗೆ ಉಪ ಗುತ್ತಿಗೆ ನೀಡಿದ್ದರು. ಕೆಲ ಖಾಸಗಿ ತರಬೇತಿ ಕೇಂದ್ರಗಳು ನಕಲಿ ಅರ್ಜಿದಾರರನ್ನು ಸೃಷ್ಟಿಸಿ, ತರಬೇತಿ ನೀಡದೇ ಅನುದಾನ ಪಡೆದುಕೊಳ್ಳುತ್ತಿದ್ದರು ಎಂಬ ಆರೋಪದ ಹಿನ್ನೆಲೆ ಖಾಸಗಿ ತರಬೇತಿ ಸಂಸ್ಥೆಗಳಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನಿಲ್ಲಿಸಲಾಗಿದೆ.

ತರಬೇತಿ ಅವಧಿಯನ್ನು ಆರೇಳು ದಿನಗಳಿಂದ 15 ದಿನಗಳಿಗೆ ಏರಿಕೆ ಮಾಡಿರುವುದು, ವಸತಿಯುತ, ಜಿಪಿಎಸ್ ಆಧಾರಿತ ಭಾವಚಿತ್ರಗಳನ್ನು ಅಪ್ ಲೋಡ್ ಮಾಡಬೇಕಾಗಿರುವುದು, ಮತ್ತಿತರ ಕಠಿಣ ನಿಯಮಗಳಿಂದ ತರಬೇತಿ ಕೇಂದ್ರಗಳು ಹಾಗೂ ಅರ್ಜಿದಾರರಿಗೂ ದುಸ್ತರವೆನಿಸಿದ ಕಾರಣ ಮತ್ತು ಕೆಲ ನಕಲಿ ತರಬೇತಿ ಕೇಂದ್ರಗಳಿಗೆ ಕಡಿವಾಣ ಹಾಕಲು ಖಾಸಗಿ ತರಬೇತಿ ಕೇಂದ್ರಗಳಿಗೆ ಅನುಮತಿ ನಿರಾಕರಿಸಿ ಏಳೆಂಟು ತಿಂಗಳು ಕಳೆದಿವೆ.

ಇದನ್ನೂ ಓದಿ: ನಕಲಿ ವೈದ್ಯರ ಪತ್ತೆಗೆ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ | ಪ್ರತಿ ತಾಲ್ಲೂಕಿನಲ್ಲಿಯೂ ಪ್ರತ್ಯೇಕ ಜಾರಿ ತಂಡ | ಜಿಲ್ಲಾಧಿಕಾರಿ ಟಿ. ವೆಂಕಟೇಶ್ : Fake Doctors

ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ನಗರ ಪಟ್ಟಣ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೂಲಕ ಪರಿಶೀಲನೆಗೊಂಡು ಅಂತಿಮವಾಗಿ ಆಯ್ಕೆಗೊಂಡ ಅರ್ಜಿಗಳನ್ನು ಪೋರ್ಟಲ್ ನಲ್ಲಿ ನಮೂದಿಸಲಾಗುತ್ತದೆ.

ಯಾರೆಲ್ಲ ಒಳಪಡುತ್ತಾರೆ?

ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಬಡಗಿ, ದೋಣಿ ತಯಾರಿಕೆ, ಶಸ್ತ್ರತಯಾರಿಕೆ, ಕಮ್ಮಾರಿಕೆ, ಕಲ್ಲುಕುಟಿಗ, ಬಟ್ಟೆ, ಚಾಪೆ-ಕಸಪರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಿಕೆ, ಕ್ಷೌರಿಕ ವೃತ್ತಿ, ಸುತ್ತಿಗೆ ಮತ್ತು ಉಪಕರಣಗಳ ತಯಾರಿಕೆ, ಹೂಮಾಲೆ ತಯಾರಿಕೆ, ಅಗಸರು, ಆಭರಣ ತಯಾರಿಕೆ, ಟೈಲರಿಂಗ್, ಕುಂಬಾರಿಕೆ, ಮೀನು ಬಲೆ ಹೆಣೆಯುವವರು, ಮೂರ್ತಿ ಮತ್ತು ಕಲ್ಲಿನ ಕೆತ್ತನೆ ಮಾಡುವ ಶಿಲ್ಪಿಗಳು, ಚಮ್ಮಾರರು, ಪಾದರಕ್ಷೆ ತಯಾರಕರು, ಬೀಗ ತಯಾರಿಕೆ ಸೇರಿದಂತೆ ನಾನಾ ಬಗೆಯ ವೃತ್ತಿ ಮಾಡುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.

29268 ಮಂದಿ ತರಬೇತಿಗೆ ಆಯ್ಕೆ: 

ಜಿಲ್ಲೆಯಲ್ಲಿ ಸುಮಾರು 17 ಕ್ಷೇತ್ರಗಳ ಪೈಕಿ ಈವರೆಗೆ ಟೈಲರಿಂಗ್ 8261, ಹೂಮಾಲೆ ತಯಾರಿಕೆ 9519, ಬುಟ್ಟಿ ಎಣೆಯುವಿಕೆ 2574, ಇಟ್ಟಿಗೆ ಕಲ್ಲು ತಯಾರಿಕೆ 2713, ಬಡಗಿ 1575, ಮೂರ್ತಿ ತಯಾರಿಕೆ 1147, ಅಕ್ಕಸಾಲಿಗ 343 ಮಂದಿ ಹಾಗೂ ಇತರೆ ಕ್ಷೇತ್ರಗಳು ಸೇರಿದಂತೆ 29268 ಮಂದಿ ತರಬೇತಿಗೆ ಆಯ್ಕೆಯಾಗಿದ್ದು ಇವರಲ್ಲಿ ಬಹುತೇಕರು ತರಬೇತಿ ಪಡೆದುಕೊಂಡಿದ್ದು ಉಳಿದವರು ತರಬೇತಿ ಪಡೆಯಬೇಕಿದೆ.

ಏನೆಲ್ಲ ನೆರವು?

ಕೌಶಲ್ಯ ಉನ್ನತೀಕರಣ(PM Vishwakarma) ತರಬೇತಿ, ಒಂದು ದಿನ ಪರೀಕ್ಷೆ ಸೇರಿ ಪ್ರತಿದಿನ 500 ರೂ. ನೀಡಲಾಗುವುದು. ಅಲ್ಲದೆ 15 ಸಾವಿರ ರೂ. ಗಳನ್ನು ಸುಧಾರಿತ ಉಪಕರಣಗಳ ಖರೀದಿಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಬಳಿಕ ಮೊದಲ ವರ್ಷದಲ್ಲಿ ಬ್ಯಾಂಕುಗಳ ಮೂಲಕ ಶೇ.5ರ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯ, ಎರಡನೇ ಹಂತದಲ್ಲಿ 2 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ.

Telegram Group Join Now
WhatsApp Group Join Now

You Might Also Like

Astrology | ದಿನ ಭವಿಷ್ಯ, ಯಾರಿಗೆಲ್ಲ ಆರ್ಥಿಕ ಅನುಕೂಲ

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ

TAGGED:Central GovernmentChitradurgaChitradurga NewsGrantsKannada NewsNammajana.comPM Vishwakarma YojanaSuspensionTrainingಅನುದಾನಕನ್ನಡ ನ್ಯೂಸ್ಕನ್ನಡ ಸುದ್ದಿಕೇಂದ್ರ ಸರ್ಕಾರಚಿತ್ರದುರ್ಗಚಿತ್ರದುರ್ಗ ನ್ಯೂಸ್ತರಬೇತಿನಮ್ಮಜನ.ಕಾಂಪಿಎಂ ವಿಶ್ವಕರ್ಮ ಯೋಜನೆಸ್ಥಗಿತ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Adike Rate | ಅಡಿಕೆ ಧಾರಣೆ | 17 ಸೆಪ್ಟೆಂಬರ್ 2025 | ರಾಶಿ ಅಡಿಕೆ ರೇಟ್ ಎಷ್ಟಿದೆ?
Next Article HIRIYUR : ಚಲಿಸುತ್ತಿದ್ದ ಕಾರಿಗೆ ಬೆಂಕಿ | ಕಾರು ಚಾಲಕ ಸಾವು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Today Adike Rate | ಇಂದಿನ‌ ಅಡಕೆ ರೇಟ್
ಅಡಿಕೆ ಧಾರಣೆ
ದಿನ ಭವಿಷ್ಯ | 09-10-2025 | Dina Bhavishya
ದಿನ ಭವಿಷ್ಯ
Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ
ಇಂದಿನ ಸುದ್ದಿ
V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?