
Chitradurga news |nammajana.com|22-03-2025
ಕಂಡರೂ ಕಾಣದಂತೆ ಮೌನ ವಹಿಸಿರುವ ಅಧಿಕಾರಿಗಳು| ಸಾರ್ವಜನಿಕ ವಲಯದಲ್ಲಿ ಆಕ್ರೋಶ
ನಮ್ಮಜನ.ಕಾಂ, ಹೊಸದುರ್ಗ: ರಾಜ್ಯದ ಹಲವು ಭಾಗಗಳಲ್ಲಿ ಬಾಲ್ಯ ವಿವಾಹ ಮತ್ತು ಅಪ್ರಾಪ್ತ ಬಾಲಕಿಯರು (pregnant) ಗರ್ಭಿಣಿಯಾಗುವುದನ್ನು ತಡೆಗಟ್ಟಲು, ಬಾಲ್ಯ ವಿವಾಹ ತಡೆ ಕಾವಲು ಸಮಿತಿ, ಬಾಲ ರಕ್ಷಣಾ ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದ್ದರೂ, ಬಾಲಕೀಯರು ಗರ್ಭಿಣಿಯಾಗುವ ಅಮಾನುಷ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ, ಹೊಸದುರ್ಗ ತಾಲೂಕಿನಲ್ಲಿಯೂ ಕೂಡ ಬಾಲಗರ್ಭಿಣಿಯರ ಸಂಖ್ಯೆ ಏರಿಕೆಯಾಗುತ್ತಿದ್ದು, ಕೆಲವು ಪ್ರಕರಣಗಳು ಬೆಳಕಿಗೆ ಬಂದರೆ, ಇನ್ನೂ ಕೆಲವು ಪ್ರಕರಣಗಳು ಒತ್ತಡ ಮತ್ತು ಬೆದರಿಕೆಗಳಿಂದ ಮುಚ್ಚಿಹೋಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೆಣ್ಣು ಮಕ್ಕಳೆಂದರೆ ಹೆತ್ತವರಿಗೂ ಮತ್ತು ಸಮಾಜಕ್ಕೂ ಭಾರ ಎಂಬ ತಪ್ಪು ಭಾವನೆ ಇನ್ನೂ ಕೂಡ ಕೆಲವು ಜನರ ಮನಸ್ಸಿನಲ್ಲಿ ಹಚ್ಚೊತ್ತಿದೆ. ಮನೆಯಲ್ಲಿ ಹುಟ್ಟಿದ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ, ತಮ್ಮ ಜವಾಬ್ದಾರಿ ಕಡಿಮೆ ಮಾಡಿಕೊಳ್ಳಬೇಕೆಂದು, ಹಾಗೂ ನಮ್ಮ ಮಗಳು ಬೇಗ ಮಗುವನ್ನು ಹೆರ ಬೇಕೆಂಬ ಧೋರಣೆ ಈಗಲೂ ಇದೆ. ಲೈಂಗಿಕ ಕ್ರಿಯೆ, ಗರ್ಭಧಾರಣೆ, ಯಾವಾಗ ಮಗುವನ್ನು ಹೆರಬೇಕು? ಅದಕ್ಕೆ ದೇಹ ತಯಾರಾಗಿದೆಯೇ ಎಂಬ ಅರಿವು ಬರುವ ಮುನ್ನವೇ ಬಾಲಕಿಯರು ಗರ್ಭಿಣಿಯಾಗುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಿವೆ. ಕಳೆದ 2-3 ತಿಂಗಳ ಹಿಂದೆಯಷ್ಟೇ ರಾಜ್ಯದ ಹಲವೆಡೆ ದಿನಕ್ಕೊಬ್ಬರು ಬಾಣಂತಿಯರು (pregnant) ಸಾವನ್ನಪ್ಪಿರುವ ಘಟನೆಗಳು ಕಣ್ಣ ಮುಂದಿವೆ. ಇಷ್ಟಾದರೂ ಕೂಡ ಸಂಬಂಧಪಟ್ಟ ಇಲಾಖೆಗಳು ಬಾಲಕಿಯರು ಗರ್ಭಿಣಿಯಾಗುವುದನ್ನು ತಡೆಗಟ್ಟುವಲ್ಲಿ ವಿಫಲವಾಗುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಆರೋಗ್ಯ ಇಲಾಖೆ ಮಾಹಿತಿ
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ 2024ರ ಏಪ್ರಿಲ್ ತಿಂಗಳಿನಿಂದ ಪ್ರಸಕ್ತ ವರ್ಷ 2025ರ ಫೆಬ್ರವರಿ ತಿಂಗಳವರೆಗೆ ಹೊಸದುರ್ಗ ತಾಲೂಕಿನಲ್ಲಿ ಒಟ್ಟು 38 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಇಲಾಖೆಯ ಲೆಕ್ಕಕ್ಕೆ ಸಿಕ್ಕಿರುವ ಮಾಹಿತಿ ಇಷ್ಟೇ ಆಗಿದ್ದು, ಅವರಿಗೆ ಮಾಹಿತಿ ಮತ್ತು ಲೆಕ್ಕ ಸಿಗದೆ ಅದೆಷ್ಟೋ ಮುಚ್ಚಿ ಹೋಗಿವೆ. ಕೆಲವು ಖಾಸಗಿ ಆಸ್ಪತ್ರೆಗಳು ಹಣದ ಆಮಿಷಕ್ಕೆ ಒಳಗಾಗಿ ಬಾಲ ಗರ್ಭಿಣಿಯರನ್ನು ಹೆರಿಗೆ ಮಾಡಿಸುವ ಕೆಲಸ ಮಾಡುತ್ತಿವೆ. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನರು ಒತ್ತಡ ಮತ್ತು ಭಯಕ್ಕೆ ಒಳಗಾಗಿ ಪ್ರಕರಣವನ್ನು (pregnant) ಮುಚ್ಚಿಹಾಕುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಕೆಲ ಅಧಿಕಾರಿಗಳು ಕಂಡರು ಕಾಣದಂತೆ ಮೌನವಹಿಸಿದ್ದಾರೆ. ಇದರಿಂದಾಗಿ ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿಯರ ಸಂಖ್ಯೆ ಏರಿಕೆಯಾಗುತ್ತಿರುವುದಕ್ಕೆ ಕಾರಣವಾಗಿದೆ ಎಂದು ಹೆಸರೇಳಲು ಇಚ್ಛಿಸದ ವ್ಯಕ್ತಿಯೊಬ್ಬ ಬೇಸರ ಪಡಿಸಿದ ಪರಿಯಿದು.
ಬಾಕ್ಸ್ (ಹೇಳಿಕೆ)
ತಾಲೂಕಿನಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ತಾಯಂದಿರಾಗುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಬಾಲ್ಯ ವಿವಾಹವೂ ಇದಕ್ಕೆ ಒಂದು ಕಾರಣವಾದರೆ, ಮುಂಜಾಗರೂಕತೆ ಇಲ್ಲದ ಲೈಂಗಿಕ ಸಂಪರ್ಕವು ಇನ್ನೊಂದು ಕಾರಣವಾಗಿದೆ. ಹೆಚ್ಚಾಗುತ್ತಿರುವ ಬಾಲ ಗರ್ಭಿಣಿಯರ ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನಿರ್ಲಕ್ಷ ತೋರಿಸದೆ, ಹದ್ದಿನ ಕಣ್ಣಿಡಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ, ಯಾವುದೇ ಮುಲಾಜಿಲ್ಲದೆ ಶಿಕ್ಷೆ ಕೊಡಿಸುವ ಕಾರ್ಯವಾಗಬೇಕು. ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಇಂತಹ ಪ್ರಕರಣಗಳು ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ಮುಚ್ಚಿ ಹೋಗುತ್ತಿವೆ. ಪೋಕ್ಸೋ ಕೇಸ್ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸುವ ಕಾರ್ಯವಾಗಬೇಕು. (pregnant) ಬಾಲ್ಯದಲ್ಲಿಯೇ ಗರ್ಭಿಣಿಯಾಗುವುದರಿಂದ ದೇಹದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು.
ಮೂಡಲಗಿರಿ.
ನಾಕೀಕೆರೆ ಗ್ರಾಮದ ಮುಖಂಡ.
ಇದನ್ನೂ ಓದಿ: Doctorate | ಸಚಿವ ಸತೀಶ್ ಜಾರಕಿಹೊಳಿಗೆ ಗೌರವ ಡಾಕ್ಟರೇಟ್ ಪದವಿ | ಶಾಸಕ ಟಿ.ರಘುಮೂರ್ತಿ ಹರ್ಷ
ಬಾಕ್ಸ್ (ಹೇಳಿಕೆ)
ಪ್ರತಿಯೊಂದು ಗ್ರಾಮಗಳಲ್ಲಿ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮ ಮತ್ತು ಬಾಲಕಿಯರು ಗರ್ಭಿಣಿಯಾಗಿರುವುದಕ್ಕೆ ಕಾರಣವಾಗುವವರಿಗೆ ಯಾವ ರೀತಿಯ ಕಠಿಣ ಶಿಕ್ಷೆ ಕೊಡಿಸಲಾಗುವುದು ಎಂಬುದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅಂತಹ ಪ್ರಕರಣಗಳು ಎಲ್ಲಿಯಾದರೂ ಕಂಡುಬಂದರೆ, ಮುಲಾಜಿಲ್ಲದೆ ಕೇಸ್ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ, ಕಲ್ಯಾಣ ಮಂಟಪಗಳಿಗೆ, (pregnant) ಪುರೋಹಿತರಿಗೆ ನೋಟಿಸ್ ಕೊಡಲಾಗಿದೆ. ಎಲ್ಲಿಯಾದರೂ ಅಂತಹ ಪ್ರಕರಣಗಳು ಕಂಡು ಬಂದರೆ, ನೇರವಾಗಿ ಹೇಳಲು ಭಯ ಮತ್ತು ಆತಂಕವಿರುವವರು 109 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಎಷ್ಟು ದೊಡ್ಡ ವ್ಯಕ್ತಿ ಮತ್ತು ಪ್ರಭಾವಿಯಾಗಿದ್ದರೂ, ಕಠಿಣ ಶಿಕ್ಷೆ ಕೊಡಿಸಲಾಗುವುದು.
ಏ.ಅಭಿಲಾಷ
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹೊಸದುರ್ಗ