Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಅನ್ಯ ಜಾತಿಗಳನ್ನು ST ಗೆ ಸೇರ್ಪಡೆ ವಿರೋಧಿಸಿ ಸೆ.25 ರಂದು ಪ್ರತಿಭಟನೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಅನ್ಯ ಜಾತಿಗಳನ್ನು ST ಗೆ ಸೇರ್ಪಡೆ ವಿರೋಧಿಸಿ ಸೆ.25 ರಂದು ಪ್ರತಿಭಟನೆ
ಇಂದಿನ ಸುದ್ದಿ

ಅನ್ಯ ಜಾತಿಗಳನ್ನು ST ಗೆ ಸೇರ್ಪಡೆ ವಿರೋಧಿಸಿ ಸೆ.25 ರಂದು ಪ್ರತಿಭಟನೆ

Nammajana Sub Editor
Last updated: 24 September 2025 7:29 AM
By Nammajana Sub Editor 2 Min Read
Share
SHARE
Telegram Group Join Now
WhatsApp Group Join Now

Chitradurga News | Nammajana.com |24-09-2025

ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಎಸ್.ಟಿ(ST) ಪಟ್ಟಿಗೆ ಅನ್ಯ ಜಾತಿಗಳನ್ನು ಸೇರ್ಪಡೆ ವಿರೋಧಿಸಿ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ನಾಯಕ ಸಮಾಜದ ವತಿಯಿಂದ ನಗರದ ಮದಕರಿ ನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ ಹೇಳಿದರು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಇದನ್ನೂ ಓದಿ: Rajamatthi Thimmanna Nayaka: ಚಿತ್ರದುರ್ಗ ಆಳ್ವಿಕೆ ನಡೆಸಿದ ರಾಜರಲ್ಲಿ ರಾಜಮತ್ತಿ ತಿಮ್ಮಣ್ಣ ನಾಯಕ ಪ್ರಥಮ ಅರಸ: ಬಿ.ಕಾಂತರಾಜ್

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಪರಿಶಿಷ್ಟ ಪಂಗಡಗಳು (Scheduled Tribes) ಎಂಬ ವರ್ಗವನ್ನು ರೂಪಿಸಿದ್ದು, ಇತಿಹಾಸದಲ್ಲಿ ಹಿಂದುಳಿದ, ಸಾಮಾಜಿಕವಾಗಿ ಅನುಪಸ್ಥಿತರಾಗಿದ್ದ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಜೀವನ ನಡೆಸುತ್ತಿದ್ದ ಬುಡಕಟ್ಟು ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮತ್ತು ಸಮಾನತೆ ಸೃಷ್ಟಿಸಲು. ಬುಡಕಟ್ಟು ವರ್ಗಗಳು ಅನನ್ಯವಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸವಾಲುಗಳನ್ನು ಅನುಭವಿಸುತ್ತಾ ಬಂದಿದ್ದಾರೆ.

ಈಗಾಗಲೇ ಇಂತಹ ಸಂದರ್ಭದಲ್ಲಿ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಂಘಟನಾತ್ಮಕವಾಗಿ ತುಂಬಾ ಸದೃಢ ಸ್ಥಿತಿಯಲ್ಲಿರುವ ಅನ್ಯ ಜಾತಿಗಳನ್ನು ಎಸ್.ಟಿ. ಗೆ ಸೇರಿಸುವುದರಿಂದಾಗಿ ಶೋಷಿತ ವಾಲ್ಮೀಕಿ ಜನಾಂಗಕ್ಕೆ ಅನ್ಯಾಯವಾಗುತ್ತದೆ. ಬಹುಮಾನ್ಯವಾದ ಹಕ್ಕುಗಳಿಗಾಗಿ ಪೈಪೋಟಿಯಲ್ಲಿರುವ ನೈಜ ಬುಡಕಟ್ಟು ಸಮುದಾಯಗಳಿಗೆ ಮಾರಕವಾಗುತ್ತದೆ ಎಂದರು.

ಹಕ್ಕುಗಳು ಈಗಾಗಲೇ ಲಭ್ಯವಿರುವ ಸಮುದಾಯಕ್ಕೆ ಮತ್ತಷ್ಟು ಅನುಕೂಲ ನೀಡುವುದು ಅನ್ಯಾಯ. ಅನ್ಯ ಜಾತಿಗಳನ್ನು ಈಗಾಗಲೇ OBC ಪಟ್ಟಿಯಲ್ಲಿದ್ದಾರೆ ಮತ್ತು ಸರ್ಕಾರಿ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಪಡೆದುಕೊಂಡು ಸದೃಢರಾಗಿದ್ದಾರೆ. ಇಂತಹ ಜಾತಿಯನ್ನು ST ಪಟ್ಟಿಗೆ ಸೇರಿಸುವುದು ಇನ್ನಷ್ಟು ಶೋಷಿತ ಅವಕಾಶಗಳನ್ನು ಕಸಿದುಕೊಳ್ಳಲು ಶೋಷಿತರನ್ನು ಮತ್ತಷ್ಟು ಶೋಷಣೆ ಸಮುದಾಯಗಳ ಮಾಡಿದಂತಾಗುವುದು.

ಹತ್ತಾರು ವರ್ಷಗಳಿಂದ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯದಲ್ಲಿ ಹಿಂದಿರುವ ಅಸಲಿ ST ಜನಾಂಗಗಳು ಕುರುಬರ ಸೇರ್ಪಡೆ ಹಿನ್ನೆಲೆಯಲ್ಲಿ ಇನ್ನೂ ಅವಕಾಶಗಳಿಂದ ವಂಚಿತರಾಗುವ ಭೀತಿ ಇದೆ.

ರಾಜಕೀಯ ಲಾಭಕ್ಕಾಗಿ ಸಮುದಾಯ ಬಳಕೆ:

ಈ ರೀತಿಯ ಸೇರ್ಪಡೆಗಳು ನಿಜವಾದ ಅಭಿವೃದ್ಧಿ ಗುರಿಗಳಿಗಲ್ಲ. ಇದು ಮತ ಬ್ಯಾಂಕ್ ರಾಜಕಾರಣದ ಭಾಗ ಮತ್ತು ರಾಜಕೀಯವಾಗಿ ಎಸ್.ಟಿ.ಮೀಸಲಾತಿ ಕ್ಷೇತ್ರಗಳ ಮೇಲೆ ಕುರುಹಿಠ ಕಣ್ಣು ಬಿದ್ದು-ಮುಖ್ಯಮಂತ್ರಿಗಳು ಸ್ವಜಾತಿ ಪ್ರೇಮದಿಂದಾಗಿ ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಲು ಮುಂದಾಗಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲರಾದ ಗುಡ್ಡದೇಶ್ವರಪ್ಪ‌ ಮಾತನಾಡಿ, ಹೆಚ್ಚು ಜನಸಂಖ್ಯೆಯುಳ್ಳ ಸಮುದಾಯ ಎಸ್.ಟಿ. ಪಟ್ಟಿಗೆ ಬಂದರೆ, ಇತರ ಸಮುದಾಯಗಳು ಮೌನವಾಗಿ ಹೊರಗುಳಿಯುತ್ತವೆ. ಇದು ಸಾಮಾಜಿಕ ಅಶಾಂತಿ, ಜಾತಿ ಆಧಾರಿತ ಸಂಘರ್ಷಗಳಿಗೆ ದಾರಿಯಾಗುತ್ತದೆ.

ಡಾ.ಬಾಬಾಸಾಹೇಬ ಅಂಬೇಡ್ಕರ್ ರೂಪಿಸಿದ ಸಂವಿಧಾನ ಎಸ್.ಟಿ.ವರ್ಗದ ಪೀಡಿತ ಜನರೊಂದಿಗೆ ಸದೃಢ ಸಮುದಾಯಗಳನ್ನು ಸೇರಿಸುವುದು ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.

ಕೆಲವು ಸಮುದಾಯಗಳು ಶಿಕ್ಷಣ, ರಾಜಕೀಯ, ಉದ್ಯೋಗದಲ್ಲಿ ಈಗಾಗಲೇ ಸ್ಪರ್ಧಿಸಲು ಸದೃಢರಾಗಿದ್ದಾರೆ. ಇದರಿಂದ ಎಸ್.ಟಿ.ಯಲ್ಲಿರುವ ಅಸಲಿ ಬುಡಕಟ್ಟು ಜನರು ಸ್ಪರ್ಧೆಯಲ್ಲಿ ಹಿನ್ನಡೆಯತ್ತ ಹೋಗುತ್ತಾರೆ.

ಇದನ್ನೂ ಓದಿ: Civic Workers: ಜನರಿಗೆ ಉತ್ತಮ ಆರೋಗ್ಯದ ಭಾಗ್ಯ ಕಲ್ಪಿಸಿದ ಕೀರ್ತಿ ಪೌರಕಾರ್ಮಿಕರದ್ದು : ಟಿ.ರಘುಮೂರ್ತಿ

ಕುರುಬರು ಜಾತಿಯಲ್ಲಿ(ST) ಬಡತನವಿದ್ದರೆ ಬಡತನ ಹೋಗಲಾಡಿಸಲು ಸರ್ಕಾರದಿಂದ ಸಾಕಷ್ಟು ಆರ್ಥಿಕ ಕಲ್ಪಿಸುವ ಮಾರ್ಗಗಳಿವೆ. ಸಮಾನತೆಯ ಹೆಸರಿನಲ್ಲಿ ಆಗುವ ಅಸಮಾನತೆ ಎಂದಿಗೂ ನ್ಯಾಯವಾಗದು. ಪರಿಶಿಷ್ಟ ಪಂಗಡವು ಬಲಿಷ್ಠ ಸಮುದಾಯಗಳ ಪ್ರವೇಶಕ್ಕೆ ಪ್ರವೇಶದ್ವಾರವಲ್ಲ ಇದು ಸಾಂವಿಧಾನಿಕ ರಕ್ಷಣೆಯ ಶಕ್ತಿ ಕೇಂದ್ರವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ವಾಲ್ಮೀಕಿ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎಟಿಎಸ್. ತಿಪ್ಪೇಸ್ವಾಮಿ, ಬಿ.ಮಂಜುನಾಥ್, ಮಂಜಣ್ಣ, ರತ್ನಮ್ಮ, ಸಿ.ಬೋರಯ್ಯ, ಬಸವರಾಜ್, ಪ್ರಶಾಂತ್ ಕೂಲಿಕರ್, ಅಶೋಕ್ ಬಳೆಗಟ್ಟ ಸೇರಿದಂತೆ ಇತರರು ಉಪಸ್ಥಿತರಿದ್ದರು.

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ

ದಿನ ಭವಿಷ್ಯ | 09-10-2025 | Dina Bhavishya

TAGGED:ChitradurgaChitradurga NewsCM SiddaramaiahKannada NewsKuruba SamajNammajana.comNayaka SamajOther casteProtestST listState Governmentಅನ್ಯಜಾತಿಎಸ್ಟಿ ಪಟ್ಟಿಕನ್ನಡ ನ್ಯೂಸ್ಕನ್ನಡ ಸುದ್ದಿಕುರುಬ ಸಮಾಜಚಿತ್ರದುರ್ಗಚಿತ್ರದುರ್ಗ ನ್ಯೂಸ್ನಮ್ಮಜನ.ಕಾಂ​​ನಾಯಕ ಸಮಾಜಪ್ರತಿಭಟನೆರಾಜ್ಯ ಸರ್ಕಾರಸಿಎಂ ಸಿದ್ದರಾಮಯ್ಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Rajamatthi Thimmanna Nayaka: ಚಿತ್ರದುರ್ಗ ಆಳ್ವಿಕೆ ನಡೆಸಿದ ರಾಜರಲ್ಲಿ ರಾಜಮತ್ತಿ ತಿಮ್ಮಣ್ಣ ನಾಯಕ ಪ್ರಥಮ ಅರಸ: ಬಿ.ಕಾಂತರಾಜ್
Next Article Chitradurga today Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Today Adike Rate | ಇಂದಿನ‌ ಅಡಕೆ ರೇಟ್
ಅಡಿಕೆ ಧಾರಣೆ
Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ
ಇಂದಿನ ಸುದ್ದಿ
V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ
ಇಂದಿನ ಸುದ್ದಿ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?