
Chitradurga news|nammajana.com|29-11-2024
ನಮ್ಮಜನ.ಕಾಂ, ಹೊಳಲ್ಕೆರೆ: ಹೊಳಲ್ಕೆರೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, (purasabhe election) ಅಧ್ಯಕ್ಷ ಸ್ಥಾನ ಪಜಾ(ಎಸ್ಸಿ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿದೆ.
ಹೊಳಲ್ಕೆರೆ ಪುರಸಭೆ ಬಿಜೆಪಿ-6, ಕಾಂಗ್ರೆಸ್-3, ಪಕ್ಷೇತರರು-7 ಒಟ್ಟು 16 ಸದಸ್ಯರ ಬಲ ಹೊಂದಿದ್ದು, ಇವರ ಜತೆ (purasabhe election) ಚುನಾವಣೆಯಲ್ಲಿ ಎಂಎಲ್ಎ ಹಾಗೂ ಎಂಪಿ ಇಬ್ಬರೂ ಕೂಡ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ. ಹಾಗಾಗಿ ಒಟ್ಟು 18 ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಕಾಂಗ್ರೇಸ್ ನ ಮೂವರು ಸದಸ್ಯರು ವಿಜಯಸಿಂಹ ಖಾಟ್ರೋತ್ ಗೆ ಬೆಂಬಲಿಸಿದ್ದಾರೆ. ಇದರಿಂದ ಒಟ್ಟು 9 ಸದಸ್ಯರ ಬಲವನ್ನು ವಿಜಯಸಿಂಹ ಖಾಟ್ರೋತ್ ಹೊಂದಿದ್ದಾರೆ. ಪ್ರತಿಸ್ಪರ್ಧಿ ವಸಂತ ರಾಜಪ್ಪ ಶಾಸಕ ಎಂ. ಚಂದ್ರಪ್ಪ ಕಡೆ ಗುರುತಿಸಿಕೊಂಡಿದ್ದು, ಬಿಜೆಪಿಯ ಉಳಿದ 3 ಸದಸ್ಯರು, ಪಕ್ಷೇತರರ 4 ಸದಸ್ಯರು, ಎಂಎಲ್ಎ, ಎಂಪಿ ಸೇರಿ 9 ಇವರಿಗೆ ಬೆಂಬಲ ಸೂಚಿಸಿದ್ದಾರೆ. ಎನ್ನಲಾಗಿದೆ. ಆದರೆ ಬಿಜೆಪಿಯ ಮುರುಗೇಶ್ ಕುಟುಂಬ ಸಹಿತ ನೇಪಾಳ ಪ್ರವಾಸಕ್ಕೆ ತೆರಳಿರುವ ಕಾರಣ 1 ಸದಸ್ಯ ಬಲ ಕುಗ್ಗಲಿದೆ ಇದರಿಂದ ವಸಂತ ರಾಜಪ್ಪ ಕಡೆ 8 ಸದಸ್ಯರು ಉಳಿಯಲಿದ್ದಾರೆ.
ವಿಜಯಸಿಂಹ ಖಾಟ್ರೋತ್ ಅವಿರೋಧ ಆಯ್ಕೆ? (purasabhe election)
ಪಕ್ಷೇತರ ಪೈಕಿ ಪ.ಜಾ.ಯ ವಿಜಯಸಿಂಹ ಖಾಟ್ರೋತ್, ಸವಿತಾ ನರಸಿಂಹ ಖಾಟ್ರೋತ್, ಬಿ. ವಸಂತ ರಾಜಪ್ಪ, ಒಟ್ಟು ಮೂವರಿದ್ದಾರೆ.
ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯರಾಗಿರುವ ವಿಜಯಸಿಂಹ ಖಾಟ್ರೋತ್ ಹಾಗೂ ವಸಂತ ರಾಜಪ್ಪ ಸ್ಪರ್ಧಿಯಾಗಲಿದ್ದಾರೆ. ವಿಜಯಸಿಂಹ ಖಾಟ್ರೋತ್, ಮಮತಾ ಜಯಸಿಂಹ ಖಾಟ್ರೋತ್, ಸವಿತಾ ನರಸಿಂಹ ಖಾಟ್ರೋತ್ ಮೂವರು ಒಂದೇ ಕುಟುಂಬದ ಸದಸ್ಯರಿದ್ದಾರೆ. ಅವರ ಜತೆ ಈಗಾಗಲೇ ಬಿಜೆಪಿಯ ನಾಗರತ್ನ,ಕೆ.ಸಿ.ರಮೇಶ್ ಹಾಗೂ ಮತ್ತೋರ್ವ (purasabhe election) ಸದಸ್ಯರುಪಕ್ಷೇತರರಿಗೆ ಬೆಂಬಲವಾಗಿ ನಿಂತಿದ್ದಾರೆ.
ಅದೇ ರೀತಿ ವಿಜಯಸಿಂಹ ಕಡೆ ಈಗಾಗಲೇ 9 ಜನ ಸದಸ್ಯರಿದ್ದಾರೆ. ಬಿಜೆಪಿಯಿಂದ ಗೆದ್ದಿದ್ದ ಎಚ್. ಆರ್.ನಾಗರತ್ನ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕಾರಣ ಸಂಸದ ಗೋವಿಂದ ಕಾರಜೋಳ ಕೂಡ ನಮಗೆ ಬೆಂಬಲ ಸೂಚಿಸಲಿದ್ದಾರೆ ಎನ್ನಲಾಗಿದೆ.
ಇತ್ತ ವಸಂತ ರಾಜಪ್ಪ ಬಲದಲ್ಲಿ 9 ಸದಸ್ಯರ ಪೈಕಿ, ಓರ್ವ ಸದಸ್ಯ ಪ್ರವಾಸದಲ್ಲಿದ್ದಾರೆ. ಇನ್ನು ಸಂಸದರು ಕೂಡ ವಿಜಯಸಿಂಹ ಬಲಕ್ಕೆ ಹೋದಲ್ಲಿ ಇವರ ಬಲ 7ಕ್ಕೆ ಕುಸಿಯಲಿದೆ. ಹಾಗಾಗಿ (purasabhe election) ಇದರಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದೆ.
ಅಲ್ಲದೆ ಈಗಾಗಲೇ ಎಚ್.ಆಂಜನೇಯ ಅವರನ್ನು ಭೇಟಿ ಮಾಡಿದ್ದು, ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವ ಲಕ್ಷಣಗಳಿವೆ. ಆಗ ವಿಜಯಸಿಂಹ ಖಾಟ್ರೋತ್ ಅವಿರೋಧ ಆಯ್ಕೆ ಸಾಧ್ಯತೆ ದಟ್ಟವಾಗಿದೆ.
ಉಪಾಧ್ಯಕ್ಷ ಸ್ಥಾನ:
ಉಪಾಧ್ಯಕ್ಷ ಸ್ಥಾನಕ್ಕೆ ಎಚ್. ಆರ್.ನಾಗರತ್ನ ಹಾಗೂ ಶಬೀನ ಆಶ್ರಫ್ ಉಲ್ಲಾ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಪಕ್ಷೇತರ ಸದಸ್ಯರ ಜತೆ ನಾಗರತ್ನ ಗುರುತಿಸಿಕೊಂಡಿದ್ದು, ಹೆಚ್ಚಿನ ಬಲ ಇರುವ ಕಾರಣ ಬಹುತೇಕ ಅವರೇ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಕೂಡ ಇದೆ.
ಶಾಸಕ ಎಂ.ಚಂದ್ರಪ್ಪ ವಿರುದ್ದ ಸೆಡ್ಡು
ಬಿಜೆಪಿಯಿಂದ ಗೆದ್ದಿದ್ದ ಎಚ್.ಆರ್.ನಾಗರತ್ನ, ಕೆ.ಸಿ.ರಮೇಶ್ ಹಾಗೂ ಪಕ್ಷೇತರರಾಗಿರುವ ಒಂದೇ ಕುಟುಂಬದ ಮೂವರು ಸದಸ್ಯರು ತೊಡೆ ತಟ್ಟಿದ್ದು, ಈಗಾಗಲೇ ಕಳೆದ ವರ್ಷ ನಡೆದ (purasabhe election) ಎಂಎಲ್ ಎ ಚುನಾವಣೆಯಲ್ಲಿ ಶಾಸಕ ಎಂ.ಚಂದ್ರಪ್ಪ ವಿರುದ್ದ ಕೆಲಸ ಮಾಡಿದ್ದರು. ಹಾಗಾಗಿಯೇ ಈಗ ಶಾಸಕ ಎಂ.ಚಂದ್ರಪ್ಪ ಅವರ ಕುದುರೆ ಕಟ್ಟಿಹಾಕಲು ಸಜ್ಜಾಗಿದ್ದಾರೆ.
ಪಕ್ಷೇತರರೇ ಅಧ್ಯಕ್ಷರು
ಪುರಸಭೆಯಲ್ಲಿ ಬಿಜೆಪಿಯಲ್ಲಾಗಲಿ, ಕಾಂಗ್ರೆಸ್ ನಲ್ಲಾಗಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಲು ಎಸ್ಸಿ ಮೀಸಲಿರುವ ಸದಸ್ಯರು ಯಾರು ಇಲ್ಲ. ಹಾಗಾಗಿ ಪಕ್ಷೇತರರದ್ದೇ ಪಾರುಪಥ್ಯ ನಡೆಯಲಿದೆ. (purasabhe election) ಪಕ್ಷೇತರ ಪರವಾಗಿ ಎಚ್. ಆಂಜನೇಯ, ಶಾಸಕ ಎಂ.ಚಂದ್ರಪ್ಪ ಇಬ್ಬರಿಗೂ ಜಿದ್ದಾಜಿದ್ದಿ ಬೀಳಲಿದೆ. ಆದರೆ ಶಾಸಕ ಎಂ.ಚಂದ್ರಪ್ಪ ವಿರುದ್ದ ಪಕ್ಷೇತರ ಕುಟುಂಬದ ಮೂವರು ಸದಸ್ಯರು ತೊಡೆ ತಟ್ಟಿದ್ದಾರೆ.