
Chitradurga news|nammajana.com|14-10-2024
ನಮ್ಮಜನ.ಕಾಂ, ನಾಯಕನಹಟ್ಟಿ: ಬತ್ತಿಹೋಗಿದ್ದ ಇಲ್ಲಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಪುಷ್ಕರಣಿಯಲ್ಲಿ 20 ಅಡಿ (pushkarani) ಜಲ ಉಕ್ಕಿಬಂದಿದೆ.
30 ವರ್ಷಗಳ ನಂತರ ಹೊರಮಠದ ಆವರಣದಲ್ಲಿನ ಕಲ್ಯಾಣಿಗೆ ನೀರು ಬಂದಿದೆ. ತಿಪ್ಪೇರುದ್ರಸ್ವಾಮಿ ಹೊರಮಠದ ಆವರಣದ ಪುಷ್ಕರಣಿ 300 ವರ್ಷಗಳ ಹಿಂದೆ ನಿರ್ಮಾಣ ಗೊಂಡಿದ್ದು, ಇದರ ನೀರನ್ನು ನಿತ್ಯ ಪೂಜೆಗೆ ಬಳಸಲಾಗುತ್ತಿತ್ತು. ಮೋಟಾರ್ ಮೂಲಕ ಪಂಪ್ ಮಾಡಲಾಗುತ್ತಿತ್ತು.

30 ವರ್ಷ ಹಿಂದೆ ಜಾತ್ರೆ ವೇಳೆ ಪುಷ್ಕರಣಿ ಸುತ್ತ ಸಾವಿರಾರು ಭಕ್ತರು ತಂಗುತ್ತಿದ್ದರು. 30 ವರ್ಷಗಳ ಹಿಂದೆ ಪುಷ್ಕರಣಿಯ ಒಂದು ಭಾಗ ಕುಸಿದು, ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತರಾಗಿ, ಮೂವರು ಗಾಯಗೊಂಡಿದ್ದರು. ನಂತರದ ವರ್ಷಗಳಲ್ಲಿ ಅಂತರ್ಜಲ ಮಟ್ಟ ನಿರಂತರವಾಗಿ ಕುಸಿಯಿತು.
ನೀರಿಲ್ಲದ ಪುಷ್ಕರಣಿಗೆ ಜನ ಕಸ ಎಸೆದರು. ಬಳಿಕ ದೇವಾಲಯ ಆಡಳಿತ ಮಂಡಳಿ, ಪುಷ್ಕರಣಿಯ ಎರಡೂ ಬದಿ ಕಲ್ಲಿನ ಮೆಟ್ಟಿಲುಗಳನ್ನು ತೆರವುಗೊಳಿಸಿ, ಕಾಂಕ್ರೀಟ್ ರಚನೆ ನಿರ್ಮಿಸಿದರು. ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಿ, ಮಧ್ಯಭಾಗದಲ್ಲಿ ಆರು ಅಡಿಯ ಪೀಠ ಮತ್ತು ಅದರ ಮೇಲ್ಬಾಗದಲ್ಲಿ 9 ಆಡಿ ಶ್ರೀ ತಿಪ್ಪೇ ರುದ್ರಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿ, ಪುಷ್ಕರಣಿಗೆ ನೀರು ಬಿಡಲಾಗುತ್ತಿತ್ತು.
ಜನರ ಪ್ರವೇಶ ನಿರ್ಬಂಧ
ನಾಯಕನಹಟ್ಟಿ ಪುಷ್ಕರಣಿಯಲ್ಲಿ ದಿಢೀರ್ ಅಂತರ್ಜಲ ಹೆಚ್ಚಳದ ಹಿನ್ನೆಲೆಯಲ್ಲಿ ಪುಷ್ಕರಣಿಯ ಒಂದು ಬದಿ ಕುಸಿಯಲಾರಂಭಿಸಿದೆ. ಬಾವಿಯ ಗೋಡೆ ಒಂದಷ್ಟು ಕುಸಿದಿದೆ. ನೀರು ಹೆಚ್ಚಿದಂತೆ ಗೋಡೆ ಮತ್ತಷ್ಟು ಕುಸಿಯುವ ಅಪಾಯವಿದೆ. (pushkarani) ಹೀಗಾಗಿ ಬಾವಿಗೆ ಸಾರ್ವಜ ನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಕುಸಿದ ಗೋಡೆಯ ಸುತ್ತ ಹಗ್ಗ ಹಾಕಿ, ಕೆಂಪು ಬಾವುಟ ಅಳವಡಿಸಿ ಸಾರ್ವಜನಿಕರನ್ನು ಎಚ್ಚರಿಸಲಾಗಿದೆ.
ಇದನ್ನೂ ಓದಿ: ಭರಮಸಾಗರದ ಜೋಡಿ ಕೆರೆಗಳಿಗೆ ತರಳಬಾಳು ಶ್ರೀ ಬಾಗಿನ ಅರ್ಪಣೆ | Bharamasagara
ಇದೀಗ ಚಿಕ್ಕಕೆರೆಗೆ ನೀರು ಬಂದಿದೆ. ಹೀಗಾಗಿ ಅಂತರ್ಜಲ ಮಟ್ಟ ಹೆಚ್ಚಾಗಿ, ಒಣಗಿದ್ದ ಪುಷ್ಕರಣಿಯಲ್ಲಿ ಗಂಗೆ ಪ್ರತ್ಯಕ್ಷಳಾಗಿದ್ದಾಳೆ. ಕಲ್ಯಾಣಿಯ ಸೌಂದರ್ಯಕ್ಕೆ ಮೆರುಗು ಬಂದಿದೆ. 9 ಆಡಿ (pushkarani) ತಿಪ್ಪೇರುದ್ರಸ್ವಾಮಿ ಮೂರ್ತಿಯ ಕತ್ತಿನ ಭಾಗದವರೆಗೆ ನೀರು ಆವರಿಸಿದೆ.
ಪುರಾತನ ಕಲ್ಯಾಣಿಯಲ್ಲಿ ಜಲ ಉಕ್ಕಿರುವುದು ಉತ್ತಮ ಬೆಳವಣಿಗೆ. ಆದರೆ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಸುತ್ತಲೂ ಬ್ಯಾರಿಕೇಡ್ ಅಳವಡಿಸಿ, ಎಂಜಿನಿಯರ್ಗಳ ಸಲಹೆ ಪಡೆದು ಪುಷ್ಕರಣಿ ರಕ್ಷಣೆ ಮತ್ತು ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
-ಎಚ್.ಗಂಗಾಧರಪ್ಪ, ದೇವಾಲಯದ ಇಒ.