Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಪುಷ್ಕರಣಿ | 30 ವರ್ಷಗಳ ನಂತರ ಉಕ್ಕಿದ ಜಲ | pushkarani
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಪುಷ್ಕರಣಿ | 30 ವರ್ಷಗಳ ನಂತರ ಉಕ್ಕಿದ ಜಲ | pushkarani
ಇಂದಿನ ಸುದ್ದಿ

ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದ ಪುಷ್ಕರಣಿ | 30 ವರ್ಷಗಳ ನಂತರ ಉಕ್ಕಿದ ಜಲ | pushkarani

Editor Nammajana
Last updated: 14 October 2024 13:13
By Editor Nammajana 2 Min Read
Share
SHARE

Chitradurga news|nammajana.com|14-10-2024

ನಮ್ಮಜನ.ಕಾಂ, ನಾಯಕನಹಟ್ಟಿ: ಬತ್ತಿಹೋಗಿದ್ದ ಇಲ್ಲಿನ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಪುಷ್ಕರಣಿಯಲ್ಲಿ 20 ಅಡಿ (pushkarani) ಜಲ ಉಕ್ಕಿಬಂದಿದೆ.

30 ವರ್ಷಗಳ ನಂತರ ಹೊರಮಠದ ಆವರಣದಲ್ಲಿನ ಕಲ್ಯಾಣಿಗೆ ನೀರು ಬಂದಿದೆ. ತಿಪ್ಪೇರುದ್ರಸ್ವಾಮಿ ಹೊರಮಠದ ಆವರಣದ ಪುಷ್ಕರಣಿ 300 ವರ್ಷಗಳ ಹಿಂದೆ ನಿರ್ಮಾಣ  ಗೊಂಡಿದ್ದು, ಇದರ ನೀರನ್ನು ನಿತ್ಯ ಪೂಜೆಗೆ ಬಳಸಲಾಗುತ್ತಿತ್ತು. ಮೋಟಾರ್ ಮೂಲಕ ಪಂಪ್ ಮಾಡಲಾಗುತ್ತಿತ್ತು.

30 ವರ್ಷ ಹಿಂದೆ  ಜಾತ್ರೆ ವೇಳೆ ಪುಷ್ಕರಣಿ ಸುತ್ತ ಸಾವಿರಾರು ಭಕ್ತರು ತಂಗುತ್ತಿದ್ದರು. 30 ವರ್ಷಗಳ ಹಿಂದೆ ಪುಷ್ಕರಣಿಯ ಒಂದು ಭಾಗ ಕುಸಿದು, ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತರಾಗಿ, ಮೂವರು ಗಾಯಗೊಂಡಿದ್ದರು. ನಂತರದ ವರ್ಷಗಳಲ್ಲಿ ಅಂತರ್ಜಲ ಮಟ್ಟ ನಿರಂತರವಾಗಿ ಕುಸಿಯಿತು.

ನೀರಿಲ್ಲದ ಪುಷ್ಕರಣಿಗೆ ಜನ ಕಸ ಎಸೆದರು. ಬಳಿಕ ದೇವಾಲಯ ಆಡಳಿತ ಮಂಡಳಿ, ಪುಷ್ಕರಣಿಯ ಎರಡೂ ಬದಿ ಕಲ್ಲಿನ ಮೆಟ್ಟಿಲುಗಳನ್ನು ತೆರವುಗೊಳಿಸಿ, ಕಾಂಕ್ರೀಟ್ ರಚನೆ ನಿರ್ಮಿಸಿದರು. ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಿ, ಮಧ್ಯಭಾಗದಲ್ಲಿ ಆರು ಅಡಿಯ ಪೀಠ ಮತ್ತು ಅದರ ಮೇಲ್ಬಾಗದಲ್ಲಿ 9 ಆಡಿ ಶ್ರೀ ತಿಪ್ಪೇ ರುದ್ರಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿ, ಪುಷ್ಕರಣಿಗೆ ನೀರು ಬಿಡಲಾಗುತ್ತಿತ್ತು.

ಜನರ ಪ್ರವೇಶ ನಿರ್ಬಂಧ

ನಾಯಕನಹಟ್ಟಿ ಪುಷ್ಕರಣಿಯಲ್ಲಿ ದಿಢೀರ್ ಅಂತರ್ಜಲ ಹೆಚ್ಚಳದ ಹಿನ್ನೆಲೆಯಲ್ಲಿ ಪುಷ್ಕರಣಿಯ ಒಂದು ಬದಿ ಕುಸಿಯಲಾರಂಭಿಸಿದೆ. ಬಾವಿಯ ಗೋಡೆ ಒಂದಷ್ಟು ಕುಸಿದಿದೆ. ನೀರು ಹೆಚ್ಚಿದಂತೆ ಗೋಡೆ ಮತ್ತಷ್ಟು ಕುಸಿಯುವ ಅಪಾಯವಿದೆ. (pushkarani) ಹೀಗಾಗಿ ಬಾವಿಗೆ ಸಾರ್ವಜ ನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಕುಸಿದ ಗೋಡೆಯ ಸುತ್ತ ಹಗ್ಗ ಹಾಕಿ, ಕೆಂಪು ಬಾವುಟ ಅಳವಡಿಸಿ ಸಾರ್ವಜನಿಕರನ್ನು ಎಚ್ಚರಿಸಲಾಗಿದೆ.

ಇದನ್ನೂ ಓದಿ: ಭರಮಸಾಗರದ ಜೋಡಿ ಕೆರೆಗಳಿಗೆ ತರಳಬಾಳು ಶ್ರೀ ಬಾಗಿನ ಅರ್ಪಣೆ | Bharamasagara

ಇದೀಗ ಚಿಕ್ಕಕೆರೆಗೆ ನೀರು ಬಂದಿದೆ. ಹೀಗಾಗಿ ಅಂತರ್ಜಲ ಮಟ್ಟ ಹೆಚ್ಚಾಗಿ, ಒಣಗಿದ್ದ ಪುಷ್ಕರಣಿಯಲ್ಲಿ ಗಂಗೆ ಪ್ರತ್ಯಕ್ಷಳಾಗಿದ್ದಾಳೆ. ಕಲ್ಯಾಣಿಯ ಸೌಂದರ್ಯಕ್ಕೆ ಮೆರುಗು ಬಂದಿದೆ. 9 ಆಡಿ (pushkarani) ತಿಪ್ಪೇರುದ್ರಸ್ವಾಮಿ ಮೂರ್ತಿಯ ಕತ್ತಿನ ಭಾಗದವರೆಗೆ ನೀರು ಆವರಿಸಿದೆ.

ಪುರಾತನ ಕಲ್ಯಾಣಿಯಲ್ಲಿ ಜಲ ಉಕ್ಕಿರುವುದು ಉತ್ತಮ ಬೆಳವಣಿಗೆ. ಆದರೆ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಸುತ್ತಲೂ ಬ್ಯಾರಿಕೇಡ್ ಅಳವಡಿಸಿ, ಎಂಜಿನಿಯರ್‌ಗಳ ಸಲಹೆ ಪಡೆದು ಪುಷ್ಕರಣಿ ರಕ್ಷಣೆ ಮತ್ತು ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

-ಎಚ್.ಗಂಗಾಧರಪ್ಪ, ದೇವಾಲಯದ ಇಒ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:ChallakereChitradurga NewsHistorical PushkaraniKannada Newskannada suddiNammajana.comNayakanahattiNayakanatti TemplePushkaraniTipperudraswamyಐತಿಹಾಸಿಕ ಪುಷ್ಕರಣಿಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿತಿಪ್ಪೇರುದ್ರಸ್ವಾಮಿನಮ್ಮಜನ.ಕಾಂನಾಯಕನಟ್ಟಿ ದೇವಾಲಯನಾಯಕನಹಟ್ಟಿಪುಷ್ಕರಣಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಭರಮಸಾಗರದ ಜೋಡಿ ಕೆರೆಗಳಿಗೆ ತರಳಬಾಳು ಶ್ರೀ ಬಾಗಿನ ಅರ್ಪಣೆ | Bharamasagara
Next Article ಇಂದಿನ ರಾಶಿ ಭವಿಷ್ಯ | ಯಾವ್ಯಾವ ರಾಶಿಗೆ ಶುಭ ಯೋಗವಿದೆ | Kannada Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?