Chitradurga News | Nammajana.com |06-08-2025
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲಾದ್ಯಂತ(Rain damage) ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ.
ಇದನ್ನೂ ಓದಿ: ಕರ್ನಾಟಕ ST ನೌಕರರ ಸಮ್ಮೇಳನಕ್ಕೆ ಸಿದ್ದತೆ


ಚಿತ್ರದುರ್ಗ ತಾಲೂಕಿನಲ್ಲಿ ತಡರಾತ್ರಿ ಧಾರಾಕಾರ ಮಳೆಯಾದ ಪರಿಣಾಮ ತಾಲೂಕಿನ ಲಿಂಗಾವರಹಟ್ಟಿ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ತಗ್ಗು ಪ್ರದೇಶದಲ್ಲಿನ ಬೆಳೆಗಳು ಜಲಾವೃತವಾಗಿವೆ. ಸಾವಿರಾರು ರೂಪಾಯಿ ಬಂಡವಾಳ ಹಾಕಿ ಬೆಳೆದ ಸೂರ್ಯಕಾಂತಿ ಹಾಗೂ ಈರುಳ್ಳಿ ಬೆಳೆ ಕೊಳೆಯುವ ಭೀತಿ ಉಂಟಾಗಿದೆ.
ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮುರು(Rain damage) ತಾಲೂಕಿನ ಹಲವೆಡೆ ಸುರಿದಿರುವ ಮಳೆಯಿಂದಾಗಿ ಶೇಂಗಾ ಬಿತ್ತನೆಗೆ ಅನುಕೂಲವಾಗಿದೆ. ಈಗಾಗಲೇ ಬಿತ್ತನೆ ಮಾಡಿ ತೇವಾಂಶದ ನಿರೀಕ್ಷೆಯಲ್ಲಿದ್ದ ಬೆಳೆಗಳಿಗೂ ಈ ಮಳೆ ನೀರೆರೆದಿದೆ.
ಜಿಲ್ಲಾದ್ಯಂತ 11 ಭಾಗಶಃ ಹಾಗೂ 3 ಮನೆ ಸಂಪೂರ್ಣ ಹಾನಿಯಾಗಿವೆ. ಚಿತ್ರದುರ್ಗ ತಾಲೂಕಿನಲ್ಲಿ 4 ಭಾಗಶಃ ಮನೆಹಾನಿ, ಚಳ್ಳಕೆರೆ 3 ಭಾಗಶಃ ಮನೆ ಹಾನಿ, ಹೊಳಲ್ಕೆರೆ 4 ಭಾಗಶಃ ಮನೆ ಹಾನಿ ಹಾಗೂ 3 ಪೂರ್ಣ ಮನೆಹಾನಿ ಹಾಗೂ ಹಿರಿಯೂರು ತಾಲೂಕಿನಲ್ಲಿ 3 ಭಾಗಶಃ ಮನೆಹಾನಿಯಾಗಿವೆ.
ಇದನ್ನೂ ಓದಿ: ಸೋಮವಾರ ರಾತ್ರಿ ಸುರಿದ ಮಳೆಗೆ ಎಲ್ಲೆಲ್ಲಿ ಏನೆಲ್ಲ ಹಾನಿಯಾಗಿದೆ | ಇಲ್ಲಿನ ರಿಪೋರ್ಟ್
ಈರುಳ್ಳಿ ಬೆಳೆಯಲ್ಲಿ ನೀರು ನಿಂತಿದ್ದು,(Rain damage) ಕೊಳೆ ರೋಗದ ಭೀತಿ ಉಂಟಾಗಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ 30 ಮಿ. ಮೀ, ಚಿತ್ರದುರ್ಗ ತಾಲೂಕಿನಲ್ಲಿ 15 ಮಿ.ಮೀ, ಹಿರಿಯೂರು 39.4, ಹೊಳಲ್ಕೆರೆ 6.8, ಹೊಸದುರ್ಗ 14 ಹಾಗೂ ಮೊಳಕಾಲ್ಮುರು 8.4 ಮಿ.ಮೀ ಮಳೆಯಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252