Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಚಿತ್ರದುರ್ಗ ಸುತ್ತಲೂ ರಿಯಲ್ ಎಸ್ಟೇಟ್ ಅಬ್ಬರ | ಲಕ್ಷಗಳ‌ ಲೆಕ್ಕದಲ್ಲಿದ್ದ ಜಮೀನಿಗೆ ಕೋಟಿ ಡಿಮ್ಯಾಂಡ್ | Real estate
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಚಿತ್ರದುರ್ಗ ಸುತ್ತಲೂ ರಿಯಲ್ ಎಸ್ಟೇಟ್ ಅಬ್ಬರ | ಲಕ್ಷಗಳ‌ ಲೆಕ್ಕದಲ್ಲಿದ್ದ ಜಮೀನಿಗೆ ಕೋಟಿ ಡಿಮ್ಯಾಂಡ್ | Real estate
ಇಂದಿನ ಸುದ್ದಿ

ಚಿತ್ರದುರ್ಗ ಸುತ್ತಲೂ ರಿಯಲ್ ಎಸ್ಟೇಟ್ ಅಬ್ಬರ | ಲಕ್ಷಗಳ‌ ಲೆಕ್ಕದಲ್ಲಿದ್ದ ಜಮೀನಿಗೆ ಕೋಟಿ ಡಿಮ್ಯಾಂಡ್ | Real estate

Editor Nammajana
Last updated: 1 December 2024 11:28 AM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|01-12-2024

ನಮ್ಮಜನ.ಕಾಂ, ಚಿತ್ರದುರ್ಗ: ಕೋಟೆ ನಾಡು ಎಂಬ ಖ್ಯಾತಿ‌ ಪಡೆದಿದ್ದರು ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಹಿಂದುಳಿದಂತೆ (Real estate) ಕಾಣುತ್ತಿತ್ತು. ಈಗ ಸ್ವಲ್ಪ ಅಭಿವೃದ್ಧಿ ಹೊಂದುತ್ತಿರುವ ನಗರ ಎಂಬ ಮಾತು ಜಿಲ್ಲೆಯಲ್ಲಿ ಕೇಳುತ್ತಿರುವಾಗಲೇ ನಗರದಲ್ಲೂ ರಿಯಲ್‌ ಎಸ್ಟೇಟ್‌ ಕಾವು ಜೋರಾಗಿದ್ದು ಸೈಟ್ ಗಳ ಮಾರಟ ಮತ್ತು ಜಮೀನು ಮಾರಟ ತುರುಸಿನಿಂದ ಕೂಡಿದೆ.

nammajana

ಹಲವು ದಶಕಗಳ ಕಾಲ ಚಿತ್ರದುರ್ಗ ನಗರ ಎತ್ತ  ರೌಂಡ್ ಹಾಕಿದರು ಕೇವಲ 2-3 ಮೂರು ಕಿಲೋ ಮೀಟರ್ ಮಾತ್ರವಿತ್ತು. ಈಗಲೂ ಅಧಿಕೃತವಾಗಿ ನಗರ ವ್ಯಾಪ್ತಿ ಸ್ವಲ್ಪ ಚಾಚಿಕೊಂಡಿದೆ. ಈ‌ ಮೊದಲ ಧವಳಗಿರಿ ಬಡಾವಣೆ, (Real estate) ಚೋಳಗುಡ್ಡ ವ್ಯಾಪ್ತಿ ಅಷ್ಟು ಪ್ರಮಾಣದಲ್ಲಿ ವಿಸ್ತರಿಸಿರಲಿಲ್ಲ ಆದರೆ ಆ ಭಾಗವೇ ಮಾಳಪ್ಪನಹಟ್ಟಿ ಮುಟ್ಟಿ ಕಾವಡಿಗರಹಟ್ಟಿ ತಲುಪಿದ್ದು ಹೆಚ್ಚು ಕಡಿಮೆ ಮಾಳಪ್ಪನಹಟ್ಟಿ ನಗರಕ್ಕೆ ಸೇರುವುದರಲ್ಲಿ ಅನುಮಾನವಿಲ್ಲ ಎಂಬಂತೆ ಬೆಳೆದು ನಿಂತಿದೆ.

ವಿಸ್ತಾರ ಹೆಚ್ಚಿಸಿದ ಹೊಸ ನಿವೇಶನ ಬಡವಾಣೆಗಳು

ನಿವೇಶನ ಅಭಿವೃದ್ಧಿ ಚಟುವಟಿಕೆಗಳು ಏಳೆಂಟು ಕಿಮೀ ವ್ಯಾಪ್ತಿಯ ತನಕ ಹಬ್ಬಿವಿವೆ. ಅದರಲ್ಲೂ ನೂತನ ಹೈವೇ ಬೈಪಾಸ್‌ ಮತ್ತು ರಿಂಗ್ ರೋಡ್  ಆದ ನಂತರ ಸುತ್ತಲಿನ ಭೂಮಿ ಖರೀದಿ, ಲೇ ಔಟ್‌ ಅಭಿವೃದ್ಧಿಗೆ ಹೊಸ ಸ್ಪರ್ಶ ಪಡೆದುಕೊಂಡಿದೆ.

ಚಿತ್ರದುರ್ಗ ನಗರದ ಬೆರಳೆಣಿಕೆಯಷ್ಟು  ಡೆವಲಪರ್‌ ಹೆಸರುಗಳು ಮಾತ್ರ ದುರ್ಗದಲ್ಲಿ ಕೇಳುತ್ತಿತ್ತು. ಆದರೆ ಈಗ  ಪಕ್ಕದ ದಾವಣಗೆರೆ, ಬಳ್ಳಾರಿ, ತುಮಕೂರು, ಚಿಕ್ಕಮಗಳೂರು, ಸೇರಿ  ರಾಜಧಾನಿ ಬೆಂಗಳೂರುನಿಂದ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಖರೀದಿ, ಲೇಔಟ್‌ ಅಭಿವೃದ್ಧಿಗೆ ಹೂಡಿಕೆ ಮಾಡುತ್ತಿದ್ದಾರೆ.

ಇದರ ಪರಿಣಾಮ ಈ ಹಿಂದೆ ಲಕ್ಷಗಳನ್ನು ಮೀರದ ಜಮೀನುಗಳ ಬೆಲೆ ಈಗ ಕನಿಷ್ಟ 1 ಕೋಟಿಯಿಂದ 2-3 ಕೋಟಿಯ ತನಕ ಏರಿಕೆ ದಾರಿ ಹಿಡಿದಿದ್ದು ಭರ್ಜರಿ ಡಿಮ್ಯಾಂಡ್ ಬಂದಿದೆ.

ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಸಹಾ ಸುತ್ತಲಿನ ಏಳು ಪಂಚಾಯಿತಿ ವ್ಯಾಪ್ತಿಯ ತನಕ ಹೊಸ ಮಾಸ್ಟರ್‌ ಪ್ಲಾನ್‌ ರೂಪಿಸಿ, ಅನುಮೋದನೆಗಾಗಿ ಕಳುಹಿಸಿದೆ. ಈಗಾಗಲೇ ಪರೋಕ್ಷವಾಗಿ ವಿಸ್ತರಣೆ ಆಗುತ್ತಿರುವ ಚಿತ್ರದುರ್ಗ ನಗರಕ್ಕೆ ಈ ಮಾಸ್ಟರ್‌ ಪ್ಲಾನ್‌ ಹೊಸ ದುರ್ಗಕ್ಕೆ ನಾಂದಿಯಾಡಲಿದೆ.

ಚಿತ್ರದುರ್ಗ ನಗರ ಅಂಗೈಯಷ್ಟಿದ್ದ ದುರ್ಗ ಈಗ ಅಪ್ಪಿಕೊಳ್ಳವಷ್ಟು ಮಟ್ಟಕ್ಕೆ ಬೆಳೆಯುತ್ತಿರುವ ಪರಿಣಾಮವಾಗಿ ನಿವೇಶನ ಬೆಲೆ ಚಿತ್ರದುರ್ಗ ನಗರದಲ್ಲಿ ಕನಿಷ್ಟ ದರ ಎರಡೂವರೆ ಸಾವಿರ ಇದ್ದರೆ, ಹೊರ ವಲಯದಲ್ಲಿ ಒಂದು ಸಾವಿರದಿಂಸ ಒಂದುವರೆ ಸಾವಿರದ ತನಕ ಹೆಚ್ಚಳವಾಗಿದೆ. ಹೊಸ ಏರಿಯಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಿವೇಶನ ಬಡಾವಣೆಗಳಲ್ಲಿ ಹೂಡಿಕೆದಾರರ ಸಂಖ್ಯೆ ಸಹ ಹೆಚ್ಚಾಗಿರುವುದು ಸಹ ಬೆಲೆ ಏರಿಕೆಗೆ ಕಾರಣವಿರುಬಹದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹಿಂದುಳಿದ ಹಳ್ಳಿಗಳನ್ನು ಸೇರಿಸಿ ಪುರಸಭೆ ಮಾಡಿರುವವರಿಗೆ ದೂರದೃಷ್ಟಿಯಿಲ್ಲ : ಹೆಚ್.ಆಂಜನೇಯ | Holalkere

 ನಿವೇಶನ ಅಭಿವೃದ್ಧಿ ಎಲ್ಲೆಲ್ಲಿ?

  •  ಚಳ್ಳಕೆರೆ ಟೋಲ್‌ಗೇಟ್‌ನಿಂದ ಮದಕರಿಪುರವರೆಗೆ ಎರಡು ಬದಿಗಳಲ್ಲಿ ಲೇಔಟ್‌ ಅಭಿವೃದ್ಧಿ, ಗೃಹ ನಿರ್ಮಾಣ ಬಹುತೇಕ ಅಂತಿಮ ಹಂತದಲ್ಲಿದೆ.
  • ಕನಕ ವೃತ್ತದಿಂದ ಮಾಳಪ್ಪನಹಟ್ಟಿ, ಮುರುಘಾ ಮಠ,  ಭೀಮಸಮುದ್ರ ಕಡೆ ಹಬ್ಬಿದೆ
  • ಹೊಳಲ್ಕೆರೆ ರಸ್ತೆಯ ಎಸ್ ಜೆಎಂ ಕಾಲೇಜಿನಿಂದ ಈರಜ್ಜನಹಟ್ಟಿ, ಜಾನಕೊಂಡ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ನಿವೇಶನ ಅಭಿವೃದ್ದಿ ಕಾರ್ಯ ನಡೆಯುತ್ತಿದೆ.
  • ಚಿತ್ರದುರ್ಗದ ಚಳ್ಳಕೆರೆ ಗೇಟ್ ನಿಂದ ಬೆಂಗಳೂರು ಹೆದ್ದಾರಿಯ ಕುಂಚಿಗನಾಳ್‌, ಡಿ.ಎಸ್‌.ಹಳ್ಳಿ, ಕ್ಯಾದಿಗ್ಗೆರೆವರೆಗೆ ನಿವೇಶನ ಒಂದಿಷ್ಟು ಪೂರ್ಣಗೊಂಡಿದ್ದು ಹಲವು ಕಡೆ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ.
  • ಹೊಸಪೇಟೆ ಮಾರ್ಗದಲ್ಲಿ ಪಿಳ್ಲೇಕೆರೆನಹಳ್ಳಿ, ಮಲ್ಲಾಪುರ, ಗುಡ್ಡದ ರಂಗವ್ವನಹಳ್ಳಿವರೆಗೆ ನಿವೇಶನಗಳು ಅಭಿವೃದ್ಧಿ ಆಗಿವೆ.
  • ತುರುವನೂರು ರಸ್ತೆಯ ಬ್ಯಾಂಕ್ ಕಾಲೋನಿಯಿಂದ ಗೋನೂರು ಗ್ರಾಮದ ತನಕ, ಮೆದೇಹಳ್ಳಿಯಿಂದ ತಮಟಕಲ್ಲು ಗ್ರಾಮದ ತನಕ ನಿವೇಶನ ಅಭಿವೃದ್ಧಿಯ ನೀಲನಕ್ಷೆಗಳು ತಯಾರಾಗುತ್ತಿವೆ.

ಇದನ್ನೂ ಓದಿ: ಚಿತ್ರದುರ್ಗ ವೈದ್ಯಕೀಯ ಕಾಲೇಜು: ಬೋಧಕರ ಹುದ್ದೆಗಳ ನೇಮಕಾತಿಗೆ  ಅರ್ಜಿ ಆಹ್ವಾನ | Instructor post

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

TAGGED:ChitradurgaChitradurga NewsChitradurga RoundupExpansionKannada Newskannada suddiLand Price RiseNammajana.comNew EstatesPlot DevelopmentPrice Lakhs to CroresReal Estateಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುತ್ತಮೂತ್ತಲುಚಿತ್ರದುರ್ಗ ಸುದ್ದಿಜಮೀನು ಬೆಲೆ ಏರಿಕೆನಮ್ಮಜನ.ಕಾಂನಿವೇಶನಗಳ ಅಭಿವೃದ್ದಿರಿಯಲ್ ಎಸ್ಟೇಟ್ಲಕ್ಷದಿಂದ ಕೋಟಿ ಬೆಲೆವಿಸ್ತರಣೆಹೊಸ ಬಡಾವಣೆಗಳು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy0
Sleepy0
Angry0
Dead0
Wink0
Previous Article ಹಿಂದುಳಿದ ಹಳ್ಳಿಗಳನ್ನು ಸೇರಿಸಿ ಪುರಸಭೆ ಮಾಡಿರುವವರಿಗೆ ದೂರದೃಷ್ಟಿಯಿಲ್ಲ : ಹೆಚ್.ಆಂಜನೇಯ | Holalkere
Next Article ನೂತನ ಶಾಲಾ ಕಾಲೇಜು ಕೊಠಡಿಗಳ ನಿರ್ಮಾಣಕ್ಕೆ 35 ಕೋಟಿ ಅನುದಾನ: ಶಾಸಕ ಟಿ.ರಘುಮೂರ್ತಿ | Education is a priority
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ
ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?
ವಿಶೇಷ ಸುದ್ದಿ
FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?