Chitradurga news|nammajana.com|16-6-2024
ನಮ್ಮಜನ.ಕಾಂ, ಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್ನ ಕೊಲೆ (Renukaswamy murder case accused Anukumar) ಆರೋಪಿ ಅನು ಅವರನ್ನು ತಂದೆ ಶವಸಂಸ್ಕಾರಕ್ಕೆ ಕರೆತಂದ ಪೊಲೀಸರು, ಮಗ ಬಂದ ತಕ್ಷಣ ಆರೋಪಿ ಅನು ಕಂಡು ಕಣ್ಣೀರಿಟ್ಟ ತಾಯಿ ಜಯ್ಯಮ್ಮ, ತಂದೆ ಶವ ಕಂಡು ಭಾವುಕನಾದ ಅನು ಕಣ್ಣಿರಿಟ್ಟಿರುವ ಘಟನೆ ನಡೆದಿದೆ.
ನಗರದ ಕನಕ ವೃತ್ತದಲ್ಲಿನ ಸಮೀಪದ ರುದ್ರ ಭೂಮಿಯಲ್ಲಿ ನಿನ್ನೆ ಹೃದಯಾಘಾತದಿಂದ ಸಾವಿಗೀಡಾಗಿದ್ದ ಅನು ತಂದೆ (Renukaswamy murder case accused Anukumar) ಚಂದ್ರಪ್ಪ ಅವರ ಅಂತ್ಯಕ್ರಿಯೆ ನೇರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಅನು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತು.

ರೇಣುಕಾಸ್ವಾಮಿ ಕಿಡ್ನಾಪ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಆರೋಪಿ ಅನು ಅವರನ್ನು ಮೃತ ತಂದೆ ಮುಖ ನೋಡಲು ಕರೆ ತಂದಾಗ ಅಪ್ಪನ ಮೃತ ದೇಹ ಕಂಡ ಗೋಳಾಡಿ ಕಣ್ಣಿರಿಟ್ಟಿದ್ದಾನೆ.
ಅತ್ತ ಗಂಡ, ಇತ್ತ ಮಗನ ಮುಖ ನೋಡಿ ಗೋಳಿಟ್ಟ ತಾಯಿ ಜಯ್ಯಮ್ಮ ಮಗ ಜೈಲು ಸೇರುತ್ತಿದ್ದಂತೆ ಹಾರ್ಟ್ ಆಟ್ಯಾಕ್ ನಿಂದ ಸಾವನ್ನಪ್ಪಿದ ತಂದೆ ಚಂದ್ರಪ್ಪ ಅವರ ಅಂತ್ಯಕ್ರಿಯೆಗೆ ಕೋರ್ಟ್ ಅನುಮತಿಯಂತೆ ತಂದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಯಾಗಿದ್ದಾನೆ.
ಅಪ್ಪನ ಶವ ನೋಡಿ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ಆರೋಪಿ ಅನು (Renukaswamy murder case accused Anukumar) ಅಮ್ಮನ ಕಣ್ಣಿರು ಕಂಡು ಅಳುತ್ತಲೇ ತಾಯಿಯ ಕಣ್ಣಿರು ಒರೆಸಿದ ಆರೋಪಿ ಅನು ಕುಮಾರ್.ಸಂಬಂಧಿಕರ ಜೊತೆ ದುಃಖ ನೋವಿನಲ್ಲೇ ಅಪ್ಪನ ಶವದ ಪಕ್ಕ ಕುಳಿತಿದ್ದಾನೆ.
ಇದನ್ನೂ ಓದಿ: Chitradurga: ರೇಣುಕಾಸ್ವಾಮಿ ಕುಟುಂಬಕ್ಕೆ 60 ಸಾವಿರ ನೆರವು ನೀಡಿದ ಬಿಜೆಪಿ ಅಧ್ಯಕ್ಷ
ಆರೋಪಿ ಅನುಕುಮಾರ್ ಅವರನ್ನು ಬಿಗಿ ಬಂದೋ ಬಸ್ತಲ್ಲೇ ಪೊಲೀಸರು ತಂದರು. ತಂದೆ ಶವ ಸಂಸ್ಕಾರದ ವೇಳೆ ತಾಯಿಯ ತಾಳಿ ತೆಗೆದು ಬಳೆ ಒಡೆದು ಶಾಸ್ತ್ರ, ತಾಯಿ ಸುಮಂಗಲೆತನ ಕಳಚುತ್ತಿದ್ದ ದೃಷ್ಯ ಕಂಡು ಗಳ ಗಳನೆ ಕಣ್ಣೀರಿಟ್ಟ ಅನುಕುಮಾರ್ (Renukaswamy murder case accused Anukumar) ಸಂಬಂಧಿಕರು, ಕಟುಂಬಸ್ಥರು, ತಂದೆ ಶವ ಕಂಡು ಕುಸಿದ ಸಮಾದಿ ಬಳಿ ಕುಳಿತಿದ್ದ ಅನುಕುಮಾರ್ , ಶವ ಸಂಸ್ಕಾರದ ಮಣ್ಣು ಕೊಟ್ಟು ಸಮಾದಿ ಆಗುವವರೆಗೆ ಬಿಡದೆ ಪೋಲಿಸರು ವಾಪಸ್ ಕರೆದೊಯ್ದಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252