
Chitradurga news|nammajana.com|23-03-2025
ನಮ್ಮಜನ.ಕಾಂ, ಹೊಸದುರ್ಗ: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಬರಿ ಮಾತನಾಡದೆ, ಕನ್ನಡ ನಾಡಿನ ಜನರಿಗೆ (Sadhguru Soap) ಸೇವೆ ಮಾಡುವುದರ ಮುಖಾಂತರ ಇತಿಹಾಸದ ಪುಟಗಳಲ್ಲಿ ಸೇರಿದ್ದಾರೆ.ಹಳ್ಳಿಯ ಸಾಹುಕಾರರ ಹತ್ತಿರ ಸಾಲ ಪಡೆದು ಬಡ್ಡಿ ಕಟ್ಟಲಾಗದೆ, ನರಕ ಯಾತನೆ ಅನುಭವಿಸುತ್ತಿದ್ದ ಮಹಿಳೆಯರಿಗೆ ಬ್ಯಾಂಕ್ ಆಫ್ ಬರೋಡದಿಂದ ಧರ್ಮಸ್ಥಳ ಸಂಸ್ಥೆಯವರು (Sadhguru Soap) ಕೊಡಿಸುತ್ತಿರುವ ಸಾಲದಿಂದ ಅವಲಂಬಿಗಳಾಗಿ ಮಹಿಳೆಯರು ಬದುಕುತ್ತಿದ್ದಾರೆ. ಬರೀ ಮಾತನಾಡುವ ತುಟಿಗಳಿಗಿಂತ, ಸೇವೆ ಮಾಡುವ ಕೈಗಳೆ ಶ್ರೇಷ್ಠ ಎಂದು ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಡಿ.ಎಸ್.ಪ್ರದೀಪ್ ಅಭಿಮತ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಕಾರೆಹಳ್ಳಿ ಹಾಗೂ ಬೆಲಗೂರು ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, (Sadhguru Soap) ಭಾರತದ ಮೊದಲ ಶಕ್ತಿ ಮಾನವ ಸಂಪನ್ಮೂಲ. ಇತ್ತೀಚಿನ ದಿನಮಾನಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಆರ್ಥಿಕ ಉಳಿತಾಯಕ್ಕೆ ಸಹಕಾರಿಯಾಗಿದ್ದಾರೆ. ಸಹಕಾರಿಯಾಗಿದ್ದಾರೆ
ಮಹಿಳೆಯರ ಆರ್ಥಿಕ ಸಹಾಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಸರೆಯಾಗಿದೆ. ನಮ್ಮ ಆರ್ಥಿಕ ಪ್ರಗತಿ ನಿರಂತರವಾದರೆ, ದೇಶ ಅಭಿವೃದ್ಧಿಯಾಗಬಲ್ಲದು. ಧರ್ಮಸ್ಥಳ ರೋಡ್ ಸೈಡ್ ಸಂಸ್ಥೆ ತರಬೇತಿಯ ತರುವಾಯ, ನನ್ನ ಆರ್ಥಿಕ ಪ್ರಗತಿಯನ್ನೇ ಬದಲಾಯಿಸಿ ಉತ್ತುಂಗ ಮಟ್ಟಕ್ಕೆ ಹೋಗಲು ಕಾರಣವಾಯಿತು. ತರಬೇತಿಗೆ ಪ್ರಾಮಾಣಿಕತೆ ಇದ್ದರೆ, ಎಲ್ಲಾ ವಲಯದಲ್ಲಿಯೂ ಮುಂದೆ ಬರಬಹುದು. ಒಂದು ಕುಟುಂಬದ ಒಬ್ಬ ಮಹಿಳೆ ಸದೃಢವಾದರೂ, ಕುಟುಂಬ ಮತ್ತು ದೇಶ ಸದೃಢವಾದಂತೆ. ನಿಮ್ಮ ಮುಂದಿನ ಜೀವನವನ್ನು ಬದಲಾವಣೆ ಮಾಡುವ ಏಕೈಕ ಸಾಧನವೇ ಶಿಕ್ಷಣ. ನಿಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸಿ ಕುಟುಂಬದ ನೆಮ್ಮದಿಯ ಬದುಕಿಗೆ ಸಹಕರಿಸಿ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಮಾತನಾಡಿ, ಶಿಸ್ತು, ಸಂಯಮ ಮತ್ತು ಸಮಯಕ್ಕೆ ಧರ್ಮಸ್ಥಳ ಸಂಸ್ಥೆ ಹೆಸರಾಗಿದೆ. ಮಧುರೆಯ ಧರ್ಮಸ್ಥಳ ಸಂಸ್ಥೆಯ ಶುಭ ಸಂಘದಲ್ಲಿ 10.ಲಕ್ಷ ಸಾಲ ಪಡೆದು ಬೋರ್ವೆಲ್ ಕೊರೆಯಿಸಿ, ಅಡಕೆ ತೋಟ ಮಾಡಿದ್ದೇನೆ.
ಇದರಿಂದಾಗಿ ನಮ್ಮ ಕುಟುಂಬದವರು ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದೇವೆ. ನನ್ನ ಸ್ವಾವಲಂಬಿ ಬದುಕು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ತಲುಪಿಸಿದೆ. ಧರ್ಮಸ್ಥಳ ಸಂಸ್ಥೆಯವರು ನೀಡುತ್ತಿರುವ ಸುಜ್ಞಾನನಿಧಿಯಿಂದ (Sadhguru Soap) ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದು ಶಿಕ್ಷಣದಲ್ಲಿ ಮುಂದೆ ಬಂದಿದ್ದಾರೆ. ನಿಮ್ಮ ಮಕ್ಕಳಿಗೆ ವಿದ್ಯೆಯ ಜೊತೆಗೆ ಬದುಕಿನ ಮೌಲ್ಯಯುತ ಸಂಸ್ಕಾರವನ್ನು ತಾಯಂದಿರು ಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕೆ.ಡಿ.ಪಿ ಸದಸ್ಯೆ ದೀಪಿಕಾ ಸತೀಶ್, ಯೋಜನಾಧಿಕಾರಿ ಶಿವಣ್ಣ, ಸೇವಾ ಪ್ರತಿನಿಧಿಗಳಾದ ಶಿಲ್ಪಾ, ಭವ್ಯ ಹಾಗೂ ಬೆಲಗೂರು ಮತ್ತು ಕಾರೆಹಳ್ಳಿ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಹಾಜರಿದ್ದರು.
ಇದನ್ನೂ ಓದಿ: ಚಿತ್ರದುರ್ಗ ನಿವೃತ್ತ DFO ಮನೆ ಮೇಲೆ ಲೋಕಾಯುಕ್ತ ದಾಳಿ
ಬಾಕ್ಸ್
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಹ ಅವರದೇ ಆದ ಸಾಮರ್ಥ್ಯವಿರುತ್ತದೆ. ಒಬ್ಬ ಕುರೂಪಿಯಲ್ಲಿಯೂ ಒಂದು ಸೌಂದರ್ಯವಿರುತ್ತದೆ. ಇದು ದೇವರ ನಿಯಮವೂ ಕೂಡ (Sadhguru Soap) ಆಗಿದೆ. ನಿಮ್ಮ ಜ್ಞಾನಕ್ಕೆ ಮೆರಗನ್ನ ನೀಡುವಂತಹ ತರಬೇತಿಯನ್ನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನೀಡುತ್ತಿದೆ. ಆರ್ಥಿಕ ಹಾಗೂ ಸಾಮಾಜಿಕವಾಗಿ ಮಹಿಳೆಯರನ್ನ ಸಬಲೀಕರಣಗೊಳಿಸಿ, ಗ್ರಾಮಗಳನ್ನು ಅಭಿವೃದ್ಧಿಪಡಿಸುವುದೇ ಧರ್ಮಸ್ಥಳ ಸಂಸ್ಥೆಯ ಮೂಲ ಉದ್ದೇಶ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಅವಹೇಳನಕಾರಿ ಹೇಳಿಕೆಗಳು ಅಂತವರಿಗೆ ಶೋಭೆ ತರುವುದಿಲ್ಲ.
ತುಂಬಿನಕೆರೆ ಬಸವರಾಜ್
ಚಿತ್ರದುರ್ಗ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ.