
Chitradurga news|nammajana.com|01-03-2025
ಐದು ತಿಂಗಳ ಹಿಂದೆ ನಡೆದ ನ್ಯಾಮತಿ ಎಸ್ಬಿಐ ಕಳವು ಪ್ರಕರಣ
ನಮ್ಮಜನ.ಕಾಂ, ದಾವಣಗೆರೆ: ನ್ಯಾಮತಿ SBI ಬ್ಯಾಂಕಿನಲ್ಲಿ 13 ಕೋಟಿ ರೂ. ಮೌಲ್ಯದ 17.01 ಕೆಜಿ ಚಿನ್ನಾಭರಣ ಕದ್ದು, ಬ್ಯಾಂಕ್ ಪಕ್ಕದಲ್ಲೇ ಏನೂ ತಿಳಿಯದಂತೆ ಇದ್ದ ಆರು ಜನ (SBI Bank) ಆರೋಪಿತರನ್ನು ದಾವಣಗೆರೆ ಜಿಲ್ಲಾ ಪೊಲೀಸರು ಬಂಧಿಸುವ ಜೊತೆಗೆ ತಮಿಳುನಾಡಿನ ಮಧುರೈ ಸಮೀಪದ ಉಸಲಂಪಟ್ಟಿಯ ತೋಟದ ಬಾವಿಯಲ್ಲಿ ಕಳವು ಮಾಲನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದ್ದಾರೆ.

ನಿರಂತರ ಮೂರು ದಿನಗಳ ರಜಾ ಸಮಯ ನೋಡಿ 2024ರ ಅಕ್ಟೋಬರ್ 24 ರಂದು ನ್ಯಾಮತಿಯ ಎಸ್ ಬಿಐ ಶಾಖೆಯಲ್ಲಿ ಗ್ರಾಹಕರು ಅಡವಿಟ್ಟ ಚಿನ್ನವನ್ನು ಕಳವು ಮಾಡಿದ್ದ ಸುದ್ದಿ ಸಂಚಲನ ಮೂಡಿಸಿತ್ತು. ಬಹುತೇಕ ಕೃಷಿಕರೇ ಇರುವ ಆ ಪ್ರದೇಶದಲ್ಲಿ ಠೇವಣಿದಾರರು ಬೃಹತ್ ಪ್ರತಿಭಟನೆಯನ್ನೂ (SBI Bank) ನಡೆಸಿದ್ದು ರಾಜ್ಯಮಟ್ಟದಲ್ಲಿ ಸದ್ದು ಮಾಡಿತ್ತು.
ಬಂಧಿತ ಆರು ಜನರಲ್ಲಿ ಮುಖ್ಯ ಆರೋಪಿ ವಿಜಯ್ ಕುಮಾರ್ ಎಂಬಾತ ತಮಿಳುನಾಡು ಮೂಲದವನಾಗಿದ್ದು, ನ್ಯಾಮತಿ ಪಕ್ಕದ ಸುರಹೊನ್ನೆಯಲ್ಲಿ ವಿಐಪಿ ಸ್ಕ್ಯಾಕ್ಸ್ ಹೆಸರಲ್ಲಿ ಬೇಕರಿ ನಡೆಸುತ್ತಿದ್ದ, ಬೇಕರಿ ಉದ್ಯಮ ವಿಸ್ತರಣೆಗೆ 15 ಲಕ್ಷ ರೂ. ಸಾಲ ಕೋರಿ ಇದೇ ಬ್ಯಾಂಕಿಗೆ ಮನವಿ ಮಾಡಿದ್ದರೂ, ಸಿಬಿಲ್ ಸ್ಕೋರ್ ಇಲ್ಲದ ಕಾರಣ ಈತನಿಗೆ ಸಾಲ ನಿರಾಕರಣೆ ಮಾಡಲಾಗಿತ್ತು. ಇದೇ ಕಾರಣ (SBI Bank) ಬ್ಯಾಂಕ್ ವಿರುದ್ಧ ದ್ವೇಷ ಬೆಳೆಸಿದ ಆರೋಪಿ, ತನ್ನ ಕುಟುಂಬದ ಇನ್ನಿಬ್ಬರನ್ನು ಹಾಗೂ ಸ್ಥಳೀಯ ಮೂವರನ್ನು ಸೇರಿಸಿಕೊಂಡು ಬ್ಯಾಂಕ್ ಕಿಟಕಿಯನ್ನು ಮುರಿದು ಕಳವು ಮಾಡಿದರು.
ಗುಂಪು ಸೇರಿಕೊಂಡು ಬ್ಯಾಂಕ್ನ ಎಲ್ಲೆಲ್ಲಿ ಸಿಸಿ ಕ್ಯಾಮೆರಾ ಅಳವಡಿಸುತ್ತಾರೆ? ಪೊಲೀಸರು ಯಾವಾಗ ಬಂದು ಹೋಗುತ್ತಾರೆ? ಎಂಬುದನ್ನು ತಿಳಿದುಕೊಂಡು ನ್ಯಾಮತಿಯ ಎಸ್ಬಿಐ ಬ್ಯಾಂಕ್ ಗೆ ನುಗ್ಗಿ ದೋಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೂರ್ವವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
”ಈ ಪ್ರಕರಣದ ಪತ್ತೆಗೆ ಎಸ್ಪಿ ಉಮಾ ಪ್ರಶಾಂತ್ ಅವರು ಚನ್ನಗಿರಿ ಎಎಸ್ಪಿ ಸ್ಯಾಮ್ ವರ್ಗೀಸ್, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ್ ನೇತೃತ್ವದಲ್ಲಿ ಐದು (SBI Bank) ತಂಡಗಳನ್ನು ರಚಿಸಿದ್ದರು. ಈ ತಂಡಗಳು ಸತತ ಪ್ರಯತ್ನ ನಡೆಸಿ ಈ ಪ್ರಕರಣವನ್ನು ಭೇದಿಸಿವೆ” ಎಂದು ವಿವರಿಸಿದರು.
ಆರು ಜನ ಬಂಧಿತರು:
ತಮಿಳುನಾಡು ಮೂಲದ ವಿಜಯಕುಮಾರ್ (30), ಈತನ ಸಹೋದರ ಅಜಯಕುಮಾರ್ (28), ಬಾಮೈದ ಪರಮಾನಂದ(30), ಸ್ನೇಹಿತರಾದ ನ್ಯಾಮತಿಯ ಅಭಿಷೇಕ್ (23), ಚಂದ್ರು (23) ಹಾಗೂ ಮಂಜುನಾಥ್ (32) ಬಂಧಿತರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಸಂತೋಷ, ಬಿ.ಮಂಜುನಾಥ್, ತನಿಖಾಧಿಕಾರಿಗಳಾದ ಸ್ಯಾಮ್ ವರ್ಗೀಸ್, ಬಿ.ಎಸ್.ಬಸವರಾಜ್ ಮತ್ತಿತರರಿದ್ದರು.
10 ಜನರಿಗೆ ಸಿಎಂ ಪದಕ
“ಈ ಪ್ರಕರಣ ಭೇದಿಸಿದ ತನಿಖಾಧಿಕಾರಿಗಳಾದ ಸ್ಯಾಮ್ ವರ್ಗೀಸ್, ಬಿ.ಎಸ್.ಬಸವರಾಜ್ ಸೇರಿ 10 ಜನರಿಗೆ ಗೃಹ ಸಚಿವರು ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಿಸಿದ್ದಾರೆ. ಅಲ್ಲದೇ ಡಿಜಿ, ಬಿಜೆಪಿ, ಎಡಿಜಿಪಿ ನಗದು ಬಹುಮಾನ (SBI Bank) ಘೋಷಿಸಿದ್ದಾರೆ.
ನ್ಯಾಮತಿಯ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿ ವಶಪಡಿಸಿಕೊಂಡಿರುವ ಚಿನ್ನಾಭರಣವನ್ನು ದಾವಣಗೆರೆಯ ಎಸ್ಪಿ ಕಚೇರಿಯಲ್ಲಿ ಸೋಮವಾರ ಐಜಿಪಿ ಡಾ.ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್ ಪರಿಶೀಲಿಸಿದರು.
ಖದೀಮರು ರೂಪಿಸಿದ ದರೋಡೆ ಪ್ಲಾನ್
ಗೂಗಲ್ ಸರ್ಚ್ ಮಾಡಿ ದರೋಡೆ ಮಾಡುವ ಕುರಿತು ಪ್ಲಾನ್.
• ಚಿನ್ನವನ್ನು ಸೇವ್ ಲಾಕರ್ನಲ್ಲಿರಿಸಿ ತಮಿಳುನಾಡಿಗೆ ಸಾಗಣೆ.
ಈ ಸುಳಿವು ಸಿಗಬಾರದೆಂದು ಕದ್ದ ಮಾಲನ್ನು ಹಂಚಿಕೊಂಡಿರಲಿಲ್ಲ.
ಕಳವು ಮುಗಿದ ನಂತರ ನ್ಯಾಮತಿ ಸುತ್ತಲೂ ಏನೂ ಆಗಿಯೇ ಇಲ್ಲ ಎಂದು ಬದುಕಿದ್ದರು.
ಪೊಲೀಸ್ ಶ್ವಾನಗಳಿಗೆ ವಾಸನೆ ಸಿಗಬಾರದೆಂದು ಸಾಕ್ಷಿನಾಶಕ್ಕೆ ಮೆಣಸಿನ ಪುಡಿ ಎರಚಿದ್ದರು.
ಸಿಸಿಟಿವಿ ಕ್ಯಾಮೆರಾದ ಡಿವಿಆರ್ ತೆಗೆದುಕೊಂಡು ಹೋಗಿದ್ದರು.
ಕಳ್ಳರ ಸೆರೆಗೆ ಕಾರ್ಯಾಚರಣೆ
ಬ್ಯಾಂಕ್ ದರೋಡೆಗೆ ಯೋಜನೆ ರೂಪಿಸಿರುವ ಈ ಆರು ಜನರು ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ವಹಿಸಿಕೊಂಡಿದ್ದರು.
ಕಳುವಿಗೆ ಬಳಸಿದ ಹ್ಯಾಂಡ್ ಗ್ಲಸ್ ಒಬ್ಬ, ಮಂಕಿ ಕ್ಯಾಪ್, ಗ್ಯಾಸ್ ಸಿಲಿಂಡರ್, ಹೈಡ್ರಾಲಿಕ್ ಕಟ್ಟರ್, ಖಾರದ ಪುಡಿಯನ್ನು ಒಬ್ಬೊಬ್ಬರು ತಂದರು. ಬ್ಯಾಂಕ್ನಿಂದ 3 ಕಿಮೀ ದೂರದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಇರಿಸಿ ಮೂರು ದಿನಗಳ ಕಾಲ ಗಡಿ (SBI Bank) ಚೌಡಮ್ಮನ ಹೆಸರಿನಲ್ಲಿ ಎಲ್ಲ ಅಷ್ಟದಿಗಂಧನ ಮಾಡಿದ್ದರು.
ರಾತ್ರಿ ಸುಮಾರು 2.5 ಕಿಲೋ ಮೀಟರ್ ಕ್ಯಾಮೆರಾ ಇಲ್ಲದ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಬಂದರು. ಬ್ಯಾಂಕ್ನ ಬಲ ಭಾಗದ ಕಬ್ಬಿಣದ ಕಿಟಕಿಯ ಗ್ರಿಲ್ ಕಟ್ ಮಾಡಿ, ಒಳಗೆ ನುಗ್ಗಿಸಿಸಿ ಕ್ಯಾಮೆರಾಗಳನ್ನು ನಾಶ ಪಡಿಸಿ, ಅಲಾರ್ ವೈರ್ ಗಳನ್ನು ಕಟ್ ಮಾಡಿದರು. ಸ್ಟಾಂಗ್ ರೂಂನಲ್ಲಿದ್ದ ಬೀಗ ಮುರಿದು, ನಾಲ್ಕು ಕರೆನ್ಸಿ ಚೆಸ್ಟ್ಗಳಲ್ಲಿ ಒಂದನ್ನು ಗ್ಯಾಸ್ ಕಟ್ಟರ್ ಸಹಾಯದಿಂದ ಕೊರೆದು ಲಾಕರ್ ಬಾಗಿಲು ತೆಗೆದು ಚಿನ್ನಾಭರಣ ದೋಚಿದ್ದರು.
ಇದನ್ನೂ ಓದಿ: ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ? | Today Dina Bhavishya
ತನಿಖಾ ತಂಡಕ್ಕೆ ಸಿಕ್ಕ ತಾಂತ್ರಿಕ ಸಾಕ್ಷಿಯ ಜಾಡು ಹಿಡಿದು ಹೊರಟ ಪೊಲೀಸರು, ನ್ಯಾಮತಿಯಲ್ಲಿ ಕಳೆದ ಮಂಗಳವಾರ ವಿಜಯಕುಮಾರ್,ಅಜಯಕುಮಾರ್ ನನ್ನು ಬಂಧಿಸಿ (SBI Bank) ವಿಚಾರಣೆಗೆ ಒಳ ಪಡಿಸಿದಾಗ, ದೊರೆತ ಸುಳಿವಿನ ಆಧಾರದಲ್ಲಿ ಉಳಿದ ನಾಲ್ವರನ್ನು ಬಂಧಿಸಿ, ಬಾವಿಯಲ್ಲಿ ಅಡಗಿಸಿಟ್ಟದ ಚಿನ್ನಾಭರಣವನ್ನು ಪತ್ತೆ ಮಾಡಿದ್ದಾರೆ” ಎಂದು ರವಿಕಾಂತೇಗೌಡ ಹೇಳಿದರು.