
Chitradurga news|nammajana.com|1-7-2024
ನಮ್ಮಜನ.ಕಾಂ, ಹೊಸದುರ್ಗ: ಸಮುಧಾಯ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಹಿಸಿದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದು ಹರಿಹರದ ಪಂಚಮಸಾಲಿ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಜಿ (Shri Vachanananda Swamiji) ತಿಳಿಸಿದರು.
ನಗರದ ಜಯದೇವ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಪಂಚಮಸಾಲಿ ಸಮುಧಾಯದ ಉದ್ದಾರವಾಗಬೇಕು ಎನ್ನುವುದು ನಮ್ಮ ಹಾಗೂ ಶ್ರೀಮಠದ ಆಶಯವಾಗಿದೆ. ನಾನು ಜಗತ್ತನ್ನು ನೋಡಿದ್ದೆನೆ. ಬೇರೆ ಯಾವುದನ್ನು ನೋಡುವ ಅಗತ್ಯವಿಲ್ಲ ಪಂಚಮಸಾಲಿ ಸಮುಧಾಯವೇ ನನ್ನ ನಿಜವಾದ ಜಗತ್ತಾಗಿದೆ. ಮುಂದಿನ ವರ್ಷ ಚಿತ್ರದುರ್ಗದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹರಿಹರದ ಪೀಠದಲ್ಲಿ (Shri Vachanananda Swamiji) ಮಾಡಲು ಮುಂದಗಬೇಕು.ಎಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಪಂಚಮಸಾಲಿ ಪೀಠಕ್ಕೆ ಬೇಟಿ ನೀಡುವ ಪ್ರವೃತ್ತಿ ರೂಡಿಸಿಕೊಳ್ಳಿ ಎಂದರು.
ಬೌದ್ದಿಕ ಶ್ರೀಮಂತಿಕೆಯ ಅವಶ್ಯಕತೆ ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದೆ. ಮುಂದಿನ ವರ್ಷದಿಂದ ಶೇ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಸಮುಧಾಯದ ಮಕ್ಕಳನ್ನು ಪಂಚಮಸಾಲಿ ಮಠದ ವತಿಯಿಂದ ಒಂದು ವಾರ ಹರಿದ್ವಾರ (Shri Vachanananda Swamiji)ಹಾಗೂ ಋಷಕೇಶಗಳಿಗೆ ಉಚಿತ ಪ್ರವಾಸ ಕರೆದುಕೊಂಡು ಹೋಗುವ ಮೂಲಕ ಆಧ್ಯಾತ್ಮದ ಚಿಂತನೆಗಳನ್ನು ಬಿತ್ತುವ ಕೆಲಸ ಮಾಡುತ್ತೆವೆ ಎಂದರು.
ಪ್ರತಿನಿತ್ಯ ಎರಡು ನಿಮಿಷ ಧ್ಯಾನ ಮಾಡುವುದರಿಂದ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಗುತ್ತದೆ. ಎಲ್ಲರಿಗೂ ದ್ಯಾನ, ಯೋಗದ ಅವಶ್ಯಕತೆಯಿದೆ. ಎಲ್ಲರೂ ಬದುಕಿನಲ್ಲಿ ಖುಷಿಯನ್ನೆ ಬಯಸುತ್ತಾರೆ. ಅದಿಕಾರ, ಶ್ರೀಮಂತಿಕೆ ಇರಬಹುದು ಅದರೆ ಆರೋಗ್ಯವಿಲ್ಲದಿದ್ದರೆ ಅದೆಲ್ಲವೂ ಶೂನ್ಯವಾಗುತ್ತದೆ. ಖುಷಿ ಹಾಗೂ ದುಖಃ ಎರಡೂ ನಮ್ಮ ಕೈಯಲ್ಲಿಯೇ ಇವೆ. ಗೊಂದಲದಲ್ಲಿರುವ ಸಮುಧಾಯಕ್ಕೆ ಧ್ಯಾನ, ಯೋಗ ಹಾಗೂ ಸತ್ಕಾರ್ಯಗಳು ಪರಿಹಾರ ನೀಡುವ ಶಕ್ತಿಯನ್ನು ಹೊಂದಿವೆ ಎಂದರು.
ಇದನ್ನೂ ಓದಿ: ಇಂದಿನ ರಾಶಿ ಭವಿಷ್ಯ 1-7-2024 | Dina Bhavishya kannada
ಪಂಚಮಸಾಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಧನುಶಂಕರ್ ಮಾತನಾಡಿ ಸಾಧನೆ ಮಾಡಿರುವ ಸಮುಧಾಯದ ಮಕ್ಕಳನ್ನು ಗುರುತಿಸಿ ಪ್ರೋತ್ಸಹಿಸುವ ಕೆಲಸವನ್ನು ಸಮಾಜ ಮಾಡುತ್ತಿದೆ. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸ (Shri Vachanananda Swamiji) ಮಾಡಬೇಕು. ರಾಜ್ಯಗಳನ್ನು ಕಟ್ಟಿ ಆಡಳಿತ ನಡೆಸಿದ ಭವ್ಯ ಇತಿಹಾಸ ಹೊಂದಿರುವ ಪಂಚಮಸಾಲಿ ಸಮುಧಾಯದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು. ಶಿಕ್ಷಣವು ಬೌಧಿಕವಾಗಿ ಶ್ರೀಮಂತಗೊಳಿಸಿದರೆ ಸಂಸ್ಕಾರವು ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದರು.
ಇದನ್ನೂ ಓದಿ: Health advice | ಹೃದಯಾಘಾತದ ಎಚ್ಚರಿಕೆಯ ಲಕ್ಷಣಗಳು
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಧ್ವಿತಿಯ ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಬಿ.ಜಿ.ಅರುಣ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಶಿವಪ್ರಕಾಶ್,ತಾಲೂಕಾಧ್ಯಕ್ಷ ಬಿ.ಪಿ.ದಯಾನಂದ್, ಪುಪ್ಪಲತಾ, ಮೃತ್ಯುಂಜಯಪ್ಪ, ಎ.ಎಸ್.ಸಿದ್ದರಾಮೇಶ್, ಉಮಾ ರಮೇಶ್, ಎನ್.ಪ್ರಕಾಶ್, ವಿರೇಶ್ ಇತರರಿದ್ದರು.
ಬಾಕ್ಸ್
ನಾವು ಪಂಚಮಸಾಲಿ ಸಮಾಜದ ಜಾಗೃತಿಗಾಗಿ ಕೆಲಸ ಮಾಡುತ್ತಿದ್ದೆವೆ. ಅದರೂ ಇವರು ವಿಐಪಿ ಸ್ವಾಮಿಗಳು ಸಾಮಾನ್ಯ ಜನರ ಕೈಗೆ ಸಿಗುವುದಿಲ್ಲ ಎನ್ನುವ ಅರೋಪಗಳಿವೆ. ಇಂತಹ ಆರೋಪಗಳನ್ನು ಶ್ವೀಕರಿಸುತ್ತೆನೆ. ಈ ಬಾರಿಯ ಶ್ರಾವಣ ಮಾಸದ ಪೂಜೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಮಾಡುತ್ತೆನೆ. ನಮಗೆ ಕಾಣಿಕೆ, ಹಾರ, ತುರಾಯಿ ಯಾವುದೂ ಬೇಡ ನಿಮ್ಮ ಭಕ್ತಿ ಮಾತ್ರ ಸಾಕು. ಎಲ್ಲರ ಮನೆಯಲ್ಲಿಯೂ ಪಾದಪೂಜೆ ನಡೆಸುವ ಮೂಲಕ ಸಮುಧಾಯವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತೆನೆ.
ಶ್ರೀ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಪಂಚಮಸಾಲಿ ಪೀಠ ಹರಿಹರ.