Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Sri Gaviranganatha | ಹೊಸದುರ್ಗಕ್ಕೆ ‘ ಶ್ರೀ ಗವಿರಂಗನಾಥನೇ’ ಸಿರಿವಂತ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Sri Gaviranganatha | ಹೊಸದುರ್ಗಕ್ಕೆ ‘ ಶ್ರೀ ಗವಿರಂಗನಾಥನೇ’ ಸಿರಿವಂತ
ವಿಶೇಷ ಸುದ್ದಿ

Sri Gaviranganatha | ಹೊಸದುರ್ಗಕ್ಕೆ ‘ ಶ್ರೀ ಗವಿರಂಗನಾಥನೇ’ ಸಿರಿವಂತ

Editor Nammajana
Last updated: 28 March 2025 17:47
By Editor Nammajana 3 Min Read
Share
SHARE

Chitradurga news|nammajana.com|28-03-2025

ವರ್ಷದಲ್ಲಿ 38.74 ಲಕ್ಷ ಸಂಗ್ರಹ; ನಂತರದ ಸ್ಥಾನದಲ್ಲಿ ಹಾಲುರಾಮೇಶ್ವರಸ್ವಾಮಿ

ವಿಶೇಷ ವರದಿ:ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ

ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ 72 ದೇವಾಲಯಗಳಿದ್ದು, ಇವುಗಳಲ್ಲಿ ಶ್ರೀರಾಂಪುರ ಹೋಬಳಿಯ ಗವಿರಂಗಾಪುರದ (Sri Gaviranganatha) ಬೆಟ್ಟದ ಮೇಲೆ ನೆಲೆಸಿರುವ ಶ್ರೀ ಗವಿರಂಗನಾಥ ಸ್ವಾಮಿಯೇ ತಾಲೂಕಿನ ಅತ್ಯಂತ ಸಿರಿವಂತ ದೇವರಾಗಿದೆ.

ಪ್ರಸಕ್ತ ವರ್ಷ 2024-25ನೇ ಸಾಲಿನಲ್ಲಿ ಶ್ರೀ ಗವಿರಂಗನಾಥಸ್ವಾಮಿಗೆ ಹುಂಡಿ ಮತ್ತು ಕಾಣಿಕೆಯ ರೂಪದಲ್ಲಿ 38.74 ಲಕ್ಷ ರೂ.ಬಂದಿರುವುದು ಮುಜರಾಯಿ ಇಲಾಖೆಯ ದಾಖಲೆಗಳಿಂದ ತಿಳಿದು ಬಂದಿದೆ. ತಾಲೂಕಿನಲ್ಲಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಪ್ರವರ್ಗ ಎ.ಬಿ ಮತ್ತು ಸಿ ಅಧಿಸೂಚಿತ ದೇವಾಲಯಗಳಿದ್ದು, ಶ್ರೀ ಗವಿರಂಗನಾಥಸ್ವಾಮಿ ದೇವಾಲಯವೂ ಪ್ರವರ್ಗ ‘ಎ’ ಅಡಿಯಲ್ಲಿ ಬರುತ್ತದೆ.

ಅತ್ಯಧಿಕ ಕಾಣಿಕೆ ಸಂಗ್ರಹದಲ್ಲಿ ಗವಿ ರಂಗನಾಥಸ್ವಾಮಿ ದೇವಾಲಯ ಪ್ರಥಮಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಹಾಲುರಾಮೇಶ್ವರ (7.ಲಕ್ಷ ರೂ) ದೇವಾಲಯವಿದೆ. ಮೂರನೇ ಸ್ಥಾನದಲ್ಲಿ ಮೈಲಾರಪುರದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯವಿದ್ದು, ಇನ್ನುಳಿದಂತೆ ಆದಾಯದಲ್ಲಿ 70 (Sri Gaviranganatha) ದೇವಾಲಯಗಳು ಕ್ರಮಾಂಕದಲ್ಲಿ ಬರುತ್ತವೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಾಯ್ದೆ ಕಾಲಂ 25 ರನ್ವಯ’ಎ’ ಮತ್ತು ‘ಬಿ’ ವರ್ಗದ ಧಾರ್ಮಿಕ ಸಂಸ್ಥೆಗಳಲ್ಲಿ ಸ್ಥಳೀಯರನ್ನೊಳಗೊಂಡಂತೆ ಒಂಬತ್ತು ಸದಸ್ಯರಾಗಿ ವ್ಯವಸ್ಥಾಪನಾ ಸಮಿತಿಗಳಿದ್ದು, ಈ ಸಮಿತಿಗಳು ದೇವಾಲಯದ ವಾರ್ಷಿಕ ಆಯವ್ಯಯ, ಮೂಲಭೂತ ಸೌಕರ್ಯ ಸೇರಿದಂತೆ ಇತರ ವೆಚ್ಚಗಳಿಗಾಗಿ ಹಣವನ್ನು ಬಳಕೆ ಮಾಡಿಕೊಳ್ಳುತ್ತವೆ. ಅದರಂತೆಯೇ, ಶ್ರೀ ಗವಿರಂಗನಾಥಸ್ವಾಮಿ ವ್ಯವಸ್ಥಾಪನಾ ಸಮಿತಿ ರಚನೆಯಾಗಿದ್ದು, ಮುಜರಾಯಿ ಇಲಾಖೆಯ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದೆ.

ಗವಿರಂಗಸ್ವಾಮಿಗೆ ರಾಜ್ಯ ಮಾತ್ರವಲ್ಲದೇ ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ಸೇರಿದಂತೆ ನಾನಾ ರಾಜ್ಯಗಳ ಅಪಾರಭಕ್ತರ ಸಂಖ್ಯೆಯೇ ಹರಿದು ಬರುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ, ವಿಶೇಷ ಪೂಜಾಸೇವಾ ಕಾರ್ಯಗಳನ್ನು ನಡೆಸುವುದುಂಟು. ವೈಕುಂಠ ಏಕಾದಶಿ, ದಸರಾ ಹಾಗೂ ಇನ್ನಿತರ ಹಬ್ಬಗಳಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಮತ್ತು ಸೇವಾಕಾರ್ಯಗಳು ನೆರವೇರುತ್ತವೆ. ರಥಸಪ್ತಮಿಯ ದಿನದಂದು ಸ್ವಾಮಿಯ ಅಪ್ಪಣೆಯ ಮೇರೆಗೆ 7 ವರ್ಷ ಅಥವಾ 9 ವರ್ಷಕ್ಕೊಮ್ಮೆ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಕ್ಷೇತ್ರದಲ್ಲಿ (Sri Gaviranganatha) ಗವಿರಂಗನಾಥಸ್ವಾಮಿಯ ಜೊತೆಗೆ ಶ್ರೀ ಲಕ್ಷ್ಮಿದೇವಿ, ಕೆಂಚರಾಯ ಮತ್ತು ಕಾಡರಾಯಸ್ವಾಮಿ ನೆಲೆಗೊಂಡಿದ್ದು, ಈ ದೇವಾಲಯಗಳಲ್ಲಿಯೂ ಕೂಡ ನಿತ್ಯವೂ ಪೂಜೆ ಮತ್ತು ಸೇವಾಕಾರ್ಯಗಳು ನಡೆಯುತ್ತಿವೆ’ ಎಂದು ಮುಖಂಡ ಕೃಷ್ಣಮೂರ್ತಿ ತಿಳಿಸಿದ್ದಾರೆ.

*ವಿಷ್ಣುವಿನ ಕೂರ್ಮಾವತಾರದ ಸ್ವಯಂಸ್ವಾಮಿ*

‘ಸುರರು ಮತ್ತು ಅಸುರರು ಸಮುದ್ರ ಮಂಥನ ಮಾಡಿದಾಗ ಶ್ರೀ ವಿಷ್ಣು ಕೂರ್ಮವತಾರ ತಾಳುತ್ತಾನೆ. ಅದೇ ಸ್ವಯಂ ಸ್ವಾಮಿ ಬಂದು ಗವಿರಂಗಾಪುರದ ಬೆಟ್ಟದ ಮೇಲೆ ಆಮೆಯ ಅವತಾರದಲ್ಲಿ ನೆಲೆಸಿದ್ದು, ಇದು ವಿಷ್ಣುವಿನ ದಶಾವತಾರಗಳಲ್ಲಿ ಒಂದಾಗಿದೆ. ಕೂರ್ಮಾವತಾರದ ಮೂಲರೂಪದ ಸ್ವಾಮಿಯನ್ನು ಇಲ್ಲಿ ಬಿಟ್ಟರೆ, ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಕಾಣಲು ಸಾಧ್ಯವಿಲ್ಲ. ಈ ಕ್ಷೇತ್ರದ ಮಹಿಮೆ ಮತ್ತು ಮಹತ್ವದ ಬಗ್ಗೆ ನಮ್ಮ ಗುರುಗಳು ನಮಗೆ ತಿಳಿಸಿದ್ದಾರೆ’ ಎಂದು ಗವಿರಂಗನಾಥಸ್ವಾಮಿ ಕ್ಷೇತ್ರದ ಕುರಿತು ಇತ್ತೀಚೆಗೆ, ಹೆಗ್ಗೆರೆ ಗ್ರಾಮಕ್ಕೆ ಭೇಟಿ ನೀಡಿದ್ದ ಧನಂಜಯ ಅಘೋರಿ ನಾಗಸಾಧು ಹೇಳಿದ್ದರು.

ಇದನ್ನೂ ಓದಿ: Hosadurga | ಯಮಧೂತರಂತೆ ಬಲಿಗಾಗಿ ಕಾಯುತ್ತಿರುವ ಅವೈಜ್ಙಾನಿಕ ಡಿವೈಡರ್ ಗಳು

ಭಕ್ತರ ಮಾತು

ಹೊಸದುರ್ಗ ತಾಲೂಕು ರಾಜ್ಯದಲ್ಲಿಯೇ ವಿಶಿಷ್ಟ ಮತ್ತು ವಿಶೇಷವಾಗಿದ್ದು, ನಮ್ಮಲ್ಲಿ ಪುರಾಣ ಪ್ರಸಿದ್ಧ ಮತ್ತು ಇತಿಹಾಸ ಪ್ರಸಿದ್ಧವಾದ ಕ್ಷೇತ್ರಗಳು ಸಾಕಷ್ಟಿವೆ. ವಿಷ್ಣುವಿನ ದಶಾವತಾರಗಳಲ್ಲಿ ಕೂರ್ಮವತಾರವೂ ಒಂದು. ಕೂರ್ಮವತಾರದ ಶ್ರೀ ಗವಿರಂಗನಾಥಸ್ವಾಮಿಯನ್ನು ಗವಿರಂಗಾಪುರದ ಬೆಟ್ಟದ ಮೇಲೆ ಬಿಟ್ಟರೆ, ಇನ್ನೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಇಂತಹವೊಂದು ಧಾರ್ಮಿಕ ಪುಣ್ಯಕ್ಷೇತ್ರ ಹೊಸದುರ್ಗ ತಾಲೂಕಿನಲ್ಲಿರುವುದು ಹೆಮ್ಮೆಯ ವಿಚಾರ. ಅಲ್ಲದೇ, ತಾಲೂಕಿನಲ್ಲಿಯೇ ಸಿರಿವಂತ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಸಂತಸದ ವಿಚಾರ. ಸ್ವಾಮಿಯ ದರ್ಶನ ಪಡೆಯಲು ರಾಜ್ಯ ಮಾತ್ರವಲ್ಲದೆ, ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹವೇ ಬರುತ್ತದೆ. ಇಲ್ಲಿಗೆ ಬಂದ ಭಕ್ತರಿಗೆ ಯಾವುದೇ (Sri Gaviranganatha) ಸಮಸ್ಯೆಯಾಗದಂತೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಭಕ್ತರೆಲ್ಲರ ಸಹಕಾರದಿಂದಾಗಿ ಕ್ಷೇತ್ರ ಮತ್ತಷ್ಟು ಪ್ರಗತಿಹೊಂದಬೇಕಿದೆ.

ಶಂಕರಪ್ಪ ಹೆಗ್ಗೆರೆ
ದೇವಾಲಯದ ಭಕ್ತ.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Gold Rate | ಬಂಗಾರದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ

TAGGED:Chitradurga DistrictHosadurgaHundi CountingSri Gaviranganatha Sirivanthaಗವಿರಂಗಾಪುರಚಿತ್ರದುರ್ಗ ಜಿಲ್ಲೆಶ್ರೀ ಗವಿರಂಗನಾಥ ಸಿರಿವಂತಹುಂಡಿ ಎಣಿಕೆಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Hosadurga | ಯಮಧೂತರಂತೆ ಬಲಿಗಾಗಿ ಕಾಯುತ್ತಿರುವ ಅವೈಜ್ಙಾನಿಕ ಡಿವೈಡರ್ ಗಳು
Next Article Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?