
Chitradurga news|nammajana.com|25-6-2024
ತೋಟದ ಮಾಲೀಕನ ಮೇಲೆ ಹಲ್ಲೆಗೆ ಯತ್ನ | ಬಂಧಿತರು ಶಿಡ್ಲಘಟ್ಟ ಮೂಲದವರು ,32 ಆಮೆ ವಶ
ನಮ್ಮಜನ.ಕಾ, ಹೊಸದುರ್ಗ: ಅಳಿವಿನ ಅಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು (star turtle) ಹಿಡಿಯುತ್ತಿದ್ದ ನಾಲ್ವರನ್ನು ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಶ್ರೀರಾಂಪುರ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಬಂಧಿತರು ಶಿಡ್ಲಘಟ್ಟ ಮೂಲದವರೆಂದು ಗುರುತಿಸಲಾಗಿದೆ. ಮತ್ತೋಡು ಹೋಬಳಿಯ ಕುದುರೆ ಕಣಿವೆ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಕಂಚಿನಗರ ಬಳಿಯ ದೇವರಾಜು ಅವರ ತೋಟದ ಬಳಿ ಕಾರಿನಲ್ಲಿ ಬಂದ ಅಪರಿಚಿತರು ಮಧ್ಯಾಹ್ನದಿಂದಲೂ ಅನುಮಾನ ವಾಗಿ ಓಡಾಡುತ್ತಿದ್ದರು.

ಇದನ್ನು ಪ್ರಶ್ನಿಸಿದ ಸ್ಥಳೀಯರಿಗೆ ನಿಲ್ಲಿಸಿರುವುದಾಗಿ ಸಂಶಯದ ಉತ್ತರ ನೀಡಿದ್ದರು. ಸಂಜೆ 7 ಗಂಟೆಯಾದರೂ ಸ್ಥಳದಿಂದ ತೆರಳದೇ ಅನುಮಾನಾಸ್ಪದವಾಗಿ ನಡೆದು ಕೊಳ್ಳುತ್ತಿದ್ದ ಇವರ ಚಲನವಲನ ಗಮನಿಸಿದ ತೋಟದ ಮಾಲೀಕ ಇಲ್ಲಿಂದ ತೆರಳುವಂತೆ ತಿಳಿಸಿದಾಗ ಆತನ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ.
ಘಟನೆಯ ಗಂಭೀರತೆಯನ್ನು ಅರಿತ ಸ್ಥಳೀಯರು ಕೂಡಲೇ ಶ್ರೀರಾಂಪುರ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸಾರ್ವಜನಿಕರ ಮಾಹಿತಿಯ ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಹೋದಾಗ ಕಾರಿನಲ್ಲಿದ್ದ ಚೀಲದಲ್ಲಿ 32 ನಕ್ಷತ್ರ ಆಮೆಗಳು ಸಿಕ್ಕಿವೆ ಎನ್ನಲಾಗಿದೆ.
ಇದನ್ನೂ ಓದಿ: Panditaradhya Shri: ಪಂಡಿತಾರಾಧ್ಯ ಶ್ರೀಗೆ ಫ.ಗು ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದ ವಲಯ ಅರಣ್ಯಧಿಕಾರಿ ಸುನಿಲ್ಕುಮಾರ್ ಮಾತನಾಡಿ, ಮಾರಿಕಣಿವೆ, ಲತ್ರಿಹಳ್ಳಿ ಅರಣ್ಯ ಪ್ರದೇಶದಲ್ಲಿ 01 ನಕ್ಷತ್ರ ಆಮೆಗಳಿದ್ದು (star turtle) ಅಳಿವಿನ ಅಂಚಿನಲ್ಲಿವೆ. ಇವುಗಳನ್ನು ವಿಷ್ಣುವಿನ ವಾಹನಗಳು ಎನ್ನಲಾಗುತ್ತದೆ.
ಮನೆಯಲ್ಲಿ ಪೂಜಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆ ಇರುವುದರಿಂದ ಇವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈ ಪ್ರಭೇದದ ಪ್ರಾಣಿಗಳು ಅಳಿವಿನ ಅಂಚಿನಲ್ಲಿರುವುದರಿಂದ ಇವುಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದರು.
ಇದನ್ನೂ ಓದಿ: ದಿನ ಭವಿಷ್ಯ 25-6-2024 | Dina Bhavishya
ನಕ್ಷತ್ರ ಆಮೆಗಳು ಶೆಡ್ಯೂಲ್ ಪ್ರಾಣಿ (star turtle) ಗಳಾಗಿದ್ದು ಇವುಗಳನ್ನು ಇಲ್ಲಿಯವರೆಗೆ ಶೆಡ್ಯೂಲ್ 4 ರಲ್ಲಿ ಸೇರಿಸಲಾಗಿತ್ತು. 2021 ರಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಈಗ ಇವುಗಳನ್ನು ಶೆಡ್ಯೂಲ್ | ರವ್ಯಾಪ್ತಿಗೆ ತರಲಾಗಿದೆ. ಹಾಗಾಗಿ ಇವುಗಳನ್ನು ಹಿಡಿಯುವುದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದರು.